स्वातंत्र्यदिनाच्या सांस्कृतिक कार्यक्रमात अंगणवाडीच्या चिमुकल्यांची उल्लेखनीय कामगिरी “खासगी शाळांतील एलकेजी-यूकेजीच्या मुलांपेक्षा आम्हीही कुठे कमी नाही” असा दिला आत्मविश्वासाचा संदेश
खानापूर : तालुकास्तरीय स्वातंत्र्यदिनाच्या निमित्ताने आयोजित करण्यात आलेल्या शालेय विद्यार्थ्यांच्या सांस्कृतिक कार्यक्रमात खानापूर तालुक्यातील अंगणवाडीच्या चिमुकल्यांनी प्रथमच सहभाग घेऊन आपल्या कलागुणांचे उत्कृष्ट सादरीकरण केले. या चिमुकल्यांनी नृत्य सादर करून उपस्थितांची मने जिंकली.
तालुक्यातील बीडी तसेच खानापूर शहरातील अंगणवाडी केंद्रांतील मुलांनी नृत्याच्या माध्यमातून “आम्हीही खासगी शाळांतील एलकेजी-यूकेजीच्या मुलांपेक्षा कोणत्याही बाबतीत कमी नाही” असा आत्मविश्वासपूर्ण संदेश समाजासमोर ठेवला. अंगणवाडी केंद्रांमध्ये मुलांना पौष्टिक आहारासोबतच उत्तम दर्जाचे पूर्वप्राथमिक शिक्षण, खेळातून शिक्षण तसेच विविध सांस्कृतिक उपक्रमांची संधी उपलब्ध करून दिली जात असल्याचे या कार्यक्रमातून अधोरेखित झाले.
खानापूर तालुक्यात नव्याने रुजू झालेले शिशु विकास प्रकल्प अधिकारी (CDPO) श्री. विक्रम के. व्ही. हे तालुक्यातील अंगणवाडी सेविका व मदतनीसांना सातत्याने मार्गदर्शन करून अंगणवाडी केंद्रांच्या कार्यपद्धतीत सकारात्मक व गुणात्मक बदल घडवून आणण्यासाठी प्रयत्नशील आहेत. गेल्या पाच-सहा महिन्यांपासून बालकांचे शिक्षण, पोषण, सांस्कृतिक उपक्रम तसेच अंगणवाडी केंद्रांच्या सर्वांगीण विकासाला विशेष प्राधान्य देण्यात येत आहे.
अंगणवाडी केंद्रे ही केवळ पौष्टिक आहार देणारी केंद्रे नसून, बालकांच्या सर्वांगीण विकासाचा आणि शिक्षणाचा पाया मजबूत करणारी केंद्रे आहेत, हा महत्त्वपूर्ण संदेश या कार्यक्रमातून देण्यात आला. चिमुकल्यांचा आत्मविश्वास, त्यांचे व्यासपीठावरील सादरीकरण आणि सांस्कृतिक कलागुण पाहून पालक तसेच उपस्थित नागरिकांनी त्यांचे कौतुक केले.
या कार्यक्रमास तहसीलदार, शिशु विकास प्रकल्प अधिकारी (CDPO), अंगणवाडी पर्यवेक्षक, शिक्षक, अंगणवाडी सेविका, मदतनीस तसेच विद्यार्थी मोठ्या संख्येने उपस्थित होते.
अंगणवाडीच्या चिमुकल्यांनी केलेल्या या पहिल्याच प्रयत्नाला उपस्थितांकडून उत्स्फूर्त प्रतिसाद मिळाला. भविष्यात खानापूर तालुक्यातील आणखी अंगणवाडी केंद्रांतील मुले अशा शैक्षणिक व सांस्कृतिक व्यासपीठांवर सहभागी होऊन आपली गुणवत्ता व प्रतिभा सिद्ध करतील, असा विश्वास यावेळी व्यक्त करण्यात आला.
ಸ್ವಾತಂತ್ರ್ಯ ದಿನಾಚರಣೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಂಗನವಾಡಿಯ ಕಂದಮ್ಮಗಳ ಮೆಚ್ಚುಗೆ ಪಡೆಯುವಂತಹ ಗಮನಾರ್ಹ ಸಾಧನೆ.“ಖಾಸಗಿ ಶಾಲೆಗಳ ಎಲ್ಕೆಜಿ-ಯುಕೆಜಿ ಮಕ್ಕಳಿಗಿಂತ ನಾವು ಕೂಡ ಯಾವುದರಲ್ಲೂ ಕಡಿಮೆಯಿಲ್ಲ” ಎಂಬ ಆತ್ಮವಿಶ್ವಾಸದ ಸಂದೇಶ.
ಖಾನಾಪುರ : ತಾಲ್ಲೂಕು ಮಟ್ಟದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖಾನಾಪುರ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳ ಕಂದಮ್ಮಗಳು ಇದೇ ಮೊದಲ ಬಾರಿಗೆ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದರು. ಈ ಕಂದಮ್ಮಗಳು ನೃತ್ಯ ಪ್ರದರ್ಶಿಸುವ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿದ್ದವರ ಮನ ಗೆದ್ದರು.
ತಾಲ್ಲೂಕಿನ ಬಿಡಿ ಹಾಗೂ ಖಾನಾಪುರ ನಗರದ ಅಂಗನವಾಡಿ ಕೇಂದ್ರಗಳ ಮಕ್ಕಳು ನೃತ್ಯದ ಮೂಲಕ “ನಾವು ಕೂಡ ಖಾಸಗಿ ಶಾಲೆಗಳ ಎಲ್ಕೆಜಿ-ಯುಕೆಜಿ ಮಕ್ಕಳಿಗಿಂತ ಯಾವುದೇ ರೀತಿಯಲ್ಲೂ ಕಡಿಮೆಯಿಲ್ಲ” ಎಂಬ ಆತ್ಮವಿಶ್ವಾಸದ ಸಂದೇಶವನ್ನು ಸಮಾಜದ ಮುಂದಿಟ್ಟರು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರದ ಜೊತೆಗೆ ಉತ್ತಮ ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣ, ಆಟದ ಮೂಲಕ ಕಲಿಕೆ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ಒದಗಿಸಲಾಗುತ್ತಿದೆ ಎಂಬುದನ್ನು ಈ ಕಾರ್ಯಕ್ರಮವು ಎತ್ತಿ ತೋರಿಸುತ್ತಿತ್ತು.
ಖಾನಾಪುರ ತಾಲ್ಲೂಕಿನಲ್ಲಿ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿ (CDPO) ಶ್ರೀ. ವಿಕ್ರಮ್ ಕೆ. ವಿ. ಅವರು ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ನಿರಂತರ ಮಾರ್ಗದರ್ಶನ ನೀಡುತ್ತಿದ್ದು, ಅಂಗನವಾಡಿ ಕೇಂದ್ರಗಳ ಕಾರ್ಯವಿಧಾನದಲ್ಲಿ ಸಕಾರಾತ್ಮಕ ಹಾಗೂ ಗುಣಾತ್ಮಕ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಿದ್ದಾರೆ. ಕಳೆದ ಐದು-ಆರು ತಿಂಗಳಿನಿಂದ ಮಕ್ಕಳ ಶಿಕ್ಷಣ, ಪೌಷ್ಟಿಕತೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಅಂಗನವಾಡಿ ಕೇಂದ್ರಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ.
ಅಂಗನವಾಡಿ ಕೇಂದ್ರಗಳು ಕೇವಲ ಪೌಷ್ಟಿಕ ಆಹಾರ ನೀಡುವ ಕೇಂದ್ರಗಳಾಗದೆ; ಅವು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಶಿಕ್ಷಣದ ಭದ್ರ ಅಡಿಪಾಯ ನಿರ್ಮಿಸುವ ಕೇಂದ್ರಗಳಾಗಿವೆ ಎಂಬ ಮಹತ್ವದ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ನೀಡಲಾಯಿತು. ಕಂದಮ್ಮಗಳ ಆತ್ಮವಿಶ್ವಾಸ, ವೇದಿಕೆಯ ಮೇಲಿನ ಅವರ ಸೊಗಸಾದ ಪ್ರದರ್ಶನ ಹಾಗೂ ಸಾಂಸ್ಕೃತಿಕ ಪ್ರತಿಭೆಯನ್ನು ಕಂಡು ಪಾಲಕರು ಹಾಗೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಖಾನೆ ತಹಶೀಲ್ದಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ (CDPO), ಅಂಗನವಾಡಿ ಮೇಲ್ವಿಚಾರಕರು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅಂಗನವಾಡಿಯ ಕಂದಮ್ಮಗಳು ಮಾಡಿದ ಈ ಮೊದಲ ಪ್ರಯತ್ನಕ್ಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರಿಂದ ಉತ್ತಮ ಹಾಗೂ ಉತ್ಸಾಹಭರಿತ ಪ್ರತಿಕ್ರಿಯೆ ವ್ಯಕ್ತವಾಯಿತು. ಮುಂದಿನ ದಿನಗಳಲ್ಲಿ ಖಾನಾಪುರ ತಾಲ್ಲೂಕಿನ ಇನ್ನಷ್ಟು ಅಂಗನವಾಡಿ ಕೇಂದ್ರಗಳ ಮಕ್ಕಳು ಇಂತಹ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವೇದಿಕೆಗಳಲ್ಲಿ ಭಾಗವಹಿಸಿ ತಮ್ಮ ಗುಣಮಟ್ಟ ಹಾಗೂ ಪ್ರತಿಭೆಯನ್ನು ಸಾಬೀತುಪಡಿಸಲಿದ್ದಾರೆ ಎಂಬ ವಿಶ್ವಾಸವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು.



