जांबोटी–कणकुंबी मार्गावर 14 हजार लिटर स्पिरिटसह ट्रक जप्त; 35 लाखांहून अधिक मुद्देमाल हस्तगत.
बेळगाव : प्रतिनिधी
बेळगाव जिल्ह्यातील खानापूर तालुक्यात जांबोटी येथून कणकुंबीकडे जाणाऱ्या मार्गावर अंमलबजावणी करताना अबकारी विभागाने मोठी कारवाई करत 14,000 लिटर अवैध मद्यसार (स्पिरिट) जप्त केले. ही कारवाई मंगळवारी (दि. 19 मे 2026) रोजी करण्यात आली.
चॉकलेट रंगाच्या अशोक लेलँड कंपनीच्या बँकर प्रकारातील सहा चाकी वाहनातून (नोंदणी क्र. KA-22 B-3793) अवैधरित्या स्पिरिटची वाहतूक विक्रीच्या उद्देशाने केली जात असल्याची माहिती अबकारी विभागाला मिळाली होती. त्यानुसार सापळा रचून वाहन अडवण्यात आले असता 14,000 लिटर मद्यसार आढळून आले.
या प्रकरणी सिद्धराजू पुट्टस्वामी शेट्टी (वय 47, व्यवसाय : वाहन चालक, रा. हेग्गिनवाळू, ता. नंजनगुड, जि. म्हैसूर) याच्याविरुद्ध बीएनएसएस कायदा 2023 च्या कलम 35(3) अन्वये पुढील तपासासाठी हजर राहण्याची नोटीस बजावण्यात आली आहे. वाहन मालकाचा शोध घेऊन त्याला अटक करण्याची कार्यवाही सुरू आहे.
जप्त करण्यात आलेल्या मद्यसाराची किंमत अंदाजे 14,00,000 रुपये असून वाहनाची किंमत सुमारे 21,00,000 रुपये आहे. अशा प्रकारे एकूण 35,01,500 रुपयांचा मुद्देमाल हस्तगत करण्यात आला आहे.
ही कारवाई डॉ. वाय. मंजुनाथ, अबकारी आयुक्त (केंद्रीय कार्यालय, बेळगाव), एफ. एच. चलवादी, अबकारी संयुक्त आयुक्त (प्रशासन), बेळगाव विभाग, जगदीश एन. के., अबकारी उपआयुक्त, बेळगाव (दक्षिण) जिल्हा यांच्या मार्गदर्शनाखाली पार पडली. तसेच विजयकुमार जे. हिरेमठ, अबकारी अधीक्षक (संयुक्त आयुक्त कार्यालय), यांच्या सूचनेनुसार रवी एम. मुरगोड, उपअधीक्षक (बेळगाव उपविभाग) यांच्या नेतृत्वाखाली ही धाड टाकण्यात आली.
या कारवाईत मंजुनाथ मेळ्ळिगेरी (अबकारी निरीक्षक), नुरुल्ला खान (उपनिरीक्षक, खानापूर विभाग), सुनील एस. पाटील (उपनिरीक्षक, डीसीई कार्यालय), तसेच अबकारी कर्मचारी वाय. बी. पाटील, विवेकी आणि वाहनचालक प्रकाश यांनी सहभाग घेतला.
सदर प्रकरणाचा पुढील अधिक तपास सुरू आहे.
ಜಾಂಬೋಟಿ–ಕಣಕುಂಬಿ ಮಾರ್ಗದಲ್ಲಿ 14 ಸಾವಿರ ಲೀಟರ್ ಸ್ಪಿರಿಟ್ ಸಹಿತ ಲಾರಿ ಜಪ್ತಿ; 35 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತು ವಶ.
ಬೆಳಗಾವಿ : ಪ್ರತಿನಿಧಿ
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಜಾಂಬೋಟಿಯಿಂದ ಕಣಕುಂಬಿ ಕಡೆಗೆ ಹೋಗುವ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಿದ ಅಬಕಾರಿ ಇಲಾಖೆಯು ಭಾರೀ ಪ್ರಮಾಣದ ಅಕ್ರಮ ಮದ್ಯಸಾರ (ಸ್ಪಿರಿಟ್) ವಶಪಡಿಸಿಕೊಂಡಿದೆ. ಮಂಗಳವಾರ (दि. 19 ಮೇ 2026) ರಂದು ನಡೆದ ಈ ಕಾರ್ಯಾಚರಣೆಯಲ್ಲಿ ಒಟ್ಟು 14,000 ಲೀಟರ್ ಅಕ್ರಮ ಮದ್ಯಸಾರ ಜಪ್ತಿ ಮಾಡಲಾಗಿದೆ.
ಚಾಕ್ಲೆಟ್ ಬಣ್ಣದ Ashok Leyland ಕಂಪನಿಯ ಬ್ಯಾಂಕರ್ ಮಾದರಿಯ ಆರು ಚಕ್ರಗಳ ವಾಹನ (ನಂ. KA-22 B-3793) ಮೂಲಕ ಮಾರಾಟದ ಉದ್ದೇಶದಿಂದ ಅಕ್ರಮವಾಗಿ ಸ್ಪಿರಿಟ್ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಅಬಕಾರಿ ಇಲಾಖೆಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಬಲೆ ಬೀಸಿ ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ 14,000 ಲೀಟರ್ ಮದ್ಯಸಾರ ಪತ್ತೆಯಾಯಿತು.
ಈ ಪ್ರಕರಣ ಸಂಬಂಧ ಸಿದ್ಧರಾಜು ಪುಟ್ಟಸ್ವಾಮಿ ಶೆಟ್ಟಿ (ವಯಸ್ಸು 47, ಉದ್ಯೋಗ: ವಾಹನ ಚಾಲಕ, ನಿವಾಸ: ಹೆಗ್ಗಿನವಾಳ, ತಾಲ್ಲೂಕು ನಂಜನಗೂಡು, ಜಿಲ್ಲೆ ಮೈಸೂರು) ಇವರಿಗೆ ಬಿಎನ್ಎಸ್ಎಸ್ ಕಾಯ್ದೆ 2023ರ ಕಲಂ 35(3) ಅನ್ವಯ ಮುಂದಿನ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ವಾಹನ ಮಾಲೀಕರ ಪತ್ತೆಹಚ್ಚಿ ಅವರನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಜಪ್ತಿ ಮಾಡಲಾದ ಮದ್ಯಸಾರದ ಅಂದಾಜು ಮೌಲ್ಯ ರೂ. 14,00,000 ಆಗಿದ್ದು, ವಾಹನದ ಮೌಲ್ಯ ಸುಮಾರು ರೂ. 21,00,000 ಆಗಿದೆ. ಒಟ್ಟಾರೆ ರೂ. 35,01,500 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆ ಡಾ. ವೈ. ಮಂಜುನಾಥ್, ಅಬಕಾರಿ ಆಯುಕ್ತರು (ಕೇಂದ್ರ ಕಚೇರಿ, ಬೆಳಗಾವಿ), ಎಫ್. ಎಚ್. ಚಲವಾದಿ, ಅಬಕಾರಿ ಸಂಯುಕ್ತ ಆಯುಕ್ತರು (ಆಡಳಿತ), ಬೆಳಗಾವಿ ವಿಭಾಗ, ಹಾಗೂ ಜಗದೀಶ ಎನ್.ಕೆ., ಅಬಕಾರಿ ಉಪ ಆಯುಕ್ತರು, ಬೆಳಗಾವಿ (ದಕ್ಷಿಣ) ಜಿಲ್ಲೆ ಇವರ ಮಾರ್ಗದರ್ಶನದಲ್ಲಿ ನೆರವೇರಿತು. ವಿಜಯಕುಮಾರ್ ಜೆ. ಹಿರೇಮಠ್, ಅಬಕಾರಿ ಅಧೀಕ್ಷಕರು (ಸಂಯುಕ್ತ ಆಯುಕ್ತರ ಕಚೇರಿ) ಅವರ ಸೂಚನೆಯಂತೆ ರವಿ ಎಂ. ಮುರಗೋಡ್, ಉಪ ಅಧೀಕ್ಷಕರು (ಬೆಳಗಾವಿ ಉಪವಿಭಾಗ) ಅವರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಈ ಕಾರ್ಯಾಚರಣೆಯಲ್ಲಿ ಮಂಜುನಾಥ್ ಮೆಳ್ಳಿಗೇರಿ (ಅಬಕಾರಿ ನಿರೀಕ್ಷಕರು), ನುರಲ್ಲಾ ಖಾನ್ (ಉಪನಿರೀಕ್ಷಕರು, ಖಾನಾಪುರ ವಿಭಾಗ), ಸುನೀಲ್ ಎಸ್. ಪಾಟೀಲ (ಉಪನಿರೀಕ್ಷಕರು, ಡಿಸಿಇ ಕಚೇರಿ), ಹಾಗು ಅಬಕಾರಿ ಸಿಬ್ಬಂದಿ ವೈ.ಬಿ. ಪಾಟೀಲ, ವಿವೇಕ ಮತ್ತು ವಾಹನ ಚಾಲಕ ಪ್ರಕಾಶ್ ಅವರು ಭಾಗವಹಿಸಿದ್ದರು.
ಸದರ ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.


