करंबळचे ज्येष्ठ सामाजिक कार्यकर्ते महादेव घाडी यांचा 75 वा अमृतमहोत्सवी वाढदिवस उत्साहात.
खानापूर : तालुक्यातील करंबळ येथील रहिवासी, प्रतिष्ठित नागरिक, माजी तालुका पंचायत सदस्य व ज्येष्ठ सामाजिक कार्यकर्ते महादेव घाडी यांचा 75 वा वाढदिवस तसेच 50 वा लग्नाचा वाढदिवस (सुवर्णमहोत्सवी विवाह सोहळा) घरगुती वातावरणात मोजक्या नातेवाईक व जिवलग मित्रांच्या उपस्थितीत रविवार दिनांक 17 मे 2026 रोजी आनंदात साजरा करण्यात आला. त्यांना शुभेच्छा देण्यासाठी राजकीय व सामाजिक क्षेत्रातील त्यांच्या मित्रमंडळींनी हजेरी लावली होती. यामध्ये आमदार विठ्ठलराव हलगेकर, माजी आमदार दिगंबरराव पाटील, पीएलडी बँकेचे चेअरमन मुरलीधर पाटील, काँग्रेसचे ब्लॉक अध्यक्ष व बार असोसिएशनचे अध्यक्ष ईश्वर घाडी, सामाजिक कार्यकर्ते व समितीचे नेते प्रकाश चव्हाण, शिवसेनेचे राज्य उपाध्यक्ष के पी पाटील, तालुका पंचायतीचे माजी सदस्य बाळासाहेब शेलार, पांडुरंग सावंत, यशवंत बिरजे, वीठ्ठल पाटील, पी एच पाटील, मराठी संस्कृती प्रतिष्ठानचे अध्यक्ष नारायण कापोलकर, विनायक मुतगेकर, के एम घाडी, पत्रकार व माजी नगरसेवक विवेक गिरी, पत्रकार वासुदेव चौगुले, पत्रकार व माजी नगरसेवक दिनकर मरगाळे तसेच अनेक सामाजिक कार्यकर्ते व नेते मंडळी उपस्थित होते.

यावेळी सर्वांच्या वतीने व कुटुंबीयांच्यावतीने त्यांचा सत्कार करून दीर्घायुष्याच्या शुभेच्छा दिल्या. साधेपणाने पण भावनिक वातावरणात पार पडलेल्या या कार्यक्रमात त्यांच्या सामाजिक, राजकीय आणि कौटुंबिक प्रवासाचा आढावा घेण्यात आला.

महादेव घाडी हे तत्कालीन महाराष्ट्र एकीकरण समितीचे माजी आमदार कै. अशोकराव नारायण पाटील यांचे खंदे समर्थक म्हणून ओळखले जात होते. महादेव घाडी यांनी सीमाभागातील मराठी जनतेच्या प्रश्नांवर ठाम भूमिका घेतली होती. आपल्या प्रभावी व ओघवत्या वक्तृत्वशैलीमुळे ते सभांमध्ये विशेष लक्ष वेधून घेत असत. त्यांच्या भाषणात अभ्यासपूर्ण मांडणी, स्पष्ट भूमिका आणि साधी-सोपी भाषा यांचा सुंदर संगम दिसून येतो. त्यामुळे त्यांना “देवाने दिलेली सुंदर वाणी” अशी उपमा दिली जाते.
खानापूर तालुक्याच्या राजकारणातील अनेक चढउतार त्यांनी जवळून अनुभवले आहेत. तालुक्यातील राजकारणाबरोबरच समाजकारणातही त्यांनी सक्रिय सहभाग घेतला. विविध सामाजिक उपक्रम, गावविकास कामे आणि सर्वसामान्यांच्या प्रश्नांसाठी त्यांनी नेहमी पुढाकार घेतला. गरिबीतून आणि कष्टातून उभे राहिलेल्या त्यांच्या आयुष्याचा प्रवास अनेकांसाठी प्रेरणादायी ठरला आहे.
कठीण परिस्थितीतही त्यांनी कुटुंबाची जबाबदारी समर्थपणे सांभाळली. आज त्यांच्या दोन्ही मुलांनी नोकरीत स्थैर्य मिळवले असून कुटुंबाची आर्थिक व सामाजिक घडी व्यवस्थित बसली आहे. संघर्षमय आयुष्यातून स्थैर्याकडे झालेला हा प्रवास त्यांच्या जिद्दीचा आणि परिश्रमांचा प्रत्यय देणारा आहे.
त्यांच्या अमृतमहोत्सवी वाढदिवसानिमित्त परिसरातील नागरिकांकडून व मित्र परिवाराकडून व सामाजिक कार्यकर्त्याकडून शुभेच्छांचा वर्षाव होत असून, पुढील आयुष्य निरोगी, आनंदी व समाधानाचे जावो, अशी भावना व्यक्त करण्यात येत आहे.
ಕರಂಬಳ ಊರಿನ ಹಿರಿಯ ಸಾಮಾಜಿಕ ಕಾರ್ಯಕರ್ತ ಮಹಾದೇವ ಘಾಡಿ ಅವರ 75ನೇ ಅಮೃತ ಮಹೋತ್ಸವ ಸಂಭ್ರಮದಲ್ಲಿ ಆಚರಣೆ.
ಖಾನಾಪುರ : ತಾಲ್ಲೂಕಿನ ಕರಂಬಳ ಗ್ರಾಮದ ನಿವಾಸಿ, ಪ್ರತಿಷ್ಠಿತ ನಾಗರಿಕ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ ಹಾಗೂ ಹಿರಿಯ ಸಾಮಾಜಿಕ ಕಾರ್ಯಕರ್ತ ಮಹಾದೇವ ಘಾಡಿ ಅವರ 75ನೇ ಜನ್ಮದಿನ ಹಾಗೂ 50ನೇ ವಿವಾಹ ವಾರ್ಷಿಕೋತ್ಸವ (ಸುವರ್ಣ ಮಹೋತ್ಸವ) ಭಾನುವಾರ, 17 ಮೇ 2026 ರಂದು ಕುಟುಂಬ ವಾತಾವರಣದಲ್ಲಿ ಆಪ್ತ ಬಂಧು-ಬಳಗ ಮತ್ತು ಸ್ನೇಹಿತರ ಸಮ್ಮುಖದಲ್ಲಿ ಸಂತೋಷದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಸಕರಾದ ವಿಠಲ್ ಹಲಗೇಕರ, ಮಾಜಿ ಶಾಸಕ ದಿಗಂಬರ್ ಪಾಟೀಲ, ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷ ಮುರಳಿಧರ್ ಪಾಟೀಲ್ , ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಾಗೂ ಬಾರ್ ಅಸೋಸಿಯೇಷನ್ ಅಧ್ಯಕ್ಷ ಈಶ್ವರ್ ಗಾಡಿ, ಸಾಮಾಜಿಕ ಕಾರ್ಯಕರ್ತರು ಹಾಗೂ ಸಮಿತಿಯ ನಾಯಕ ಪ್ರಕಾಶ್ ಚೌಹಾನ, ಶಿವಸೇನೆಯ ರಾಜ್ಯ ಉಪಾಧ್ಯಕ್ಷ ಕೆ ಪಿ ಪಾಟೀಲ, ತಾಲ್ಲೂಕು ಪಂಚಾಯತಿಯ ಮಾಜಿ ಸದಸ್ಯ ಬಾಳಾಸಾಹೇಬ ಶೇಲಾರ, ಪಾಂಡುರಂಗ ಸಾಂವತ , ಮರಾಠಿ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ಕಾಪೂಲಕರ, ಪತ್ರಕರ್ತ ಹಾಗೂ ಮಾಜಿ ನಗರಸಭಾ ಸದಸ್ಯ ವೀವೆಕ ಗೀರಿ, ಪತ್ರಕರ್ತ ಹಾಗೂ ಮಾಜಿ ನಗರಸಭಾ ಸದಸ್ಯ ದಿನಕರ್ ಮರಗಾಳೆ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕರ್ತರು ಹಾಗೂ ನಾಯಕರು ಉಪಸ್ಥಿತರಿದ್ದರು.
ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದ ಅವರ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭಾಶಯ ಕೋರಿದರು. ಕುಟುಂಬದ ಸದಸ್ಯರು ಅವರನ್ನು ಸನ್ಮಾನಿಸಿ ದೀರ್ಘಾಯುಷ್ಯಕ್ಕಾಗಿ ಹಾರೈಸಿದರು. ಸರಳವಾದರೂ ಹೃದಯಸ್ಪರ್ಶಿ ವಾತಾವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅವರ ಸಾಮಾಜಿಕ, ರಾಜಕೀಯ ಮತ್ತು ಕುಟುಂಬ ಜೀವನದ ಪಯಣವನ್ನು ಸ್ಮರಿಸಲಾಯಿತು.
ಮಹಾದೇವ ಘಾಡಿ ಅವರು ಮಾಜಿ ಶಾಸಕ ದಿವಂಗತ ಅಶೋಕರಾವ್ ನಾರಾಯಣ ಪಾಟೀಲ ಅವರ ಕಟ್ಟಾ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದರು. ಅವರು ಗಡಿಭಾಗದ ಮರಾಠಿ ಜನರ ಸಮಸ್ಯೆಗಳ ಕುರಿತು ದೃಢ ನಿಲುವು ಹೊಂದಿದ್ದರು. ತಮ್ಮ ಪ್ರಭಾವಿ ಭಾಷಣ ಶೈಲಿಯಿಂದ ಸಭೆಗಳಲ್ಲಿ ವಿಶೇಷ ಗಮನ ಸೆಳೆಯುತ್ತಿದ್ದರು. ಅವರ ಭಾಷಣಗಳಲ್ಲಿ ಅಧ್ಯಯನಪೂರ್ಣ ನಿರೂಪಣೆ, ಸ್ಪಷ್ಟ ನಿಲುವು ಮತ್ತು ಸರಳ ಭಾಷೆಯ ಸುಂದರ ಸಂಯೋಜನೆ ಕಾಣಿಸುತ್ತಿತ್ತು. ಆದ್ದರಿಂದ ಅವರಿಗೆ “ದೇವರು ನೀಡಿದ ಸುಂದರ ವಾಣಿ” ಎಂಬ ವಿಶೇಷ ಗೌರವ ಲಭಿಸಿದೆ.
ಖಾನಾಪುರ ತಾಲ್ಲೂಕಿನ ರಾಜಕೀಯದಲ್ಲಿ ನಡೆದ ಅನೇಕ ಏರುಪೇರುಗಳನ್ನು ಅವರು ಸಮೀಪದಿಂದಲೇ ಅನುಭವಿಸಿದ್ದಾರೆ. ರಾಜಕಾರಣದ ಜೊತೆಗೆ ಸಮಾಜಸೇವೆಯಲ್ಲಿಯೂ ಅವರು ಸಕ್ರಿಯರಾಗಿದ್ದು, ವಿವಿಧ ಸಾಮಾಜಿಕ ಉಪಕ್ರಮಗಳು, ಗ್ರಾಮಾಭಿವೃದ್ಧಿ ಕಾರ್ಯಗಳು ಮತ್ತು ಸಾಮಾನ್ಯ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಸದಾ ಮುಂದಾಗಿದ್ದರು.
ಕಠಿಣ ಪರಿಸ್ಥಿತಿಯಿಂದ ಪರಿಶ್ರಮದ ಮೂಲಕ ಮೇಲೇರಿದ ಅವರ ಜೀವನಯಾನ ಅನೇಕರಿಗೆ ಪ್ರೇರಣೆಯಾಗಿದೆ. ಕಠಿಣ ಸಂದರ್ಭಗಳಲ್ಲಿಯೂ ಕುಟುಂಬದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇಂದು ಅವರ ಇಬ್ಬರು ಪುತ್ರರು ಉದ್ಯೋಗದಲ್ಲಿ ಸ್ಥಿರತೆ ಹೊಂದಿದ್ದು, ಕುಟುಂಬದ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿ ಸುಧಾರಿಸಿದೆ. ಹೋರಾಟಮಯ ಜೀವನದಿಂದ ಸ್ಥಿರತೆಗೆ ತಲುಪಿದ ಈ ಪಯಣವು ಅವರ ಜಿದ್ದಾತಿ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದೆ.
ಅವರ ಅಮೃತ ಮಹೋತ್ಸವದ ಅಂಗವಾಗಿ ಭಾಗದ ನಾಗರಿಕರು, ಸ್ನೇಹಿತರು ಹಾಗೂ ಸಾಮಾಜಿಕ ಕಾರ್ಯಕರ್ತರಿಂದ ಶುಭಾಶಯಗಳ ಸುರಿಮಳೆ ಸುರಿಯುತ್ತಿದ್ದು, ಮುಂದಿನ ಜೀವನ ಆರೋಗ್ಯಕರ, ಸಂತೋಷಕರ ಮತ್ತು ಸಮಾಧಾನಕರವಾಗಿರಲಿ ಎಂಬ ಹಾರೈಕೆ ವ್ಯಕ್ತವಾಗುತ್ತಿದೆ.


