दहावी परीक्षेत अनुष्का देसाईचा राज्यात संयुक्त पाचवा क्रमांक; आमदार विठ्ठल हलगेकरांकडून सत्कार.
खानापूर : तालुक्यातील विद्यार्थिनींनी दहावीच्या परीक्षेत उल्लेखनीय यश संपादन करत खानापूरचा नावलौकिक वाढवला आहे. विशेषतः मुली शिक्षणात आघाडी घेत असल्याचे समाधानकारक चित्र पाहायला मिळत असून ही बाब अभिमानास्पद असल्याचे प्रतिपादन आमदार विठ्ठल हलगेकर यांनी केले.

हलशीवाडी येथील अनुष्का रघुनाथ देसाई हिने दहावीच्या परीक्षेत 621 गुण मिळवत खानापूर तालुक्यात दुसरा क्रमांक तसेच राज्यात संयुक्तपणे पाचवा क्रमांक पटकावला. तिच्या या उल्लेखनीय यशाबद्दल आमदार विठ्ठल हलगेकर यांच्या हस्ते तिचा सत्कार करण्यात आला.
यावेळी बोलताना आमदार हलगेकर म्हणाले की, ग्रामीण भागातील विद्यार्थ्यांमध्ये प्रचंड क्षमता दडलेली आहे. योग्य मार्गदर्शन, सातत्यपूर्ण अभ्यास आणि जिद्दीच्या जोरावर विद्यार्थी मोठे यश संपादन करू शकतात. विशेषतः मुली शिक्षणात पुढे येत असल्याचे पाहून समाधान वाटते. भविष्यात विद्यार्थ्यांनी उच्च शिक्षण घेऊन विविध क्षेत्रांत प्रगती साधावी आणि खानापूर तालुक्याचे नाव राज्य तसेच देशपातळीवर उज्ज्वल करावे, असे आवाहन त्यांनी केले.
कार्यक्रमाच्या प्रारंभी पीकेपीएसचे माजी सदस्य अनंत देसाई व रघुनाथ देसाई यांनी उपस्थितांचे स्वागत केले. यावेळी प्रशांत लक्केबैलकर, भरमाणी पाटील, माजी ग्रामपंचायत सदस्य अर्जुन देसाई, राजन सुतार, मानसी देसाई, प्रशांत देसाई आदी मान्यवर उपस्थित होते.
10 ನೇಯ ತರಗತಿ ಪರೀಕ್ಷೆಯಲ್ಲಿ ಅನುಷ್ಕಾ ದೇಸಾಯಿ ರಾಜ್ಯದಲ್ಲಿ ಸಂಯುಕ್ತ ಐದನೇ ಸ್ಥಾನ; ಶಾಸಕ ವಿಠ್ಠಲ ಹಲಗೇಕರ್ ಅವರಿಂದ ಸನ್ಮಾನ.
ಖಾನಾಪುರ : ತಾಲ್ಲೂಕಿನ ವಿದ್ಯಾರ್ಥಿನಿ 10 ನೇಯ ತರಗತಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿ ಖಾನಾಪುರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಿಶೇಷವಾಗಿ ಹೆಣ್ಣುಮಕ್ಕಳು ಶಿಕ್ಷಣದಲ್ಲಿ ಮುನ್ನಡೆ ಸಾಧಿಸುತ್ತಿರುವುದು ಸಂತೋಷದ ವಿಚಾರವಾಗಿದ್ದು, ಇದು ಹೆಮ್ಮೆಯ ಸಂಗತಿ ಎಂದು ಶಾಸಕ ವಿಠ್ಠಲ ಹಲಗೇಕರ್ ಅಭಿಪ್ರಾಯಪಟ್ಟರು.
ಹಲಶಿವಾಡಿ ಗ್ರಾಮದ ಅನುಷ್ಕಾ ರಘುನಾಥ ದೇಸಾಯಿ ಅವರು 10 ನೇಯ ತರಗತಿ ಪರೀಕ್ಷೆಯಲ್ಲಿ 621 ಅಂಕಗಳನ್ನು ಗಳಿಸಿ ಖಾನಾಪುರ ತಾಲ್ಲೂಕಿನಲ್ಲಿ ದ್ವಿತೀಯ ಸ್ಥಾನ ಹಾಗೂ ರಾಜ್ಯದಲ್ಲಿ ಸಂಯುಕ್ತವಾಗಿ ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅವರ ಈ ಸಾಧನೆಗಾಗಿ ಶಾಸಕ ವಿಠ್ಠಲ ಹಲಗೇಕರ್ ಅವರ ಕೈಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹಲಗೇಕರ್ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಪಾರ ಸಾಮರ್ಥ್ಯ ಅಡಗಿದೆ. ಸರಿಯಾದ ಮಾರ್ಗದರ್ಶನ, ನಿರಂತರ ಅಧ್ಯಯನ ಮತ್ತು ದೃಢಸಂಕಲ್ಪದ ಮೂಲಕ ವಿದ್ಯಾರ್ಥಿಗಳು ದೊಡ್ಡ ಸಾಧನೆ ಮಾಡಬಹುದು ಎಂದು ಹೇಳಿದರು. ವಿಶೇಷವಾಗಿ ಹೆಣ್ಣುಮಕ್ಕಳು ಶಿಕ್ಷಣದಲ್ಲಿ ಮುಂಚೂಣಿಯಲ್ಲಿ ಇರುವುದನ್ನು ನೋಡಿ ಸಂತೋಷವಾಗುತ್ತದೆ. ಭವಿಷ್ಯದಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ ಖಾನಾಪುರ ತಾಲ್ಲೂಕಿನ ಹೆಸರನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬೆಳಗಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಪಿಕೆಪಿಎಸ್ನ ಮಾಜಿ ಸದಸ್ಯರಾದ ಅನಂತ ದೇಸಾಯಿ ಹಾಗೂ ರಘುನಾಥ ದೇಸಾಯಿ ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪ್ರಶಾಂತ್ ಲಕ್ಕೇಬೈಲ್ಕರ್, ಭರಮಾಣಿ ಪಾಟೀಲ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಅರ್ಜುನ ದೇಸಾಯಿ, ರಾಜನ್ ಸುತಾರ್, ಮಾನಸಿ ದೇಸಾಯಿ, ಪ್ರಶಾಂತ್ ದೇಸಾಯಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


