दुसऱ्या विवाहाला विरोध; विवाहित युवकाची प्रेयसीसह मलप्रभा नदीत उडी घेऊन आत्महत्या.
रामदुर्ग ; दुसऱ्या विवाहाला कुटुंबीयांचा विरोध झाल्याने विवाहित युवकाने आपल्या प्रेयसीसह मलप्रभा नदीत उडी घेऊन आत्महत्या केल्याची हृदयद्रावक घटना बुधवारी सकाळी रामदुर्ग पोलीस ठाणे हद्दीत घडली.
या घटनेत मृत्युमुखी पडलेल्यांची नावे जगदीश यल्लाप्पा कवळेकर (वय 27, रा. मल्लापूर, ता. रामदुर्ग) आणि गंगम्मा पवाडेप्पा त्यापी (वय 26) अशी आहेत.
जगदीश हा विवाहित असून त्याची पत्नी पहिल्या प्रसूतीसाठी माहेरी बोचबाळ येथे गेली होती. पत्नी परत आल्यानंतर दुसऱ्या विवाहाबाबत तोडगा काढू, असे सांगत कुटुंबीयांनी दुसऱ्या लग्नाला तीव्र विरोध दर्शविला. यावरून घरात वाद झाला, अशी माहिती आहे. या वादानंतर सोमवारी दोघेही घरातून निघून गेले होते.
बुधवारी सकाळी मलप्रभा नदीत दोघांचे मृतदेह आढळून आले. घटनेची माहिती मिळताच रामदुर्ग पोलिसांनी घटनास्थळी धाव घेत दोन्ही मृतदेह नदीतून बाहेर काढले. विशेष म्हणजे, दोघेही एकमेकांना मिठीत धरून नदीत उडी मारल्याचे दिसून आले; मृतदेहही तस्सेच आढळल्याने उपस्थितांचे डोळे पाणावले.
या प्रकरणी रामदुर्ग पोलीस ठाण्याच्या पीएसआय सविता मुन्न्याळ यांनी गुन्हा दाखल करून पुढील तपास सुरू केला आहे.
ಎರಡನೇ ವಿವಾಹಕ್ಕೆ ಮನೆಯವರಿಂದ ವಿರೋಧ; ವಿವಾಹಿತ ಯುವಕನು ತನ್ನ ಪ್ರೇಯಸಿಯೊಂದಿಗೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ
ರಾಮದುರ್ಗ: ವಿವಾಹಿತ ಯುವಕನೊಬ್ಬ ತಮ್ಮ ಎರಡನೇ ಮದುವೆಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರಿಯತಮೆಯೊಂದಿಗೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಿಗ್ಗೆ ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಮೃತರನ್ನು ತಾಲ್ಲೂಕಿನ ಮಲ್ಲಾಪುರ ಗ್ರಾಮದ ಜಗದೀಶ ಯಲ್ಲಪ್ಪ ಕವಳೇಕರ (27), ಗಂಗಮ್ಮ ಪವಾಡೆಪ್ಪ ತ್ಯಾಪಿ (26) ಎಂದು ಗುರುತಿಸಲಾಗಿದೆ.
ಮೃತ ವಿವಾಹಿತ ಯುವಕನ ಹೆಂಡತಿ ಪ್ರಥಮ ಹೆರಿಗೆಗಾಗಿ ತವರುಮನೆ ಬೋಚಬಾಳ ಗ್ರಾಮಕ್ಕೆ ತೆರಳಿದ್ದಳು. ಆಕೆ ಬಂದ ನಂತರ ಎರಡನೇಯ ಮದುವೆಯ ವಿಚಾರಕ್ಕೆ ಇತ್ಯರ್ಥ ಕಂಡುಕೊಳ್ಳೋಣ ಎಂದು ಮನೆಯವರು ಆಕ್ಷೇಪ ವ್ಯಕ್ತಪಡಿಸಿದಾಗ ಮಾತಿಗೆ ಮಾತು ಬೆಳೆದಿತ್ತು ಎಂದು ಹೇಳಲಾಗಿದೆ. ಸೋಮವಾರವೇ ಮನೆ ತೊರೆದ ಇಬ್ಬರೂ ಬುಧವಾರ ಬೆಳಿಗ್ಗೆ ಮಲಪ್ರಭಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಸೋಮವಾರ ಬೆಳಿಗ್ಗೆ ರಾಮದುರ್ಗದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಎರಡು ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ. ಇಬ್ಬರೂ ಅಪ್ಪಿಕೊಂಡು ನೀರಿಗೆ ಬಿದ್ದಿದ್ದು, ಶವವಾಗಿಯೂ ಅಪ್ಪಕೊಂಡಿರುವುದನ್ನು ಹಾಗೆಯೇ ಹೊರ ತೆಗೆದಾಗ ಈ ವೇಳೆ ಅಲ್ಲಿದ್ದ ಜನರು ಮರುಕಪಟ್ಟರು.
ರಾಮದುರ್ಗ ಠಾಣೆ ಪಿಎಸ್ಐ ಸವಿತಾ ಮುನ್ಯಾಳ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.



