पत्नीला मानसिक छळ देऊन नाक कापून गंभीर जखमी करणाऱ्या आरोपीस कठोर शिक्षा
बेळगाव : पत्नीला वारंवार मानसिक व शारीरिक छळ देऊन अखेर नाक कापून गंभीर जखमी करणाऱ्या पतीस बेळगावच्या पाचव्या अतिरिक्त जिल्हा व सत्र न्यायालयाने कठोर शिक्षा सुनावली आहे.
महाराष्ट्रातील शेडशाळ येथील सुरेश परशुराम नायक (वय 38) हा शिक्षा झालेला आरोपी आहे. त्याने पत्नी सुनिता नायक (रा. कागवाड) हिच्या नाकावर व चेहऱ्यावर चाकूने वार करून गंभीर जखमी केले होते. आरोपी रोज दारू पिऊन येऊन पत्नीला शारीरिक व मानसिक छळ देत असे. त्यामुळे सुनिता माहेरी कागवाड येथे राहत होती. मात्र, आरोपी सुरेश वेळोवेळी माहेरी जाऊन देखील तिला छळत असे.
6 जानेवारी 2019 रोजी रात्री आरोपी सुरेश हा पत्नीला “माझ्यासोबत घरी चल” म्हणून माहेरी गेला. पण पत्नीने नकार दिल्याने संतापलेल्या आरोपीने तिला ठार मारण्याच्या उद्देशाने चाकूने नाक व तोंडावर वार करून गंभीर जखमी केले.
या प्रकरणाची चौकशी तत्कालीन कागवाड पोलीस स्थानकाचे पीएसआय हनुमंत शिरहट्टी यांनी करून न्यायालयात दोषारोपपत्र दाखल केले होते.
प्रकरणातील साक्षीदार व युक्तिवादांचा अभ्यास करून न्यायाधीश एच. एस. मञ्जुनाथ यांनी आरोपी सुरेश नायक यास एक वर्षांची कैद व 10 हजार रुपये दंड, तसेच चाकूने गंभीर जखमी केल्याबद्दल 5 वर्षांची कठोर कैद व 30 हजार रुपये दंड अशी शिक्षा सुनावली.
सरकारतर्फे सरकारी वकील आय. एम. मठपती यांनी काम पाहिले.
ಹೆಂಡತಿಗೆ ಮಾನಸಿಕ ಕಿರುಕುಳ ನೀಡಿ ಮೂಗು ಕತ್ತರಿಸಿ ಹಲ್ಲೆ ಮಾಡಿ ಗಾಯಗೊಳಿಸಿದ ಆರೋಪಿಗೆ ಕಠಿಣ ಶಿಕ್ಷೆ ಪ್ರಕಟ
ಬೆಳಗಾವಿ: ಪತ್ನಿಗೆ ಮಾನಸಿಕ ಕಿರುಕುಳ ನೀಡಿ ಮೂಗು ಕತ್ತರಿಸಿ ಹಲ್ಲೆ ಮಾಡಿ ಭಾರಿ ಗಾಯ ಮಾಡಿದ ಆರೋಪಿಗೆ ಇಲ್ಲಿಯ 5 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶನಿವಾರ ಶಿಕ್ಷೆ ಪ್ರಕಟಿಸಿದೆ.
ಮಹಾರಾಷ್ಟ್ರದ ಶೆಡಸ್ಯಾಳದ ಸುರೇಶ ಪರಶುರಾಮ ನಾಯಿಕ(38)ಶಿಕ್ಷೆಗೊಳಗಾದ ಆರೋಪಿ. ಈತ ತನ್ನ ಪತ್ನಿ ಕಾಗವಾಡದ ಸುನೀತಾ ನಾಯಿಕ ಅವರ ಮೂಗು ಕತ್ತರಿಸಿ ಹಲ್ಲೆಗೈದಿದ್ದ. ಪ್ರತಿದಿನ ಸಾರಾಯಿ ಕುಡಿದು ಬಂದು ಪತ್ನಿ ಸುನೀತಾಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ. ಹೀಗಾಗಿ ಸುನೀತಾ ತವರು ಮನೆಯಾದ ಕಾಗವಾಡಕ್ಕೆ ಬಂದು ಮತ್ತೆ ಗಂಡನ ಮನೆಗೆ ಹೋಗಿರಲಿಲ್ಲ. ಆದರೆ, ಆರೋಪಿ ಸುರೇಶ ಆಗಾಗ ಸುನೀತಾರ ತವರು ಮನೆಗೆ ಬಂದು ಕಿರುಕುಳ ನೀಡುವುದನ್ನು ಮುಂದುವರಿಸಿದ್ದ. ಪತ್ನಿ ತವರು ಮನೆಯಲ್ಲೇ ಇದ್ದ ಕಾರಣಕ್ಕೆ ಸಿಟ್ಟಾಗಿದ್ದ ಆರೋಪಿ, 2019 ರ ಜ. 6ರಂದು ರಾತ್ರಿ ಕಾಗವಾಡದ ಪತ್ನಿ ಮನೆಗೆ ಬಂದು ಮನೆಗೆ ಬಾ ಎಂದು ಕರೆದಿದ್ದಾನೆ. ಆಗ ಪತ್ನಿ ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆತ ಪತ್ನಿಯನ್ನು ಕೊಲೆಗೈಯುವ ಉದ್ದೇಶದಿಂದ ಚಾಕುವಿನಿಂದ ಮೂಗು ಮತ್ತು ಬಾಯಿಯ ಮೇಲೆ ಕೊಯ್ದು ಭಾರಿ ಪ್ರಮಾಣದಲ್ಲಿ ಹಲ್ಲೆ ಮಾಡಿದ್ದಾನೆ.
ಈ ಬಗ್ಗೆ ಕಾಗವಾಡದ ಹಿಂದಿನ ಪಿಎಸ್ಐ ಹನುಮಂತ ಶಿರಹಟ್ಟಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಬೆಳಗಾವಿಯ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಚ್.ಎಸ್ . ಮಂಜುನಾಥ ಅವರು ಅಭಿಯೋಜನೆ ಪರವಾಗಿ ಹಾಜರುಪಡಿಸಲಾದ ಸಾಕ್ಷಿ ಮತ್ತು ವಾದ-ವಿವಾದ ಅವಲೋಕಿಸಿ ಆರೋಪಿ ಸುರೇಶ ನಾಯಿಕಗೆ ಒಂದು ವರ್ಷ ಜೈಲು ಮತ್ತು 10,000 ರೂ.ದಂಡ ಮತ್ತು ಚಾಕುವಿನಿಂದ ಮೂಗು ಮತ್ತು ಬಾಯಿಗೆ ಭಾರಿ ಪ್ರಮಾಣದಲ್ಲಿ ಗಾಯಪಡಿಸಿದ್ದ ಅಪರಾಧಕ್ಕೆ 5 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 30,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರ ಸರಕಾರಿ ಅಭಿಯೋಜಕ ಐ.ಎಂ.ಮಠಪತಿ ವಾದ ಮಂಡಿಸಿದ್ದರು

