माजी पंतप्रधानांच्या पत्नीला जिवंत जाळलं! नेपाळमध्ये ‘जेन-झी’ आंदोलकांचा हिंसाचार.
काठमांडू ; नेपाळमध्ये परिस्थिती हाताबाहेर गेल्याचे चित्र गेल्या काही दिवसांपासून पाहायला मिळत आहे. ‘जेन-झी’नी सरकारविरोधात सोमवारी सुरू केलेल्या निदर्शनांनी मंगळवारी अधिकच उग्र स्वरूप धारण केले, ज्यानंतर पंतप्रधान के. पी. शर्मा ओली यांनी राजीनामा दिला आहे. या आंदोलनावेळी संतप्त निदर्शकांनी नेपाळच्या पार्लमेंटसह अनेक महत्त्वाच्या इमारतींची जाळपोळ केली.
माजी पंतप्रधानांचे घर पेटवले..
निदर्शकांनी नेपाळचे माजी पंतप्रधान झलनाथ खनाल यांच्या घरावर देखील हल्ला केला. यावेळी नासधूस करून घर पेटवून देण्यात आले. यावेळी घरात अडकलेल्या खनाल यांच्या पत्नी राज्यलक्ष्मी चित्रकर याचा आगीत होरपळू गंभीर जखमी झाल्या, ज्यानंतर त्यांचे मंगळवारी निधन झाले, असे वृत्त माध्यमांनी दिले आहे. नेपाळची राजधानी काठमांडूच्या दल्लू भागात हा धक्कादायक प्रकार घडला. चित्रकर यांना तातडीने किर्तीपूर बर्न हॉस्पिटलमध्ये दाखल करण्यात आले होते. पण उपचारादरम्यान त्यांचा मृत्यू झाला, असे कुटुंबीयांनी सांगितले. एनडीटीव्हीने यासंबंधीचे वृत्त दिले आहे.
नेपाळचे पंतप्रधान के. पी. शर्मा ओली यांचे घर देखील आंदोलकांनी पेटवून दिले. सोशल मीडियावर काही काळासाठी घालण्यात आलेल्या बंदीच्या विरोधातील आंदोलनाने अत्यंत हिंसक वळण घेतले. यावेळी ओली यांच्या सरकारमधील अर्थमंत्री बिष्णू प्रसाद पौडेल (65) यांना देखील नेपाळच्या राजधानीत रस्त्यावर मारहाण करण्यात आली, याचा अत्यंत भयानक व्हिडीओ देखील समोर आला आहे. ज्यामध्ये त्यांना लाथा बुक्क्यांनी मारहाण केली जात असल्याचे दिसून येत आहे.
समाज माध्यमांवर बंदी घातल्यानंतर संतप्त झालेल्या तरुणांनी निदर्शने करण्यास सुरू केली आणि त्यांनी देशाच्या राजधानीचा ताबा घेतला. या आंदोलनादरम्यान पोलिसांनी केलेल्या गोळीबारात 19 जण ठार झाले तर अनेक जण जखमी झाले आहेत.
सोमवारी रात्री समाज माध्यमांवरील बंदी उठवण्यात आली मात्र निदर्शने सुरूच राहिली. भडकलेल्या आंदोलकांनी नेपाळच्या काही वरिष्ठ नेत्यांची घरे आणि नेपाळची पार्लमेंट देखील पेटवली. यादरम्यान काठमांडू येथील विमानतळ देखील बंद करण्यात आला, त्यानंतर लष्कराच्या हेलिकॉप्टर्सनी काही मंत्र्यांना सुरक्षित स्थळी पोहचवले.
ನೇಪಾಳದಲ್ಲಿ ಹಿಂಸಾಚಾರ ತೀವ್ರ – ಮಾಜಿ ಪ್ರಧಾನ ಮಂತ್ರಿಯ ಪತ್ನಿಯ ಸಜೀವ ದಹನ!
ಕಠ್ಮಂಡು ; ನೇಪಾಳದಲ್ಲಿ ಕಳೆದ ಕೆಲವು ದಿನಗಳಿಂದ ಪರಿಸ್ಥಿತಿ ಹತಾಶೆಯ ಮಟ್ಟಕ್ಕೆ ತಲುಪಿದ್ದು, ಸೋಮವಾರದಿಂದ ಆರಂಭವಾದ ಜೆನ್-ಝಿ ಯುವಕರ ಪ್ರತಿಭಟನೆ ಮಂಗಳವಾರ ಮತ್ತಷ್ಟು ಉಗ್ರ ರೂಪ ಪಡೆದಿದೆ. ಇದರ ಪರಿಣಾಮವಾಗಿ ಪ್ರಧಾನ ಮಂತ್ರಿ ಕೆ.ಪಿ. ಶರ್ಮಾ ಒಲಿ ಅವರು ರಾಜೀನಾಮೆ ನೀಡಿದ್ದಾರೆ.
ಪ್ರತಿಭಟನಾಕಾರರು ನೇಪಾಳ ಸಂಸತ್ತಿನ ಕಟ್ಟಡ ಸೇರಿದಂತೆ ಹಲವು ಪ್ರಮುಖ ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದಾರೆ.
ಮಾಜಿ ಪ್ರಧಾನ ಮಂತ್ರಿಯ ಮನೆಗೂ ಬೆಂಕಿ ಹಚ್ಚಿದ
ಪ್ರತಿಭಟನಾಕಾರರು ಮಂತ್ರಿ ಝಲನಾಥ್ ಖನಾಲ್ ಅವರ ಮನೆಯ ಮೇಲೆಯೂ ದಾಳಿ ನಡೆಸಿ ನಾಶಮಾಡಿ ಬೆಂಕಿ ಹಚ್ಚಿದರು. ಈ ವೇಳೆ ಮನೆಯೊಳಗೆ ಸಿಲುಕಿದ್ದ ಖನಾಲ್ ಅವರ ಪತ್ನಿ ರಾಜ್ಯಲಕ್ಷ್ಮಿ ಚಿತ್ರಕರ ಗಂಭೀರವಾಗಿ ಸುಟ್ಟು ಗಾಯಗೊಂಡರು. ಅವರನ್ನು ತಕ್ಷಣ ಕೀರ್ತಿಪುರ ಬರ್ನ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಅವರು ಮೃತಪಟ್ಟರು ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಘಟನೆ ಕಠ್ಮಂಡುವಿನ ದಲ್ಲು ಪ್ರದೇಶದಲ್ಲಿ ನಡೆದಿದೆ.
ಒಲಿ ಅವರ ಮನಗೂ ಬೆಂಕಿ.
ಪ್ರತಿಭಟನಾಕಾರರು ಪ್ರಸ್ತುತ ಪ್ರಧಾನ ಮಂತ್ರಿ ಒಲಿ ಅವರ ಮನೆಗೂ ಬೆಂಕಿ ಹಚ್ಚಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೇಲಿನ ನಿರ್ಬಂಧದ ವಿರುದ್ಧ ಪ್ರತಿಭಟನೆ ಹಿಂಸಾತ್ಮಕ ತಿರುವು ಪಡೆದಿದ್ದು, ಹಣಕಾಸು ಸಚಿವ ಬಿಷ್ಣು ಪ್ರಸಾದ್ ಪೌಡೆಲ್ (65) ಅವರನ್ನು ಕಠ್ಮಂಡುವಿನ ರಸ್ತೆಯಲ್ಲೇ ಜನರು ಲಾಠಿ, ಕಾಲಿನಿಂದ ಹಲ್ಲೆ ಮಾಡುವ ಭೀಕರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಪೊಲೀಸ್ ಗುಂಡಿನ ದಾಳಿಯಲ್ಲಿ 19 ಸಾವು.
ಸಾಮಾಜಿಕ ಮಾಧ್ಯಮಗಳ ಮೇಲಿನ ನಿರ್ಬಂಧದ ವಿರುದ್ಧ ಯುವಕರು ಕಠ್ಮಂಡುವಿನ ಮೇಲಿನ ನಿಯಂತ್ರಣ ಪಡೆದಿದ್ದಾರೆ. ಈ ವೇಳೆ ನಡೆದ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ 19 ಜನರು ಸಾವನ್ನಪ್ಪಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ.
ಸೋಮವಾರ ರಾತ್ರಿ ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧವನ್ನು ಸರ್ಕಾರ ಹಿಂಪಡೆದರೂ ಪ್ರತಿಭಟನೆ ಮುಂದುವರಿದಿದ್ದು, ಕೋಪಗೊಂಡ ಯುವಕರು ನೇಪಾಳ ಸಂಸತ್ತು, ಹಲವು ಹಿರಿಯ ನಾಯಕರ ಮನೆಗಳಿಗೆ ಬೆಂಕಿ ಹಚ್ಚಿದರು. ಈ ದಂಗೆಯ ನಡುವೆಯೇ ಕಠ್ಮಂಡು ವಿಮಾನ ನಿಲ್ದಾಣ ಮುಚ್ಚಲ್ಪಟ್ಟಿದ್ದು, ಸೇನಾ ಹೆಲಿಕಾಪ್ಟರ್ಗಳ ಮೂಲಕ ಕೆಲವು ಸಚಿವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

