दिशाभूल करून वृद्ध महिलेच्या कानातील दागिना लांबविणाऱ्या दोघी भामट्या महिला पोलिसांच्या ताब्यात
खानापूर (ता. 27): खानापूर तालुक्यातील लोंडा येथील एका वृद्ध महिलेची फसवणूक करून तिच्या कानातील सोन्याचा दागिना लांबविणाऱ्या दोघी भामट्या महिलांना खानापूर पोलिसांनी ताब्यात घेतले असून त्यांच्या विरोधात गुन्हा नोंदविण्यात आला आहे.
मिळालेल्या माहितीनुसार, जिल्हा परिषदेचे माजी सदस्य व भाजप नेते बाबुराव देसाई यांच्या सासू इंदू गणपती पर्येकर (वय 85 वर्ष) या जनता कॉलनी, लोंडा येथे वास्तव्यास आहेत. आज दुपारी दोन महिला हातात देवाचा फोटो घेऊन त्यांच्या घरी आल्या. धार्मिक गोष्टी सांगत त्यांनी इंदू पर्येकर यांचा विश्वास संपादन केला.
यानंतर त्या महिलांनी पर्येकर यांना सांगितले की, “कानात सोनं घालू नका, कपड्यात बांधून देवासमोर ठेवा, त्यामुळे तुमचे चांगले होईल.” असे सांगून त्यांनी वृद्ध महिलेला कानातील सोन्याचा दागिना काढण्यास सांगितले. त्यांनी तो दागिना स्वतःकडे घेऊन कपड्यात भंडाऱ्यासह बांधण्याचे नाटक केले. मात्र, हातचलाखीने दागिना स्वतःकडे ठेवला आणि कपड्यात केवळ भंडाऱ्यासोबत फिरक्या बांधल्या.
यानंतर त्या महिलांनी इंदू पर्येकर यांना “हा कपडा देवासमोर ठेवा” असे सांगितले. वृद्ध महिला देव्हाऱ्यात कपडा ठेवायला गेल्यानंतर त्या चोरट्या महिला तेथून पसार झाल्या. इंदू यांनी कपडा देव्हाऱ्यासमोर ठेवला व बाहेर येऊन पाहिल्यावर त्या महिला गायब झाल्याचे त्यांच्या लक्षात आले. संशय आल्याने त्यांनी देवासमोर ठेवलेला कपडा उघडून पाहिला असता त्यात फक्त भंडारा आणि फिरक्या दिसल्या.
त्यामुळे घडलेल्या प्रकाराची माहिती त्यांनी तत्काळ आपले जावई बाबुराव देसाई व शेजाऱ्यांना दिली. सर्वांनी मिळून शोधाशोध केली असता त्या महिला लोंडा रेल्वे स्थानकावर दिसल्या. त्यांचा फोटो मोबाईल मधून इंदू पर्येकर यांना पाठविला, असता, त्यांनी फोटो पाहिला व त्या महिलांची ओळख पटविली.
यानंतर ग्रामस्थांनी त्या दोघी भामट्या महिलांना पकडून खानापूर पोलिसांच्या ताब्यात दिले.
या प्रकरणी खानापूर पोलीस ठाण्यात गुन्हा नोंदविण्यात आला असून पीआय एल. एच. गोवंडी व पीएसआय बी. एम. बिरादार यांच्या मार्गदर्शनाखाली पुढील तपास सुरू आहे.
ಮೋಸಮಾಡಿ ವೃದ್ಧೆಯ ಚಿನ್ನದ ಕಿವಿಯೋಲೆ ಕದ್ದ ಇಬ್ಬರು ಮಹಿಳೆಯರು ಪೊಲೀಸ್ ವಶಕ್ಕೆ.
ಖಾನಾಪುರ (ತಾ. 27): ಖಾನಾಪುರ ತಾಲ್ಲೂಕಿನ ಲೋಂಡಾ ಗ್ರಾಮದಲ್ಲಿ ವೃದ್ಧೆಯೊಬ್ಬಳನ್ನು ಮೋಸಗೊಳಿಸಿ, ಆಕೆಯ ಚಿನ್ನದ ಕಿವಿಯೋಲೆ ಕದ್ದ ಇಬ್ಬರು ಮಹಿಳೆಯರನ್ನು ಖಾನಾಪುರ ಪೊಲೀಸರ ವಶಕ್ಕೆ ಪಡೆಯಲಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಾಹಿತಿಯ ಪ್ರಕಾರ, ಜಿಲ್ಲಾ ಪರಿಷತ್ನ ಮಾಜಿ ಸದಸ್ಯ ಹಾಗೂ ಬಿಜೆಪಿ ನಾಯಕ ಬಾಬುರಾವ್ ದೇಶಾಯಿ ಅವರ ಅತ್ತೆ ಇಂದು ಗಣಪತಿ ಪರ್ಯೇಕರ್ (ವಯಸ್ಸು 85) ಜನತಾ ಕಾಲೋನಿ, ಲೋಂಡಾ ಇಲ್ಲಿ ವಾಸವಾಗಿದ್ದಾರೆ. ಇಂದು ಮಧ್ಯಾಹ್ನ ಇಬ್ಬರು ಮಹಿಳೆಯರು ದೇವರ ಫೋಟೋ ಹಿಡಿದು ಅವರ ಮನೆಗೆ ಬಂದು ಧಾರ್ಮಿಕ ಮಾತುಗಳಿಂದ ವೃದ್ಧೆಯ ನಂಬಿಕೆ ಗಳಿಸಿದರು.
ಅದಾದ ನಂತರ ಅವರು “ ಚಿನ್ನದ ಕಿವಿಯೋಲೆ ಧರಿಸಬೇಡಿ, ಅದನ್ನು ಬಟ್ಟೆಯಲ್ಲಿ ಕಟ್ಟಿ ದೇವರ ಮುಂದೆ ಇಡಿ, ಅದರಿಂದ ನಿಮಗೆ ಶುಭವಾಗುತ್ತದೆ” ಎಂದು ಹೇಳಿದರು. ಈ ನಂಬಿಕೆಗೆ ಬಲಿಯಾಗಿ ಇಂದು ಪರ್ಯೇಕರ್ ಅವರು ಕಿವಿಯ ಚಿನ್ನದ ಆಭರಣ ತೆಗೆದು ಬಂದ ಮಹಿಳೆಯರು ತಮ್ಮ ಕೈಯಲ್ಲಿ ತೆಗೆದುಕೊಂಡು ಬಟ್ಟೆಯಲ್ಲಿ ಭಂಡಾರ ಜೊತೆಗೆ ಕಟ್ಟುವ ನಾಟಕ ವಾಡಿದರು. ಆದರೆ ಕೈಚಳಕದಿಂದ ಆಭರಣವನ್ನು ತಮ್ಮ ಬಳಿಗೆ ಇಟ್ಟುಕೊಂಡು ಬಟ್ಟೆಯಲ್ಲಿ ಕೇವಲ ಭಂಡಾರ ಹಾಗೂ ತಂತಿ ಕಟ್ಟಿ ವೃದ್ಧೆಯವರಿಗೆ “ಈ ಬಟ್ಟೆಯನ್ನು ದೇವರ ಮುಂದೆ ಇಡಿ” ಎಂದು ಹೇಳಿದರು.
ವೃದ್ಧೆ ದೇವರ ಮುಂದೆ ಬಟ್ಟೆ ಇಟ್ಟು ಹೊರಗೆ ಬರುವಷ್ಟರಲ್ಲಿ, ಆ ಇಬ್ಬರು ಮಹಿಳೆಯರು ಅಲ್ಲಿ ಇರಲಿಲ್ಲ. ಶಂಕೆ ಬಂದು ಬಟ್ಟೆಯನ್ನು ತೆರೆದು ನೋಡಿದಾಗ ಅದರಲ್ಲಿ ಕೇವಲ ಭಂಡಾರ ಮತ್ತು ಹತ್ತಿನ ತಂತಿಗಳು ಮಾತ್ರ ಇದ್ದವು.
ಈ ಘಟನೆ ಕುರಿತು ಅವರು ತಕ್ಷಣ ತಮ್ಮ ಅಳಿಯ ಬಾಬುರಾವ್ ದೇಶಾಯಿ ಹಾಗೂ ನೆರೆಹೊರೆಯವರಿಗೆ ಮಾಹಿತಿ ನೀಡಿದರು. ಎಲ್ಲರೂ ಸೇರಿ ಹುಡುಕಾಟ ನಡೆಸಿದಾಗ ಆ ಇಬ್ಬರು ಮಹಿಳೆಯರು ಲೋಂಡಾ ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅವರ ಫೋಟೋವನ್ನು ಮೊಬೈಲ್ ಮೂಲಕ ಇಂದು ಪರ್ಯೇಕರ್ ಅವರಿಗೆ ಕಳುಹಿಸಲಾಯಿತು. ಅವರು ಫೋಟೋ ನೋಡಿ ಆ ಮಹಿಳೆಯರನ್ನು ಗುರುತಿಸಿದರು.
ನಂತರ ಗ್ರಾಮಸ್ಥರು ಆ ಇಬ್ಬರು ಕಳ್ಳಿ ಮಹಿಳೆಯರನ್ನು ಹಿಡಿದು ಖಾನಾಪುರ ಪೊಲೀಸರಿಗೆ ಒಪ್ಪಿಸಿದರು. ಈ ಪ್ರಕರಣ ಖಾನಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪಿಐ ಎಲ್. ಎಚ್. ಗೋವಂಡಿ ಹಾಗೂ ಪಿಎಸ್ಐ ಬಿ. ಎಂ. ಬಿರಾದಾರ ಅವರ ಮಾರ್ಗದರ್ಶನದಲ್ಲಿ ಮುಂದಿನ ತನಿಖೆ ನಡೆಸುತ್ತಿದೆ.
ಮಹಿಳೆಯರು ಅಪರಿಚಿತ ಮಹಿಳೆಯರು ಬಂದರೆ ಅವರಿಂದ ಜಾಗೃತರಾಗಿ ಇರಬೇಕು.

