खानापूरच्या बकरी बाजारात करोडोंची उलाढाल : “उंदरी” सणाच्या पार्श्वभूमीवर विक्रमी खरेदी-विक्री
खानापूर : (दिनकर मरगाळे)
गणेशोत्सवाच्या उत्सवी वातावरणात खानापूर तालुक्यातील पारंपरिक “उंदरी” सणाला मोठे महत्त्व आहे. याच पार्श्वभूमीवर रविवारी (दि. 24 ऑगस्ट 2025) खानापूर शहरातील ऐतिहासिक बकरी बाजारात विक्रमी उलाढाल झाली. तब्बल कोट्यवधी रुपयांची खरेदी-विक्री या बाजारातून झाली असून, हजारो नागरिकांनी बकऱ्यांच्या खरेदीसाठी मोठी गर्दी केली होती.
बकरी खरेदीत उत्साह..
गणेश चतुर्थीनंतरच्या दुसऱ्या दिवशी साजरा होणारा “उंदरी” सण हा खानापूर तालुक्यातील विशेष प्रथा मानली जाते. गणपतीचे वाहन असलेल्या उंदराच्या नावाने या दिवशी नैवेद्य दाखवण्याची परंपरा आहे. ग्रामीण भागातील अनेक कुटुंबे यासाठी एकत्र येऊन बकऱ्यांची खरेदी करतात. काही ठिकाणी चार ते पाच कुटुंब मिळून बकरी विकत घेतात, तर मोठ्या कुटुंबांनी फक्त आपल्या घरासाठीच बकऱ्यांची खरेदी केल्याचे दिसून आले. याशिवाय काहीजण त्यादिवशी मटन दुकानदारांकडून थेट मटन खरेदी करतात, तर काही ठिकाणी कोंबडीचा बळी देण्याची पद्धत देखील आहे.
पाच हजारांपासून पन्नास हजारांपर्यंत बकऱ्या..
आजच्या बाजारात बकऱ्यांच्या किमती पाच हजार रुपयांपासून थेट पन्नास हजार रुपयांपर्यंत होत्या. काही दुर्मिळ जातीच्या आणि मजबूत शरीरयष्टी असलेल्या बकऱ्यांना प्रचंड मागणी होती. त्यामुळे बकरी विक्रेत्यांच्या चेहऱ्यावर समाधान तर खरेदीदारांकडून उत्साह दिसून येत होता.
बाजारपेठेत पूरक व्यवसाय फुलले..
बकरी बाजारासोबतच आज परिसरात अनेक पूरक व्यवसाय देखील फुलले. भजी व चहाची दुकाने, कणसे, शेंगा, तसेच जनावरांना बांधण्यासाठी लागणाऱ्या रंगीबेरंगी दोऱ्यांची विक्री जोरात झाली. छोट्या मुलांपासून ते वृद्धांपर्यंत सर्वांनीच या बाजाराचा आनंद घेतला. काहीजण फक्त बकऱ्या पाहण्यासाठीही येथे दाखल झाले होते.
वाहतुकीला मोठा अडथळा…
मरिअम्मा मंदिरासमोर भरलेल्या या बाजारामुळे परिसरात अक्षरशः जनसागर उसळला होता. बकरी खरेदीसाठी आलेल्या दुचाकी, रिक्षा आणि चारचाकी वाहनांच्या गर्दीमुळे वाहतुकीची कोंडी झाली होती. खानापूर-बेळगाव मार्गावरून जाणाऱ्या वाहनांना या गर्दीतून मार्ग काढताना मोठी कसरत करावी लागत होती.
खानापूरातील “उंदरी”ची वेगळी ओळख…
गणेशोत्सव महाराष्ट्रासह बेळगाव जिल्ह्यात मोठ्या उत्साहात साजरा केला जातो. मात्र “उंदरी” ही पध्दत फक्त खानापूर तालुका व बेळगावच्या काही ग्रामीण भागापुरताच मर्यादित आहे. येथे हजारो बकऱ्यांचा बळी देऊन “उंदरी” सणाला नैवेद्य दाखवला जातो. खानापूर शहर व बेळगाव शहर व जिल्ह्यात मात्र ही पद्धत बंद आहे. तेथील नागरिक गणेशोत्सवानंतरच मांसाहार करतात.
आकर्षण ठरलेल्या बकऱ्या..
आजच्या बाजारात काही मोठ्या आकाराच्या आणि देखण्या बकऱ्या उपस्थितांसाठी आकर्षणाचा केंद्रबिंदू ठरल्या. या बकऱ्यांच्या भोवती खरेदीदारांची मोठी गर्दी उसळली होती. अनेकांनी या दुर्मिळ बकऱ्यांची छायाचित्रेही टिपली.
एकूणच, खानापूरच्या बकरी बाजारात आज उत्साह, उलाढाल, गर्दी आणि परंपरा यांचा संगम अनुभवायला मिळाला. गणेशोत्सवाच्या उत्सवी वातावरणात “उंदरी” सणामुळे खानापूर तालुक्यातील ग्रामीण भाग पुन्हा एकदा उत्साहाने दुमदुमून गेला.
ಖಾನಾಪುರದ ಆಡು ಮೇಕೆ ಮಾರುಕಟ್ಟೆಯಲ್ಲಿ ಕೋಟ್ಯಾಂತರ ವ್ಯವಹಾರ ; “ಉಂದರಿ” ಹಬ್ಬದ ಸಂಭ್ರಮದಲ್ಲಿ ದಾಖಲೆ ಬರೆದ ಖರೀದಿ-ಮಾರಾಟ ವ್ಯವಹಾರ.
ಖಾನಾಪುರ ; (ದಿನಕರ ಮಾರಗಾಳೆ)
ಗಣೇಶೋತ್ಸವದ ಸಡಗರದ ವಾತಾವರಣದಲ್ಲಿ ಖಾನಾಪುರ ತಾಲೂಕಿನಲ್ಲಿ ಆಚರಿಸಲಾಗುವ ಸಾಂಪ್ರದಾಯಿಕ “ಉಂದರಿ” ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ಹಿನ್ನಲೆಯಲ್ಲಿ ಭಾನುವಾರ (ಆಗಸ್ಟ್ 24, 2025) ಖಾನಾಪುರ ಪಟ್ಟಣದ ಐತಿಹಾಸಿಕ ಆಡು ಮೇಕೆ ಮಾರುಕಟ್ಟೆಯಲ್ಲಿ ದಾಖಲೆಯ ವ್ಯವಹಾರ ನಡೆಯಿತು. ಕೋಟ್ಯಂತರ ರೂಪಾಯಿಗಳ ಖರೀದಿ-ಮಾರಾಟ ಈ ಮಾರುಕಟ್ಟೆಯಲ್ಲಿ ನಡೆದಿದ್ದು, ಸಾವಿರಾರು ನಾಗರಿಕರು ಆಡು ಮೇಕೆ ಖರೀದಿಗಾಗಿ ದೊಡ್ಡ ಪ್ರಮಾಣದಲ್ಲಿ ಉಪಸ್ಥಿತರಿದ್ದರು.
ಮೇಕೆ ಆಡು ಖರೀದಿಯಲ್ಲಿ ಸಂಭ್ರಮ…
ಗಣೇಶ ಚತುರ್ಥಿಯ ನಂತರದ ಮರುದಿನವೇ ಆಚರಿಸಲಾಗುವ “ಉಂದರಿ” ಹಬ್ಬ ಖಾನಾಪುರ ತಾಲೂಕಿನಲ್ಲಿ ವಿಶೇಷ ಆಚರಣೆ ಎಂದು ಪರಿಗಣಿಸಲಾಗಿದೆ. ಗಣಪತಿಯ ವಾಹನವಾದ ಇಲಿಗೆ (ಉಂದರಿ) ಈ ದಿನ ನೈವೇದ್ಯ ಅರ್ಪಿಸುವ ಪರಂಪರೆ ಇದೆ. ಗ್ರಾಮೀಣ ಭಾಗದ ಅನೇಕ ಕುಟುಂಬಗಳು ಈ ಹಬ್ಬಕ್ಕಾಗಿ ಗುಂಪಾಗಿ ಸೇರಿ ಆಡುಗಳನ್ನು ಖರೀದಿಸುತ್ತಾರೆ. ಕೆಲವು ಕಡೆ ನಾಲ್ಕು-ಐದು ಕುಟುಂಬಗಳು ಸೇರಿ ಆಡು ಖರೀದಿಸಿದರೆ, ದೊಡ್ಡ ಕುಟುಂಬಗಳು ತಮ್ಮ ಮನೆಗೆ ಮಾತ್ರ ಆಡು ಖರೀದಿ ಮಾಡುವ ಸಂಪ್ರದಾಯ. ಇದಲ್ಲದೆ ಕೆಲವರು ನೇರವಾಗಿ ಮಟನ್ ಅಂಗಡಿಗಳಿಂದ ಮಾಂಸ ಖರೀದಿಸಿದರೆ, ಕೆಲವು ಕಡೆ ಕೋಳಿಯ ಬಲಿ ಕೊಡುವ ಸಂಪ್ರದಾಯವೂ ಇದೆ.
ಐದು ಸಾವಿರದಿಂದ ಐವತ್ತು ಸಾವಿರವರೆಗೆ ಆಡುಗಳ ಬೆಲೆ…
ಇಂದಿನ ಮಾರುಕಟ್ಟೆಯಲ್ಲಿ ಆಡುಗಳ ಬೆಲೆ ₹5,000ರಿಂದ ನೇರವಾಗಿ ₹50,000ವರೆಗೆ ಕಂಡುಬಂದಿತು. ಕೆಲವು ವಿರಳ ಜಾತಿಯ ಹಾಗೂ ದಪ್ಪ ಮೈಕಟ್ಟಿನ ಆಡುಗಳಿಗೆ ಭಾರೀ ಬೇಡಿಕೆ ಇತ್ತು. ಮಾರಾಟಗಾರರ ಮುಖದಲ್ಲಿ ತೃಪ್ತಿ ಕಂಡುಬಂದರೆ, ಖರೀದಿದಾರರಲ್ಲಿ ಉತ್ಸಾಹ ಸ್ಪಷ್ಟವಾಗಿ ಕಾಣುತ್ತಿತ್ತು.
ಪೂರಕ ವ್ಯಾಪಾರಗಳಿಗೂ ಚಿಗುರು…
ಆಡು ಮಾರುಕಟ್ಟೆಯೊಂದಿಗೆ -ಚಹಾ ಭಜ್ಜಿ ಅಂಗಡಿಗಳು, ಗೊಂಜಾಳ, ಕಡಲೆ, ಪ್ರಾಣಿಗಳಿಗೆ ಕಟ್ಟುವ ಬಣ್ಣಬಣ್ಣದ ಹಗ್ಗಗಳ ಮಾರಾಟ ಭರ್ಜರಿಯಾಗಿ ನಡೆಯಿತು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರೂ ಈ ಮಾರುಕಟ್ಟೆಯ ಸಂಭ್ರಮವನ್ನು ಅನುಭವಿಸಿದರು. ಕೆಲವರು ಕೇವಲ ಆಡು ಮೇಕೆಗಳನ್ನು ನೋಡುವುದಕ್ಕೇ ಇಲ್ಲಿ ಆಗಮಿಸಿದ್ದರು.
ಸಂಚಾರದಲ್ಲಿ ಅಡಚಣೆ…
ಮರಿಯಮ್ಮ ದೇವಸ್ಥಾನದ ಮುಂದೆ ತುಂಬಿದ ಈ ಮಾರುಕಟ್ಟೆಯಲ್ಲಿ ಜನಸಾಗರ ಕಿಕ್ಕಿರಿದಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು. ಆಡು ಖರೀದಿಗೆ ಬಂದ ದ್ವಿಚಕ್ರ, ರಿಕ್ಷಾ ಹಾಗೂ ಕಾರುಗಳ ಸಂಚಾರದಿಂದ ಖಾನಾಪುರ–ಬೆಳಗಾವಿ ಮಾರ್ಗದಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು.
ಖಾನಾಪುರದ “ಉಂದರಿ”ಗೆ ವಿಶೇಷ ಸ್ಥಾನ…
ಗಣೇಶೋತ್ಸವ ಮಹಾರಾಷ್ಟ್ರ ರಾಜ್ಯದ ಜೊತೆಗೆ ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ “ಉಂದರಿ” ಸಂಪ್ರದಾಯ ಮಾತ್ರ ಖಾನಾಪುರ ತಾಲೂಕು ಹಾಗೂ ಬೆಳಗಾವಿಯ ಕೆಲವು ಗ್ರಾಮೀಣ ಭಾಗಗಳಲ್ಲಷ್ಟೇ ಸೀಮಿತವಾಗಿದೆ. ಇಲ್ಲಿ ಸಾವಿರಾರು ಆಡುಗಳಿಗೆ ಬಲಿ ನೀಡಿ ಗಣಪತಿಯ ವಾಹನವಾದ ಇಲಿಗೆ ನೈವೇದ್ಯ ಅರ್ಪಿಸಲಾಗುತ್ತದೆ. ಖಾನಾಪುರ ಹಾಗೂ ಬೆಳಗಾವಿ ನಗರಗಳಲ್ಲಿ ಮಾತ್ರ ಈ ಸಂಪ್ರದಾಯವನ್ನು ಕ್ರಮೇಣವಾಗಿ ನಿಲ್ಲಿಸಲಾಗಿದೆ. ಅಲ್ಲಿ ಗಣೇಶೋತ್ಸವದ ನಂತರವೇ ಮಾಂಸಾಹಾರ ಸೇವಿಸುತ್ತಾರೆ.
ಗಮನ ಸೆಳೆದ ಆಡುಗಳು…
ಇಂದಿನ ಮಾರುಕಟ್ಟೆಯಲ್ಲಿ ಕೆಲವು ದೊಡ್ಡ ಗಾತ್ರದ ಹಾಗೂ ಆಕರ್ಷಕ ಆಡುಗಳು ಜನರ ಕಣ್ಣು ಸೆಳೆದವು. ಈ ಆಡುಗಳ ಸುತ್ತ ಖರೀದಿದಾರರ ಗುಂಪು ನೆರೆದಿತ್ತು. ಅನೇಕರು ಈ ವಿರಳ ಆಡುಗಳ ಫೋಟೋಗಳನ್ನು ತೆಗೆದುಕೊಂಡರು.
ಒಟ್ಟಾರೆ, ಖಾನಾಪುರದ ಆಡು ಮೇಕೆ ಮಾರುಕಟ್ಟೆಯಲ್ಲಿ ಇಂದು ಉತ್ಸಾಹ, ವ್ಯವಹಾರ, ಜನಸಾಗರ ಮತ್ತು ಸಂಪ್ರದಾಯ—ಎಲ್ಲಾ ಒಂದೇ ಕಡೆ ಕುಡಿಬಂದವು. ಗಣೇಶೋತ್ಸವದ ಸಡಗರದಲ್ಲಿ “ಉಂದರಿ” ಹಬ್ಬ ಖಾನಾಪುರ ತಾಲೂಕನ್ನು ಮತ್ತೆ ಒಂದು ಬಾರಿ ಸಂಭ್ರಮದಿಂದ ಕಂಗೊಳಿಸಿತು.



