गणेबैल टोल नाक्यावर कामगारांचे काम बंद आंदोलन! टोल वसुली ठप्प! शेकडो वाहने विना टोल! आंदोलनाला काँग्रेसचा पाठिंबा!
खानापूर : खानापूर–बेळगाव राष्ट्रीय महामार्गावरील गणेबैल टोल नाका येथे काम करणाऱ्या स्थानिक युवक-युवतींना किमान वेतन न मिळाल्यामुळे संतप्त झालेल्या कर्मचाऱ्यांनी काम बंद आंदोलन सुरू केले असून, त्यामुळे टोल वसुलीचे काम पूर्णपणे ठप्प झाले आहे. शनिवारी सकाळी सुमारे 11.00 वाजल्यापासून शेकडो वाहने विना टोल ये-जा करत असल्याचे चित्र येथे पाहायला मिळत आहे.

मिळालेल्या माहितीनुसार, गेल्या तीन वर्षांपासून गणेबैल टोल नाक्यावर काम करणाऱ्या स्थानिक भूमिपुत्र युवक-युवतींना 1948 च्या कामगार कायद्यानुसार प्रतिदिन 634 रुपये इतके किमान वेतन देणे बंधनकारक आहे. मात्र, यापूर्वी टोल वसुलीचे कंत्राट घेतलेल्या दोन कंपन्यांनी या नियमाचे पालन केले नसल्याचा आरोप कामगारांनी केला आहे. सध्या टोल वसुलीचे कंत्राट हुळे कन्स्ट्रक्शन प्रायव्हेट लिमिटेड या तिसऱ्या कंपनीकडे असून, या कंपनीने देखील किमान वेतन देण्याबाबत तेच धोरण अवलंबिल्याचा आरोप करण्यात येत आहे.
याबाबत गेल्या काही दिवसांपासून टोलवरील कर्मचाऱ्यांनी आक्रमक भूमिका घेत आपल्या हक्कासाठी आंदोलन सुरू केले आहे. चार दिवसांपूर्वी कामगारांनी धारवाड येथील प्रोजेक्ट डायरेक्टर यांच्या कार्यालयासमोर धरणे आंदोलन केले होते. त्यावेळी कामगार आयुक्त तसेच केंद्रीय प्रादेशिक कामगार आयुक्त कार्यालयाकडून संबंधित नियमांची माहिती घेऊन गणेबैल टोल नाक्यावरील कर्मचाऱ्यांना किती वेतन देणे आवश्यक आहे याची पडताळणी करून आवश्यक ती कार्यवाही करण्याचे आश्वासन देण्यात आले होते.
त्यानुसार शुक्रवारी सायंकाळी धारवाडचे प्रोजेक्ट डायरेक्टर भुवनेश यांनी गणेबैल येथे भेट देत कंत्राटदार कंपनीला नियमांनुसार किमान वेतन देणे बंधनकारक असल्याचे स्पष्ट केले. याबाबत विचार करून निर्णय घेण्यासाठी कंपनीने शनिवारीपर्यंत वेळ मागितला होता.
दरम्यान, टोलवरील कामगारांच्या मागणीला पाठिंबा देण्यासाठी खानापूर ब्लॉक काँग्रेसचे नेते सुरेश जाधव, गर्लगुंजी ग्रामपंचायतीचे माजी सदस्य प्रसाद पाटील, नगरसेवक तोहीद चांदखन्नावर आणि प्रमोद सुतार, राजू नाईक व लक्ष्मण मोरे ग्रामस्थ तसेच कार्यकर्त्यांनी आज शनिवारी सकाळी 11.00 वाजता गणेबैल येथील टोल नाक्याला भेट दिली. त्यांनी टोल व्यवस्थापनाशी चर्चा करून कायद्यानुसार वेतन देऊन कामगारांची मागणी पूर्ण करण्याची सूचना केली.
मात्र कंपनीच्या संचालकांनी चर्चेसाठी समोर येण्याचे टाळल्याचा आरोप आंदोलनकर्त्यांनी केला आहे. तसेच महामार्ग प्राधिकरण आणि कामगार आयुक्तांच्या आदेशाकडे दुर्लक्ष करून कंपनीने आपलेच म्हणणे खरे करण्याचा प्रयत्न केल्यामुळे कामगारांमध्ये तीव्र संताप पसरला.
यामुळे संतप्त झालेल्या कामगारांनी काम बंद आंदोलन सुरू केले असून टोल वसुलीचे काम पूर्णपणे ठप्प झाले आहे. सकाळी 11.00 वाजल्यापासून शेकडो वाहने टोल न भरता ये-जा करत आहेत.
दरम्यान, टोलवरील कर्मचाऱ्यांना न्याय मिळेपर्यंत कायद्याच्या चौकटीत आंदोलन आणि पाठपुरावा सुरूच ठेवणार, अशी माहिती खानापूर ब्लॉक काँग्रेस नेते सुरेश जाधव यांनी दिली आहे.
या प्रकरणामुळे टोल प्रशासन आणि कंत्राटदार कंपनीवर दबाव वाढला असून पुढील घडामोडीकडे सर्वांचे लक्ष लागले आहे.
ಗಣೇಬೈಲ್ ಟೋಲ್ ನಾಕೆಯ ಕಾರ್ಮಿಕರಿಂದ ಕೆಲಸ ಬಂದ ಮಾಡಿ ಹೋರಾಟ! ಟೋಲ್ ವಸೂಲಿ ಸ್ಥಗಿತ! ನೂರಾರು ವಾಹನಗಳು ಟೋಲ್ ಇಲ್ಲದೇ ಸಂಚಾರ! ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ!
ಖಾನಾಪುರ : ಖಾನಾಪುರ–ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗಣೇಬೈಲ್ ಟೋಲ್ ನಾಕೆಯಲ್ಲಿ ಕೆಲಸ ಮಾಡುತ್ತಿರುವ ಸ್ಥಳೀಯ ಯುವಕ-ಯುವತಿಯರಿಗೆ ಕನಿಷ್ಠ ವೇತನ ನೀಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕಾರ್ಮಿಕರು ಕೆಲಸ ಬಂದ ಮಾಡಿ ಹೋರಾಟ ಆರಂಭಿಸಿದ್ದು, ಇದರ ಪರಿಣಾಮವಾಗಿ ಟೋಲ್ ವಸೂಲಿಯ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ. ಶನಿವಾರ ಬೆಳಿಗ್ಗೆ ಸುಮಾರು 11.00 ಗಂಟೆಯಿಂದ ನೂರಾರು ವಾಹನಗಳು ಟೋಲ್ ಕಟ್ಟದೆ ಸಂಚರಿಸುತ್ತಿರುವ ದೃಶ್ಯ ಇಲ್ಲಿ ಕಂಡುಬರುತ್ತಿದೆ.
ಮಾಹಿತಿಯ ಪ್ರಕಾರ, ಕಳೆದ ಮೂರು ವರ್ಷಗಳಿಂದ ಗಣೇಬೈಲ್ ಟೋಲ್ ನಾಕೆಯಲ್ಲಿ ಕೆಲಸ ಮಾಡುತ್ತಿರುವ ಸ್ಥಳೀಯರು ಹೆದ್ದಾರಿಗಾಗಿ ಭೂಮಿ ಕಳೆದುಕೊಂಡ ಯುವಕ-ಯುವತಿಯರಿಗೆ 1948ರ ಕಾರ್ಮಿಕ ಕಾಯ್ದೆಯ ಪ್ರಕಾರ ಪ್ರತಿದಿನ 634 ರೂ. ಕನಿಷ್ಠ ವೇತನ ನೀಡುವುದು ಕಡ್ಡಾಯವಾಗಿದೆ. ಆದರೆ, ಈ ಮೊದಲು ಟೋಲ್ ವಸೂಲಿಯ ಗುತ್ತಿಗೆ ಪಡೆದಿದ್ದ ಎರಡು ಕಂಪನಿಗಳು ಈ ನಿಯಮವನ್ನು ಪಾಲಿಸಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಪ್ರಸ್ತುತ ಟೋಲ್ ವಸೂಲಿಯ ಗುತ್ತಿಗೆ ಹುಳೆ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಎಂಬ ಮೂರನೇ ಕಂಪನಿಯ ಬಳಿ ಇದ್ದು, ಈ ಕಂಪನಿಯೂ ಸಹ ಕನಿಷ್ಠ ವೇತನ ನೀಡುವ ವಿಷಯದಲ್ಲಿ ಅದೇ ಧೋರಣೆಯನ್ನು ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಕಳೆದ ಕೆಲವು ದಿನಗಳಿಂದ ಟೋಲ್ನಲ್ಲಿರುವ ಸಿಬ್ಬಂದಿ ಆಕ್ರಮಕ ನಿಲುವು ತಾಳಿ ತಮ್ಮ ಹಕ್ಕಿಗಾಗಿ ಹೋರಾಟ ಆರಂಭಿಸಿದ್ದಾರೆ. ನಾಲ್ಕು ದಿನಗಳ ಹಿಂದೆ ಕಾರ್ಮಿಕರು ಧಾರವಾಡದಲ್ಲಿರುವ ಪ್ರಾಜೆಕ್ಟ್ ಡೈರೆಕ್ಟರ್ ಕಚೇರಿಯ ಮುಂದೆ ಧರಣಿ ಹೋರಾಟ ನಡೆಸಿದ್ದರು. ಆ ಸಂದರ್ಭದಲ್ಲಿ ಕಾರ್ಮಿಕ ಆಯುಕ್ತರು ಹಾಗೂ ಕೇಂದ್ರ ಪ್ರಾದೇಶಿಕ ಕಾರ್ಮಿಕ ಆಯುಕ್ತರ ಕಚೇರಿಯಿಂದ ಸಂಬಂಧಿತ ನಿಯಮಗಳ ಮಾಹಿತಿ ಪಡೆದು ಗಣೇಬೈಲ್ ಟೋಲ್ ನಾಕೆಯ ಕಾರ್ಮಿಕರಿಗೆ ಎಷ್ಟು ವೇತನ ನೀಡಬೇಕು ಎಂಬುದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿತ್ತು.
ಅದರನ್ವಯ ಶುಕ್ರವಾರ ಸಂಜೆ ಧಾರವಾಡದ ಪ್ರಾಜೆಕ್ಟ್ ಡೈರೆಕ್ಟರ್ ಭುವನೇಶ್ ಗಣೇಬೈಲ್ಗೆ ಭೇಟಿ ನೀಡಿ ಗುತ್ತಿಗೆ ಕಂಪನಿಗೆ ನಿಯಮಾನುಸಾರ ಕನಿಷ್ಠ ವೇತನ ನೀಡುವುದು ಕಡ್ಡಾಯವೆಂದು ಸ್ಪಷ್ಟಪಡಿಸಿದ್ದರು. ಈ ಬಗ್ಗೆ ಚಿಂತನೆ ಮಾಡಿ ನಿರ್ಧಾರ ಕೈಗೊಳ್ಳಲು ಕಂಪನಿಯು ಶನಿವಾರದವರೆಗೆ ಸಮಯ ಕೇಳಿಕೊಂಡಿತ್ತು.
ಈ ಮಧ್ಯೆ ಟೋಲ್ನಲ್ಲಿರುವ ಕಾರ್ಮಿಕರ ಬೇಡಿಕೆಗೆ ಬೆಂಬಲ ನೀಡಲು ಖಾನಾಪುರ ಬ್ಲಾಕ್ ಕಾಂಗ್ರೆಸ್ನ ನಾಯಕ ಸುರೇಶ್ ಜಾಧವ, ಗರ್ಲಗುಂಜಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಪ್ರಸಾದ್ ಪಾಟೀಲ, ನಗರಸಭಾ ಸದಸ್ಯ ತೋಹೀದ್ ಚಾಂದಖನ್ನಾವರ್ ಮತ್ತು ಪ್ರಮೋದ ಸುತಾರ ಸೇರಿದಂತೆ ಕಾರ್ಯಕರ್ತರು ಇಂದು ಶನಿವಾರ ಬೆಳಿಗ್ಗೆ 11.00 ಗಂಟೆಗೆ ಗಣೇಬೈಲ್ ಟೋಲ್ ನಾಕೆಗೆ ಭೇಟಿ ನೀಡಿ ಟೋಲ್ ವ್ಯವಸ್ಥಾಪಕರೊಂದಿಗೆ ಚರ್ಚೆ ನಡೆಸಿ ಕಾನೂನು ಪ್ರಕಾರ ವೇತನ ನೀಡುವ ಮೂಲಕ ಕಾರ್ಮಿಕರ ಬೇಡಿಕೆಯನ್ನು ಈಡೇರಿಸಬೇಕು ಎಂದು ಸೂಚಿಸಿದರು.
ಆದರೆ ಕಂಪನಿಯ ನಿರ್ದೇಶಕರು ಚರ್ಚೆಗೆ ಮುಂದೆ ಬರಲು ನಿರಾಕರಿಸಿದ್ದಾರೆ ಎಂಬ ಆರೋಪವನ್ನು ಹೋರಾಟಗಾರರು ಮಾಡಿದ್ದಾರೆ. ಹಾಗೆಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕಾರ್ಮಿಕ ಆಯುಕ್ತರ ಆದೇಶಗಳನ್ನು ಲೆಕ್ಕಿಸದೆ ಕಂಪನಿ ತನ್ನ ಮಾತನ್ನೇ ಜಾರಿಗೆ ತರಲು ಪ್ರಯತ್ನಿಸುತ್ತಿದೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಕಾರ್ಮಿಕರಲ್ಲಿಯೂ ತೀವ್ರ ಅಸಮಾಧಾನ ಉಂಟಾಗಿದೆ.
ಇದರಿಂದ ಆಕ್ರೋಶಗೊಂಡ ಕಾರ್ಮಿಕರು ಕೆಲಸ ಬಂದ್ ಹೋರಾಟ ಆರಂಭಿಸಿದ್ದು, ಟೋಲ್ ವಸೂಲಿಯ ಕಾರ್ಯ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಬೆಳಿಗ್ಗೆ 11.00 ಗಂಟೆಯಿಂದಲೇ ನೂರಾರು ವಾಹನಗಳು ಟೋಲ್ ಪಾವತಿಸದೇ ಸಂಚರಿಸುತ್ತಿವೆ.
ಈ ನಡುವೆ ಟೋಲ್ ಕಾರ್ಮಿಕರಿಗೆ ನ್ಯಾಯ ಸಿಗುವವರೆಗೆ ಕಾನೂನು ಚೌಕಟ್ಟಿನೊಳಗೆ ಹೋರಾಟ ಮತ್ತು ಮುಂದಿನ ಹಂತದ ಕ್ರಮ ಮುಂದುವರಿಸಲಾಗುವುದು ಎಂದು ಖಾನಾಪುರ ಬ್ಲಾಕ್ ಕಾಂಗ್ರೆಸ್ ನಾಯಕ ಸುರೇಶ್ ಜಾಧವ ತಿಳಿಸಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಟೋಲ್ ಆಡಳಿತ ಮತ್ತು ಗುತ್ತಿಗೆ ಕಂಪನಿಯ ಮೇಲೆ ಒತ್ತಡ ಹೆಚ್ಚಾಗಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ನೆಟ್ಟಿದೆ.



