
खानापूर तालुक्यात रेंज फॉरेस्ट ऑफिसर म्हणून कार्य केलेल्या, अधीकाऱ्यांना, एसीएफ म्हणून पदोन्नती.
खानापूर ; खानापूर तालुक्यातील वनवीभागात विविध वीभागात आरएफओ पदावर असलेल्या अधिकाऱ्यांना, शासनाने, एसीएफ पदी पदोन्नती दिली असून, यासंदर्भात 7 ऑगस्ट रोजी आदेश जारी केला आहे.
सध्या खानापूर वीभागात रेंज फॉरेस्ट ऑफिसर म्हणून कार्यरत असलेले, नागराज बाळेहोसूर, यांची बेळगाव एसीएफ पदी नियुक्ती करण्यात आली आहे. तर यापूर्वी भीमगड वीभागात रेंज फॉरेस्ट ऑफिसर म्हणून काम केलेले, शिवानंद मगदूम यांची नागरगाळी एसीएफ पदी नियुक्ती करण्यात आली आहे. खानापूर आणि लोंडा वीभाग रेंज फॉरेस्ट ऑफिसर म्हणून कार्य केलेले बसवराज होळद यांची नियुक्ती बेळगाव एसीएफ (कार्य योजना) अधीकारी पदी नियुक्ती करण्यात आली आहे. गोल्लीहाळी केएफडीसी झोनल फॉरेस्ट ऑफिसर म्हणून काम केलेले, श्रीनाथ कडोलकर यांची नियुक्ती एसीएफ हावेरी पदावर करण्यात आली आहे. खानापूर आणि कणकुंबी एसीएफ, या पदावर प्रदीर्घ काळ काम केलेल्या अधिकारी, कवीता एरनट्टी यांची नियुक्ती एसीएफ बेळगाव (अरण्य संचार दल) पदी नियुक्ती करण्यात आली आहे. पूर्वी लोंडा झोनल रेंज फॉरेस्ट ऑफिसर म्हणून कार्यरत असलेले, नागराज भीमगोळ यांची नीयुक्ती ACF रायबाग, या पदावर नियुक्ती करण्यात आली आहे.
ಖಾನಾಪುರ ತಾಲೂಕಿನಲ್ಲಿ ರೇಂಜ್ ಫಾರೆಸ್ಟ್ ಆಫೀಸರ್ ಆಗಿ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಎಸಿಎಫ್ ಆಗಿ ಬಡ್ತಿ ನೀಡಲಾಗಿದೆ.
ಖಾನಾಪುರ ತಾಲೂಕಿನ ವಿವಿಧ ವಲಯಗಳಲ್ಲಿ ಆರ್. ಎಫ್.ಒ ಹುದ್ದೆಯನ್ನು ಕಾರ್ಯನಿರ್ವಹಿಸಿದ್ದ ಅಧಿಕಾರಿಗಳಿಗೆ ಅರಣ್ಯ ಮತ್ತು ಜೀವಪರಿಸ್ಥಿತಿ ಮತ್ತು ಪರಿಸರ ಇಲಾಖೆ ಮುಂಬಡ್ತಿ ನೀಡಿ ಸ್ಥಳ ನಿಯೋಜನೆಗೊಳಿಸಿದ್ದು, ಈ ಕುರಿತು ಆ.೭ರಂದು ಆದೇಶ ಹೊರಡಿಸಿದೆ. ಪ್ರಸ್ತುತ ಖಾನಾಪುರ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ನಾಗರಾಜ ಬಾಳೇಹೊಸೂರ ಅವರನ್ನು ಬೆಳಗಾವಿ ಎ.ಸಿ.ಎಫ್ ಹುದ್ದೆಗೆ, ಈ ಹಿಂದೆ ಭೀಮಗಡ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಶಿವಾನಂದ ಮಗದುಮ್ ಅವರನ್ನು ನಾಗರಗಾಳಿ ಎ.ಸಿ.ಎಫ್ ಹುದ್ದೆಗೆ, ಖಾನಾಪುರ ಮತ್ತು ಲೋಂಡಾ ವಲಯ ಅರಣ್ಯಾಧಿಕಾರಿಯಾಗಿ ಸುದೀರ್ಘ ಅವಧಿಯ ಸೇವೆ ಸಲ್ಲಿಸಿದ್ದ ಬಸವರಾಜ ವಾಳದ ಅವರನ್ನು ಎ.ಸಿ.ಎಫ್ ಬೆಳಗಾವಿ (ಕಾರ್ಯ ಯೋಜನೆ) ಹುದ್ದೆಗೆ, ಗೋಲಿಹಳ್ಳಿ ಮತ್ತು ಕೆ.ಎಫ್.ಡಿ.ಸಿ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಶ್ರೀನಾಥ ಕಡೋಲ್ಕರ ಅವರನ್ನು ಎ.ಸಿ.ಎಫ್ ಹಾವೇರಿ ಹುದ್ದೆಗೆ, ಖಾನಾಪುರ ಮತ್ತು ಕಣಕುಂಬಿ ವಲಯ ಅರಣ್ಯಾಧಿಕಾರಿ ಹುದ್ದೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಕವಿತಾ ಈರನಟ್ಟಿ ಅವರನ್ನು ಎ.ಸಿ.ಎಫ್ ಬೆಳಗಾವಿ (ಅರಣ್ಯ ಸಂಚಾರಿ ದಳ) ಹುದ್ದೆಗೆ, ಲೋಂಡಾ ವಲಯ ಅರಣ್ಯಾಧಿಕಾರಿ ಹುದ್ದೆಯಲ್ಲಿ ಈ ಹಿಂದೆ ಸೇವೆಯಲ್ಲಿದ್ದ ನಾಗರಾಜ ಭೀಮಗೋಳ ಅವರನ್ನು ಎ.ಸಿ.ಎಫ್ ರಾಯಬಾಗ ಹುದ್ದೆಗೆ ನಿಯುಕ್ತಿಗೊಳಿಸಲಾಗಿದೆ.
