अनैतिक संबंधाचा आरोप; सख्ख्या भावाची हत्या करून मृतदेह मातीखाली पुरणाऱ्या भावाचा पर्दाफाश
शिवमोग्गा : शिवमोग्गा जिल्ह्यातील सागर (सोरबा) तालुक्यात घडलेली एक भीषण हत्या सध्या सर्वत्र खळबळ उडवून देत आहे. अनैतिक संबंधाच्या संशयातून सख्ख्या भावानेच आपल्या लहान भावाचा खून करून मृतदेह मातीखाली पुरल्याचा धक्कादायक प्रकार उघडकीस आला आहे. खून केल्यानंतर आरोपी भावानेच पोलीस ठाण्यात जाऊन ‘भाऊ बेपत्ता’ असल्याची नाट्यमय तक्रार दिल्याचेही तपासात निष्पन्न झाले आहे.
या घटनेत 28 वर्षीय रामचंद्र या तरुणाचा मृत्यू झाला असून, त्याचा मोठा भाऊ मालतेश हा मुख्य आरोपी आहे. रामचंद्र हा मजुरी करून उदरनिर्वाह करत होता आणि अविवाहित होता. तपासादरम्यान रामचंद्र आणि मालतेशची पत्नी भाग्य यांच्यात अनैतिक संबंध असल्याचा संशय पोलिसांनी व्यक्त केला आहे.
इशारा देऊनही संबंध कायम; संतापातून घेतला टोकाचा निर्णय..
आपल्या पत्नी व लहान भावातील संबंधांची माहिती मिळाल्यानंतर मालतेशने दोघांनाही अनेक वेळा समज दिली होती. मात्र रामचंद्रने आपली वर्तणूक बदलली नाही, असा पोलिसांचा दावा आहे. याच रागातून आणि संशयातून मालतेशने रामचंद्रचा काटा काढण्याचा निर्णय घेतला.
लग्न लावून देण्याच्या बहाण्याने नेले आणि हत्या..
“तुझं लवकर लग्न लावून देतो, स्वामीजींकडे पूजा करूया,” असे सांगून मालतेशने रामचंद्रला मंजुनाथ नावाच्या व्यक्तीच्या शेतात नेले. तेथे मद्यपान केल्यानंतर रामचंद्रचे हात-पाय बांधण्यात आले. पूजा करण्याच्या बहाण्याने कुंकू व लिंबू देऊन, दोरीने गळा आवळून त्याची हत्या करण्यात आली. त्यानंतर मृतदेह शेतातच खड्डा खोदून पुरण्यात आला.
हत्या करून ‘मिसिंग’ची तक्रार; संशय टाळण्याचा प्रयत्न
खून केल्यानंतर मालतेश थेट सागर पोलीस ठाण्यात गेला आणि “माझा भाऊ रामचंद्र बेपत्ता आहे” अशी तक्रार दाखल केली. तो नियमितपणे पोलीस ठाण्यात जाऊन चौकशी करत असल्याचे नाटकही करत होता. त्यामुळे सुरुवातीला कुटुंबीयांनाही त्याच्यावर संशय आला नव्हता.
सूनबाईच्या कबुलीमुळे उघड झाला खुनाचा पर्दाफाश
45 दिवस उलटूनही रामचंद्र घरी परत न आल्याने आई गौरम्मा यांनी पुन्हा पोलिसांकडे धाव घेतली. यावेळी सून भाग्य हिने रामचंद्रसोबतच्या अनैतिक संबंधाची तसेच त्याच कारणामुळे मालतेशनेच हत्या केल्याची शंका व्यक्त केली.
आई गौरम्मा यांनी थेट मालतेशला जाब विचारला असता, “त्याची गोष्ट संपली आहे, आता काही विचारू नकोस,” असे उत्तर दिल्याचे सांगितले जाते. त्यानंतर पोलिसांनी कडक चौकशी केली असता मालतेशने गुन्ह्याची कबुली देत मृतदेह पुरलेली जागा दाखवली.
पोलिस तपास सुरू
पोलिसांनी घटनास्थळावरून मृतदेहाचे अवशेष बाहेर काढून गुन्हा नोंदवला आहे. अनैतिक संबंध, कौटुंबिक वाद आणि पूर्वनियोजित हत्येच्या सर्व अंगांनी तपास सुरू असून पुढील चौकशी सुरू आहे.
ಅನೈತಿಕ ಸಂಬಂಧ ಹೊಂದಿದ್ದ ಆರೋಪ ; ತಮ್ಮನನ್ನೇ ಮಣ್ಣಲ್ಲಿ ಹೋತು ಹಾಕಿದ ಅಣ್ಣ
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ನಡೆದ ಭೀಕರ ಹತ್ಯೆಯೊಂದು ಇದೀಗ ಸಿನಿಮಾವನ್ನೇ ಮೀರಿಸುವ ರೀತಿಯಲ್ಲಿ ಬೆಳಕಿಗೆ ಬಂದಿದೆ. ಅಣ್ಣನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಆರೋಪದ ಹಿನ್ನಲೆಯಲ್ಲಿ ತಮ್ಮನನ್ನೇ ಕೊಂದು ಮಣ್ಣಿನಲ್ಲಿ ಹೂತು, ಬಳಿಕ ನಾಟಕೀಯವಾಗಿ ಮಿಸ್ಸಿಂಗ್ ದೂರು ನೀಡಿದ್ದ ಅಣ್ಣನ ಅಸಲಿ ಮುಖವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
28 ವರ್ಷದ ರಾಮಚಂದ್ರ ಎಂಬ ಯುವಕ ಈ ಹತ್ಯೆಯ ಬಲಿಯಾಗಿದ್ದು, ಆತನ ಸಹೋದರ ಮಾಲತೇಶ್ನೇ ಕೊಲೆ ಆರೋಪಿಯಾಗಿದ್ದಾನೆ. ರಾಮಚಂದ್ರ ಕೂಲಿ ಕೆಲಸ ಮಾಡಿಕೊಂಡಿದ್ದು, ಇನ್ನೂ ಮದುವೆಯಾಗಿರಲಿಲ್ಲ. ತನಿಖೆ ಪ್ರಕಾರ, ರಾಮಚಂದ್ರ ಮತ್ತು ಅಣ್ಣನ ಪತ್ನಿ ಭಾಗ್ಯ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ.
ಅನೈತಿಕ ಸಂಬಂಧಕ್ಕೆ ಎಚ್ಚರಿಕೆ ; ಆದರೂ ಮುಂದುವರಿದ ಸರಸ :
ತಮ್ಮನ ಮತ್ತು ಪತ್ನಿಯ ಸಂಬಂಧದ ಬಗ್ಗೆ ತಿಳಿದುಕೊಂಡಿದ್ದ ಮಾಲತೇಶ್, ಇಬ್ಬರಿಗೂ ಹಲವು ಬಾರಿ ಎಚ್ಚರಿಕೆ ನೀಡಿದ್ದ. ಆದರೆ ರಾಮಚಂದ್ರ ತನ್ನ ನಡತೆಯನ್ನು ಬದಲಾಯಿಸದೆ ಮುಂದುವರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ತೀವ್ರ ಕೋಪಗೊಂಡ ಮಾಲತೇಶ್, ತಮ್ಮನನ್ನು ದೂರಮಾಡುವ ನಿರ್ಧಾರ ಕೈಗೊಂಡಿದ್ದಾನೆ.
ಮದುವೆ ನೆಪದಲ್ಲಿ ಕರೆದುಕೊಂಡು ಹೋಗಿ ಹತ್ಯೆ :
ರಾಮಚಂದ್ರನಿಗೆ “ನಿನಗೆ ಬೇಗ ಮದುವೆ ಆಗಲಿ, ಸ್ವಾಮೀಜಿಯ ಬಳಿ ಪೂಜೆ ಮಾಡಿಸೋಣ” ಎಂದು ನಂಬಿಸಿ, ಮಾಲತೇಶ್ ಆತನನ್ನು ಮಂಜುನಾಥ್ ಎಂಬವರ ತೋಟಕ್ಕೆ ಕರೆದುಕೊಂಡು ಹೋಗಿದ್ದಾನೆ.
ಅಲ್ಲಿ ಮದ್ಯಪಾನ ಮಾಡಿಸಿ, ಕೈಕಾಲು ಕಟ್ಟಿ, ಕುಂಕುಮ ಹಾಗೂ ಲಿಂಬೆಹಣ್ಣು ನೀಡಿ ಪೂಜೆ ನೆಪದಲ್ಲಿ ಹಗ್ಗದಿಂದ ಕತ್ತು ಹಿಸುಕಿ ಕೊಂದಿರುವುದು ತನಿಖೆಯಿಂದ ತಿಳಿದುಬಂದಿದೆ. ಬಳಿಕ ಶವವನ್ನು ತೋಟದಲ್ಲೇ ಗುಂಡಿ ತೋಡಿ ಹೂತು ಹಾಕಲಾಗಿದೆ.
ಕೊಲೆ ಮಾಡಿ ಮಿಸ್ಸಿಂಗ್ ದೂರು – ಶಂಕೆ ತಪ್ಪಿಸಲು ಯತ್ನ :
ಕೊಲೆ ಬಳಿಕ ಮಾಲತೇಶ್ ತಾನೇ ಸೊರಬ ಪೊಲೀಸ್ ಠಾಣೆಗೆ ಹೋಗಿ “ತಮ್ಮ ರಾಮಚಂದ್ರ ಕಾಣೆಯಾಗಿದ್ದಾನೆ” ಎಂದು ದೂರು ನೀಡಿದ್ದ. ನಿತ್ಯ ಪೊಲೀಸ್ ಠಾಣೆಗೆ ತೆರಳಿ ವಿಚಾರಣೆ ನಡೆಸುತ್ತಿದ್ದಂತೆ ನಟಿಸಿದ್ದಾನೆ. ಇದರಿಂದ ಕುಟುಂಬದವರಿಗೂ ಆರಂಭದಲ್ಲಿ ಅನುಮಾನ ಬಂದಿರಲಿಲ್ಲ.
ಸೊಸೆಯ ಒಪ್ಪಿಗೆ – ಕೊಲೆ ರಹಸ್ಯ ಬಹಿರಂಗ :
45 ದಿನಗಳಾದರೂ ರಾಮಚಂದ್ರ ಮನೆಗೆ ವಾಪಸ್ ಆಗದ ಹಿನ್ನೆಲೆಯಲ್ಲಿ ತಾಯಿ ಗೌರಮ್ಮ ಆತಂಕಗೊಂಡು ಮತ್ತೊಮ್ಮೆ ಪೊಲೀಸರ ಮೊರೆ ಹೋಗಿದ್ದಾರೆ. ಈ ವೇಳೆ, ಸೊಸೆ ಭಾಗ್ಯ ತನ್ನ ಹಾಗೂ ರಾಮಚಂದ್ರನ ನಡುವಿನ ಅನೈತಿಕ ಸಂಬಂಧ ಮತ್ತು ಅದರಿಂದ ಮಾಲತೇಶ್ನೇ ಕೊಲೆ ಮಾಡಿರುವ ಶಂಕೆಯನ್ನು ಬಾಯಿಬಿಟ್ಟಿದ್ದಾಳೆ.
ತಾಯಿ ಗೌರಮ್ಮ ನೇರವಾಗಿ ಮಾಲತೇಶ್ನನ್ನು ಪ್ರಶ್ನಿಸಿದಾಗ, “ಅವನ ಕಥೆ ಮುಗಿದಿದೆ, ಇನ್ನೇನು ಕೇಳಬೇಡ” ಎಂದು ಹೇಳಿದ್ದಾನೆ ಎನ್ನಲಾಗಿದೆ. ಬಳಿಕ ಒತ್ತಡದ ವಿಚಾರಣೆಗೆ ಒಳಗಾದ ಮಾಲತೇಶ್, ಶವ ಹೂತಿದ್ದ ಸ್ಥಳವನ್ನು ಪೊಲೀಸರಿಗೆ ತೋರಿಸಿದ್ದಾನೆ.
ಪೊಲೀಸ್ ತನಿಖೆ ಮುಂದುವರಿಕೆ :
ಪೊಲೀಸರು ಸ್ಥಳದಿಂದ ಅವಶೇಷಗಳನ್ನು ಹೊರತೆಗೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅನೈತಿಕ ಸಂಬಂಧ, ಕುಟುಂಬದೊಳಗಿನ ವೈಮನಸ್ಸು ಮತ್ತು ಪೂರ್ವಯೋಜಿತ ಹತ್ಯೆ ಎಂಬ ಅಂಶಗಳ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.



