 
 
यडोगा येथे सर्पमित्रांकडून मोर व अजगर पिल्लाला जीवदान.
खानापूर : खानापूर तालुक्यातील यडोगा गावात सर्पमित्रांनी दाखवलेल्या तत्परतेमुळे मोर व अजगर सापाच्या पिल्लाचे प्राण वाचले.
गावाच्या बाहेर खानापूरच्या दिशेने रस्त्यालगत असलेल्या वीज खात्याच्या टीसीच्या विद्युततारेचा स्पर्श झाल्याने, एका मोराला विजेचा धक्का बसला. त्यामुळे मोर काही अंतरावर बेशुद्धावस्थेत खाली पडला. ही घटना गवत आणण्यासाठी जात असलेल्या गावातील शेतकरी महादेव कुपटेकर यांच्या नजरेस पडली. त्यांनी त्वरित गावातील सर्पमित्र सोमनाथ अर्जुन हलगेकर यांना माहिती दिली.
नेमके त्या वेळी सोमनाथ हलगेकर खानापूरमध्ये अजगर सापाच्या पिल्लाला पकडून जंगलात सोडण्यासाठी यडोग्याकडे येत होते. माहिती मिळताच त्यांनी तत्काळ घटनास्थळी धाव घेतली व शेतकरी महादेव कुपटेकर यांच्या मदतीने जखमी मोराला शुद्धीवर आणले. त्यानंतर त्यांनी वनखात्याला माहिती दिली.
घटनेची माहिती मिळताच वन अधिकारी तात्काळ घटनास्थळी दाखल झाले. सर्पमित्र सोमनाथ अर्जुन हलगेकर, उमेश दशरथ अंधारे तसेच शेतकरी महादेव कुपटेकर यांनी जखमी मोर व अजगर पिल्लाला वन अधिकाऱ्यांच्या स्वाधीन केले.
वन खात्याच्या अधिकाऱ्यांनी सांगितले की, मोरावर दोन दिवस औषधोपचार केल्यानंतर मोराला अजगर पिल्ल्यासह त्याला जंगलात सोडण्यात येणार आहे.
यडोगा गावातील सर्प व प्राणी मित्रांनी दाखवलेल्या या कार्यामुळे प्राणिप्रेमींकडून त्यांच्या कार्याचे कौतुक होत आहे.
ಯಡೋಗಾ ಗ್ರಾಮದಲ್ಲಿ ಸರ್ಪಮಿತ್ರರಿಂದ ನವಿಲು ಹಾಗೂ ಅಜಗರ ಜಾತಿಯ ಸರ್ಪ ಮರಿಯ ಪ್ರಾಣ ರಕ್ಷಣೆ.
ಖಾನಾಪುರ : ಖಾನಾಪುರ ತಾಲ್ಲೂಕಿನ ಯಡೋಗಾ ಗ್ರಾಮದಲ್ಲಿ ಸರ್ಪಮಿತ್ರರ ಸಮಯೋಚಿತ ತುರ್ತು ಕಾರ್ಯದಿಂದ ನವಿಲು ಹಾಗೂ ಅಜಗರ್ ಜಾತಿಯ ಸರ್ಪದ ಮರಿಯ ಪ್ರಾಣ ಉಳಿದಿದೆ.
ಗ್ರಾಮದ ಹೊರವಲಯದಲ್ಲಿ ಖಾನಾಪುರ ದಿಕ್ಕಿನ ರಸ್ತೆಯ ಅಂಚಿನಲ್ಲಿರುವ ವಿದ್ಯುತ್ ಇಲಾಖೆಯ ಟಿ.ಸಿ. ತಂತಿಯನ್ನು ಸ್ಪರ್ಶಿಸಿದ ಪರಿಣಾಮ, ಒಂದು ನವಿಲಿಗೆ ವಿದ್ಯುತ್ ಶಾಕ್ ಹೊಡೆದು ಅದು ಅಚೇತನ ಸ್ಥಿತಿಯಲ್ಲಿ ನೆಲಕ್ಕೆ ಬಿದ್ದಿತು. ಈ ಘಟನೆ ಅದೇ ದಾರಿಯಲ್ಲಿ ಬರುತ್ತಿದ್ದ ರೈತ ಮಹಾದೇವ ಕುಪಟೇಕರ್ ಅವರ ಗಮನಕ್ಕೆ ಬಂತು. ತಕ್ಷಣ ಅವರು ಗ್ರಾಮದ ಸರ್ಪಮಿತ್ರ ಸೋಮನಾಥ ಅರ್ಜುನ ಹಲಗೇಕರ ಅವರಿಗೆ ಮಾಹಿತಿ ನೀಡಿದರು.
ಆ ಸಂದರ್ಭದಲ್ಲಿ ಸೋಮನಾಥ ಹಲಗೇಕರರು ಖಾನಾಪುರದಲ್ಲಿ ಅಜಗರ್ ಜಾತಿಯ ಸರ್ಪ ಮರಿಯನ್ನು ಹಿಡಿದು ಕಾಡಿಗೆ ಬಿಡಲು ಯಡೋಗಾಕ್ಕೆ ಬರುತ್ತಿದ್ದರು. ಮಾಹಿತಿ ಸಿಕ್ಕ ತಕ್ಷಣ ಅವರು ಸ್ಥಳಕ್ಕಾಗಮಿಸಿ ರೈತ ಮಹಾದೇವ ಕುಪಟೇಕರ್ ಅವರ ಸಹಾಯದಿಂದ ಗಾಯಗೊಂಡ ನವಿಲಿಗೆ ಪ್ರಥಮ ಚಿಕಿತ್ಸೆ ನೀಡಿ ಶುದ್ಧಿಗೆ ತಂದರು. ನಂತರ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಘಟನೆಯ ಮಾಹಿತಿ ತಿಳಿದ ಕೂಡಲೇ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿದರು. ಸರ್ಪಮಿತ್ರ ಸೋಮನಾಥ ಅರ್ಜುನ ಹಲಗೇಕರ, ಉಮೇಶ್ ದಶರಥ ಅಂಧಾರೆ ಹಾಗೂ ರೈತ ಮಹಾದೇವ ಕುಪಟೇಕರ್ ಇವರ ಸಹಕಾರದಿಂದ ಗಾಯಗೊಂಡ ನವಿಲು ಹಾಗೂ ಅಜಗರ್ ಮರಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಲಾಯಿತು.
ಅರಣ್ಯಾಧಿಕಾರಿಗಳ ಮಾಹಿತಿ ಪ್ರಕಾರ, ನವಿಲಿಗೆ ಎರಡು ದಿನ ಔಷಧೋಪಚಾರ ಮಾಡಿದ ನಂತರ ನವಿಲನ್ನು ಹಾಗೂ ಅಜಗರ ಸರ್ಪದ ಮರಿಗಳನೂ ಕಾಡಿಗೆ ಬಿಡಲಾಗುವುದು.
ಯಡೋಗಾ ಗ್ರಾಮದ ಸರ್ಪಮಿತ್ರರು ಹಾಗೂ ಪ್ರಾಣಿಮಿತ್ರರು ತೋರಿದ ಈ ಮಾನವೀಯ ಕಾರ್ಯದಿಂದ ಪ್ರಾಣಿಪ್ರೇಮಿಗಳು ಅವರನ್ನು ಪ್ರಶಂಸಿಸುತ್ತಿದ್ದಾರೆ.
 
 
 
         
                                 
                             
 
         
         
         
        