दीपावलीच्या पार्श्वभूमीवर मच्छी मार्केटसमोरील रस्ता दुचाकीसाठी आठ दिवसांसाठी खुला करण्यात आला.
खानापूर (ता. 19) : खानापूर येथील मच्छी मार्केट समोरील रस्ता, जो गेल्या काही दिवसांपासून बंद होता, तो अखेर दीपावली सणाच्या पार्श्वभूमीवर आठ दिवसांसाठी खुला करण्यात येणार आहे. शेतकऱ्यांनी नागरिकांची, व्यापारी वर्गाची आणि प्रवासी वर्गाची सोय लक्षात घेऊन हा निर्णय घेतला आहे. आज रविवार दिनांक 19 ऑक्टोबर रोजी हा निर्णय घेण्यात आला. व रस्ता सुद्धा खुला करण्यात आला.
सदर रस्ता बंद राहण्याचे कारण म्हणजे सरकारतर्फे शेतकऱ्यांना पूर्वसूचना किंवा नुकसानभरपाई न देता रस्त्याचे काम सुरू करण्यात आले होते. या अन्यायाविरोधात शेतकऱ्यांनी आंदोलन करत रस्ता बंद ठेवण्याचा निर्णय घेतला होता. त्यामुळे खानापूरकडे जाणाऱ्या नागरिकांना व वाहनचालकांना जुन्या मलप्रभा नदी पुलावरून प्रवास करावा लागत होता. परिणामी प्रवासात मोठी गैरसोय निर्माण झाली होती.
या पार्श्वभूमीवर भारतीय जनता पक्षाचे जिल्हा उपाध्यक्ष प्रमोद कोचेरी, भाजपाचे माजी अध्यक्ष व ज्येष्ठ नेते संजय कुबल, जनरल सेक्रेटरी गुंडू तोपिनकट्टी, बाबासाहेब देसाई तसेच व्यापारी वर्गाचे प्रतिनिधी राजेंद्र रायका व इतरांनी शेतकऱ्यांशी चर्चा करून दीपावली सणाच्या काळात रस्ता खुला ठेवण्याची विनंती केली.
शेतकऱ्यांनी व्यापाऱ्यांची व नागरिकांची अडचण लक्षात घेऊन आठ दिवसांसाठी फक्त दुचाकी वाहतुकीसाठी रस्ता खुला ठेवण्यास मान्यता दिली आहे. त्यामुळे आता नागरिकांना दीपावली खरेदीसाठी आणि प्रवासासाठी मोठी सोय होणार आहे.
यावेळी शेतकरी राहुल सावंत यांनी सर्व शेतकऱ्यांच्या वतीने माहिती देताना सांगितले की,
“दीपावली सणानिमित्त नागरिकांची आणि व्यापारी वर्गाची गैरसोय होऊ नये, यासाठी आम्ही सर्व शेतकरी एकमताने आठ दिवसांसाठी रस्ता दुचाकीसाठी खुला करत आहोत.”
या वेळी शेतकरी राहुल सावंत, विनायक चव्हाण, मानसिंग चौगुले, संदीप देसाई, विश्वनाथ चौगुले आदी उपस्थित होते.
खानापूर शहरातील नागरिक, व्यापारी आणि प्रवासी वर्ग यामुळे आनंदी असून, दीपावलीपूर्वी रस्ता खुला झाल्याने सर्वत्र समाधान व्यक्त केले जात आहे.
ದೀಪಾವಳಿ ಹಬ್ಬದ ನಿಮಿತ್ತ: ಖಾನಾಪುರ ಮೀನು ಮಾರುಕಟ್ಟೆ ಎದುರಿನ ರಸ್ತೆ ದ್ವಿಚಕ್ರ ವಾಹನ ಸಂಚಾರಕ್ಕೆ ಎಂಟು ದಿನಗಳ ಕಾಲ ಮುಕ್ತ.
ಖಾನಾಪುರ (ತಾ.19):
ಖಾನಾಪುರದ ಮೀನು ಮಾರುಕಟ್ಟೆ ಎದುರಿನ ರಸ್ತೆ ಕಳೆದ ಕೆಲವು ದಿನಗಳಿಂದ ದುರಸ್ತಿ ಕಾರಣ ಮುಚ್ಚಲ್ಪಟ್ಟಿತ್ತು. ಆದರೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಇದೀಗ ಎಂಟು ದಿನಗಳ ಕಾಲ ದ್ವಿಚಕ್ರ ವಾಹನ ಸಂಚಾರಕ್ಕೆ ತೆರೆಯಲು ನಿರ್ಧಾರ ಕೈಗೊಳ್ಳಲಾಗಿದೆ.
ಈ ನಿರ್ಧಾರವನ್ನು ಭಾನುವಾರ (ಅ.19) ರಂದು ಸ್ಥಳೀಯ ರೈತರು, ವ್ಯಾಪಾರಿ ವರ್ಗ ಮತ್ತು ನಾಗರಿಕರ ಅನುಕೂಲತೆಯನ್ನು ಗಮನದಲ್ಲಿಟ್ಟು ಕೈಗೊಳ್ಳಲಾಯಿತು. ಇಂದು ಬೆಳಿಗ್ಗೆಯಿಂದಲೇ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ರಸ್ತೆ ಮುಚ್ಚಲು ಕಾರಣವೆಂದರೆ — ಸರ್ಕಾರವು ರೈತರಿಗೆ ಪೂರ್ವ ಸೂಚನೆ ಅಥವಾ ಪರಿಹಾರ ನೀಡದೆ ರಸ್ತೆ ಕಾಮಗಾರಿ ಪ್ರಾರಂಭಿಸಿದ್ದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿ ರಸ್ತೆ ಕಾಮಗಾರಿ ಬಂದ್ ಮಾಡುವ ನಿರ್ಧಾರ ಕೈಗೊಂಡಿದ್ದರು. ಇದರಿಂದ ಖಾನಾಪುರದತ್ತ ಪ್ರಯಾಣ ಮಾಡುವ ನಾಗರಿಕರು ಹಳೆಯ ಮಲಪ್ರಭಾ ಸೇತುವೆಯ ಮೂಲಕ ತೆರಳಬೇಕಾದ ಅನಿವಾರ್ಯತೆ ಉಂಟಾಗಿತ್ತು. ಪ್ರಯಾಣಿಕರು ಮತ್ತು ವ್ಯಾಪಾರಿಗಳಿಗೆ ಇದರಿಂದ ಸಾಕಷ್ಟು ತೊಂದರೆ ಎದುರಾಯಿತು.
ಈ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಪ್ರಮೊದ್ ಕೊಚೇರಿ, ಮಾಜಿ ಅಧ್ಯಕ್ಷ ಸಂಜಯ ಕುಬಲ್, ಜನರಲ್ ಸೆಕ್ರಟರಿ ಗುಂಡು ಟೋಪಿಂಕಟ್ಟಿ, ಬಾಬಾಸಾಹೇಬ್ ದೇಶಾಯಿ, ಹಾಗೂ ವ್ಯಾಪಾರಿ ಪ್ರತಿನಿಧಿ ರಾಜೇಂದ್ರ ರೈಕಾ ಮುಂತಾದವರು ರೈತರೊಂದಿಗೆ ಚರ್ಚೆ ನಡೆಸಿ ದೀಪಾವಳಿ ಹಬ್ಬದ ಅವಧಿಯಲ್ಲಿ ರಸ್ತೆ ತೆರೆಯುವಂತೆ ಮನವಿ ಮಾಡಿದರು.
ರೈತರು ನಾಗರಿಕರ ಮತ್ತು ವ್ಯಾಪಾರಿಗಳ ತೊಂದರೆಯನ್ನು ಪರಿಗಣಿಸಿ ಎಂಟು ದಿನಗಳ ಕಾಲ ಕೇವಲ ದ್ವಿಚಕ್ರ ವಾಹನ ಸಂಚಾರಕ್ಕೆ ರಸ್ತೆ ತೆರೆಯಲು ಒಪ್ಪಿಗೆ ನೀಡಿದರು.
ರೈತ ರಾಹುಲ್ ಸಾವಂತ್ ಅವರು ಮಾತನಾಡುತ್ತಾ:
“ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಾಗರಿಕರು ಮತ್ತು ವ್ಯಾಪಾರಿಗಳಿಗೆ ತೊಂದರೆ ಆಗಬಾರದು ಎಂಬ ಕಾರಣದಿಂದ ನಾವು ಎಲ್ಲಾ ರೈತರು ಒಗ್ಗಟ್ಟಿನಿಂದ ರಸ್ತೆ ಎಂಟು ದಿನಗಳ ಕಾಲ ದ್ವಿಚಕ್ರ ವಾಹನಗಳಿಗೆ ತೆರೆಯುತ್ತಿದ್ದೇವೆ.” ಎಂದು ಹೇಳಿದರು
ಈ ಸಂದರ್ಭದಲ್ಲಿ ರೈತರು ರಾಹುಲ್ ಸಾವಂತ್, ವಿನಾಯಕ ಚವ್ಹಾಣ್, ಮಾನಸಿಂಗ್ ಚೌಗಲೇ, ಸಂದೀಪ್ ದೇಶಾಯಿ, ವಿಶ್ವನಾಥ ಚೌಗಲೇ ಉಪಸ್ಥಿತರಿದ್ದರು.
ಖಾನಾಪುರದ ನಾಗರಿಕರು, ವ್ಯಾಪಾರಿಗಳು ಮತ್ತು ಪ್ರಯಾಣಿಕರು ಈ ನಿರ್ಧಾರದಿಂದ ಸಂತೋಷ ವ್ಯಕ್ತಪಡಿಸಿದ್ದು, ದೀಪಾವಳಿಗೆ ಮುನ್ನ ರಸ್ತೆ ತೆರೆಯಲ್ಪಟ್ಟ ಹಿನ್ನೆಲೆಯಲ್ಲಿ ಖಾನಾಪುರಿನ ನಾಗರಿಕರಲ್ಲಿ ತೃಪ್ತಿ ಮತ್ತು ಹಬ್ಬದ ಚೈತನ್ಯ ಕಾಣಿಸುತ್ತಿದೆ.

