प्रामाणिकपणाचा विजय!
वैभवी देवळी हिचा सत्कार व बक्षीस देऊन गौरव
खानापूर : येथील श्री स्वामी विवेकानंद शिक्षण सेवा सोसायटी संचलित कला, विज्ञान व वाणिज्य पदवीपूर्व महाविद्यालयातील पीयूसी प्रथम वर्ष वाणिज्य शाखेत शिक्षण घेणाऱ्या वैभवी देवळी हिने प्रामाणिकपणाचे उत्तम उदाहरण घालत, सापडलेली सोन्याची साखळी परत केल्याबद्दल तिचा सत्कार करण्यात आला.
पीयूसी प्रथम वर्ष विज्ञान शाखेच्या विद्यार्थिनीची सुमारे 70 ते 80 हजार रुपये किमतीची सोन्याची साखळी हरवली होती. ती साखळी वैभवीला सापडल्यावर तिने तत्काळ महाविद्यालयाच्या कर्मचाऱ्यांकडे जमा केली. नंतर प्राचार्य प्रा. पी. के. चापगावकर यांच्या उपस्थितीत साखळी संबंधित विद्यार्थिनीला परत करण्यात आली.
शिक्षक दिनाचे औचित्य साधून आयोजित कार्यक्रमात वैभवीचा समाजसेवक जयंत तिनेकर यांच्या हस्ते रोख बक्षीस देऊन गौरव करण्यात आला. शिक्षण संस्थेचे अध्यक्ष व वकील चेतन मनेरिकर यांनी वैभवीच्या प्रामाणिकपणाचे विशेष कौतुक केले.
यावेळी व्यासपीठावर संस्थेचे सचिव सुहास कुलकर्णी, सदस्य सदानंद कपीलेश्वरी, प्राचार्य प्रा. पी. के. चापगावकर, निवृत्त प्राचार्य शशिकांत पाटील, प्राचार्य विनोद मराठे आदी मान्यवर उपस्थित होते. शिक्षक, प्राध्यापक व विद्यार्थी मोठ्या संख्येने या कार्यक्रमास हजर होते.
ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿ ವೈಭವೀ ದೇವಳಿಗೆ ಸನ್ಮಾನ.
ಖಾನಾಪುರ : ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಸೇವಾ ಸಂಸ್ಥೆ ನಡೆಸುವ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ವೈಭವೀ ದೇವಳಿ ಪ್ರಾಮಾಣಿಕತೆಯ ಮಾದರಿ ಮೆರೆದ ಸಿಕ್ಕ ಚಿನ್ನದ ಸರವನ್ನು ಹಿಂತಿರುಗಿಸಿದ ಹಿನ್ನೆಲೆಯಲ್ಲಿ ಗೌರವಿಸಲಾಯಿತು.
ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯೊಬ್ಬಳ ಚಿನ್ನದ ಸರ (ಅಂದಾಜು 70 ರಿಂದ 80 ಸಾವಿರ ರೂ. ಮೌಲ್ಯ) ಕಳೆದು ಹೋಗಿತ್ತು. ಆ ಸರ ವೈಭವೀಗೆ ಸಿಕ್ಕಿದ ಕೂಡಲೇ ಅವಳು ಕಾಲೇಜಿನ ಸಿಬ್ಬಂದಿಗಳಿಗೆ ಹಸ್ತಾಂತರಿಸಿದಳು. ನಂತರ ಪ್ರಾಚಾರ್ಯ. ಪಿ. ಕೆ. ಚಾಪಗಾವ್ಕರ್ ಅವರ ಸಮ್ಮುಖದಲ್ಲಿ ಸಂಬಂಧಿಸಿದ ವಿದ್ಯಾರ್ಥಿನಿಗೆ ಸರವನ್ನು ಹಿಂತಿರುಗಿಸಲಾಯಿತು.
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮಾಜಸೇವಕ ಜಯಂತ ತಿನೇಕರ್ ಅವರ ಕೈಗಳಿಂದ ವೈಭವೀಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ವಕೀಲ ಚೇತನ ಮನೇರಿಕರ್ ವೈಭವಿಯ ಪ್ರಾಮಾಣಿಕತೆಯನ್ನು ವಿಶೇಷವಾಗಿ ಹೊಗಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸುಹಾಸ್ ಕುಲಕರ್ಣಿ, ಸದಸ್ಯ ಸದಾನಂದ ಕಪಿಲೇಶ್ವರಿ, ಪ್ರಾಚಾರ್ಯ. ಪಿ. ಕೆ. ಚಾಪಗಾವ್ಕರ್, ನಿವೃತ್ತ ಪ್ರಾಚಾರ್ಯ ಶಶಿಕಾಂತ್ ಪಾಟೀಲ್, ಪ್ರಾಚಾರ್ಯ ವಿನೋದ ಮರಾಠೆ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಶಿಕ್ಷಕರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಹಾಜರಿದ್ದರು.

