गोकाक तालुक्यात मुसळधार पावसामुळे पूर ; जिल्हाधिकाऱ्यांची भेट व आढावा.
बेळगाव ; गोकाक तालुक्यात मुसळधार पावसामुळे आलेल्या पुराने जनजीवन विस्कळीत झाले असून, सुमारे 220 घरांमध्ये पाणी शिरले आहे. गोकाक जवळील लोळसूर पूल पूर्ण पाण्याखाली गेला आहे. गोकाक गावात देखील अनेक गल्ल्याना ओढ्याचे स्वरूप प्राप्त झाले आहे.
गोकाक मधील पूरस्थितीची पाहणी करण्यासाठी बुधवारी जिल्हाधिकारी मोहम्मद रोशन यांनी गोकाक येथील पूरग्रस्त भागाला भेट दिली. यावेळी त्यांनी लोळसूर पूल आणि पूरग्रस्तांसाठी उभारलेल्या तात्पुरत्या निवारा केंद्राची पाहणी करून नागरिकांशी संवाद साधला.
या केंद्रात जवळपास 200 पूरग्रस्तांना हलवण्यात आले असून, त्यापैकी दोन गर्भवती महिलांना रुग्णालयात दाखल करण्यात आले आहे. एसडीआरएफच्या नियमांनुसार भाड्याच्या घरात किंवा स्वतःच्या घरात राहणाऱ्या सर्वांना मदत दिली जाईल, असेही त्यांनी स्पष्ट केले.
कोयना धरणातून पाणी सोडल्यास अथणी आणि कागवाडमध्ये पूरस्थिती अधिक गंभीर होण्याची शक्यता त्यांनी व्यक्त केली. त्यामुळे, नागरिकांना सुरक्षित ठिकाणी जाण्याचे आवाहन त्यांनी केले. हिडकल धरणातून 36 हजार क्युसेक पाणी सोडले जात असून, अलमट्टी धरणातही अडीच लाख क्युसेक पाणी जमा झाल्याची माहिती त्यांनी दिली.
ಗೋಕಾಕ್ ತಾಲ್ಲೂಕಿನಾದ್ಯಂತ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ– ಜಿಲ್ಲಾಧಿಕಾರಿ ಪರಿಶೀಲನೆ
ಬೆಳಗಾವಿ ; ಗೋಕಾಕ್ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಸುಮಾರು 220 ಮನೆಗಳಿಗೆ ನೀರು ನುಗ್ಗಿದ್ದು, ಗೋಕಾಕ್ ಸಮೀಪದ ಲೋಳಸೂರ ಸೇತುವೆ ಸಂಪೂರ್ಣವಾಗಿ ನೀರಿನಡಿಯಲ್ಲಿ ಮುಳುಗಿದೆ. ಗೋಕಾಕ್ ಪಟ್ಟಣದಲ್ಲಿಯೂ ಹಲವಾರು ಬೀದಿಗಳು ನದಿಯ ರೂಪ ಪಡೆದಿವೆ.
ಬುಧವಾರ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಗೋಕಾಕ್ ಪ್ರವಾಹಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಈ ವೇಳೆ ಅವರು ಲೋಳಸೂರ ಸೇತುವೆ ಹಾಗೂ ಪ್ರವಾಹಪೀಡಿತರಿಗೆ ತಾತ್ಕಾಲಿಕವಾಗಿ ನಿರ್ಮಿಸಿದ ನಿವಾಸ ಶಿಬಿರವನ್ನು ವೀಕ್ಷಿಸಿ ನಾಗರಿಕರೊಂದಿಗೆ ಸಂವಾದ ನಡೆಸಿದರು.
ಈ ಶಿಬಿರದಲ್ಲಿ ಸುಮಾರು 200 ಪ್ರವಾಹಪೀಡಿತರನ್ನು ಸ್ಥಳಾಂತರಿಸಲಾಗಿದ್ದು, ಅವರಲ್ಲಿ ಇಬ್ಬರು ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಸ್ಡಿಆರ್ಎಫ್ ನಿಯಮಾವಳಿಗಳಂತೆ ಸ್ವಂತ ಮನೆ ಅಥವಾ ಬಾಡಿಗೆ ಮನೆಯಲ್ಲಿ ವಾಸಿಸುವ ಎಲ್ಲರಿಗೂ ನೆರವು ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
ಮುಂದುವರೆದು ಮಾತನಾಡಿದ ಜಿಲ್ಲಾಧಿಕಾರಿಗಳು, ಕೋಯ್ನಾ ಅಣೆಕಟ್ಟಿನಿಂದ ನೀರು ಬಿಡಲಾಗಿದೆ ಅಥಣಿ ಮತ್ತು ಕಾಗವಾಡದಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇದೆ, ಆದ್ದರಿಂದ ನಾಗರಿಕರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಸೂಚಿಸಿದರು.
ಪ್ರಸ್ತುತ ಹಿಡಕಲ್ ಅಣೆಕಟ್ಟಿನಿಂದ 36 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ಅಲಮಟ್ಟಿ ಅಣೆಕಟ್ಟಿನಲ್ಲಿ 2.5 ಲಕ್ಷ ಕ್ಯೂಸೆಕ್ ನೀರು ಸೇರುತ್ತಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

