सर्विस रस्ता कंत्राटदाराचा बाप देणार काय? नागरिकांचा संतप्त सवाल! मलप्रभा नदी घाट परिसर दारुड्यांचा अड्डा!
खानापूर (ता.22) : खानापूर-बेळगाव महामार्गावर खानापूर शहर अंतर्गत मराठा मंडळ डिग्री कॉलेज ते करंबळ कत्री या दरम्यान 14 कोटी रुपयांचा सीसी रस्ता बांधकाम प्रकल्प केंद्र व राज्य सरकारच्या वतीने सुरू आहे. या कामामुळे हेस्कॉम कार्यालय ते रूमेवाडी कत्रीपर्यंतचा रस्ता बंद करण्यात आला असून, हेमाडगा परिसर व गोव्याहून होणारी वाहतूक श्री मलप्रभा नदी घाट मार्गावरून वळविण्यात आली आहे.

परंतु हा पर्यायी सर्विस रस्ता अतिशय खराब, खड्डेमय आणि धोकादायक झाल्याने वाहनधारक व प्रवाशांना मोठा त्रास सहन करावा लागत आहे. नियमाप्रमाणे कंत्राटदाराने हा सर्विस रस्ता दुरुस्त ठेवणे आवश्यक असतानाही, तो जाणूनबुजून दुर्लक्ष करीत असल्याचा आरोप नागरिकांनी केला आहे. परिणामी, या भागातील वाहतुकीचा खोळंबा व अपघातांचा धोका वाढला आहे.
नागरिकांकडून आमदार विठ्ठल हलगेकर, खासदार विश्वेश्वर हेगडे-कागेरी व भाजप नेत्यांनी कंत्राटदाराला सक्त ताकीद द्यावी आणि तात्काळ सर्विस रस्त्याची दुरुस्ती करून घ्यावी, अशी मागणी करण्यात आली आहे.
नगरपंचायतीचे संपूर्ण दुर्लक्ष — नागरिक संतप्त!
या मार्गावरूनच नागरिकांची व पायी प्रवास करणाऱ्यांची ये-जा सुरू असून, रात्रीच्या वेळी नदी घाटावरील पुलावर कोणतीही लाईट व्यवस्था नाही. त्यामुळे नागरिक, महिला व लहान मुले अंधारात जीव मुठीत धरून प्रवास करीत आहेत.
नगरपंचायतीने फोकस लाईट किंवा पथदीपाची तात्काळ सोय करावी, अशी मागणी नागरिकांनी केली आहे.
“जर अंधारात काही अपघात किंवा अनर्थ घडला, तर त्याला जबाबदार कोण?” असा थेट सवाल नागरिकांनी सुस्तावलेल्या नगरसेवकांना व मस्तावलेल्या नगरपंचायतीला केला आहे.
दारू, गांजा विक्रीचे ठिकाण बनला नदी घाट — पोलिसांचे डोळे झाक!
श्री मलप्रभा नदी घाट परिसर रात्री दारुड्यांचा अड्डा बनला असून, दिवसाढवळ्या गांजा व आमली पदार्थांची विक्री सुरू असल्याची धक्कादायक माहिती समोर आली आहे. नागरिकांच्या तक्रारी असूनही पोलीस प्रशासनाकडून कोणतीही कारवाई न झाल्याचा आरोप करण्यात येत आहे.
“पोलीसांना सर्व माहिती असूनही ते मौन बाळगत आहेत. त्यामुळे अमली पदार्थ विक्रेते व दारुड्यांना पोलिसांची भीती राहिलेली नाही,” असे नागरिकांचे म्हणणे आहे.
त्यामुळे पोलीस प्रशासनाने तात्काळ या ठिकाणी कारवाई करून परिसर स्वच्छ करावा, अशी जोरदार मागणी नागरिकांकडून करण्यात आली आहे.
🗣️ नागरिकांचा सवाल स्पष्ट आहे:
👉 सर्विस रस्त्याची दुरुस्ती कोण करणार?
👉 नगरपंचायतीने लाईट का बसवले नाहीत?
👉 दारुड्यांवर आणि अमली पदार्थ विक्रेत्यांवर पोलिस कारवाई कधी होणार?
खानापूरच्या नागरिकांनी आता या सर्व प्रश्नांवर ठोस कारवाईची अपेक्षा व्यक्त केली आहे.
ಸರ್ವಿಸ್ ರಸ್ತೆ ಕಂಟ್ರಾಕ್ಟರ ಮಾಡಿದೆ ಮತ್ಯಾರು ಮಾಡುವುದು? ನಾಗರಿಕರ ಆಕ್ರೋಶ! ಮಲಪ್ರಭಾ ನದಿ ಘಾಟ್ ಪ್ರದೇಶ ಮದ್ಯಪಾನಿಗಳ ಅಡ್ಡೆ ಯಾಗಿದೆಯೆಂಬ ಆರೋಪ!
ಖಾನಾಪುರ (ತಾ. ೨೨): ಖಾನಾಪುರ–ಬೆಳಗಾವಿ ಹೆದ್ದಾರಿಯಲ್ಲಿ ಮರಾಠಾ ಮಂಡಳ ಡಿಗ್ರಿ ಕಾಲೇಜಿನಿಂದ ಕರಂಬಳ ಕತ್ರಿವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ರೂ. 14 ಕೋಟಿ ವೆಚ್ಚದ ಸಿಸಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿಯ ಹಿನ್ನೆಲೆಯಲ್ಲಿ ಹೆಸ್ಕಾಂ ಕಚೇರಿ ಇಂದ ರೂಮೇವಾಡಿ ಕತ್ರಿವರೆಗೆ ರಸ್ತೆ ಬಂದ್ ಮಾಡಲಾಗಿದೆ. ಇದರಿಂದಾಗಿ ಸಂಚಾರವನ್ನು ಶ್ರೀ ಮಲಪ್ರಭಾ ನದಿ ಘಾಟ್ ರಸ್ತೆಯ ಮೂಲಕ ತಿರುಗಿಸಲಾಗಿದೆ.
ಆದರೆ ಈ ಪರ್ಯಾಯ ಸರ್ವಿಸ್ ರಸ್ತೆ ತುಂಬಾ ಹಾಳಾಗಿ, ದೊಡ್ಡ ದೊಡ್ಡ ಗುಂಡಿಗಳಿಂದ ಅಪಾಯಕರವಾಗಿದೆ. ಈ ಮಾರ್ಗದಲ್ಲಿ ವಾಹನ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಅಪಾರ ತೊಂದರೆ ಉಂಟಾಗಿದೆ. ನಿಯಮದ ಪ್ರಕಾರ ಕಂಟ್ರಾಕ್ಟರ್ ಈ ರಸ್ತೆಯನ್ನು ದುರಸ್ತಿಗೊಳಿಸಬೇಕಾಗಿತ್ತು, ಆದರೆ ಅವನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ತೋರಿಸುತ್ತಿದ್ದಾನೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬರುತ್ತಿದೆ.
ಇದರಿಂದ ನಾಗರಿಕರಲ್ಲಿ ಆಕ್ರೋಶ ಉಂಟಾಗಿದ್ದು, ಖಾನಾಪುರ ಶಾಸಕರಾದ ವಿಠ್ಠಲ ಹಲಗೇಕರ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಬಿಜೆಪಿ ನಾಯಕರಿಂದ ಕಂಟ್ರಾಕ್ಟರ್ಗೆ ಕಠಿಣ ಸೂಚನೆ ನೀಡಿ ಸರ್ವಿಸ್ ರಸ್ತೆ ದುರಸ್ತಿ ಮಾಡಿಸಬೇಕು ಎಂದು ಆಗ್ರಹ ವ್ಯಕ್ತವಾಗಿದೆ.
ನಗರಪಂಚಾಯಿತೆಯ ಸಂಪೂರ್ಣ ನಿರ್ಲಕ್ಷ್ಯ – ನಾಗರಿಕರ ಕೋಪ!
ಈ ಮಾರ್ಗದಲ್ಲೇ ನಾಗರಿಕರು ಹಾಗೂ ಪಾದಚಾರಿಗಳು ಸಂಚಾರ ಮಾಡುತ್ತಿದ್ದಾರೆ. ಆದರೆ ನದಿ ಘಾಟ್ ಮೇಲಿನ ಸೇತುವೆಯ ಮೇಲೆ ಬೆಳಕಿನ ವ್ಯವಸ್ಥೆಯೇ ಇಲ್ಲ. ರಾತ್ರಿ ವೇಳೆಯಲ್ಲಿ ಮಹಿಳೆಯರು ಹಾಗೂ ಮಕ್ಕಳು ಈ ರಸ್ತೆಯಲ್ಲಿ ಹಾದು ಹೋಗಲು ಹೆದರುತ್ತಿದ್ದಾರೆ.
ನಗರಪಂಚಾಯಿತೆಯು ತಕ್ಷಣ ಫೋಕಸ್ ಲೈಟ್ ಅಥವಾ ಪಥದೀಪವನ್ನು ಅಳವಡಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
“ರಾತ್ರಿ ಸಮಯದಲ್ಲಿ ಏನಾದರೂ ದುರ್ಘಟನೆ ಅಥವಾ ಅನಾಹುತ ಸಂಭವಿಸಿದರೆ ಅದಕ್ಕೆ ಹೊಣೆ ಯಾರು?” ಎಂಬ ಪ್ರಶ್ನೆ ಸುಸ್ತಾದ ನಗರಸೇವಕರಿಗೂ ಮಸ್ತಾದ ಅಧಿಕಾರಿಗಳಿಗೂ ನಾಗರಿಕರಿಂದ ಕೇಳಿ ಬಂದಿದೆ.
ಮದ್ಯ ಮತ್ತು ಗಾಂಜಾ ಮಾರಾಟದ ಕೇಂದ್ರವಾದ ನದಿ ಘಾಟ್ – ಪೊಲೀಸರು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂಬ ಶಂಕೆ!
ಶ್ರೀ ಮಲಪ್ರಭಾ ನದಿ ಘಾಟ್ ಪ್ರದೇಶವು ರಾತ್ರಿ ವೇಳೆ ಮದ್ಯಪಾನಿಗಳ ಅಡ್ಡೆಯಾಗಿ ಪರಿಣಮಿಸಿದ್ದು, ಹಗಲಲ್ಲಿಯೇ ಗಾಂಜಾ ಹಾಗೂ ಅಮಲೀ ಪದಾರ್ಥಗಳ ಮಾರಾಟ ನಡೆಯುತ್ತಿದೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ನಾಗರಿಕರಿಂದ ಹಲವು ದೂರುಗಳು ಬಂದಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
“ಪೊಲೀಸರಿಗೆ ಎಲ್ಲಾ ಮಾಹಿತಿ ಇದ್ದರೂ ಅವರು ಮೌನ ವಹಿಸಿದ್ದಾರೆ. ಇದರಿಂದ ಅಮಲೀ ಪದಾರ್ಥ ಮಾರಾಟಗಾರರು ಮತ್ತು ಬಳಕೆದಾರರಿಗೆ ಯಾವುದೇ ಭಯವಿಲ್ಲ,” ಎಂದು ನಾಗರಿಕರು ಆರೋಪಿಸಿದ್ದಾರೆ.
ಆದ್ದರಿಂದ ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಂಡು ಮಲಪ್ರಭಾ ಘಾಟ್ ಪ್ರದೇಶವನ್ನು ಶುದ್ಧಗೊಳಿಸಬೇಕು, ಎಂಬುದು ನಾಗರಿಕರ ಒತ್ತಾಯವಾಗಿದೆ.
🗣️ ನಾಗರಿಕರ ಪ್ರಶ್ನೆಗಳು ಸ್ಪಷ್ಟ:
👉 ಸರ್ವಿಸ್ ರಸ್ತೆ ಯಾರು ಸರಿಪಡಿಸುತ್ತಾರೆ?
👉 ನಗರಪಂಚಾಯಿತೆಯು ಲೈಟ್ ಏಕೆ ಅಳವಡಿಸಿಲ್ಲ?
👉 ಮದ್ಯಪಾನಿಗಳು ಮತ್ತು ಗಾಂಜಾ ಮಾರಾಟಗಾರರ ಮೇಲೆ ಕ್ರಮ ಯಾವಾಗ?
ಖಾನಾಪುರದ ಜನತೆ ಈಗ ಈ ಎಲ್ಲಾ ಪ್ರಶ್ನೆಗಳಿಗೆ ತಕ್ಷಣದ ಮತ್ತು ಸ್ಪಷ್ಟ ಕ್ರಮವನ್ನು ನಿರೀಕ್ಷಿಸುತ್ತಿದ್ದಾರೆ.

