पीयूसी द्वितीय वर्ष निकाल 2026 : ताराराणी महाविद्यालय तालुक्यात प्रथम स्थानी, जिल्ह्यात अव्वल स्थानी.
खानापूर : म. मं. ताराराणी पदवीपूर्व महाविद्यालय, खानापूर येथील पीयूसी द्वितीय वर्षाचा 2026 सालचा वार्षिक निकाल अत्यंत अभिमानास्पद लागला असून महाविद्यालयाने खानापूर तालुक्यात प्रथम तर बेळगाव जिल्ह्यात अव्वल स्थान मिळवले आहे. वाणिज्य आणि कला या दोन्ही शाखांतील विद्यार्थिनींनी उल्लेखनीय यश संपादन करत महाविद्यालयाच्या गुणवत्तेची पुन्हा एकदा प्रचिती दिली आहे.
वाणिज्य (Commerce) शाखेतील दैदिप्यमान यश :
वाणिज्य विभागात कुमारी सबिना एल. लोबो (98.33%) हिने प्रथम, कुमारी समीक्षा एस. झुंजवाडकर (98%) हिने द्वितीय तर कुमारी राजेश्वरी पी. राठोडकर (96.33%) हिने तृतीय क्रमांक पटकावला. या तिघींनी खानापूर तालुक्यात अव्वल स्थान मिळवून बेळगाव जिल्ह्यातही मानांकन प्राप्त केले आहे.
तसेच कुमारी वैश्नवी जी. कोडला (94.83%), कुमारी निधी व्ही. गवाणकर (94%), कुमारी अंजली एम. कदम (93.83%), कुमारी अलिशा पी. कुलकर्णी (93%), कुमारी स्वाती डी. घाडी (93%), कुमारी कावेरी पी. अंधारे (91.67%), कुमारी प्राजक्ता पी. कावळेकर (88.33%), कुमारी ऋतुजा आर. सावंत (87.83%), कुमारी पूजा पी. गवाणकर (86.67%) व कुमारी प्रांजल एन. पाटील (85.50%) यांनीही उल्लेखनीय यश संपादन केले. वाणिज्य विभागाचा एकूण निकाल 86.53% लागला आहे.



कला (Arts) शाखेची उल्लेखनीय कामगिरी :
कला विभागात कुमारी स्वेता एन. घाडी (85%) हिने प्रथम क्रमांक पटकावला. तसेच कुमारी संजना एस. कांबळे (83%), कुमारी मधुरा आर. खांबळे (82%), कुमारी प्रतिक्षा एस. पवार (81%) व कुमारी नेत्रा वाय. बागले (81%) यांनीही उल्लेखनीय यश मिळवले. कला विभागाचा एकूण निकाल 75.92% लागला आहे.

एकूण निकाल 83 टक्के :
संपूर्ण निकालाचा विचार करता एकूण विद्यार्थिनींपैकी 79 विद्यार्थिनी विशेष श्रेणी (डिस्टिंक्शन), 27 प्रथम श्रेणी व 11 द्वितीय श्रेणीमध्ये उत्तीर्ण झाल्या असून महाविद्यालयाचा एकूण निकाल 83% इतका लागला आहे. विशेष म्हणजे कोणत्याही कोचिंग क्लासचा आधार न घेता केवळ महाविद्यालयातील प्राध्यापकांच्या मार्गदर्शनाखाली हे यश संपादन झाले आहे.
क्रीडा व सर्वांगीण प्रगतीतही आघाडी :
शिक्षणाबरोबरच क्रीडा क्षेत्रातही महाविद्यालयाने आपली वेगळी ओळख निर्माण केली आहे. खो-खो, कबड्डी आदी खेळांमध्ये विद्यार्थिनींनी तालुका, जिल्हा, राज्य तसेच राष्ट्रीय स्तरावर उल्लेखनीय कामगिरी बजावली आहे. त्यामुळे कला, क्रीडा व बौद्धिक विकासाचा सुंदर समतोल साधण्यात महाविद्यालय यशस्वी ठरले आहे.
या उज्ज्वल यशामागे मराठा मंडळाच्या अध्यक्षा डॉ. राजश्री नागराजू यादव यांचे प्रेरणादायी मार्गदर्शन, संचालक श्री शिवाजीराव पाटील व श्री परशुराम गुरव यांचे मोलाचे सहकार्य तसेच प्राचार्य श्री अरविंद लक्ष्मणराव पाटील यांचे कुशल नेतृत्व लाभले आहे. सर्व प्राध्यापकांची अथक मेहनत व विद्यार्थिनींची जिद्द यामुळेच हे यश शक्य झाले आहे.
हा निकाल केवळ यश नसून महाविद्यालयाच्या गुणवत्ता, शिस्त व समर्पणाचा ठसा उमटवणारा ठरला आहे. शिक्षण, क्रीडा आणि सर्वांगीण विकास या तिन्ही क्षेत्रांत गाठलेली उंची खरोखरच प्रेरणादायी आहे.
ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ 2026 : ತಾರಾರಾಣಿ ಮಹಾವಿದ್ಯಾಲಯ ತಾಲೂಕಿನಲ್ಲಿ ಪ್ರಥಮ, ಜಿಲ್ಲೆಯಲ್ಲಿ ಉಲ್ಲೇಖನಿಯ.
ಖಾನಾಪುರ : ಮರಾಠಾ. ಮಂಡಳ. ತಾರಾರಾಣಿ ಪದವಿಪೂರ್ವ ಮಹಾವಿದ್ಯಾಲಯ, ಖಾನಾಪುರದ ಪಿಯುಸಿ ದ್ವಿತೀಯ ವರ್ಷದ 2026ರ ವಾರ್ಷಿಕ ಫಲಿತಾಂಶ ಅತ್ಯಂತ ಉಲ್ಲೇಖನೀಯ ವಾಗಿದ್ದು, ಮಹಾವಿದ್ಯಾಲಯವು ಖಾನಾಪುರ ತಾಲೂಕಿನಲ್ಲಿ ಪ್ರಥಮ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಅಗ್ರಸ್ಥಾನವನ್ನು ಗಳಿಸಿದೆ. ವಾಣಿಜ್ಯ ಮತ್ತು ಕಲಾ ವಿಭಾಗಗಳ ವಿದ್ಯಾರ್ಥಿನಿಯರು ಗಮನಾರ್ಹ ಸಾಧನೆ ಮಾಡಿ ಮಹಾವಿದ್ಯಾಲಯದ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ವಾಣಿಜ್ಯ ವಿಭಾಗದ ಮುಖ್ಯ ಸಾಧನೆ :
ವಾಣಿಜ್ಯ ವಿಭಾಗದಲ್ಲಿ ಕುಮಾರಿ ಸಬೀನಾ ಎಲ್. ಲೋಬೋ (98.33%) ಪ್ರಥಮ, ಕುಮಾರಿ ಸಮೀಕ್ಷಾ ಎಸ್. ಝುಂಜವಾಡಕರ (98%) ದ್ವಿತೀಯ ಹಾಗೂ ಕುಮಾರಿ ರಾಜೇಶ್ವರಿ ಪಿ. ರಾಠೋಡಕರ (96.33%) ತೃತೀಯ ಸ್ಥಾನ ಗಳಿಸಿದ್ದಾರೆ. ಈ ಮೂವರು ಖಾನಾಪುರ ತಾಲೂಕಿನಲ್ಲಿ ಅಗ್ರಸ್ಥಾನ ಪಡೆದು ಬೆಳಗಾವಿ ಜಿಲ್ಲೆಯಲ್ಲಿ ಉಲ್ಲೇಖನೀಯ ಸಾದನೆ ಮಾಡಿದ್ದಾರೆ. ಜೊತೆಗೆ ಕುಮಾರಿ ವೈಷ್ಣವಿ ಜಿ. ಕೊಡಲಾ (94.83%), ಕುಮಾರಿ ನಿಧಿ ವಿ. ಗವಾಣಕರ (94%), ಕುಮಾರಿ ಅಂಜಲಿ ಎಂ. ಕದಮ (93.83%), ಕುಮಾರಿ ಅಲಿಷಾ ಪಿ. ಕುಲಕರ್ಣಿ (93%), ಕುಮಾರಿ ಸ್ವಾತಿ ಡಿ. ಘಾಡಿ (93%), ಕುಮಾರಿ ಕಾವೇರಿ ಪಿ. ಅಂಧಾರೆ (91.67%), ಕುಮಾರಿ ಪ್ರಾಜಕ್ತಾ ಪಿ. ಕಾವಳೆಕರ (88.33%), ಕುಮಾರಿ ಋತುಜಾ ಆರ್. ಸಾವಂತ್ (87.83%), ಕುಮಾರಿ ಪೂಜಾ ಪಿ. ಗವಾಣಕರ (86.67%) ಹಾಗೂ ಕುಮಾರಿ ಪ್ರಾಂಜಲ್ ಎನ್. ಪಾಟೀಲ್ (85.50%) ಕೂಡ ಗಮನಾರ್ಹ ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದ ಒಟ್ಟು ಫಲಿತಾಂಶ 86.53% ದಾಖಲಾಗಿದೆ.
ಕಲಾ ವಿಭಾಗದ ಗಮನಾರ್ಹ ಸಾಧನೆ :
ಕಲಾ ವಿಭಾಗದಲ್ಲಿ ಕುಮಾರಿ ಸ್ವೇತಾ ಎನ್. ಘಾಡಿ (85%) ಪ್ರಥಮ ಸ್ಥಾನ ಪಡೆದಿದ್ದಾರೆ. ಜೊತೆಗೆ ಕುಮಾರಿ ಸಂಜನಾ ಎಸ್. ಕಾಂಬಳೆ (83%), ಕುಮಾರಿ ಮಧುರಾ ಆರ್. ಖಾಂಬಳೆ (82%), ಕುಮಾರಿ ಪ್ರತಿಕ್ಷಾ ಎಸ್. ಪವಾರ್ (81%) ಹಾಗೂ ಕುಮಾರಿ ನೇತ್ರಾ ವೈ. ಬಾಗಲೆ (81%) ಉತ್ತಮ ಸಾಧನೆ ಮಾಡಿದ್ದಾರೆ. ಕಲಾ ವಿಭಾಗದ ಒಟ್ಟು ಫಲಿತಾಂಶ 75.92% ಆಗಿದೆ.
ಒಟ್ಟು ಫಲಿತಾಂಶ 83 ಶೇಕಡಾ :
ಒಟ್ಟು ಫಲಿತಾಂಶವನ್ನು ಪರಿಗಣಿಸಿದರೆ, ಒಟ್ಟು ವಿದ್ಯಾರ್ಥಿನಿಯರಲ್ಲಿ 79 ಮಂದಿ ವಿಶೇಷ ಶ್ರೇಣಿ (ಡಿಸ್ಟಿಂಕ್ಷನ್), 27 ಮಂದಿ ಪ್ರಥಮ ಶ್ರೇಣಿ ಹಾಗೂ 11 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಮಹಾವಿದ್ಯಾಲಯದ ಒಟ್ಟು ಫಲಿತಾಂಶ 83% ಆಗಿದೆ. ವಿಶೇಷವಾಗಿ ಯಾವುದೇ ಕೋಚಿಂಗ್ ತರಗತಿಗಳ ಸಹಾಯವಿಲ್ಲದೆ ಕೇವಲ ಮಹಾವಿದ್ಯಾಲಯದ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಈ ಸಾಧನೆ ಸಾಧ್ಯವಾಗಿದೆ.
ಕ್ರೀಡೆ ಹಾಗೂ ಸಮಗ್ರ ಅಭಿವೃದ್ಧಿಯಲ್ಲೂ ಮುಂಚೂಣಿ :
ಶೈಕ್ಷಣಿಕ ಸಾಧನೆ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ಮಹಾವಿದ್ಯಾಲಯವು ತನ್ನದೇ ಆದ ಗುರುತನ್ನು ಮೂಡಿಸಿದೆ. ಖೋ-ಖೋ, ಕಬಡ್ಡಿ ಮುಂತಾದ ಕ್ರೀಡೆಗಳಲ್ಲಿ ವಿದ್ಯಾರ್ಥಿನಿಯರು ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಹೀಗಾಗಿ ಕಲಾ, ಕ್ರೀಡೆ ಹಾಗೂ ಬೌದ್ಧಿಕ ಅಭಿವೃದ್ಧಿಯ ಸುಂದರ ಸಮತೋಲನ ಸಾಧಿಸುವಲ್ಲಿ ಮಹಾವಿದ್ಯಾಲಯ ಯಶಸ್ವಿಯಾಗಿದೆ.
ಈ ಯಶಸ್ಸಿನ ಹಿಂದೆ ಮರಾಠಾ ಮಂಡಳಿಯ ಅಧ್ಯಕ್ಷೆ ಡಾ. ರಾಜಶ್ರೀ ನಾಗರಾಜು ಯಾದವ್ ಅವರ ಪ್ರೇರಣಾದಾಯಕ ಮಾರ್ಗದರ್ಶನ, ನಿರ್ದೇಶಕ ಶ್ರೀ ಶಿವಾಜೀರಾವ್ ಪಾಟೀಲ್ ಹಾಗೂ ಶ್ರೀ ಪರಶುರಾಮ ಗುರುವ್ ಅವರ ಅಮೂಲ್ಯ ಸಹಕಾರ ಹಾಗೂ ಪ್ರಾಂಶುಪಾಲ ಶ್ರೀ ಅರವಿಂದ ಲಕ್ಷ್ಮಣರಾವ್ ಪಾಟೀಲ್ ಅವರ ಕುಶಲ ನಾಯಕತ್ವ ಕಾರಣವಾಗಿದೆ. ಎಲ್ಲಾ ಉಪನ್ಯಾಸಕರ ಪರಿಶ್ರಮ ಹಾಗೂ ವಿದ್ಯಾರ್ಥಿನಿಯರ ದೃಢಸಂಕಲ್ಪದಿಂದಲೇ ಈ ಸಾಧನೆ ಸಾಧ್ಯವಾಗಿದೆ.
ಈ ಫಲಿತಾಂಶವು ಕೇವಲ ಯಶಸ್ಸಷ್ಟೇ ಅಲ್ಲದೆ, ಮಹಾವಿದ್ಯಾಲಯದ ಗುಣಮಟ್ಟ, ಶಿಸ್ತಿನ ಮತ್ತು ಸಮರ್ಪಣೆಯ ಮುದ್ರೆಯಾಗಿದೆ. ಶಿಕ್ಷಣ, ಕ್ರೀಡೆ ಮತ್ತು ಸಮಗ್ರ ಅಭಿವೃದ್ಧಿ ಎಂಬ ಮೂರು ಕ್ಷೇತ್ರಗಳಲ್ಲಿ ಸಾಧಿಸಿರುವ ಈ ಎತ್ತರ ನಿಜಕ್ಕೂ ಪ್ರೇರಣಾದಾಯಕವಾಗಿದೆ.


