सुनील नायक-बोरकर यांचा वाढदिवस नगरपंचायतीच्या सफाई कर्मचाऱ्यांसोबत साजरा; समाजाला दिला वेगळा संदेश
खानापूर : भारतीय जनता पार्टीचे माजी अध्यक्ष तसेच खानापूर रेल्वे स्थानक सुधारणा समितीचे सदस्य सुनील नायक बोरकर यांचा वाढदिवस आज नगरपंचायत खानापूर येथे मोठ्या उत्साहात व सामाजिक बांधिलकीच्या भावनेत साजरा करण्यात आला.
यावेळी सुनील नायक यांनी नगरपंचायतीच्या सफाई कर्मचाऱ्यांना शाल घालून त्यांचा सत्कार केला, तसेच प्रत्येक कर्मचाऱ्याला मिठाईचा (पेढ्याचा) बॉक्स देऊन आपला वाढदिवस त्यांच्या सोबत साजरा केला. शहर स्वच्छ ठेवण्यासाठी अहोरात्र मेहनत करणाऱ्या कर्मचाऱ्यांप्रती कृतज्ञता व्यक्त करत त्यांनी एक समाजोपयोगी आणि प्रेरणादायी संदेश दिला.
या कार्यक्रमाला भाजपाचे माजी तालुकाध्यक्ष संजय कुबल, भाजपा युवा मोर्चा जिल्हा उपाध्यक्ष पंडित ओगले, माजी नगरसेवक नारायण ओगले, राजेंद्र रायका, रवी पाटील, सुनील मासेकर, रवी बडीगेर, राजू जांबोटकर यांच्यासह अनेक पदाधिकारी व कार्यकर्ते उपस्थित होते.
कार्यक्रमाच्या सुरुवातीला भाजपा युवा मोर्चा जिल्हा सेक्रेटरी पंडित ओगले यांनी उपस्थितांचे स्वागत केले. आपल्या मनोगतात ते म्हणाले की,
“वाढदिवस साजरा सगळेच करतात; मात्र नगरपंचायतीच्या सफाई कर्मचाऱ्यांसोबत वाढदिवस साजरा करून सुनील नायक यांनी समाजाला एक वेगळाच संदेश दिला आहे. गंगा नदी स्वच्छ करणाऱ्या कर्मचाऱ्यांचे पाय देशाचे पंतप्रधान नरेंद्र मोदी यांनी धुऊन कृतज्ञता व्यक्त केली होती. त्याच धर्तीवर संपूर्ण खानापूर शहर स्वच्छ ठेवणाऱ्या सफाई कर्मचाऱ्यांसोबत वाढदिवस साजरा करून सुनील नायक यांनी त्यांच्या कार्याप्रती आदर व्यक्त केला आहे.”
यावेळी बोलताना भाजपाचे ज्येष्ठ नेते संजय कुबल यांनीही सुनील नायक यांचे कौतुक केले. ते म्हणाले,
“अवाढव्य खर्च करून वाढदिवस साजरा करण्यापेक्षा समाजाला सकारात्मक संदेश देणाऱ्या उपक्रमांद्वारे वाढदिवस साजरा करणे अधिक महत्त्वाचे आहे. सुनील नायक यांनी सफाई कर्मचाऱ्यांसोबत वाढदिवस साजरा करून समाजासमोर आदर्श ठेवला आहे.”
कार्यक्रमाच्या शेवटी राजेंद्र रायका यांनी सर्व उपस्थितांचे आभार मानले. त्यानंतर सर्व सफाई कर्मचाऱ्यांना शाल व पेढ्याचा बॉक्स देऊन सन्मानित करण्यात आले. संपूर्ण कार्यक्रम सामाजिक भान जपत, साधेपणा आणि आत्मीयतेने पार पडला.
ಸುನಿಲ್ ನಾಯಕ್–ಬೋರ್ಕರ್ ಅವರ ಜನ್ಮದಿನ ನಗರಪಂಚಾಯತ್ ಸ್ವಚ್ಛತಾ ಸಿಬ್ಬಂದಿಯೊಂದಿಗೆ ಆಚರಣೆ; ಸಮಾಜಕ್ಕೆ ವಿಭಿನ್ನ ಸಂದೇಶ
ಖಾನಾಪುರ : ಭಾರತೀಯ ಜನತಾ ಪಕ್ಷದ ಮಾಜಿ ಅಧ್ಯಕ್ಷರು ಹಾಗೂ ಖಾನಾಪುರ ರೈಲು ನಿಲ್ದಾಣ ಸುಧಾರಣಾ ಸಮಿತಿಯ ಸದಸ್ಯರಾದ ಸುನಿಲ್ ನಾಯಕ್–ಬೋರ್ಕರ್ ಅವರ ಜನ್ಮದಿನವನ್ನು ಇಂದು ಖಾನಾಪುರ ನಗರಪಂಚಾಯತ್ ಕಚೇರಿಯಲ್ಲಿ ಭಾರೀ ಉತ್ಸಾಹ ಮತ್ತು ಸಾಮಾಜಿಕ ಬದ್ಧತೆಯ ಮನೋಭಾವದೊಂದಿಗೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸುನಿಲ್ ನಾಯಕ್ ಅವರು ನಗರಪಂಚಾಯತ್ ಸ್ವಚ್ಛತಾ ಸಿಬ್ಬಂದಿಗೆ ಶಾಲು ಹೊದಿಸಿ ಗೌರವಿಸಿದರು. ಜೊತೆಗೆ ಪ್ರತಿಯೊಬ್ಬ ಸಿಬ್ಬಂದಿಗೆ ಸಿಹಿ ತಿಂಡಿ (ಪೇಡಾ) ಬಾಕ್ಸ್ ನೀಡಿ ತಮ್ಮ ಜನ್ಮದಿನವನ್ನು ಅವರೊಂದಿಗೆ ಸಂಭ್ರಮಿಸಿದರು. ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಹಗಲಿರುಳು ಶ್ರಮಿಸುವ ಸ್ವಚ್ಛತಾ ಸಿಬ್ಬಂದಿಯ ಸೇವೆಗೆ ಕೃತಜ್ಞತೆ ವ್ಯಕ್ತಪಡಿಸಿದ ಅವರು, ಸಮಾಜೋಪಯೋಗಿ ಹಾಗೂ ಪ್ರೇರಣಾದಾಯಕ ಸಂದೇಶವನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ ತಾಲ್ಲೂಕು ಅಧ್ಯಕ್ಷ ಸಂಜಯ ಕುಬಲ, ಭಾಜಪ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪಂಡಿತ್ ಓಗಲೆ, ಮಾಜಿ ನಗರಸಭೆ ಸದಸ್ಯ ನಾರಾಯಣ ಓಗಲೆ, ರಾಜೇಂದ್ರ ರೈಕಾ, ರವಿ ಪಾಟೀಲ್, ಸುನಿಲ್ ಮಾಸೇಕರ್, ರವಿ ಬಡಿಗೇರ, ರಾಜು ಜಾಂಬೋಟ್ಕರ್ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಭಾಜಪ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಪಂಡಿತ್ ಓಗಲೆ ಅವರು ಆಗಮಿಸಿದ ಎಲ್ಲರಿಗೂ ಸ್ವಾಗತ ಕೋರಿ ತಮ್ಮ ಅನಿಸಿಕೆಯಲ್ಲಿ ಅವರು, “ಜನ್ಮದಿನವನ್ನು ಎಲ್ಲರೂ ಆಚರಿಸುತ್ತಾರೆ; ಆದರೆ ನಗರಪಂಚಾಯತ್ ಸ್ವಚ್ಛತಾ ಸಿಬ್ಬಂದಿಯೊಂದಿಗೆ ಜನ್ಮದಿನ ಆಚರಿಸುವ ಮೂಲಕ ಸುನಿಲ್ ನಾಯಕ್ ಅವರು ಸಮಾಜಕ್ಕೆ ವಿಭಿನ್ನ ಹಾಗೂ ಮಹತ್ವದ ಸಂದೇಶ ನೀಡಿದ್ದಾರೆ. ಗಂಗಾ ನದಿಯನ್ನು ಸ್ವಚ್ಛಗೊಳಿಸಿದ ಕಾರ್ಮಿಕರ ಪಾದಗಳನ್ನು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೊಳೆಯುವ ಮೂಲಕ ಕೃತಜ್ಞತೆ ವ್ಯಕ್ತಪಡಿಸಿದ್ದರು. ಅದೇ ರೀತಿಯಲ್ಲಿ ಸಂಪೂರ್ಣ ಖಾನಾಪುರ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಸ್ವಚ್ಛತಾ ಸಿಬ್ಬಂದಿಯೊಂದಿಗೆ ಜನ್ಮದಿನ ಆಚರಿಸುವ ಮೂಲಕ ಸುನಿಲ್ ನಾಯಕ್ ಅವರು ಅವರ ಸೇವೆಗೆ ಗೌರವ ಸಲ್ಲಿಸಿದ್ದಾರೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಹಿರಿಯ ನಾಯಕ ಸಂಜಯ ಕುಬಲ್ ಅವರು ಸುನಿಲ್ ನಾಯಕ್ ಅವರ ಕಾರ್ಯವನ್ನು ಶ್ಲಾಘಿಸಿದರು. ಅವರು, “ಅತಿಯಾದ ಖರ್ಚು ಮಾಡಿ ಜನ್ಮದಿನ ಆಚರಿಸುವುದಕ್ಕಿಂತ ಸಮಾಜಕ್ಕೆ ಸಕಾರಾತ್ಮಕ ಸಂದೇಶ ನೀಡುವ ಕಾರ್ಯಗಳ ಮೂಲಕ ಜನ್ಮದಿನ ಆಚರಿಸುವುದು ಹೆಚ್ಚು ಮಹತ್ವದ್ದು. ಸ್ವಚ್ಛತಾ ಸಿಬ್ಬಂದಿಯೊಂದಿಗೆ ಜನ್ಮದಿನ ಆಚರಿಸುವ ಮೂಲಕ ಸುನಿಲ್ ನಾಯಕ್ ಅವರು ಸಮಾಜಕ್ಕೆ ಒಳ್ಳೆಯ ಆದರ್ಶವನ್ನು ನೀಡಿದ್ದಾರೆ” ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ರಾಜೇಂದ್ರ ರೈಕಾ ಅವರು ಎಲ್ಲ ಉಪಸ್ಥಿತರಿಗೂ ಧನ್ಯವಾದ ಅರ್ಪಿಸಿದರು. ನಂತರ ಎಲ್ಲಾ ಸ್ವಚ್ಛತಾ ಸಿಬ್ಬಂದಿಗೆ ಶಾಲು ಹಾಗೂ ಪೇಡಾ ಬಾಕ್ಸ್ ನೀಡಿ ಗೌರವಿಸಲಾಯಿತು. ಸಂಪೂರ್ಣ ಕಾರ್ಯಕ್ರಮವು ಸಾಮಾಜಿಕ ಜಾಗೃತಿಯೊಂದಿಗೆ, ಸರಳತೆ ಮತ್ತು ಆತ್ಮೀಯತೆಯಿಂದ ಯಶಸ್ವಿಯಾಗಿ ನಡೆಯಿತು.


