तालुकास्तरीय बुद्धिबळ स्पर्धेत अबनाळी शाळेचा ठसा; दहा विद्यार्थ्यांची जिल्हा पातळीवर निवड
खानापूर : ताराराणी हायस्कूल, खानापूर येथे झालेल्या तालुकास्तरीय बुद्धिबळ स्पर्धेत शिरोली केंद्रातील अबनाळी शाळेच्या विद्यार्थ्यांनी उत्कृष्ट कामगिरी करून चमकदार ठसा उमटवला आहे. या स्पर्धेतून शाळेतील पाच विद्यार्थी तसेच पाच माजी विद्यार्थी मिळून एकूण दहा विद्यार्थ्यांची जिल्हास्तरीय बुद्धिबळ स्पर्धेसाठी निवड झाली आहे.

अबनाळी शाळेचे विद्यार्थी स्वप्नील गावकर, सानिका कोवाडकर, सानिका गावकर, मनुजा गावकर व संजना पाटील यांनी यश मिळवत जिल्हास्तरीय स्पर्धेसाठी पात्रता मिळवली. तर शाळेचे माजी विद्यार्थी मंथन लाड, सतीश सावंत, शंकर खैरवाडकर, समीक्षा गावकर व प्रेमिला मेंडीलकर यांचीही निवड झाली आहे.
गेल्या दहा वर्षांपासून अबनाळी गावचे विद्यार्थी जिल्हा तसेच राज्यस्तरीय स्पर्धांमध्ये सातत्याने प्रतिनिधित्व करत असून यंदाही त्यांनी आपली परंपरा कायम ठेवली आहे. या यशाबद्दल तालुक्यातून अबनाळी शाळेचे कौतुक होत आहे.
या विशेष कामगिरीबद्दल तालुक्याचे बीईओ पी. रामाप्पा, बीआरसी अधिकारी ए.आर. अंबगी, तालुका क्रीडाधिकारी सुरेखा मिरजी, तालुका अक्षरदासोह अधिकारी महांतेश कित्तूर, तसेच शिरोली केंद्राचे सीआरपी बी.ए. देसाई यांनी विद्यार्थ्यांचे अभिनंदन केले.
विद्यार्थ्यांच्या यशामागे मुख्याध्यापक रमेश कवळेकर, सहशिक्षक विजय पाटील, समीक्षा कवळेकर, वैशाली पाटील यांचे मार्गदर्शन लाभले आहे. तसेच शाळेचे एसडीएमसी अध्यक्ष गंगाराम गावकर व उपाध्यक्षा सपना गावकर यांनीही विद्यार्थ्यांचे अभिनंदन केले.
ತಾಲ್ಲೂಕು ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಅಬನಾಳಿ ಶಾಲೆಯ ಮಿಂಚು; ಹತ್ತು ವಿದ್ಯಾರ್ಥಿಗಳ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಖಾನಾಪುರ : ಖಾನಾಪುರದ ತಾರಾರಾಣಿ ಹೈಸ್ಕೂಲ್ನಲ್ಲಿ ನಡೆದ ತಾಲ್ಲೂಕು ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಶಿರೋಳಿ ಕೇಂದ್ರದ ಅಬನಾಳಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಕಂಗೊಳಿಸಿದ್ದಾರೆ. ಈ ಸ್ಪರ್ಧೆಯಿಂದ ಶಾಲೆಯ ಐದು ಮಂದಿ ವಿದ್ಯಾರ್ಥಿಗಳು ಹಾಗೂ ಐದು ಮಂದಿ ಹಳೆಯ ವಿದ್ಯಾರ್ಥಿಗಳು ಸೇರಿ ಒಟ್ಟು ಹತ್ತು ಮಂದಿ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಅಬನಾಳಿ ಶಾಲೆಯ ವಿದ್ಯಾರ್ಥಿಗಳು ಸ್ವಪ್ನೀಲ ಗಾವ್ಕರ್, ಸಾನಿಕಾ ಕೋವಡ್ಕರ್, ಸಾನಿಕಾ ಗಾವ್ಕರ್, ಮನುಜಾ ಗಾವ್ಕರ್ ಹಾಗೂ ಸಂಜನಾ ಪಾಟೀಲ್ ಜಿಲ್ಲಾ ಮಟ್ಟದ ಸ್ಪರ್ಧೆಗೆ ಅರ್ಹತೆ ಗಳಿಸಿದ್ದಾರೆ. ಅದೇ ರೀತಿ ಹಳೆಯ ವಿದ್ಯಾರ್ಥಿಗಳಾದ ಮಂಥನ್ ಲಾಡ್, ಸತೀಶ ಸಾವಂತ್, ಶಂಕರ್ ಖೈರವಾಡ್ಕರ್, ಸಮೀಕ್ಷಾ ಗಾವ್ಕರ್ ಮತ್ತು ಪ್ರೇಮಿಲಾ ಮೆಂಡೀಲ್ಕರ ಕೂಡಾ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಅಬನಾಳಿ ಗ್ರಾಮದ ವಿದ್ಯಾರ್ಥಿಗಳು ನಿರಂತರವಾಗಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪ್ರತಿನಿಧಿಸುತ್ತಿದ್ದು, ಈ ವರ್ಷವೂ ಅದೇ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಈ ಸಾಧನೆಯ ಬಗ್ಗೆ ತಾಲ್ಲೂಕಿನಾದ್ಯಂತ ಅಬನಾಳಿ ಶಾಲೆಯ ಶ್ಲಾಘನೆ ವ್ಯಕ್ತವಾಗಿದೆ.
ಈ ವಿಶೇಷ ಸಾಧನೆಗಾಗಿ ತಾಲ್ಲೂಕು ಶಿಕ್ಷಣಾಧಿಕಾರಿ ಪಿ. ರಾಮಪ್ಪ, ಬಿಆರ್ಸಿ ಅಧಿಕಾರಿ ಎ.ಆರ್. ಅಂಬಗಿ, ತಾಲ್ಲೂಕು ಕ್ರೀಡಾ ಅಧಿಕಾರಿ ಸುರೇಖಾ ಮಿರಜಿ, ತಾಲ್ಲೂಕು ಅಕ್ಷರದಾಸೋಹ ಅಧಿಕಾರಿ ಮಹಾಂತೇಶ ಕಿತ್ತೂರ್ ಹಾಗೂ ಶಿರೋಳಿ ಕೇಂದ್ರದ ಸಿಆರ್ಪಿ ಬಿ.ಎ. ದೇಸಾಯಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ವಿದ್ಯಾರ್ಥಿಗಳ ಯಶಸ್ಸಿನ ಹಿನ್ನಲೆಯಲ್ಲಿ ಮುಖ್ಯಾಧ್ಯಾಪಕ ರಮೇಶ್ ಕವಳೇಕರ್, ಸಹ ಶಿಕ್ಷಕರಾದ ವಿಜಯ ಪಾಟೀಲ್, ಸಮೀಕ್ಷಾ ಕವಳೇಕರ್, ವೈಶಾಲಿ ಪಾಟೀಲ್ ಇವರ ಮಾರ್ಗದರ್ಶನ ದೊರೆತಿದೆ. ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಗಂಗಾರಾಮ ಗಾವ್ಕರ್ ಹಾಗೂ ಉಪಾಧ್ಯಕ್ಷೆ ಸಪ್ನಾ ಗಾವ್ಕರ್ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
.



