खानापूर व बेळगाव जिल्ह्यातील शेतकरी संकटात ; अति पावसामुळे पिकांचे मोठे नुकसान – मुख्यमंत्री सिद्धरामय्यांना निवेदन
खानापूर : अखिल कर्नाटक रयत संघ (री) बेंगळुरू, राज्य उपाध्यक्ष किशोर मिठारी यांच्या नेतृत्वाखाली तसेच बेळगाव जिल्ह्यातील सर्व तालुक्यांतील शेतकरी, महिला संघटना व विविध सामाजिक संघटनांनी संयुक्त निवेदनाद्वारे मुख्यमंत्री श्री. सिद्धरामय्यांना तातडीने मदत जाहीर करण्याची मागणी केली आहे. सदर निवेदन सरकारला तहसीलदार मार्फत पाठविण्यासाठी, आज सोमवार दिनांक 25 ऑगस्ट रोजी तहसीलदारांना देण्यात आले आहे. याची एक प्रत खानापुर तालुक्याचे आमदार विठ्ठल हलगेकर यांना सुद्धा देण्यात आली आहे.याची एक प्रत खानापुर तालुक्याचे आमदार विठ्ठल हलगेकर यांना सुद्धा देण्यात आली. यावेळी भाजपा उपाध्यक्ष प्रमोद कोचेरी, भाजपाचे नेते संजय कुबल, तालुका जनरल सेक्रेटरी मल्लाप्पा मारिहाळ, जिल्हा सेक्रेटरी धनश्री सरदेसाई, तसेच. ऑल कर्नाटक स्टेट फार्मर्स असोसिएशन बंगलोर राज्य उपाध्यक्ष किशोर मिठारी आणि शेतकरी नेते रमेश वीरपुरे, बिष्टप्पा सुंबळी, सेबॅस्टियन सोजा, रवी अंबाडगट्टी, दत्ता बिडाकर, शिवानंद परकानट्टी, आणि इतर शेतकरी संघटनेची पदाधिकारी व कार्यकर्ते उपस्थित होते.
सततच्या अतिवृष्टीमुळे खानापूरसह बेलगाव जिल्ह्यातील सर्व तालुक्यांमध्ये ज्वारी, भात, ऊस, सोयाबीन, हरभरा, शेंगदाणे, उडीद, कडधान्ये व भाजीपाला यांसारखी पिके पाण्यात बुडून नष्ट झाली आहेत. शेतकऱ्यांनी बियाणे, खतं व कीटकनाशकांसाठी बँकांकडून तसेच सावकारांकडून कर्ज घेऊन शेती केली होती. मात्र, पिके हाताशी येण्याआधीच नष्ट झाल्याने शेतकरी पूर्णपणे कंगाल झाले आहेत.
निवेदनात म्हटले आहे की,
खानापूर तालुका तसेच संपूर्ण बेळगाव जिल्हा “हिरवा दुष्काळ व अतिवृष्टीग्रस्त” म्हणून जाहीर करावा.
शेतकऱ्यांना प्रति एकरी किमान 25,000 रुपयांची मदत तातडीने द्यावी.
एनडीआरएफ व एसडीआरएफ निधीतून 25% विमा रक्कम त्वरित वाटप करावी.
शेतकऱ्यांची संपूर्ण कर्जमाफी करावी.
मायक्रो फायनान्स विधेयकाचे काटेकोर पालन व्हावे.
तसेच, 15 दिवसांच्या आत मागण्यांवर सकारात्मक निर्णय न झाल्यास, खानापूर तालुक्यातील कक्केरी गावात राज्य महामार्ग रोखून शांततापूर्ण आंदोलन करण्याचा इशाराही संघटनांनी दिला आहे.
या निवेदनाच्या प्रती कृषी मंत्री चेलुवनारायण स्वामी, प्रादेशिक आयुक्त, जिल्हाधिकारी, उपविभागीय अधिकारी, आयजीपी, एसपी, तहसीलदार, डिवायएसपी, तसेच नंदगड पोलीस निरीक्षक यांना पाठविण्यात आल्या आहेत.
ಖಾನಾಪುರ ಹಾಗೂ ಬೆಳಗಾವಿ ಜಿಲ್ಲೆಯ ರೈತರು ಸಂಕಷ್ಟದಲ್ಲಿ ; ಅತಿವೃಷ್ಠಿಯಿಂದ ಬೆಳೆ ನಾಶ – ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಹಶೀಲ್ದಾರ್ ಮೂಲಕ ಮನವಿ
ಖಾನಾಪುರ : ಅಖಿಲ ಕರ್ನಾಟಕ ರೈತ ಸಂಘ (ರಿ) ಬೆಂಗಳೂರು, ರಾಜ್ಯೂ ಉಪಾಧ್ಯಕ್ಷ ಕಿಶೋರ್ ಮಿಠಾರಿ ಅವರ ನೇತೃತ್ವದಲ್ಲಿ ಹಾಗೂ ಬೆಳಗಾವಿ ಜಿಲ್ಲೆಯ ಎಲ್ಲಾ ತಾಲ್ಲೂಕಿನ ರೈತ , ಮಹಿಳಾ ಸಂಘಟನೆಗಳು ಮತ್ತು ವಿವಿಧ ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳ ಸಂಯುಕ್ತ ಮನವಿಯ ಮೂಲಕ ಮುಖ್ಯಮಂತ್ರಿ. ಶ್ರೀ. ಸಿದ್ದರಾಮಯ್ಯ ಅವರಿಗೆ ತುರ್ತು ನೆರವು ಘೋಷಿಸುವಂತೆ ಆಗ್ರಹಿಸಿದ್ದಾರೆ. ಈ ಮನವಿ ಇಂದು (ಸೋಮವಾರ, 25 ಆಗಸ್ಟ್) ರಂದು ತಹಶೀಲ್ದಾರ ಮೂಲಕ ಸಲ್ಲಿಸಲಾಗಿದ್ದು, ಸರ್ಕಾರಕ್ಕೆ ರವಾನಿಸಲಾಗಿದೆ. ಅದರ ಪ್ರತಿಯನ್ನು ಖಾನಾಪುರ ಶಾಸಕರಾದ ವಿಠ್ಠಲ ಹಲಗೇಕರ್ ಅವರಿಗೆ ಸಹ ನೀಡಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಉಪಾಧ್ಯಕ್ಷ ಪ್ರಮೋದ್ ಕೊಚೇರಿ, ತಾಲೂಕು ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾರಿಹಾಳ್, ಜಿಲ್ಲಾ ಕಾರ್ಯದರ್ಶಿ ಧನಶ್ರೀ ಸರ್ದೇಸಾಯಿ, ಅಖಿಲ ಕರ್ನಾಟಕ ರಾಜ್ಯ ರೈತ ಸಂಘ ರಿ ಬೆಂಗಳೂರು ರಾಜ್ಯ ಉಪಾಧ್ಯಕ್ಷರು ಕಿಶೋರ ಮಿಠಾರಿ ಹಾಗೂ ರೈತ ಮುಖಂಡರು ರಮೇಶ ವೀರಾಪುರ, ಬಿಷ್ಟಪ್ಪ ಸುಂಬಳಿ, ಸೇಬಸ್ಥಿನ್ ಸೋಜ, ರವಿ ಅಂಬಡಗಟ್ಟಿ ,ದತ್ತಾ ಬಿಡಕರ, ಶಿವಾನಂದ ಪರಕನಟ್ಟಿ, ಇತರರು ಹಾಗೂ ರೈತ ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ನಿರಂತರ ಅತಿವೃಷ್ಠಿಯಿಂದ ಖಾನಾಪುರ ಸೇರಿ ಬೆಳಗಾವಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಜೋಳ, ಅಕ್ಕಿ, ಕಬ್ಬು, ಸೋಯಾಬೀನ್, ಕಡಲೆ, ಶೇಂಗಾ, ಉದ್ದಿನ, ಬೇಳೆಗಳು ಹಾಗೂ ತರಕಾರಿಗಳಂತಹ ಬೆಳೆಗಳು ನೀರಿನಲ್ಲಿ ಮುಳುಗಿ ಸಂಪೂರ್ಣ ನಾಶವಾಗಿವೆ. ರೈತರು ಬಿತ್ತನೆ, ರಸಗೊಬ್ಬರ ಮತ್ತು ಕೀಟನಾಶಕಗಳಿಗಾಗಿ ಬ್ಯಾಂಕು ಹಾಗೂ ಸಾವಕಾರರಿಂದ ಸಾಲ ತೆಗೆದುಕೊಂಡು ಕೃಷಿ ನಡೆಸಿದ್ದರು. ಆದರೆ ಬೆಳೆ ಕೈಗೆ ಸಿಗೋ ಮುನ್ನವೇ ಹಾಳಾಗಿರುವುದರಿಂದ ರೈತರು ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮನವಿಯಲ್ಲಿ ಖಾನಾಪುರ ತಾಲ್ಲೂಕು ಸೇರಿದಂತೆ ಸಂಪೂರ್ಣ ಬೆಳಗಾವಿ ಜಿಲ್ಲೆಯನ್ನು “ಹಸಿರು ಬರ ಹಾಗೂ ಅತಿವೃಷ್ಠಿ ಪೀಡಿತ” ಎಂದು ಘೋಷಿಸಬೇಕೆಂದು ಆಗ್ರಹಿಸಲಾಗಿದೆ. ರೈತರಿಗೆ ಪ್ರತೀ ಎಕರೆಗೆ ಕನಿಷ್ಠ ₹25,000 ಪರಿಹಾರ ತಕ್ಷಣ ನೀಡಬೇಕು. ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ನಿಧಿಯಿಂದ ಶೆ 25% ವಿಮಾ ಮೊತ್ತ ತ್ವರಿತವಾಗಿ ಹಂಚಿಕೆ ಮಾಡಬೇಕು. ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಮೈಕ್ರೋ ಫೈನಾನ್ಸ್ ವಿಧೇಯಕವನ್ನು ಕಡ್ಡಾಯವಾಗಿ ಜಾರಿಗೆ ತಂದು ಕಟ್ಟು ನೆಟ್ಟಾಗಿ ಪಾಲನೆ ಮಾಡಬೇಕೆಂದು ಹೇಳಲಾಗಿದೆ.
ಇನ್ನೂ, 15 ದಿನಗಳೊಳಗೆ ಬೇಡಿಕೆಗಳ ಕುರಿತು ಸಕಾರಾತ್ಮಕ ನಿರ್ಧಾರವಾಗದಿದ್ದಲ್ಲಿ, ಖಾನಾಪುರ ತಾಲ್ಲೂಕಿನ ಕಕ್ಕೇರಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ತಡೆದು ಶಾಂತಿಪೂರ್ಣ ಆಂದೋಲನ ನಡೆಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಈ ಮನವಿಯ ಪ್ರತಿಗಳನ್ನು ಕೃಷಿ ಸಚಿವ ಚೆಲುವರಯ ಸ್ವಾಮಿ, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಐಜಿಪಿ, ಎಸ್ಪಿ, ತಹಶೀಲ್ದಾರ, ಡಿವೈಎಸ್ಪಿ ಹಾಗೂ ನಂದಗಡ ಪೊಲೀಸ್ ವೃತ್ತ ನಿರೀಕ್ಷಕರಿಗೆ ಕಳುಹಿಸಲಾಗಿದೆ.



