आरसीबीच्या विजयाचा जल्लोष साजरा करताना चेंगराचेंगरी. 11 अभिमानींचा मृत्यू.
बेंगलोर ; आरसीबीच्या विजयोत्सवात सहभागी होण्यासाठी चाहत्यांनी चिन्नास्वामी स्टेडियमवर फार मोठ्या संख्येने गर्दी केली होती. त्यामुळे मोठी चेंगराचेंगरी झाली. व या चेंगराचेंगरीत 11 जणांचा मृत्यू झाला. तर इतर दोघांची प्रकृती गंभीर असल्याचे सांगण्यात येत आहे. या घटनेत गंभीर जखमी झालेल्या इतर दोघांवर आयसीयूमध्ये उपचार सुरू आहेत. मृतांची संख्या वाढण्याची शक्यता आहे.
आरसीबीची क्रिकेट मॅच पाहण्यासाठी विधान सौधासमोर हजारो चाहते जमले होते. दरम्यान, जमलेले सर्व चाहते अचानक चिन्नास्वामी स्टेडियमवर पोहोचले, यामुळे चेंगराचेंगरी झाली आणि अनेक लोक गंभीर जखमी झाले. त्यांना उपचारासाठी बोअरिंग रुग्णालयात दाखल करण्यात आले. परंतु उपचाराअभावी 11 चाहत्यांचा मृत्यू झाला आहे.
50 हून अधिक चाहते जखमी झाले आणि त्यांना तातडीने रुग्णवाहिकेने बोरिंग रुग्णालयात हलवण्यात आले. त्यापैकी तिघांची प्रकृती गंभीर आहे. यावेळी जखमी लोकांना रुग्णालयात नेणे देखील कठीण झाले होते.
ಆರ್ಸಿಬಿಯ ವಿಜಯೋತ್ಸವ ಆಚರಿಸುವಾಗ ಕಾಲ್ತುಳಿತ . 11 ಜನ ಅಭಿಮಾನಿಗಳ ಸಾವು.
ಪ್ರಗತಿವಾಹಿನಿ ಸುದ್ದಿ : ಆರ್ಸಿಬಿ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಚಿನ್ನಸ್ವಾಮಿ ಸ್ಟೇಡಿಯಂನತ್ತ ಅಭಿಮಾನಿಗಳು ಎಷ್ಟೊಂದು ಪ್ರಮಾಣದಲ್ಲಿ ಬಂದರು ಎಂದರೆ, ಭೀಕರ ಕಾಲ್ತುಳಿತವೇ ಸಂಭವಿಸಿ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 11 ಏರಿದೆ. ಇನ್ನೂ ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. ಘಟನೆಯಲ್ಲಿ ಅಸ್ವಸ್ಥಗೊಂಡ ಇಬ್ಬರಿಗೂ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಆರ್ಸಿಬಿ ಆಟಗಾಗರನ್ನು ನೋಡಲು ಬಂದಿದ್ದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ವಿಧಾನಸೌಧದ ಮುಂದೆ ಜಮಾಯಿಸಿದ್ದಾರೆ. ಇನ್ನೂ ಇದೇ ವೇಳೆ ಅಭಿಮಾನಿಗಳೆಲ್ಲಾ ಚಿನ್ನಸ್ವಾಮಿ ಸ್ಟೇಡಿಯಂ ಏಕಾಏಕಿ ಬಂದಿದ್ದಾರೆ. ಇದೇ ಕಾರಣಕ್ಕೆ ನೂಕು ನುಗ್ಗಲು ಉಂಟಾಗಿ ಹಲವರು ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ 11 ಮಂದಿ ಅಭಿಮಾನಿಗಳು ಜೀವಬಿಟ್ಟಿದ್ದಾರೆ.
50ಕ್ಕೂ ಹೆಚ್ಚು ಅಭಿಮಾನಿಗಳಿಗೆ ಗಾಯಗಳಾಗಿದ್ದು, ಕೂಡಲೇ ಅವರನ್ನೆಲ್ಲಾ ಬೌರಿಂಗ್ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಶಿಫ್ಟ್ ಮಾಡಲಾಗಿದೆ. ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಅಸ್ವಸ್ಥರನ್ನ ಆಸ್ಪತ್ರೆಗೆ ಕರೆದೊಯ್ಯಲೂ ಕೂಡ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

