हिंदू धर्मियांकडून जिल्हाधिकारी कार्यालयावर मुक मोर्चा – मंजुनाथ धर्मस्थळाची बदनामी करणाऱ्यांवर कारवाईची मागणी
बेळगाव : कर्नाटकातील सुप्रसिद्ध मंजुनाथ धर्मस्थळ तीर्थक्षेत्राला बदनाम करण्याचा प्रयत्न काही व्यक्तींनी सुरू केला असून, एका मुस्लिम युट्युबरने या ठिकाणाविषयी खोटी माहिती व दिशाभूल करणारे व्हिडिओ प्रसिद्ध केल्याचा आरोप करण्यात आला आहे. या व्हिडिओंमुळे हिंदू धर्माची बदनामी होत असल्याचा ठपका ठेवून, संबंधितांवर कठोर कारवाईची मागणी करत हिंदू धर्मियांकडून आज मंगळवार दिनांक 19 ऑगस्ट 2025 रोजी, भव्य मुक मोर्चाचे आयोजन करण्यात आले होते.
या संदर्भात, आजपर्यंत धर्मस्थळ परिसरातील तब्बल 17 ठिकाणी खोदकाम करण्यात आले, परंतु कोणताही ठोस पुरावा अथवा वस्तू मिळाली नाही. तरीदेखील धार्मिक भावनांना ठेस पोहोचवून समाजात गोंधळ उडविण्याचा प्रयत्न सुरू असल्याचा आरोप आंदोलकांनी केला.
मोर्चाची सुरुवात बोगारवेस येथून झाली. त्यानंतर मोर्चा मारुती गल्ली, गणपत गल्ली, चन्नम्मा सर्कल मार्गे भव्य रॅलीच्या स्वरूपात जिल्हाधिकारी कार्यालयावर धडकला.
या मोर्चात साधारण पंधरा हजार हिंदू धर्मीय नागरिकांचा सहभाग होता. पावसाचा जोरदार मारा सुरू असतानाही महिला व नागरिकांनी छत्री किंवा आसरा न घेता ठामपणे उपस्थित राहून आपला आक्रोश व्यक्त केला.
जिल्हाधिकारी कार्यालयासमोर विविध मठांचे मठाधीश, संत, आमदार व स्थानिक नेते उपस्थित होते. यामध्ये आमदार अभय पाटील, बेळगावचे महापौर मंगेश पवार, माजी आमदार अनिल बेनके, माजी आमदार संजय पाटील, माजी विधान परिषद सदस्य महांतेश कवटगीमठ, भाजपा जिल्हाध्यक्ष सुभाष पाटील, जिल्हा उपाध्यक्ष प्रमोद कोचेरी, धनंजय जाधव यांचा समावेश होता. नेत्यांनी केलेल्या भाषणांतून सरकारला इशारा देण्यात आला. धार्मिक स्थळांचा अपमान करणाऱ्यांना त्वरित अटक करून कारवाई न झाल्यास आंदोलन आणखी तीव्र करण्याचा इशारा देण्यात आला.
शेवटी, जिल्हाधिकारी मोहम्मद रोशन यांनी मोर्चास्थळी उपस्थित राहून आंदोलकांकडून निवेदन स्वीकारले.
या आंदोलनात खानापूर तालुक्यातील हजारो नागरिक व महिला देखील मोठ्या संख्येने सहभागी झाले होते. यामध्ये भाजपाचे नेते संजय कुबल, पंडित ओगले, बाबुराव देसाई, गुंडू तोपीनकट्टी, मल्लाप्पा मारीहाळ, पंकज घाडी, ऍड. चेतन मनेरीकर, संजय मयेकर, मोहन पाटील, भूषण ठोंबरे, प्रशांत लक्केबैलकर, स्थायी समितीचे चेअरमन आप्पय्या कोडोळी, प्रकाश निलजकर, रवी बडीगेर यांसह अनेक पदाधिकारी व कार्यकर्त्यांचा सहभाग होता.
या मुक मोर्चामुळे बेळगाव शहरातील वातावरण तणावपूर्ण झाले होते. तथापि पोलिसांनी काटेकोर बंदोबस्त ठेवून परिस्थिती नियंत्रणात ठेवली होती.
ಹಿಂದು ಧರ್ಮೀಯರಿಂದ ಜಿಲ್ಲಾಧಿಕಾರಿ ಕಚೇರಿಗೆ ಮೌನ ಮೆರವಣಿಗೆ– ಧರ್ಮಸ್ಥಳದ ಮಂಜುನಾಥ ದೇವಾಲಯ ಕಲಂಕಿತಗೊಳಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹ
ಬೆಳಗಾವಿ : ಕರ್ನಾಟಕದ ಪ್ರಸಿದ್ಧ ಮಂಜುನಾಥ ಧರ್ಮಸ್ಥಳ ತೀರ್ಥಕ್ಷೇತ್ರಕ್ಕೆ ಕಳಂಕ ಹಚ್ಚುವ ಪ್ರಯತ್ನ ಕೆಲವು ವ್ಯಕ್ತಿಗಳಿಂದ ನಡೆಯುತ್ತಿದ್ದು, ಒಬ್ಬ ಮುಸ್ಲಿಂ ಯೂಟ್ಯೂಬರ್ ಈ ಸ್ಥಳದ ಬಗ್ಗೆ ತಪ್ಪು ಮಾಹಿತಿ ಹಾಗೂ ದಾರಿ ತಪ್ಪಿಸುವ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ ಎಂಬ ಆರೋಪ ಹೊರಿಸಲಾಗಿದೆ. ಈ ವಿಡಿಯೋಗಳಿಂದ ಹಿಂದು ಧರ್ಮಕ್ಕೆ ಅವಮಾನವಾಗುತ್ತಿದೆ ಎಂದು ಆರೋಪಿಸಿ, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಿಂದು ಧರ್ಮೀಯರಿಂದ ಇಂದು ಮಂಗಳವಾರ (ಆಗಸ್ಟ್ 19, 2025) ಭವ್ಯ ಮೌನ ಮೆರವಣಿಗೆ ಆಯೋಜಿಸಲಾಯಿತು.
ಈ ಸಂಬಂಧ ಧರ್ಮಸ್ಥಳ ಪ್ರದೇಶದಲ್ಲಿ ಇದುವರೆಗೆ 17 ಕಡೆ ಶೋಧ ಕಾರ್ಯ ನಡೆಸಿದರೂ ಯಾವುದೇ ದೃಢವಾದ ಸಾಕ್ಷಿ ಅಥವಾ ವಸ್ತು ಸಿಕ್ಕಿಲ್ಲ. ಆದರೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿ ಸಮಾಜದಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನ ನಡೆದಿದೆ ಎಂದು ಆಂದೋಲಕರ ಆರೋಪ.
ಮೆರವಣಿಗೆ ಬೋಗಾರವೆಸ್ನಿಂದ ಪ್ರಾರಂಭವಾಗಿ, ಮಾರೂತಿ ಗಲ್ಲಿ, ಗಣಪತಿ ಗಲ್ಲಿ, ಚನ್ನಮ್ಮ ಸರ್ಕಲ್ ಮೂಲಕ ಭವ್ಯ ರ್ಯಾಲಿ ರೂಪದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು. ಈ ಮೆರವಣಿಗೆಯಲ್ಲಿ ಸುಮಾರು ಹದಿನೈದು ಸಾವಿರ ಹಿಂದು ಧರ್ಮೀಯರು ಪಾಲ್ಗೊಂಡಿದ್ದರು. ಭಾರೀ ಮಳೆ ಸುರಿಯುತ್ತಿದ್ದರೂ ಮಹಿಳೆಯರು ಹಾಗೂ ನಾಗರಿಕರು ಕೊಡೆ ಛತ್ರಿ ಅಥವಾ ಇನ್ನಿತರ ಆಸರೆ ಪಡೆಯದೇ ದೃಢವಾಗಿ ಮೆರವಣಿಗೆಯಲ್ಲಿ ಹಾಜರಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ವಿವಿಧ ಮಠಗಳ ಮಠಾಧೀಶರು, ಸಂತರು, ಶಾಸಕರು ಹಾಗೂ ಸ್ಥಳೀಯ ನಾಯಕರು ಹಾಜರಿದ್ದರು. ಇವರಲ್ಲಿ ಶಾಸಕರಾದ ಅಭಯ ಪಾಟೀಲ, ಬೆಳಗಾವಿಯ ಮೇಯರ್ ಮಂಗೇಶ್ ಪವಾರ್, ಮಾಜಿ ಶಾಸಕರಾದ ಅನಿಲ್ ಬೆನಕೆ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ಜಿಲ್ಲಾ ಅಧ್ಯಕ್ಷ ಸುಭಾಷ ಪಾಟೀಲ, ಉಪಾಧ್ಯಕ್ಷ ಪ್ರಮೊದ್ ಕೋಚೇರಿ, ಧನಂಜಯ ಜಾಧವ್ ಸೇರಿದ್ದರು. ನಾಯಕರು ಮಾಡಿದ ಭಾಷಣಗಳ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು. ಧಾರ್ಮಿಕ ಸ್ಥಳಗಳನ್ನು ಅವಮಾನ ಮಾಡಿದವರನ್ನು ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಲಾಯಿತು.
ಕೊನೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸ್ಥಳಕ್ಕೆ ಬಂದು ಆಂದೋಲಕರಿಂದ ಮನವಿ ಪತ್ರ ಸ್ವೀಕರಿಸಿದರು.
ಈ ಆಂದೋಲನದಲ್ಲಿ ಖಾನಾಪುರ ತಾಲೂಕಿನ ಸಾವಿರಾರು ನಾಗರಿಕರು ಹಾಗೂ ಮಹಿಳೆಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇವರಲ್ಲಿ ಬಿಜೆಪಿ ನಾಯಕರಾದ ಸಂಜಯ ಕುಬಲ್, ಪಂಡಿತ್ ಓಗ್ಲೆ, ಬಾಬುರಾವ್ ದೇಸಾಯಿ, ಗುಂಡು ತೋಪಿನಕಟ್ಟಿ, ಮಲ್ಲಪ್ಪ ಮಾರಿಹಾಳ, ಪಂಕಜ್ ಘಾಡಿ, ಅಡ್ವ. ಚೇತನ ಮನೇರಿಕರ್, ಮೋಹನ್ ಪಾಟೀಲ, ಭೂಷಣ ಠೋಂಬರೆ, ಪ್ರಶಾಂತ್ ಲಕ್ಕೆಬೈಲಕರ, ಸ್ಥಾಯಿ ಸಮಿತಿಯ ಅಧ್ಯಕ್ಷ ಅಪ್ಪಯ್ಯ ಕೋಡೋಳಿ, ಪ್ರಕಾಶ ನಿಲಜಕರ್, ರವಿ ಬಡಿಗೇರ್ ಮೊದಲಾದ ನಾಯಕರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಈ ಮೌನ ಮೆರವಣಿಗೆಯಿಂದ ಬೆಳಗಾವಿ ನಗರದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದ್ದರೂ, ಪೊಲೀಸರು ಕಟ್ಟು ನಿಟ್ಟಿನ ಬಂದೋಬಸ್ತು ಮಾಡಿ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದರು.

