शांतिनिकेतन पदवीपूर्व महाविद्यालयाचा बारावीचा उल्लेखनीय निकाल; एकूण निकाल 81.66 टक्के.
खानापूर : कर्नाटक पदवीपूर्व शिक्षण खात्यामार्फत 2026 साली घेण्यात आलेल्या बारावी (पीयूसी द्वितीय वर्ष) परीक्षेत येथील शांतिनिकेतन पदवीपूर्व महाविद्यालयाने उल्लेखनीय यश संपादन केले आहे. यंदाही विद्यार्थ्यांनी उज्वल यश मिळवत महाविद्यालयाची यशस्वी परंपरा कायम राखली आहे.
महाविद्यालयाचा एकूण निकाल 81.66 टक्के लागला असून विविध शाखांमध्ये विद्यार्थ्यांनी उत्कृष्ट कामगिरी केली आहे.
वाणिज्य विभागात कुमारी झुनी आरकाटी हिने प्रथम क्रमांक पटकावला असून कुमारी मंजिरी बिदरभावी हिने द्वितीय तर कुमारी संतोषी पांडूचे हिने तृतीय क्रमांक मिळविला आहे. तर तेजस्विनी एस हलगेकर हिने चौथा क्रमांक पटकावला असून पाचवा क्रमांक सोलेहा एस जमादार तिने पटकावला आहे.

विज्ञान विभागात कुमारी अंजली पाटील हिने प्रथम क्रमांक मिळविला असून कुमारी रूपाली पाटील हिने द्वितीय तर कुमारी गौरी घाडी हिने तृतीय क्रमांक पटकाविला आहे. तर मारुती पी फटाण याने चौथा व कीर्ती सी पाटील हिने पाचव्या क्रमांकाने उत्तीर्ण होत महाविद्यालयाचा नावलौकिक वाढविला आहे.

या नेत्रदीपक यशाबद्दल महाविद्यालयाचे संस्थापक तसेच खानापूर तालुक्याचे आमदार श्री विठ्ठल हलगेकर यांनी सर्व यशस्वी विद्यार्थ्यांचे, पालकांचे व प्राध्यापकांचे अभिनंदन करून त्यांच्या परिश्रमांचे कौतुक केले आहे. तसेच भविष्यातही असेच यश संपादन करून महाविद्यालयाचा गौरव वाढवावा, असे आवाहन त्यांनी विद्यार्थ्यांना केले आहे.
ಶಾಂತಿನಿಕೇತನ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ; ಒಟ್ಟು ಫಲಿತಾಂಶ 81.66 ಶೇಕಡಾ.
ಖಾನಾಪುರ : ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ 2026ರಲ್ಲಿ ನಡೆಸಲಾದ ದ್ವಿತೀಯ ಪಿಯುಸಿ (12ನೇ ತರಗತಿ) ವಾರ್ಷಿಕ ಪರೀಕ್ಷೆಯಲ್ಲಿ ಇಲ್ಲಿನ ಶಾಂತಿನಿಕೇತನ ಪದವಿ ಪೂರ್ವ ಮಹಾವಿದ್ಯಾಲಯವು ಗಮನಾರ್ಹ ಸಾಧನೆ ಮಾಡಿದೆ. ಈ ವರ್ಷವೂ ವಿದ್ಯಾರ್ಥಿಗಳು ಉಜ್ವಲ ಯಶಸ್ಸು ಗಳಿಸಿ ಮಹಾವಿದ್ಯಾಲಯದ ಯಶಸ್ವಿ ಪರಂಪರೆಯನ್ನು ಮುಂದುವರಿಸಿದ್ದಾರೆ.
ಮಹಾವಿದ್ಯಾಲಯದ ಒಟ್ಟು ಫಲಿತಾಂಶ 81.66 ಶೇಕಡಾ ದಾಖಲಾಗಿದ್ದು, ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಕುಮಾರಿ ಝುನಿ ಆರಕಾಠಿ ಪ್ರಥಮ ಸ್ಥಾನ ಪಡೆದರೆ. ಕುಮಾರಿ ಮಂಜಿರಿ ಬಿದರಭಾವಿ ದ್ವಿತೀಯ ಸ್ಥಾನ ಹಾಗೂ ಕುಮಾರಿ ಸಂತೋಷಿ ಪಾಂಡುಚೆ ತೃತೀಯ ಸ್ಥಾನ ಗಳಿಸಿದ್ದಾರೆ. ತೇಜಸ್ವಿನಿ ಎಸ್. ಹಲಗೇಕರ್ ನಾಲ್ಕನೇ ಸ್ಥಾನ ಪಡೆದಿದ್ದು, ಸೋಲೇಹಾ ಎಸ್. ಜಮಾದಾರ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಕುಮಾರಿ ಅಂಜಲಿ ಪಾಟೀಲ ಪ್ರಥಮ ಸ್ಥಾನ ಪಡೆದಿದ್ದು, ಕುಮಾರಿ ರೂಪಾಲಿ ಪಾಟೀಲ ದ್ವಿತೀಯ ಹಾಗೂ ಕುಮಾರಿ ಗೌರಿ ಘಾಡಿ ತೃತೀಯ ಸ್ಥಾನ ಪಡೆದಿದ್ದಾರೆ. ಮಾರುತಿ ಪಿ. ಫಟಾಣ ನಾಲ್ಕನೇ ಸ್ಥಾನ ಹಾಗೂ ಕೀರ್ತಿ ಸಿ. ಪಾಟೀಲ ಐದನೇ ಸ್ಥಾನ ಪಡೆದು ಮಹಾವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಈ ಗಮನಾರ್ಹ ಯಶಸ್ಸಿನ ಹಿನ್ನೆಲೆಯಲ್ಲಿ ಮಹಾವಿದ್ಯಾಲಯದ ಸಂಸ್ಥಾಪಕರು ಹಾಗೂ ಖಾನಾಪುರ ತಾಲೂಕು ಶಾಸಕರಾದ ಶ್ರೀ ವಿಠ್ಠಲ ಹಲಗೇಕರ್ ಅವರು ಎಲ್ಲಾ ಯಶಸ್ವಿ ವಿದ್ಯಾರ್ಥಿಗಳು, ಅವರ ಪಾಲಕರು ಹಾಗೂ ಪ್ರಾಧ್ಯಾಪಕರನ್ನು ಅಭಿನಂದಿಸಿ ಅವರ ಪರಿಶ್ರಮವನ್ನು ಶ್ಲಾಘಿಸಿದ್ದಾರೆ. ಮುಂದೆಯೂ ಇದೇ ರೀತಿಯ ಸಾಧನೆಗಳನ್ನು ಮಾಡಿ ಮಹಾವಿದ್ಯಾಲಯದ ಗೌರವವನ್ನು ಹೆಚ್ಚಿಸಬೇಕು ಎಂದು ವಿದ್ಯಾರ್ಥಿಗಳಿಗೆ ಅವರು ಕರೆ ನೀಡಿದ್ದಾರೆ.


