
अंकोला शीरूर नजीक, महामार्गावर दरड कोसळली, सात जणांचा मृत्यू ; वीश्वेश्वर हेगडे-कागेरी यांची माहिती.
अंकोला : शिरूरजवळ राष्ट्रीय महामार्गावर दरड कोसळून सात जणांचा मृत्यू झाला. उत्तर कन्नड जिल्ह्यातील अंकोला तालुक्यातील शिरूरजवळ राष्ट्रीय महामार्गावर दरड कोसळली असून, त्यात नऊ जण बेपत्ता झाले आहेत. यामध्ये सध्या सात जणांचा मृत्यू झाला असल्याची माहिती, उत्तर कन्नड लोकसभेचे खासदार वीश्वेश्वर हेगडे-कागेरी यांनी दिली आहे.
9 जणांपैकी पाच जण एकाच कुटुंबातील असल्याचे सांगण्यात येत आहे. एकाच कुटुंबातील लक्ष्मण नायक, शांती नायक, रोशन, अवंतिका आणि जगन्नाथ यांच्यासह 9 जण चिखलाखाली अडकल्याचा संशय आहे. अग्निशमन दल आणि एनडीआरएफचे जवान घटनास्थळी दाखल झाले असून बचावकार्य सुरू आहे. दरड कोसळल्याने महामार्गावरील वाहतूक ठप्प झाली आहे.
उत्तर कन्नडचे खासदार विश्वेश्वर हेगडे कागेरी यांनी याबाबत माहिती दिली आहे. शिरुर राष्ट्रीय महामार्गावर एक टेकडी कोसळली असून, स्थलांतराचे काम आधीच हाती घेण्यात आले आहे. या घटनेत बेपत्ता झालेल्या नऊ जणांपैकी सात जणांचा मृत्यू झाला असून, शोध कार्य सुरू असल्याचे त्यांनी सांगितले.
ಅಂಕೋಲಾ ಶೀರೂರು ಬಳಿ ಹೆದ್ದಾರಿಯ ಬಳಿ ಬಿರುಕು ಏಳು ಜನ ಸಾವು; ವಿಶ್ವೇಶ್ವರ ಹೆಗಡೆ-ಕಾಗೇರಿ ಅವರ ಮಾಹಿತಿ.
ಅಂಕೋಲಾ: ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಏಳು ಮಂದಿ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು 9 ಮಂದಿ ನಾಪತ್ತೆಯಾಗಿದ್ದಾರೆ. ಇದರಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಉತ್ತರ ಕನ್ನಡ ಲೋಕಸಭಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದಾರೆ.
9 ಜನರ ಪೈಕಿ ಐವರು ಒಂದೇ ಕುಟುಂಬದವರು ಎನ್ನಲಾಗಿದೆ. ಒಂದೇ ಕುಟುಂಬದ ಲಕ್ಷ್ಮಣ್ ನಾಯಕ್, ಶಾಂತಿ ನಾಯಕ್, ರೋಷನ್, ಆವಂತಿಕಾ, ಜಗನ್ನಾಥ್ ಸೇರಿದಂತೆ 9 ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳ ಮತ್ತು ಎನ್ಡಿಆರ್ಎಫ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗುಡ್ಡ ಕುಸಿತದಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.
ಈ ಬಗ್ಗೆ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದು. ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದಿದ್ದು, ಈಗಾಗಲೇ ತೆರವು ಕಾರ್ಯ ಕೈಗೊಳ್ಳಲಾಗಿದೆ. ಈ ಘಟನೆಯಲ್ಲಿ ನಾಪತ್ತೆಯಾದ ಒಂಬತ್ತು ಜನರಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ಅವರು ತಿಳಿಸಿದರು.
