खानापूरात 14 कोटींच्या रस्त्याच्या कामाला सुरुवात

खानापूर : खानापूर शहरांतर्गत बेळगाव-गोवा मार्गावरील मराठा मंडळ डिग्री कॉलेज ते करंबळ कत्री या रस्त्याच्या कॉंक्रिटीकरणाच्या कामाला अखेर सुरुवात झाली आहे. केंद्र सरकारकडून मंजूर करण्यात आलेल्या 14 कोटींच्या निधीमुळे या रस्त्याच्या समस्येवर तोडगा निघणार आहे.
हेस्कॉम कार्यालयाजवळ तसेच फिश मार्केट परिसरातील दुहेरी रस्त्यावरील एका बाजूचा डांबर रस्ता खोदण्यात येत असून, दुसऱ्या बाजूने वाहतूक सुरू ठेवण्यात आली आहे. मलप्रभा नदीपासून या रस्त्यावरील डांबरीकरण जेसीबीद्वारे उखडण्याचे काम आजपासून सुरू झाले आहे.
खानापूरचे आमदार विठ्ठल हलगेकर यांनी भाजपाचे जिल्हा उपाध्यक्ष प्रमोद कोचेरी यांच्यासह केंद्रीय मंत्री नितीन गडकरी यांची भेट घेऊन या रस्त्यासाठी पाठपुरावा केला होता. त्यांच्या प्रयत्नांना यश मिळाल्याने या कामासाठी 14 कोटींचे अनुदान मिळाले. मात्र निधी मंजूर होऊनही अद्याप काम सुरू झाले नव्हते.
पहिल्या टप्प्यात मलप्रभा नदीपासून मराठा मंडळ डिग्री कॉलेजपर्यंत रस्ता करण्यात येणार असून, दुसऱ्या टप्प्यात मलप्रभा नदीपासून करंबळ कत्रीपर्यंत रस्त्याचे काम हाती घेतले जाणार आहे.
हा रस्ता पूर्णपणे खड्डेमय होऊन चाळण झाला होता. पावसाळ्यात खड्ड्यांमध्ये पाणी साचून रस्त्याने तलावाचे स्वरूप धारण केले होते. त्यामुळे अपघातांची संख्या वाढली होती. आता कामाला सुरुवात झाल्याने प्रवासी व नागरिकांमधून समाधान व्यक्त केले जात आहे.
ಖಾನಾಪುರದಲ್ಲಿ 14 ಕೋಟಿ ರೂ. ರಸ್ತೆ ಕಾಮಗಾರಿಗೆ ಚಾಲನೆ.
ಖಾನಾಪುರ : ಖಾನಾಪುರ ನಗರ ವ್ಯಾಪ್ತಿಯ ಬೆಳಗಾವಿ–ಗೋವಾ ಮಾರ್ಗದ ಮರಾಠಾ ಮಂಡಳ ಡಿಗ್ರಿ ಕಾಲೇಜು ದಿಂದ ಕರಂಬಳ ಕತ್ರಿ ವರೆಗೆ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಕೊನೆಗೂ ಚಾಲನೆ ದೊರೆತಿದೆ. ಕೇಂದ್ರ ಸರ್ಕಾರದಿಂದ ಮಂಜೂರಾದ 14 ಕೋಟಿ ರೂ. ಅನುದಾನದೊಂದಿಗೆ ಈ ರಸ್ತೆಯ ಸಮಸ್ಯೆಗೆ ಪರಿಹಾರ ಸಿಕ್ಕಿದೆ.
ಹೆಸ್ಕಾಂ ಕಚೇರಿ ಬಳಿ ಹಾಗೂ ಫಿಷ್ ಮಾರ್ಕೆಟ್ ಪ್ರದೇಶದ ದ್ವಿರಸ್ತೆಯ ಒಂದು ಬದಿಯಲ್ಲಿ ರಸ್ತೆ ಅಗೆದುಹಾಕುವ ಕಾರ್ಯ ನಡೆಯುತ್ತಿದ್ದು, ಇನ್ನೊಂದು ಬದಿ ಮೂಲಕ ಸಂಚಾರ ನಿರ್ವಹಿಸಲಾಗುತ್ತಿದೆ. ಮಲಪ್ರಭಾ ನದಿಯಿಂದ ಆರಂಭಿಸಿ ಈ ರಸ್ತೆಯ ಡಾಂಬರ ತೆಗೆಯುವ ಕಾರ್ಯವನ್ನು ಇಂದು ಜೆಸಿಬಿ ಮೂಲಕ ಆರಂಭಿಸಲಾಗಿದೆ.
ಖಾನಾಪುರ ಶಾಸಕರಾದ ವಿಠ್ಠಲ ಹಲಗೇಕರ್ ಅವರು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೊದ್ ಕೋಚೇರಿ ಅವರೊಂದಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಈ ರಸ್ತೆ ಕಾಮಗಾರಿಗಾಗಿ ಹೋರಾಟ ನಡೆಸಿದ್ದರು. ಅವರ ಪ್ರಯತ್ನಗಳಿಂದ ಈ ಕಾಮಗಾರಿಗೆ 14 ಕೋಟಿ ರೂ. ಅನುದಾನ ಸಿಕ್ಕಿತು. ಆದರೆ ಅನುದಾನ ಮಂಜೂರಾದರೂ ಬಹಳ ಕಾಲದಿಂದ ಕೆಲಸ ಆರಂಭವಾಗಿರಲಿಲ್ಲ.
ಮೊದಲ ಹಂತದಲ್ಲಿ ಮಲಪ್ರಭಾ ನದಿಯಿಂದ ಮರಾಠಾ ಮಂಡಳ ಡಿಗ್ರಿ ಕಾಲೇಜು ವರೆಗೆ ರಸ್ತೆ ನಿರ್ಮಾಣ ಕೈಗೊಳ್ಳಲಾಗುತ್ತಿದ್ದು, ಎರಡನೇ ಹಂತದಲ್ಲಿ ಮಲಪ್ರಭಾ ನದಿಯಿಂದ ಕರಂಬಳ ಕತ್ರಿವರೆಗೆ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗುತ್ತದೆ.
ಈ ರಸ್ತೆ ಸಂಪೂರ್ಣವಾಗಿ ಗುಂಡಿಗಳ ಸಾಮ್ರಾಜ್ಯ ನಿರ್ಮಾಣವಾಗಿ , ಮಾರ್ಪಟ್ಟಿತ್ತು. ಮಳೆಯಾದಾಗ ಗುಂಡಿಗಳಲ್ಲಿ ನೀರು ತುಂಬಿ ರಸ್ತೆ ಕೆರೆಯಂತೆ ಕಾಣಿಸುತ್ತಿತ್ತು. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿತ್ತು. ಈಗ ಕಾಮಗಾರಿಗೆ ಚಾಲನೆ ದೊರೆತಿರುವುದರಿಂದ ಪ್ರಯಾಣಿಕರು ಮತ್ತು ನಾಗರಿಕರಿಂದ ತೃಪ್ತಿ ವ್ಯಕ್ತವಾಗುತ್ತಿದೆ.

