
बैलूर रस्त्याची दुरवस्था: दुरुस्ती न झाल्यास 28 जुलै रोजी रास्ता रोको आंदोलन; ग्रामस्थांचा तहसीलदार आणि PWD ला इशारा.
खानापूर ; खानापूर तालुक्यातील बैलूर गावापासून बैलूर क्रॉसपर्यंत (बेळगाव-गोवा राष्ट्रीय महामार्गापर्यंत) 5 किलोमीटरचा रस्ता पूर्णपणे खराब झाला असून, तातडीने दुरुस्त करण्याची मागणी बैलूर ग्रामस्थांनी खानापूरचे तहसीलदार आणि सार्वजनिक बांधकाम खात्याकडे (PWD) निवेदनाद्वारे केली आहे. तहसीलदारांच्या अनुपस्थितीत उप तहसीलदार प्रकाश वाय कट्टीमणी यांनी हे निवेदन स्वीकारले. त्यानंतर सार्वजनिक बांधकाम खात्याच्या आणि खानापूर पोलीस स्थानकाच्या अधिकाऱ्यांनाही निवेदन देण्यात आले. यावेळी जांबोटी भागातील सामाजिक कार्यकर्ते लक्ष्मण रामचंद्र झांजरे, सामाजिक कार्यकर्ते दामोदर मारुती नाकाडी, हिंदुत्ववादी नेते विठ्ठल गुंडू राजगोळकर, रामचंद्र नागाप्पा नाकाडी, भरमू जायाप्पा गुरव, तुकाराम केरू बिरजे, पांडुरंग केरू गुरव आणि इतर ग्रामस्थ उपस्थित होते.
रस्त्याच्या दुरवस्थेमुळे अपघात आणि गैरसोय..
सार्वजनिक बांधकाम विभागाकडे अनेकवेळा तक्रारी करूनही अद्याप रस्त्याची दुरुस्ती झाली नसल्याने ग्रामस्थांनी तीव्र संताप व्यक्त केला आहे. कुसमळी गावाजवळील बेळगाव-चोर्ला-गोवा राष्ट्रीय महामार्गावरील नवीन पुलाचे बांधकाम सुरू असल्यामुळे, बैलूर गावातील हा रस्ता पर्यायी मार्ग म्हणून मोठ्या प्रमाणात वापरला जात आहे. त्यामुळे या रस्त्यावर वाहतूक मोठ्या प्रमाणात वाढली आहे. रस्त्यावर मोठमोठे खड्डे पडले असून, लहान वाहनांना अपघात होण्याची शक्यता वाढली आहे. शाळकरी मुलांनाही दररोज शाळेत जाण्यासाठी अडचणी येत आहेत. या त्रासाला कंटाळून ग्रामस्थांनी आता आंदोलनात्मक पवित्रा घेतला आहे.
28 जुलै रोजी रास्ता रोकोचा इशारा…
ग्रामस्थांनी दिलेल्या निवेदनात म्हटले आहे की, सार्वजनिक बांधकाम विभागाकडे वारंवार तक्रारी करूनही रस्त्याची दुरुस्ती झालेली नाही. जर लवकरच या रस्त्याची दुरुस्ती करण्यात आली नाही, तर येत्या 28 जुलै 2025 रोजी सकाळी 10.00 वाजता रास्ता रोको आंदोलन करण्याचा निर्णय ग्रामस्थांनी घेतला आहे.
बैलूर ग्रामस्थांनी माननीय तहसीलदारांनी या गंभीर समस्येकडे लक्ष घालून लवकरात लवकर रस्त्याची दुरुस्ती करावी, अशी मागणी केली आहे.
ಬೈಲೂರು ರಸ್ತೆ ದುರಸ್ತಿ ಮಾಡದಿದ್ದರೆ ಜುಲೈ 28 ರಂದು ರಸ್ತೆ ತಡೆ ಪ್ರತಿಭಟನೆ; ಗ್ರಾಮಸ್ಥರು ತಹಶೀಲ್ದಾರ್ ಮತ್ತು ಲೋಕೋಪಯೋಗಿ ಇಲಾಖೆಗೆ ಎಚ್ಚರಿಕೆಯ ಮನವಿ ಸಲ್ಲಿಸಿದರು.
ಖಾನಾಪುರ: ಖಾನಾಪುರ ತಾಲೂಕಿನ ಬೈಲೂರು ಗ್ರಾಮದಿಂದ ಬೈಲೂರು ಕ್ರಾಸ್ (ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿ) ವರೆಗಿನ 5 ಕಿಲೋಮೀಟರ್ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಕೂಡಲೇ ದುರಸ್ತಿ ಮಾಡುವಂತೆ ಬೈಲೂರು ಗ್ರಾಮಸ್ಥರು ಖಾನಾಪುರ ತಹಶೀಲ್ದಾರ್ ಮತ್ತು ಲೋಕೋಪಯೋಗಿ ಇಲಾಖೆಗೆ (PWD) ಇಲಾಖೆಗೆ ಎಚ್ಚರಿಕೆಯ ಮನವಿ ಸಲ್ಲಿಸಿದ್ದಾರೆ. ತಹಶೀಲ್ದಾರ್ ಅವರ ಅನುಪಸ್ಥಿತಿಯಲ್ಲಿ ಉಪ ತಹಶೀಲ್ದಾರ್ ಪ್ರಕಾಶ್ ವಾಯ್ ಕಟ್ಟಿಮನಿ ಅವರು ಮನವಿ ಸ್ವೀಕರಿಸಿದರು. ನಂತರ ಲೋಕೋಪಯೋಗಿ ಇಲಾಖೆ ಮತ್ತು ಖಾನಾಪುರ ಪೊಲೀಸ್ ಠಾಣೆಯ ಅಧಿಕಾರಿಗಳಿಗೂ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಜಾಂಬೋಟಿ ಭಾಗದ ಸಮಾಜ ಸೇವಕರಾದ ಲಕ್ಷ್ಮಣ ರಾಮಚಂದ್ರ ಝಾಂಜರೆ, ದಾಮೋದರ್ ಮಾರುತಿ ನಾಕಾಡಿ, ಹಿಂದೂಪರ ಸಂಘಟನೆಗಳ ಮುಖಂಡ ವಿಠ್ಠಲ್ ಗುಂಡು ರಾಜಗೋಳಕರ್, ರಾಮಚಂದ್ರ ನಾಗಪ್ಪ ನಾಕಾಡಿ, ಭರಮು ಜಾಯಪ್ಪ ಗುರವ್, ತುಕಾರಾಮ್ ಕೇರು ಬಿರ್ಜೆ, ಪಾಂಡುರಂಗ ಕೇರು ಗುರವ್ ಮತ್ತು ಇತರ ಗ್ರಾಮಸ್ಥರು ಉಪಸ್ಥಿತರಿದ್ದರು.
ರಸ್ತೆಯ ದುರವಸ್ಥೆಯಿಂದ ಅಪಘಾತ ಮತ್ತು ಅನಾನುಕೂಲತೆ…
ಲೋಕೋಪಯೋಗಿ ಇಲಾಖೆಗೆ ಹಲವು ಬಾರಿ ದೂರು ನೀಡಿದ್ದರೂ ರಸ್ತೆ ದುರಸ್ತಿಯಾಗಿಲ್ಲ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಸಮಳಿ ಗ್ರಾಮದ ಬಳಿ ಬೆಳಗಾವಿ-ಚೋರ್ಲಾ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ, ಬೈಲೂರು ಗ್ರಾಮದ ಈ ರಸ್ತೆಯನ್ನು ಪರ್ಯಾಯ ಮಾರ್ಗವಾಗಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಇದರಿಂದ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಿದೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ಸಣ್ಣ ವಾಹನಗಳಿಗೆ ಅಪಘಾತವಾಗುವ ಸಾಧ್ಯತೆ ಹೆಚ್ಚಿದೆ. ಶಾಲಾ ಮಕ್ಕಳು ಸಹ ಪ್ರತಿದಿನ ಶಾಲೆಗೆ ಹೋಗಲು ತೊಂದರೆ ಅನುಭವಿಸುತ್ತಿದ್ದಾರೆ. ಈ ತೊಂದರೆಗಳಿಂದ ರೋಸಿಹೋಗಿರುವ ಗ್ರಾಮಸ್ಥರು ಈಗ ಆಂದೋಲನದ ಹಾದಿ ಹಿಡಿದಿದ್ದಾರೆ.
ಜುಲೈ 28 ರಂದು ರಸ್ತೆ ತಡೆಗೆ ಎಚ್ಚರಿಕೆ…
ಲೋಕೋಪಯೋಗಿ ಇಲಾಖೆಗೆ ಪದೇ ಪದೇ ದೂರು ನೀಡಿದ್ದರೂ ರಸ್ತೆ ದುರಸ್ತಿ ಆಗಿಲ್ಲ ಎಂದು ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ. ಈ ರಸ್ತೆಯನ್ನು ಶೀಘ್ರವಾಗಿ ದುರಸ್ತಿ ಮಾಡದಿದ್ದರೆ, ಮುಂಬರುವ ಜುಲೈ 28, 2025 ರಂದು ಬೆಳಿಗ್ಗೆ 10:00 ಗಂಟೆಗೆ ರಸ್ತೆ ತಡೆ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಬೈಲೂರು ಗ್ರಾಮಸ್ಥರು ಈ ಗಂಭೀರ ಸಮಸ್ಯೆಗೆ ಗಮನಹರಿಸಿ ಆದಷ್ಟು ಬೇಗ ರಸ್ತೆ ದುರಸ್ತಿ ಮಾಡುವಂತೆ ಮಾನ್ಯ ತಹಶೀಲ್ದಾರ್ ಅವರಿಗೆ ಮನವಿ ಮಾಡಿದ್ದಾರೆ.
