
बैलूरमध्ये रस्त्याच्या दुरावस्थेवरून संताप; रास्ता रोको आंदोलन तात्पुरते स्थगित…ठेकेदाराने दिले दुरुस्तीचे आश्वासन; कामात दिरंगाई झाल्यास मोठ्या आंदोलनाचा इशारा.
बैलूर ; (ता. खानापूर, जि. बेळगाव) : गावातील निकृष्ट रस्त्याच्या दुरुस्तीवरून संतप्त झालेल्या ग्रामस्थ आणि विद्यार्थी वर्गाने सोमवारी (दि. 28 जुलै) आयोजित केलेले रास्ता रोको आंदोलन तात्पुरते स्थगित केले आहे. संबंधित ठेकेदाराने आज पासून रस्ता दुरुस्तीला सुरूवात केली असून, दोन दिवसांत रस्ता तात्पुरता प्रवासयोग्य करण्याचे आश्वासन दिल्यानंतर ग्रामस्थांनी हा निर्णय घेतला आहे.

ग्रामस्थांच्या म्हणण्यानुसार, सध्या सुरू असलेले रस्त्याचे दुरुस्ती काम अत्यंत खराब दर्जाचे असून, रस्त्यावर पडलेले मोठे खड्डे व्यवस्थित भरले जात नसल्याने गावकऱ्यांना व विद्यार्थ्यांना दररोज मोठ्या त्रासाला सामोरे जावे लागत होते. या पार्श्वभूमीवर ग्रामस्थांनी ठेकेदाराशी आज रविवारी रस्ता दुरुस्तीच्या ठिकाणी भेट देऊन चर्चा करून काम सुधारण्याची मागणी केली. आज साधारण अर्धा किलोमीटर रस्ता दुरुस्ती करण्यात आली. उर्वरित रस्ता दुरुस्ती दोन दिवसात करण्याचे आश्वासन ठेकेदाराने दिले आहे.

ठेकेदाराने रस्त्याची तात्पुरती दुरुस्ती लवकरात लवकर पूर्ण करण्याचे आश्वासन दिले आहे. तसेच, संबंधित अधिकाऱ्यांशी चर्चा करून भविष्यात योग्य दर्ज्याचे आणि टिकाऊ रस्त्याचे काम केले जाईल, अशी हमीही दिली.
या आश्वासनामुळे ग्रामस्थ आणि विद्यार्थ्यांनी तूर्तास आंदोलन स्थगित केले असले, तरी जर कामात कोणतीही दिरंगाई झाली, अथवा प्रशासनाने दुर्लक्ष केले, तर कोणताही दबाव न घेता मोठे आंदोलन छेडले जाईल, असा ठाम इशारा बैलूर ग्रामस्थांनी दिला आहे.
यावेळी लक्ष्मण झांजरे, दामोदर नाकाडी, सी एम पाटील, रामचंद्र हलगेकर, सोमान्ना नाकाडी, भरमु गुरव, विठ्ठल राजगोळकर उपस्थित होते.
ಬೈಲೂರಲ್ಲಿ ರಸ್ತೆಯ ದುಸ್ಥಿತಿಗೆ ಭಾರಿ ಆಕ್ರೋಷ ;
ಗುತ್ತಿಗೆದಾರನಿಂದ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಕಾರ್ಯ ಆರಂಭವಾದ ಕಾರಣಕ್ಕೆ ರಸ್ತೆ ತಡೆ ಆಂದೋಲನ ಸ್ಥಗಿತ. ಕಾಮಗಾರಿ ವಿಳಂಬವಾದರೆ ಭಾರಿ ಹೋರಾಟದ ಎಚ್ಚರಿಕೆ;
ಬೈಲೂರ (ತಾ. ಖಾನಾಪುರ, ಜಿ. ಬೆಳಗಾವಿ):
ಗ್ರಾಮದ ಕಳಪೆ ರಸ್ತೆಯ ದುರಸ್ತಿಯ ವಿಚಾರವಾಗಿ ಆಕ್ರೋಶಗೊಂಡ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಂದ ಸೋಮವಾರ (ಜುಲೈ 28) ನಿಗದಿಯಾದ ರಸ್ತೆ ತಡೆ ಆಂದೋಲನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಂಬಂಧಿತ ಗುತ್ತಿಗೆದಾರರು ಇಂದು ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿದ್ದು, ಮುಂದೆ ಎರಡು ದಿನಗಳಲ್ಲಿ ರಸ್ತೆ ತಾತ್ಕಾಲಿಕವಾಗಿ ಪ್ರಯಾಣಯೋಗ್ಯವಾಗಿಸುವ ಭರವಸೆ ನೀಡಿದ ಹಿನ್ನಲೆಯಲ್ಲಿ ಗ್ರಾಮಸ್ಥರು ಈ ನಿರ್ಧಾರಕ್ಕೆ ಬಂದಿದ್ದಾರೆ.
ಗ್ರಾಮಸ್ಥರ ಹೇಳಿಕೆಯ ಪ್ರಕಾರ, ಈಗಾಗಲೇ ನಡೆಯುತ್ತಿರುವ ರಸ್ತೆ ದುರಸ್ತಿ ಕಾರ್ಯ ಅತೀ ಕಳಪೆ ಗುಣಮಟ್ಟದಲ್ಲಿ ನಡೆಯುತ್ತಿದೆ. ರಸ್ತೆಯ ಮೇಲೆ ಉಂಟಾಗಿರುವ ಅತಿದೊಡ್ಡ ಗುಂಡಿಗಳನ್ನು ಸಮರ್ಪಕವಾಗಿ ಭರ್ತಿ ಮಾಡಲಾಗುತ್ತಿಲ್ಲ ಎಂಬ ಕಾರಣದಿಂದ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ದಿನನಿತ್ಯ ತೊಂದರೆಗೆ ಸಿಲುಕುತ್ತಿದ್ದಾರೆ.
ಈ ಹಿನ್ನಲೆಯಲ್ಲಿ, ಇಂದು (ಭಾನುವಾರ) ಗ್ರಾಮಸ್ಥರು ದುರಸ್ತಿ ಸ್ಥಳಕ್ಕೆ ಭೇಟಿ ನೀಡಿ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿ ಕೆಲಸದ ಗುಣಮಟ್ಟ ಸುಧಾರಿಸಲು ಒತ್ತಾಯಿಸಿದರು. ಸುಮಾರು ಅರ್ಧ ಕಿಮೀ ರಸ್ತೆ ದುರಸ್ತಿಯಾಗಿದ್ದು, ಬಾಕಿ ರಸ್ತೆಯನ್ನು ಮುಂದಿನ ಎರಡು ದಿನಗಳಲ್ಲಿ ದುರಸ್ತಿ ಮಾಡಲಾಗುವುದು ಎಂದು ಗುತ್ತಿಗೆದಾರರು ಭರವಸೆ ನೀಡಿದ್ದಾರೆ.
ಗುತ್ತಿಗೆದಾರರು ತಾತ್ಕಾಲಿಕ ದುರಸ್ತಿಯನ್ನು ಶೀಘ್ರ ಪೂರ್ಣಗೊಳಿಸುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಸಂಬಂಧಿತ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಉತ್ತಮ ಗುಣಮಟ್ಟದ ಹಾಗೂ ಶಾಶ್ವತ ರಸ್ತೆಯ ನಿರ್ಮಾಣದ ಭರವಸೆ ನೀಡಿದ್ದಾರೆ.
ಈ ಭರವಸೆಯಿಂದಾಗಿ ತಾತ್ಕಾಲಿಕವಾಗಿ ಆಂದೋಲನವನ್ನು ಹಿಂತೆಗೆದುಕೊಳ್ಳಲಾಗಿದೆ. ಆದರೆ, ಕೆಲಸದಲ್ಲಿ ವಿಳಂಬ ಅಥವಾ ಆಡಳಿತ ನಿರ್ಲಕ್ಷ್ಯ ತೋರಿದರೆ, ಯಾವುದೇ ಒತ್ತಡವಿಲ್ಲದೇ ಭಾರಿ ಹೋರಾಟ ಕೈಗೊಳ್ಳಲಾಗುವುದು ಎಂದು ಬೈಲೂರ ಗ್ರಾಮದ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಲಕ್ಷ್ಮಣ ಝಾಂಜರೆ, ದಾಮೋದರ ನಾಕಡಿ, ಸಿ.ಎಂ. ಪಾಟೀಲ, ರಾಮಚಂದ್ರ ಹಲಗೇಕರ್, ಸೋಮನ್ನಾ ನಾಕಡಿ, ಭರಮು ಗುರುವ್, ವಿಠ್ಠಲ ರಾಜಗೋಳ್ಕರ್ ಸೇರಿದಂತೆ ಹಲವರು ಹಾಜರಿದ್ದರು.
