कपिलेश्वर मंदिराच्या माजी पुजाऱ्याच्या मुलाची नैराश्येतून आत्महत्या.
बेळगाव : शहरातील कपिलेश्वर मंदिराच्या माजी अध्यक्ष पुजारी यांच्या मुलाने मोबाईलमध्ये “डेथ नोट” लिहून आत्महत्या केल्याची हृदयद्रावक घटना कपिलेश्वर रोड येथील एका घरात घडली. सिद्धांत पुजारी (वय 27) असे आत्महत्या केलेल्या तरुणाचे नाव आहे.

मिळालेल्या माहितीनुसार, तीन वर्षांपूर्वी सिद्धांत याच्यावर खोट्या बलात्काराचा गुन्हा दाखल झाला होता. त्या घटनेपासून तो नैराश्यात होता. मृत्यूपूर्वी मोबाईलमध्ये लिहिलेल्या “डेथ नोट” मध्ये त्याने आपले दुःख स्पष्ट केले आहे. “मी कोणत्याही मुलीसाठी जीवन संपवत नाही, परंतु आलिशान जीवन जगता येत नसल्याने हा निर्णय घेत आहे. गणेशोत्सव मोठा सण असल्याने तो साजरा करूनच हे पाऊल उचलले,” असे त्याने नमूद केले आहे.
त्याने पुढे लिहिले आहे की, “मी कपिलेश्वर मंदिरात पुजारी म्हणून कार्यरत होतो. मात्र, माझ्यावर खोटा गुन्हा दाखल करून मंदिरातून बाहेर काढण्यात आले. तेव्हापासून माझे आयुष्य उद्ध्वस्त झाले.” तसेच मृत्यूपूर्वी कुटुंबीयांसाठी भावनिक संदेश सोडला आहे. “माझ्या श्राद्धाला मटण बनवू नका. मी मेल्यानंतर कोणीही रडू नका, तुम्ही रडल्यास माझ्या आत्म्याला त्रास होईल,” असेही त्याने लिहिले आहे. याशिवाय, “मला त्रास देणाऱ्यांविषयी मी देवांना सांगीन,” असे उल्लेख केले आहेत.
घटनेची माहिती मिळताच खडेबाजार पोलिसांनी घटनास्थळी धाव घेऊन तपास सुरू केला. पोलिसांनी सिद्धांतचा मोबाईल ताब्यात घेऊन “डेथ नोट” ची तपासणी सुरू केली आहे. या प्रकरणात तीन वर्षांपूर्वी घडलेल्या घटनेमुळेच सिद्धांतने आत्महत्या केली असल्याचे प्राथमिक तपासात स्पष्ट होत असून, “मुलाला न्याय मिळावा” अशी मागणी कुटुंबीयांनी केली आहे.
ಕಪಿಲೇಶ್ವರ ದೇವಾಲಯದ ಮಾಜಿ ಪೂಜಾರಿಯ ಪುತ್ರನ ಆತ್ಮಹತ್ಯೆ
ಬೆಳಗಾವಿ : ನಗರದ ಕಪಿಲೇಶ್ವರ ದೇವಾಲಯದ ಮಾಜಿ ಅಧ್ಯಕ್ಷ ಪೂಜಾರಿ ಅವರ ಮಗ ಸಿದ್ದಾಂತ ಪೂಜಾರಿ (27) ಯವರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಕಪಿಲೇಶ್ವರ ರಸ್ತೆಯ ಮನೆಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಮುನ್ನ ಮೊಬೈಲ್ನಲ್ಲಿ “ಡೆತ್ ನೋಟ್” ಬರೆದು ತಾನೇಕೆ ಜೀವ ಮುಗಿಸುತ್ತಿದ್ದೇನೆಂದು ವಿವರಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಸಿದ್ದಾಂತ ಅವರ ವಿರುದ್ಧ ನಕಲಿ ಅತ್ಯಾಚಾರದ ಪ್ರಕರಣ ದಾಖಲಾದ ಬಳಿಕ ಅವರು ಜಿಗುಪ್ಸೆಯಲ್ಲಿ ಬದುಕುತ್ತಿದ್ದರು ಎಂದು ತಿಳಿದುಬಂದಿದೆ. “ಡೆತ್ ನೋಟ್” ನಲ್ಲಿ, “ಯಾವ ಹುಡುಗಿಯ ಕಾರಣದಿಂದಲೂ ನಾನು ಜೀವ ಕೊಡುವುದಿಲ್ಲ. ಐಷಾರಾಮಿ ಜೀವನ ನಡೆಸಲು ಸಾಧ್ಯವಾಗದ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಗಣೇಶೋತ್ಸವ ದೊಡ್ಡ ಹಬ್ಬವಾಗಿರುವುದರಿಂದ ಅದನ್ನು ಆಚರಿಸಿ ಈ ಹೆಜ್ಜೆ ಇಡುತ್ತಿದ್ದೇನೆ” ಎಂದು ಬರೆದಿದ್ದಾರೆ.
ಇದೇ ವೇಳೆ ಅವರು, “ನಾನು ಕಪಿಲೇಶ್ವರ ದೇವಾಲಯದಲ್ಲಿ ಪೂಜಾರಿಯಾಗಿ ಕೆಲಸ ಮಾಡುತ್ತಿದ್ದೆ. ಆದರೆ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ದೇವಾಲಯದಿಂದ ಹೊರಹಾಕಲಾಯಿತು. ಆಗಿನಿಂದಲೇ ನನ್ನ ಜೀವನ ಹಾಳಾಯಿತು” ಎಂದು ನೋವು ವ್ಯಕ್ತಪಡಿಸಿದ್ದಾರೆ.
ಕುಟುಂಬದವರಿಗೆ ಸಂದೇಶ ಬರೆದು, “ನನ್ನ ಶ್ರಾದ್ಧಕ್ಕೆ ಮಾಂಸ ಮಾಡಬೇಡಿ. ನನ್ನ ಮರಣದ ಬಳಿಕ ಯಾರೂ ಅಳಬೇಡಿ. ನೀವು ಅತ್ತರೆ ನನ್ನ ಆತ್ಮಕ್ಕೆ ಕಷ್ಟವಾಗುತ್ತದೆ. ನನಗೆ ತೊಂದರೆ ನೀಡಿದವರ ವಿಷಯವನ್ನು ದೇವರಿಗೆ ತಿಳಿಸುತ್ತೇನೆ” ಎಂದು ಹೇಳಿದ್ದಾರೆ.
ಘಟನೆಯ ಮಾಹಿತಿ ದೊರಕಿದ ತಕ್ಷಣ ಖಡೇಬಜಾರ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿದ್ದಾಂತ ಅವರ ಮೊಬೈಲ್ ವಶಪಡಿಸಿಕೊಂಡು “ಡೆತ್ ನೋಟ್” ಪರಿಶೀಲನೆ ಮಾಡುತ್ತಿದ್ದಾರೆ. ಮೂರು ವರ್ಷಗಳ ಹಿಂದಿನ ಘಟನೆಗೆ ಸಂಬಂಧಿಸಿದ ನೋವಿನಲ್ಲೇ ಸಿದ್ದಾಂತ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. “ಮಗನಿಗೆ ನ್ಯಾಯ ದೊರಕಬೇಕು” ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

