भाजपाचे ज्येष्ठ नेते प्रमोद कोचेरी यांची राज्य कार्यकारिणीवर सदस्य म्हणून निवड; कार्याची पोहोचपावती म्हणून मान्यता.
खानापूर : भारतीय जनता पार्टीचे बेळगाव जिल्हा उपाध्यक्ष व खानापूरमधील ज्येष्ठ नेते म्हणून ओळख असलेले कार्यसम्राट प्रमोद कोचेरी यांची पक्षाच्या राज्य कार्यकारिणीवर सदस्य म्हणून निवड करण्यात आली आहे. त्यांच्या दीर्घकालीन, निस्वार्थ व सातत्यपूर्ण कार्याची दखल घेत भाजपाच्या वरिष्ठ नेतृत्वाने त्यांना ही महत्त्वाची जबाबदारी सोपविली आहे. त्यांच्या कार्याची ही एकप्रकारे अधिकृत पोहोचपावतीच मानली जात आहे.

प्रमोद कोचेरी यांनी आजपर्यंत पक्षात निस्वार्थपणे काम करत तळागाळातील लोकांच्या समस्या सोडविण्यासाठी विशेष प्रयत्न केले आहेत. गोरगरीब व सर्वसामान्य नागरिकांच्या सरकारी कार्यालयातील अडचणी दूर करण्यासाठी त्यांनी सातत्याने पाठपुरावा केला. विविध शासकीय विभागांशी संपर्क साधून अनेक विकासकामांना मंजुरी मिळवून देण्यात त्यांनी मोलाचे योगदान दिले आहे.
त्यांच्या कार्याची दखल घेत पक्षाने त्यांना यापूर्वी तालुका अध्यक्षपदाची संधी दिली होती. त्या काळात त्यांनी गावागावात, खेडोपाडी जाऊन पक्ष संघटना मजबूत केली. त्यांच्या संघटन कौशल्यामुळे खानापूर तालुक्यातून भाजपाचे दोन वेळा आमदार निवडून आले. सध्या ते तिसऱ्यांदा जिल्हा उपाध्यक्ष म्हणून जबाबदारी पार पाडत आहेत.
माजी खासदार तथा केंद्रीय रेल्वे राज्यमंत्री स्व. सुरेश अंगडी हे भाजपाचे जिल्हाध्यक्ष असताना प्रमोद कोचेरी यांनी जिल्हा सचिव म्हणून त्यांच्या खांद्याला खांदा लावून काम केले. त्यामुळे जिल्ह्यातील वरिष्ठ नेते ते तळागाळातील कार्यकर्त्यांपर्यंत त्यांची चांगली ओळख निर्माण झाली आहे.
तसेच खासदार निधी, आमदार निधी, एमएलसी फंड आदींच्या माध्यमातून तालुक्यातील विविध विकासात्मक योजना राबविण्यासाठी त्यांनी सातत्याने प्रयत्न केले. माजी आमदार स्व. प्रल्हाद रेमाणी, विद्यमान आमदार विठ्ठल हलगेकर, माजी खासदार अनंतकुमार हेगडे, तसेच विद्यमान खासदार विश्वेश्वर हेगडे-कागेरी यांच्या सहकार्याने अनेक विकासकामांसाठी अनुदान मंजूर करून घेतले आहे.
ग्रामीण भागातील बस सेवा, रस्त्यांची दुरुस्ती, तालुक्यातील रेल्वेच्या समस्या, विविध शासकीय प्रश्न आदी मुद्द्यांवर संबंधित अधिकाऱ्यांची भेट घेऊन समस्यांचे निवारण करण्यात ते नेहमीच पुढाकार घेतात. त्यामुळे तालुक्यातील सामान्य नागरिकांना समस्या उद्भवल्यास सर्वप्रथम प्रमोद कोचेरी यांचीच आठवण येते.
कोणतेही मोठे पद नसतानाही ते लोकप्रतिनिधीप्रमाणे काम करीत असल्याची भावना तालुक्यातील नागरिक व भाजपाचे पदाधिकारी व्यक्त करतात. त्यामुळे आगामी विधानसभा निवडणुकीसाठी त्यांच्या नावाचा गांभीर्याने विचार व्हावा, अशी अपेक्षा कार्यकर्त्यांकडून व्यक्त होत आहे.
प्रमोद कोचेरी हे “आपलं खानापूर” न्यूज पोर्टल व “आपलं खानापूर” फेसबुक परिवाराचे हितचिंतक व सदस्य आहेत. त्यांच्या भाजपाच्या राज्य कार्यकारिणीवरील निवडीबद्दल “आपलं खानापूर” न्यूज पोर्टल व संपूर्ण “आपलं खानापूर” फेसबुक परिवाराच्या वतीने त्यांचे हार्दिक अभिनंदन करण्यात येत असून, पुढील वाटचालीस शुभेच्छा देण्यात येत आहेत.

ಖಾನಾಪುರ ತಾಲೂಕಿನ ಬಿಜೆಪಿಯ ಹಿರಿಯ ನಾಯಕ ಪ್ರಮೋದ್ ಕೋಚೇರಿ ಅವರ ರಾಜ್ಯ ಕಾರ್ಯಕಾರಿಣಿಗೆ ಸದಸ್ಯರಾಗಿ ಆಯ್ಕೆ; ಕಾರ್ಯದ ಮಾನ್ಯತೆಗೆ ಸಿಕ್ಕ ಅಧಿಕೃತ ಶ್ರೇಯಸ್ಸು.
ಖಾನಾಪುರ : ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಖಾನಾಪುರದ ಹಿರಿಯ ನಾಯಕರೆಂದು ಪರಿಚಿತರಾಗಿರುವ ಕರ್ತವ್ಯ ನಿಷ್ಠ ಕಾರ್ಯಸಮ್ರಾಟ್ ಪ್ರಮೋದ್ ಕೋಚೇರಿ ಅವರನ್ನು ಪಕ್ಷದ ರಾಜ್ಯ ಕಾರ್ಯಕಾರಿಣಿಗೆ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.
ಅವರ ದೀರ್ಘಕಾಲೀನ, ನಿಸ್ವಾರ್ಥ ಹಾಗೂ ಸತತ ಕಾರ್ಯವನ್ನು ಪರಿಗಣಿಸಿ ಬಿಜೆಪಿಯ ಹಿರಿಯ ನಾಯಕತ್ವವು ಅವರಿಗೆ ಈ ಮಹತ್ವದ ಜವಾಬ್ದಾರಿಯನ್ನು ಒಪ್ಪಿಸಿದೆ. ಅವರ ನಿಷ್ಠಾವಂತ ಕಾರ್ಯಕ್ಕೆ ಸಿಕ್ಕ ಒಂದು ಅಧಿಕೃತ ಶ್ರೇಯಸ್ಸು ವೆಂದೆ ಪರಿಗಣಿಸಲಾಗುತ್ತಿದೆ.
ಪ್ರಮೋದ್ ಕೋಚೇರಿ ಅವರು ಇಂದಿನವರೆಗೂ ಪಕ್ಷದಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡಿ ತಳಮಟ್ಟದ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ವಿಶೇಷ ಪ್ರಯತ್ನಗಳನ್ನು ಮಾಡಿದ್ದಾರೆ. ಬಡ ಹಾಗೂ ಸಾಮಾನ್ಯ ನಾಗರಿಕರ ಸರ್ಕಾರಿ ಕಚೇರಿಗಳಲ್ಲಿನ ಅಡಚಣೆಗಳನ್ನು ನಿವಾರಿಸಲು ಅವರು ನಿರಂತರ ಹೋರಾಟ ನಡೆಸಿದ್ದಾರೆ. ವಿವಿಧ ಸರ್ಕಾರಿ ಇಲಾಖೆಗಳೊಂದಿಗೆ ಸಂಪರ್ಕ ಸಾಧಿಸಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರು ಪಡೆಯಲು ಮಹತ್ವದ ಕೊಡುಗೆ ನೀಡಿದ್ದಾರೆ.
ಅವರ ಕಾರ್ಯದ ದಕ್ಷತೆಯ ಚಟುವಟಿಕೆಗಳನ್ನು ಗಮನಿಸಿ ಪಕ್ಷವು ಈ ಹಿಂದೆ ಅವರಿಗೆ ತಾಲ್ಲೂಕು ಅಧ್ಯಕ್ಷ ಸ್ಥಾನವನ್ನು ನೀಡಿತ್ತು. ಆ ಅವಧಿಯಲ್ಲಿ ಅವರು ಹಳ್ಳಿ-ಹಳ್ಳಿಗೆ, ಗ್ರಾಮ-ಗ್ರಾಮಕ್ಕೆ ಭೇಟಿ ನೀಡಿ ಪಕ್ಷ ಸಂಘಟನೆಯನ್ನು ಬಲಪಡಿಸಿದರು. ಅವರ ಸಂಘಟನಾ ಕೌಶಲ್ಯದಿಂದ ಖಾನಾಪುರ ತಾಲ್ಲೂಕಿನಿಂದ ಬಿಜೆಪಿ ಎರಡು ಬಾರಿ ಶಾಸಕರನ್ನು ಆಯ್ಕೆ ಮಾಡಲು ಸಾಧ್ಯವಾಯಿತು. ಪ್ರಸ್ತುತ ಅವರು ಮೂರನೇ ಬಾರಿ ಜಿಲ್ಲಾ ಉಪಾಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಮಾಜಿ ಸಂಸದ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿದ್ದ ಸ್ವ. ಸುರೇಶ ಅಂಗಡಿ ಅವರು ಬಿಜೆಪಿಯ ಜಿಲ್ಲಾ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪ್ರಮೋದ್ ಕೋಚೇರಿ ಅವರು ಜಿಲ್ಲಾ ಕಾರ್ಯದರ್ಶಿಯಾಗಿ ಅವರೊಂದಿಗೆ ಹೆಗಲಿಗೆ ಹೆಗಲು ಸೇರಿಸಿ ಕೆಲಸ ಮಾಡಿದರು. ಇದರ ಫಲವಾಗಿ ಜಿಲ್ಲೆಯ ಹಿರಿಯ ನಾಯಕರುಗಳಿಂದ ಹಿಡಿದು ತಳಮಟ್ಟದ ಕಾರ್ಯಕರ್ತರ ತನಕ ಅವರ ಚಿರಪರಿಚಿತರು. ಸಂಸದರ ನಿಧಿ, ಶಾಸಕಲ ನಿಧಿ, ಎಂಎಲ್ಸಿ ನಿಧಿ ಮುಂತಾದ ಅನುದಾನಗಳ ಮೂಲಕ ತಾಲ್ಲೂಕಿನ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲು ಅವರು ಸತತ ಪ್ರಯತ್ನಪಟ್ಟಿದ್ದಾರೆ. ಮಾಜಿ ಶಾಸಕ ಸ್ವ. ಪ್ರಲ್ಹಾದ್ ರೆಮಾನಿ, ಪ್ರಸ್ತುತ ಶಾಸಕ ವಿಠ್ಠಲ ಹಲಗೇಕರ್, ಮಾಜಿ ಸಂಸದ ಅನಂತಕುಮಾರ ಹೆಗಡೆ ಹಾಗೂ ಪ್ರಸ್ತುತ ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರ ಸಹಕಾರದಿಂದ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಿಸಿಕೊಂಡಿದ್ದಾರೆ.
ಗ್ರಾಮೀಣ ಪ್ರದೇಶದ ಬಸ್ ಸೇವೆ, ರಸ್ತೆ ದುರಸ್ತಿ, ತಾಲ್ಲೂಕಿನ ರೈಲ್ವೆ ಸಮಸ್ಯೆಗಳು ಹಾಗೂ ವಿವಿಧ ಸರ್ಕಾರಿ ವಿಷಯಗಳ ಕುರಿತು ಸಂಬಂಧಿತ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆಗಳ ಪರಿಹಾರದಲ್ಲಿ ಅವರು ಸದಾ ಮುಂಚೂಣಿಯಲ್ಲಿ ಇದ್ದಾರೆ. ಆದ್ದರಿಂದ ತಾಲ್ಲೂಕಿನ ಸಾಮಾನ್ಯ ನಾಗರಿಕರಿಗೆ ಯಾವುದೇ ಸಮಸ್ಯೆ ಉಂಟಾದಾಗ ಮೊದಲಿಗೆ ನೆನಪಾಗುವ ಹೆಸರೇ ಪ್ರಮೋದ್ ಕೋಚೇರಿ ಅವರದು ಆಗಿದೆ. ಯಾವುದೇ ದೊಡ್ಡ ಹುದ್ದೆ ಇಲ್ಲದಿದ್ದರೂ ಸಾಮಾನ್ಯ ಜನಪ್ರತಿನಿಧಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ನಾಗರಿಕರು ಹಾಗೂ ಬಿಜೆಪಿ ಪದಾಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಮುಂದಿನ ವಿಧಾನಸಭೆ ಚುನಾವಣೆಗೆ ಅವರ ಹೆಸರನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬ ನಿರೀಕ್ಷೆಯನ್ನು ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದಾರೆ.
ಪ್ರಮೋದ್ ಕೋಚೇರಿ ಅವರು “ಆಪಲ ಖಾನಾಪುರ” ನ್ಯೂಸ್ ಪೋರ್ಟಲ್ ಹಾಗೂ “ಆಪಲ ಖಾನಾಪುರ” ಫೇಸ್ಬುಕ್ ಕುಟುಂಬದ ಹಿತೈಷಿ ಹಾಗೂ ಸದಸ್ಯರಾಗಿದ್ದಾರೆ. ಅವರ ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ಆಯ್ಕೆ ಕುರಿತು “ಆಪಲ ಖಾನಾಪುರ” ನ್ಯೂಸ್ ಪೋರ್ಟಲ್ ಹಾಗೂ ಸಂಪೂರ್ಣ “ಆಪಲ ಖಾನಾಪುರ” ಫೇಸ್ಬುಕ್ ಕುಟುಂಬದ ವತಿಯಿಂದ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ರಾಜಕೀಯ ಮತ್ತು ಸಾಮಾಜಿಕ ಪಯಣಕ್ಕೆ ಶುಭಾಶಯಗಳನ್ನು ಕೋರುತ್ತೇವೆ.



