“आपलं खानापूर” वृताची दखल! प्रमोद कोचेरी यांच्या पुढाकाराने मलप्रभा नदीवरील पाणी आडविण्याचे कार्य सुरू! गुरुवारी गंगापूजन सोहळा भव्यदिव्य :भाविकांमध्ये आनंदाची लहर.
खानापूर ; 19 नोव्हेंबर – येथील श्री मलप्रभा नदी घाटावरील पारंपरिक गंगापूजन कार्यक्रमात अडथळा येऊ नये म्हणून आजपासून मलप्रभा नदी पुलावर पाणी आडविण्याचे काम तातडीने सुरू करण्यात आले आहे. “आपलं खानापूर” न्यूज पोर्टलने 15 नोव्हेंबर रोजी प्रसारित केलेल्या वृत्ताची दखल घेत भाजपाचे जिल्हा उपाध्यक्ष प्रमोद कोचेरी यांनी तत्परतेने पुढाकार घेतला असून कळसा–भांडुरा प्रकल्प विभागाकडून पाणी आडविण्यासाठी त्यांच्या प्रयत्नाने यंत्रणा हलविण्यात आली आहे.
दरवर्षीप्रमाणे उद्या गुरुवार, दिनांक 20 नोव्हेंबर 2025 रोजी श्री मलप्रभा नदी घाटावर गंगापूजनाचा भव्य धार्मिक उत्सव होणार आहे. मात्र कळसा–भांडुरा प्रकल्प विभागाकडून नदीवरील बंधाऱ्यावर पत्रे न बसवल्यामुळे नदीपात्रात पाणी फार कमी आहे. गंगापूजन विधीत अडथळा निर्माण होण्याची शक्यता व्यक्त करण्यात आली होती. याबाबत “आपलं खानापूर” न्यूज पोर्टलने वृत्त दिल्यानंतर हा विषय चर्चेत आला.
या प्रकरणी प्रमोद कोचेरी यांनी कळसा–भांडुरा प्रकल्पाचे असिस्टंट एक्झिक्युटिव्ह इंजिनियर रामकृष्ण मराठे यांची भेट घेऊन गंगापूजन सोहळ्यात अडथळा येऊ नये याबाबत विनंती केली. त्यांच्या सकारात्मक प्रतिसादानंतर आज बुधवार, 19 नोव्हेंबर पासून पुलावर पाणी आडविण्याचे काम जेसीबी व मनुष्यबळाच्या सहाय्याने सुरू करण्यात आले असून उद्यापर्यंत नदीवर पत्रे बसवून पूर्ण पाणी अडविले जाणार आहे.
आज पाणी अडविण्यासाठी सुरू असलेल्या कामाच्या प्रत्यक्ष ठिकाणी कळसा भांडुरा प्रकल्पाचे अभियंता रामकृष्ण मराठे, भाजपाचे जिल्हा उपाध्यक्ष प्रमोद कोचेरी, ज्येष्ठ नेते व माजी अध्यक्ष संजय कुबल यांनी पाहणी केली. यावेळी अभियंता मराठे यांनी जेसीबी चालक तसेच प्रकल्पाच्या अधिकाऱ्यांना काही सूचना केल्या.
यावेळी बोलताना प्रमोद कोचेरी म्हणाले,
“आपलं खानापूर” पोर्टलचे संपादक दिनकर मरगाळे यांनी पाणी अडविण्याबाबत समाजहिताचे वृत्त प्रसारित केले. परंपरेने सुरू असलेला गंगापूजन कार्यक्रम अडथळा न येता पार पडावा यासाठी आपण पुढाकार घेतला असून प्रशासनानेही तात्काळ कार्यवाही केली असल्याचे सांगितले व अभियंता मराठे यांचे आभार मानले. तसेच भाविकांना उद्याच्या गंगापूजन उत्सवाच्या हार्दिक शुभेच्छा.” दिल्या.
यावेळी भाजपाचे ज्येष्ठ नेते संजय कुबल म्हणाले,
“गंगापूजन हा मलप्रभा नदी तीरावर अनेक वर्षांची जपलेली समृद्ध परंपरा आहे. दिनकर मरगाळे यांनी दिलेल्या वृत्ताची तात्काळ दखल घेत भाजपाचे जिल्हा उपाध्यक्ष प्रमोद कोचेरी यांनी संबंधित विभागाशी संपर्क साधून व्यवस्था निश्चित केल्यामुळे उद्याचा गंगापूजन सोहळा अधिक उत्साहात पार पडणार आहे.” त्यासाठी भाविकांनी मोठ्या प्रमाणात या उत्सवाला उपस्थित राहण्याची विनंती केली.
भाविकांना आवाहन…
उद्याच्या गंगापूजन कार्यक्रमासाठी पाणी मोठ्या प्रमाणात अडविण्यात येत असल्याने खानापूर शहर व परिसरातील सर्व भाविकांनी मोठ्या संख्येने उपस्थित राहावे, असे आवाहन श्री मलप्रभा नदी घाट कमिटीच्या वतीने करण्यात आले आहे.
“ಆಪಲ ಖಾನಾಪುರ” ವರದಿಯ ಸ್ಪಂದನೆ! ಪ್ರಮೊದ ಕೊಚೇರಿ ಅವರ ಮುಂದಾಳತ್ವದಲ್ಲಿ ಮಲಪ್ರಭಾ ನದಿ ನೀರಿಗೆ ತಡೆಗೂಡೆ ಹಾಕುವ ಕಾರ್ಯ ಪ್ರಾರಂಭ! ಗುರುವಾರ ಗಂಗಾ ಪೂಜನ ಮಹಾಸಮಾರಂಭ : ಭಕ್ತರಲ್ಲಿ ಸಂಭ್ರಮದ ಅಲೆ.
ಖಾನಾಪುರ ; 19 ನವೆಂಬರ್ – ಶ್ರೀ ಮಲಪ್ರಭಾ ನದಿ ಘಾಟ್ ಮೇಲೆ ನಡೆಯುವ ಪಾರಂಪರಿಕ ಗಂಗಾ ಪೂಜೆ ಕಾರ್ಯಕ್ರಮಕ್ಕೆ ಯಾವುದೇ ಅಡೆತಡೆ ಆಗದೆ ಹಾಗೆ ಇಂದಿನಿಂದಲೇ ಮಲಪ್ರಭಾ ನದಿ ಸೇತುವೆ ಬಳಿ ನೀರಿಗೆ ಅಡ್ಡಲಾಗಿ ತಡೆಗೂಡೆ ಹಾಕುವ ಕೆಲಸ ತುರ್ತಾಗಿ ಆರಂಭಿಸಲಾಗಿದೆ. “ಆಪಲ ಖಾನಾಪುರ” ನ್ಯೂಸ್ ಪೋರ್ಟಲ ಈ ಪ್ರಕರಣದಲ್ಲಿ ಇದೆ 15 ನವೆಂಬರ್ ರಂದು ಪ್ರಸಾರ ಮಾಡಿದ ವರದಿಗೆ ಸ್ಪಂದಿಸಿ BJP ಜಿಲ್ಲಾ ಉಪಾಧ್ಯಕ್ಷ ಪ್ರಮೊದ ಕೊಚೇರಿ ಅವರು ತಕ್ಷಣವೇ ಮುಂದಾಳತ್ವ ತೋರಿದ್ದು, ಕಳಸಾ–ಭಾಂಡೂರಾ ಯೋಜನಾ ವಿಭಾಗದಿಂದ ನೀರಿಗೆ ಅಡ್ಡಲಾಗಿ ತಡೆಗೂಡೆ ಹಾಕಲು ಯಂತ್ರವನ್ನು ಕಾರ್ಯ ಪ್ರವೃತ್ತಗೊಳಿಸಲು ಯಶಸ್ವಿ ಪ್ರಯತ್ನ ಮಾಡಿದ್ದಾರೆ.
ಹಿಂದಿನ ವರ್ಷಗಳಂತೆ ನಾಳೆ ಗುರುವಾರ, ದಿನಾಂಕ 20 ನವೆಂಬರ್ 2025 ರಂದು ಶ್ರೀ ಮಲಪ್ರಭಾ ನದಿ ಘಾಟ್ನಲ್ಲಿ ಗಂಗಾ ಪೂಜೆಯ ಭವ್ಯ ಧಾರ್ಮಿಕ ಮಹೋತ್ಸವ ನಡೆಯಲಿದೆ. ಆದರೆ ಕಳಸಾ–ಭಾಂಡುರಾ ಯೋಜನಾ ವಿಭಾಗದಿಂದ ನದಿ ಬಂದುರ ಮೇಲೆ ತಡೆಗೋಡೆಗಾಗಿ ಪ್ಲೇಟ್ಗಳನ್ನು (ಪತ್ರೆ) ಅಳವಡಿಸದಿರುವುದರಿಂದ ನದಿತಟದಲ್ಲಿ ನೀರು ತುಂಬಾ ಕಡಿಮೆ ಇತ್ತು. ಇದರ ಪರಿಣಾಮವಾಗಿ ಗಂಗಾ ಪೂಜಾ ವಿಧಾನಕ್ಕೆ ಅಡಚಣೆ ಬರಬಹುದೆಂಬ ಆತಂಕ ವ್ಯಕ್ತವಾಗಿತ್ತು. ಈ ಕುರಿತು “ಆಪಲ ಖಾನಾಪುರ” ನ್ಯೂಸ್ ಪೋರ್ಟಲ್ ಸುದ್ದಿ ಪ್ರಸಾರ ಮಾಡಿದ ನಂತರ ವಿಷಯ ಚರ್ಚೆಗೆ ಗ್ರಾಸವಾಯಿತು.
ಈ ವಿಷಯದಲ್ಲಿ ಪ್ರಮೊದ ಕೊಚೇರಿ ಅವರು ಕಳಸಾ–ಭಾಂಡುರಾ ಯೋಜನೆಯ ಸಹ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಕೃಷ್ಣ ಮರಾಠೆ ಅವರನ್ನು ಭೇಟಿ ಮಾಡಿ ಗಂಗಾ ಪೂಜೆ ಕಾರ್ಯಕ್ರಮಕ್ಕೆ ಅಡಚಣೆ ಬರದಂತೆ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು. ಅವರ ಸಕಾರಾತ್ಮಕ ಪ್ರತಿಕ್ರಿಯೆ ನೀಡಿ ಇಂದೇ ಬುಧವಾರ, 19 ನವೆಂಬರ್ ರಿಂದ ಸೇತುವೆ ಬಳಿ ಜೆಸಿಬಿ ಹಾಗೂ ಮಾನವಬಲದ ನೆರವಿನಿಂದ ನೀರು ತಡೆ ಕೆಲಸ ಪ್ರಾರಂಭವಾಗಿದೆ. ನಾಳೆಯೊಳಗೆ ನದಿಯಲ್ಲಿ ತಡೆಗೋಡೆಗಳನ್ನು ಅಳವಡಿಸಿ ಸಂಪೂರ್ಣವಾಗಿ ನೀರನ್ನು ಸಂಗ್ರಹಿಸಲಾಗುವುದು.
ನೇರವಾಗಿ ನೀರನ್ನು ಸಂಗ್ರಹಿಸುವ ಸ್ಥಳಕ್ಕೆ ಕಳಸಾ–ಭಾಂದುರಾ ಯೋಜನೆ ಇಂಜಿನಿಯರ್ ರಾಮಕೃಷ್ಣ ಮರಾಠೆ, BJP ಜಿಲ್ಲಾ ಉಪಾಧ್ಯಕ್ಷ ಪ್ರಮೊದ ಕೊಚೇರಿ ಹಾಗೂ ಹಿರಿಯ ನಾಯಕ, ಮಾಜಿ ಅಧ್ಯಕ್ಷ ಸಂಜಯ ಕುಬಲ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಇಂಜಿನಿಯರ್ ಮರಾಠೆ ಅವರು ಜೆಸಿಬಿ ಚಾಲಕ ಮತ್ತು ಯೋಜನಾ ವಿಭಾಗದ ಅಧಿಕಾರಿಗಳಿಗೆ ಕೆಲವು ಸೂಚನೆಗಳನ್ನು ನೀಡಿದರು.
ಆ ಸಂದರ್ಭದಲ್ಲಿ ಮಾತನಾಡಿದ ಪ್ರಮೊದ ಕೊಚೇರಿ — “ಆಪಲ ಖಾನಾಪುರ” ಪೋರ್ಟಲ್ನ ಸಂಪಾದಕ ದಿನಕರ ಮರ್ಗಾಳೆ ಅವರು ಸಮಾಜಹಿತದ ವರದಿ ಪ್ರಕಟಿಸಿ ವಿಷಯ ಗಮನಕ್ಕೆ ತಂದರು. ಪಾರಂಪರಿಕವಾಗಿ ನಡೆಯುವ ಗಂಗಾ ಪೂಜಾ ಕಾರ್ಯಕ್ರಮಕ್ಕೆ ಅಡೆತಡೆ ಬರದಂತೆ ನಾವು ಮುಂದಾಳತ್ವ ವಹಿಸಿ ಹಾಗೆಯೇ ಆಡಳಿತವು ತಕ್ಷಣ ಕ್ರಮ ಕೈಗೊಂಡಿದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು. ಅಲ್ಲದೆ ಭಕ್ತರಿಗೆ ನಾಳೆಯ ಗಂಗಾ ಪೂಜಾ ಮಹೋತ್ಸವದ ಹಾರ್ದಿಕ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ BJP ಹಿರಿಯ ನಾಯಕ ಸಂಜಯ ಕುಬಲ — “ಗಂಗಾ ಪೂಜಾ ಮಲಪ್ರಭಾ ನದಿತೀರದ ದಶಕಗಳಿಂದ ಬಂದಿರುವ ಶ್ರೀಮಂತ ಪರಂಪರೆ. ದಿನಕರ ಮರಗಾಳೆ ಅವರ ವರದಿಗೆ ತಕ್ಷಣ ಸ್ಪಂದಿಸಿ BJP ಜಿಲ್ಲಾ ಉಪಾಧ್ಯಕ್ಷ ಪ್ರಮೊದ ಕೊಚೇರಿ ಅವರು ಸಂಬಂಧಪಟ್ಟ ಇಲಾಖೆಯೊಂದಿಗೆ ಸಂಪರ್ಕಿಸಿ ಅಗತ್ಯ ವ್ಯವಸ್ಥೆ ಏರ್ಪಡಿಸಿದ್ದರಿಂದ ನಾಳೆಯ ಗಂಗಾ ಪೂಜಾ ಉತ್ಸವ ಇನ್ನಷ್ಟು ಉತ್ಸಾಹದಿಂದ ನೆರವೆರೆಯಲಿದೆ.” ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಉತ್ಸವಕ್ಕೆ ಆಗಮಿಸಬೇಕೆಂದು ಕೋರಿದರು.
ಭಕ್ತರಿಗೆ ಮನವಿ…
ನಾಳೆಯ ಗಂಗಾ ಪೂಜಾ ಕಾರ್ಯಕ್ರಮಕ್ಕಾಗಿ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಅಡ್ಡಹಾಕಲಾಗುತ್ತಿರುವುದರಿಂದ ಖಾನಾಪುರ ನಗರ ಹಾಗೂ ಸುತ್ತಮುತ್ತಲಿನ ಎಲ್ಲಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಬೇಕೆಂದು ಶ್ರೀ ಮಲಪ್ರಭಾ ನದಿ ಘಾಟ್ ಸಮಿತಿಯ ವತಿಯಿಂದ ವಿನಂತಿ ಪ್ರಕಟಿಸಲಾಗಿದೆ.

