श्री महालक्ष्मी देवीच्या यात्रेसाठी नेरसा सज्ज; विकासकामांना आमदार हलगेकरांचा शब्द.
खानापूर : खानापूर तालुक्यातील नेरसा-काटगाळी गावचे ग्रामदैवत श्री महालक्ष्मी देवीच्या एप्रिल 2027 मध्ये होणाऱ्या भव्य यात्रेच्या पूर्वतयारीसाठी ग्रामसभा शुक्रवार, दि. 7 ऑगस्ट रोजी नेरसा येथे उत्साहपूर्ण वातावरणात पार पडली. तब्बल 19 वर्षांच्या प्रदीर्घ कालावधीनंतर ही यात्रा होत असल्याने नेरसा-काटगाळीसह परिसरातील गावांमध्ये मोठा उत्साह निर्माण झाला आहे.
या ग्रामसभेला खानापूरचे आमदार विठ्ठलराव हलगेकर यांनी प्रमुख उपस्थिती लावून ग्रामस्थांशी संवाद साधला. यावेळी श्री लक्ष्मीदेवी यात्राोत्सव ट्रस्ट कमिटी, नेरसे यांच्या वतीने आमदार हलगेकर यांना यात्रेच्या पूर्वतयारीसह परिसराच्या विकासासाठी विविध मागण्यांचे निवेदन देण्यात आले.
यात्रेच्या पार्श्वभूमीवर खानापूर-हेमाडगा रस्त्यापासून नेरसा गावापर्यंतचा सुमारे 5 किलोमीटरचा रस्ता, नेरसा-हणबरवाडा रस्ता, नेरसा-कांजळा अर्थात देवीची पारंपरिक वाट, गावाचा रिंगरोड (चक्कर लाईन), मेन रोड-चाफावाडा रस्ता तसेच गावातील इतर जोडरस्त्यांची दुरुस्ती व विकास करण्याची मागणी निवेदनातून करण्यात आली.
यात्रेदरम्यान लाखो भाविकांची गर्दी होण्याची शक्यता असल्याने वाहतूक कोंडी टाळण्यासाठी गावाला रिंगरोड उभारणे, तसेच प्रमुख रस्ते दर्जेदार पद्धतीने पूर्ण करण्याची मागणी करण्यात आली. आमदार हलगेकर यांनी निवेदनातील सर्व रस्त्यांची गंभीर दखल घेत ही कामे प्राधान्यक्रमाने मार्गी लावण्याचे आश्वासन दिले.
ग्रामस्थांना संबोधित करताना आमदार विठ्ठलराव हलगेकर म्हणाले की, “श्री महालक्ष्मी देवीच्या यात्रेसाठी येणाऱ्या लाखो भाविकांची आणि परिसरातील ग्रामस्थांची कोणतीही गैरसोय होऊ दिली जाणार नाही. निवेदनात नमूद केलेले मुख्य रस्ते, जोडरस्ते आणि रिंगरोड यात्रेपूर्वी दर्जेदार पद्धतीने पूर्ण करण्यासाठी आवश्यक सरकारी निधी मंजूर करून आणला जाईल.”
पाणी, वीज, आरोग्य व एसटी सुविधांनाही प्राधान्य…
रस्त्यांबरोबरच श्री लक्ष्मीदेवी गडगा आवाराचे सुशोभीकरण, पिण्याच्या पाण्याची व्यवस्था व छोट्या पाण्याच्या टाक्या बसविणे, यात्राकाळात विशेष एसटी बस सेवा, डॉक्टर व रुग्णवाहिका सुविधा तसेच अखंड वीजपुरवठा सुरळीत ठेवण्याच्या मागण्यांवरही आमदारांनी सकारात्मक निर्णय घेण्याचे आश्वासन दिले.
या ग्रामसभेचे अध्यक्षस्थान धनंजय देसाई यांनी भूषवले. तालुका पंचायतचे कार्यकारी अधिकारी रमेश मेस्त्री, भाजप नेत्या धनश्री सरदेसाई, भाजप नेते मल्लप्पा मारीहाळ, शंकर पाटील, भाजप युवा नेते दत्ता कदम, जोतिबा पाटील, अशोकन्ना देसाई, ग्रामपंचायत पीडीओ, ग्रामपंचायत सदस्य, पंच कमिटीचे सदस्य तसेच नेरसा आणि परिसरातील ग्रामस्थ मोठ्या संख्येने उपस्थित होते.
शेडेगाळी, गवाळी, असोगा, शिरोली, डोंगरगाव, हेमाडगा, पाली, देगाव, मेंडील, जामगाव, अबनाळी, तेरेगाळी, तळेवाडी, कृष्णापूर, कोगळा, पास्टोली, कांजळा आदी गावांतील नागरिकांनीही ग्रामसभेला उपस्थिती लावली. 19 वर्षांनंतर होणाऱ्या या यात्रेच्या निमित्ताने परिसराच्या विकासाला गती मिळणार असल्याने ग्रामस्थांमध्ये समाधान व उत्साहाचे वातावरण आहे.
ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರೆಗೆ ನೆರಸಾ ಊರು ಸಜ್ಜು; ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಹಲಗೇಕರ ಭರವಸೆ.
ಖಾನಾಪುರ : ಖಾನಾಪುರ ತಾಲೂಕಿನ ನೆರಸಾ-ಕಾಟಗಾಳಿ ಗ್ರಾಮದ ಗ್ರಾಮ ದೇವತೆ ಶ್ರೀ ಮಹಾಲಕ್ಷ್ಮೀ ದೇವಿಯ 2027ರ ಏಪ್ರಿಲ್ನಲ್ಲಿ ನಡೆಯಲಿರುವ ಭವ್ಯ ಜಾತ್ರೆಯ ಪೂರ್ವತಯಾರಿಗಾಗಿ ಗ್ರಾಮಸಭೆ ಶುಕ್ರವಾರ, ದಿ. 7 ಆಗಸ್ಟ್ ರಂದು ನೆರಸಾದಲ್ಲಿ ಉತ್ಸಾಹದ ವಾತಾವರಣದಲ್ಲಿ ನಡೆಯಿತು. ಬರೋಬ್ಬರಿ 19 ವರ್ಷಗಳ ದೀರ್ಘ ಅವಧಿಯ ನಂತರ ಈ ಜಾತ್ರೆ ನಡೆಯುತ್ತಿರುವುದರಿಂದ ನೆರಸಾ-ಕಾಟಗಾಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾರಿ ಉತ್ಸಾಹದ ವಾತಾವರಣ ನಿರ್ಮಾಣವಾಗಿದೆ.
ಈ ಗ್ರಾಮಸಭೆಗೆ ಖಾನಾಪುರದ ಶಾಸಕ ವಿಠ್ಠಲರಾವ್ ಹಲಗೇಕರ ಅವರು ಪ್ರಮುಖವಾಗಿ ಉಪಸ್ಥಿತರಿದ್ದು, ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀದೇವಿ ಜಾತ್ರೋತ್ಸವ ಟ್ರಸ್ಟ್ ಕಮಿಟಿ, ನೆರಸಾ ಇವರ ವತಿಯಿಂದ ಶಾಸಕ ಹಲಗೇಕರ ಅವರಿಗೆ ಜಾತ್ರೆಯ ಪೂರ್ವತಯಾರಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು.
ಜಾತ್ರೆಯ ಹಿನ್ನೆಲೆಯಲ್ಲಿ ಖಾನಾಪುರ-ಹೇಮಾಡಗಾ ರಸ್ತೆಯಿಂದ ನೆರಸಾ ಗ್ರಾಮದವರೆಗೆ ಸುಮಾರು 5 ಕಿಲೋಮೀಟರ್ಗಳ ರಸ್ತೆ, ನೆರಸಾ-ಹಣಬರವಾಡಾ ರಸ್ತೆ, ನೆರಸಾ-ಕಾಂಜಳಾ ಅಂದರೆ ದೇವಿಯ ಸಾಂಪ್ರದಾಯಿಕ ದಾರಿ, ಗ್ರಾಮದ ರಿಂಗ್ರೋಡ್ (ಚಕ್ಕರ್ ಲೈನ್), ಮೆನ್ರೋಡ್-ಚಾಫಾವಾಡಾ ರಸ್ತೆ ಹಾಗೂ ಗ್ರಾಮದ ಇತರ ಸಂಪರ್ಕ ರಸ್ತೆಗಳನ್ನು ದುರಸ್ತಿ ಮಾಡಿ ಅಭಿವೃದ್ಧಿಪಡಿಸುವಂತೆ ಮನವಿ ಮೂಲಕ ಒತ್ತಾಯಿಸಲಾಯಿತು.
ಜಾತ್ರೆಯ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಆಗಮಿಸುವ ಸಾಧ್ಯತೆ ಇರುವುದರಿಂದ ಸಂಚಾರ ದಟ್ಟಣೆ ಉಂಟಾಗದಂತೆ ಗ್ರಾಮಕ್ಕೆ ರಿಂಗ್ರೋಡ್ ನಿರ್ಮಿಸುವುದು, ಹಾಗೆಯೇ ಪ್ರಮುಖ ರಸ್ತೆಗಳನ್ನು ಗುಣಮಟ್ಟದ ರೀತಿಯಲ್ಲಿ ಪೂರ್ಣಗೊಳಿಸುವಂತೆ ಮನವಿ ಮೂಲಕ ಬೇಡಿಕೆ ಸಲ್ಲಿಸಲಾಯಿತು. ಶಾಸಕ ಹಲಗೇಕರ ಅವರು ಮನವಿಯಲ್ಲಿ ಉಲ್ಲೇಖಿಸಲಾದ ಎಲ್ಲಾ ರಸ್ತೆಗಳನ್ನು ಗಂಭೀರವಾಗಿ ಪರಿಗಣಿಸಿ, ಈ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಂಡು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಶಾಸಕ ವಿಠ್ಠಲರಾವ್ ಹಲಗೇಕರ ಅವರು, “ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗಲು ಬಿಡುವುದಿಲ್ಲ. ಮನವಿಯಲ್ಲಿ ಉಲ್ಲೇಖಿಸಿರುವ ಪ್ರಮುಖ ರಸ್ತೆಗಳು, ಸಂಪರ್ಕ ರಸ್ತೆಗಳು ಹಾಗೂ ರಿಂಗ್ರೋಡ್ಗಳನ್ನು ಜಾತ್ರೆಗೂ ಮುನ್ನ ಗುಣಮಟ್ಟದ ರೀತಿಯಲ್ಲಿ ಪೂರ್ಣಗೊಳಿಸಲು ಅಗತ್ಯವಿರುವ ಸರ್ಕಾರಿ ಅನುದಾನವನ್ನು ಮಂಜೂರು ಮಾಡಿಸಿಕೊಂಡು ಬರಲಾಗುವುದು,” ಎಂದು ಹೇಳಿದರು.
ನೀರು, ವಿದ್ಯುತ್, ಆರೋಗ್ಯ ಹಾಗೂ ಸಾರಿಗೆ ಸೌಲಭ್ಯಗಳಿಗೂ ಆದ್ಯತೆ…
ರಸ್ತೆಗಳ ಜೊತೆಗೆ ಶ್ರೀ ಲಕ್ಷ್ಮೀದೇವಿ ಗಡಗಾ ಆವರಣದ ಸೌಂದರ್ಯೀಕರಣ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸಣ್ಣ ನೀರಿನ ಟ್ಯಾಂಕ್ಗಳನ್ನು ಅಳವಡಿಸುವುದು, ಜಾತ್ರೆಯ ಸಂದರ್ಭದಲ್ಲಿ ವಿಶೇಷ ಕೆಎಸ್ಆರ್ಟಿಸಿ ಬಸ್ ಸೇವೆ, ವೈದ್ಯರು ಹಾಗೂ ಆಂಬ್ಯುಲೆನ್ಸ್ ವ್ಯವಸ್ಥೆ ಮತ್ತು ನಿರಂತರ ವಿದ್ಯುತ್ ಪೂರೈಕೆಯನ್ನು ಸುಗಮವಾಗಿ ನಿರ್ವಹಿಸುವಂತೆ ಮಾಡಿರುವ ಬೇಡಿಕೆಗಳಿಗೂ ಶಾಸಕ ಹಲಗೇಕರ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಗ್ರಾಮಸಭೆಯ ಅಧ್ಯಕ್ಷತೆಯನ್ನು ಧನಂಜಯ ದೇಸಾಯಿ ಅವರು ವಹಿಸಿದ್ದರು. ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಮೇಸ್ತ್ರಿ, ಬಿಜೆಪಿ ನಾಯಕಿ ಧನಶ್ರೀ ಸರದೇಶಾಯಿ, ಬಿಜೆಪಿ ಮುಖಂಡರಾದ ಮಲ್ಲಪ್ಪ ಮಾರಿಹಾಳ, ಶಂಕರ ಪಾಟೀಲ, ಬಿಜೆಪಿ ಯುವ ನಾಯಕ ದತ್ತಾ ಕದಮ, ಜ್ಯೋತಿಬಾ ಪಾಟೀಲ, ಅಶೋಕಣ್ಣಾ ದೇಸಾಯಿ, ಗ್ರಾಮ ಪಂಚಾಯಿತಿ ಪಿಡಿಒ, ಗ್ರಾಮ ಪಂಚಾಯಿತಿ ಸದಸ್ಯರು, ಪಂಚ ಕಮಿಟಿಯ ಸದಸ್ಯರು ಹಾಗೂ ನೆರಸಾ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಶೆಡೆಗಾಳಿ, ಗವಾಳಿ, ಅಸೋಗಾ, ಶಿರೋಳಿ, ಡೋಂಗರಗಾಂವ್, ಹೇಮಾಡಗಾ, ಪಾಲಿ, ದೇಗಾಂವ್, ಮೆಂಡೀಲ್, ಜಾಮಗಾಂವ್, ಅಬನಾಳಿ, ತೇರೆಗಾಳಿ, ತಳೇವಾಡಿ, ಕೃಷ್ಣಾಪುರ, ಕೊಗಳಾ, ಪಾಸ್ಟೋಲಿ, ಕಾಂಜಳಾ ಸೇರಿದಂತೆ ವಿವಿಧ ಗ್ರಾಮಗಳ ನಾಗರಿಕರೂ ಗ್ರಾಮಸಭೆಯಲ್ಲಿ ಭಾಗವಹಿಸಿದ್ದರು.
19 ವರ್ಷಗಳ ನಂತರ ನಡೆಯಲಿರುವ ಈ ಭವ್ಯ ಜಾತ್ರೆಯ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಗೆ ವೇಗ ದೊರೆಯಲಿದ್ದು, ಗ್ರಾಮಸ್ಥರಲ್ಲಿ ತೃಪ್ತಿ ಹಾಗೂ ಉತ್ಸಾಹದ ವಾತಾವರಣ ನಿರ್ಮಾಣವಾಗಿದೆ.



