3 वेळा गांधीग्राम पुरस्कार मिळविलेली नंदगड ग्रामपंचायत कचऱ्याच्या विळख्यात ; नागरिकात संतापाची लाट.
खानापूर ; कर्नाटक सरकारचा तीन वेळा गांधी ग्राम पुरस्कार मिळविलेली नंदगड ग्रामपंचायत कचऱ्याच्या विळख्यात सापडली असून नंदगड ग्रामपंचायतच्या वार्ड नंबर 2 च्या अखत्यारित येत असलेल्या व शाळेकडे जाणाऱ्या एका रस्त्याशेजारी कचऱ्याचा ढीग व उकिरडा निर्माण झाला आहे. याकडे ग्रामपंचायतीने संपूर्णपणे दुर्लक्ष केले आहे. या भागातून शाळेला जाणाऱ्या विद्यार्थ्यांच्या व नागरिकांच्या आरोग्याच्या प्रश्न निर्माण झाला आहे त्यामुळे या भागातील नागरिकांतून नंदगड ग्रामपंचायत बद्दल असमाधान व्यक्त करण्यात येत आहे. त्यासाठी तालुका पंचायतीच्या व जिल्हा पंचायतीच्या वरिष्ठ अधिकाऱ्यांनी याची पाहणी करून संबंधित अधिकाऱ्यांवर कारवाई करण्याची मागणी या भागातील नागरिकांतून होत आहे. तसेच रस्त्या शेजारी कचरा टाकणाऱ्या संबंधित नागरिकावर कारवाई करण्याची सुद्धा मागणी होत आहे.
नंदगड ग्रामपंचायतला कर्नाटक सरकारचा तीन वेळा गांधीग्राम पुरस्कार मिळाला आहे. याबरोबरच कर्नाटक राज्यातील 17 ग्रामपंचायत अध्यक्षांचा दिल्ली या ठिकाणी सत्कारही करण्यात आला होता. त्यामध्ये नंदगड ग्रामपंचायत अध्यक्षांचा सुद्धा समावेश होता. त्यामुळे नागरिक, ग्रामपंचायतला संबंधित अधिकारी व अध्यक्ष यांना प्रश्न विचारत आहेत, की, नंदगड ग्रामपंचायत स्वच्छ केल्याबद्दल दिल्ली येथे अध्यक्षांचा सत्कार करण्यात आला आहे. काय, कचऱ्याचा ढीग साठविण्यात आल्याबद्दल सत्कार करण्यात आला आहे असा प्रश्न नागरिकांतून विचारण्यात येत आहे.
वार्ड नंबर दोन मध्ये एकूण चार ग्रामपंचायत सदस्य आहेत. यापैकी एक ग्रामपंचायत सदस्य असलेले प्रदीप पवार यांनी ग्रामपंचायत पीडीओ व अध्यक्षांच्या कानावर ही गोष्ट घातली आहे. परंतु त्यांनी याकडे दुर्लक्ष केले असल्याचा आरोप प्रदीप पवार यांनी केला आहे.
कचऱ्याच्या ढिगार्याकडे पाहिले असता या भागातून जाणारा शालेय विद्यार्थ्यांना व नागरिकांना आरोग्याची गंभीर समस्या होण्याची शक्यता आहे. तसेच या ठिकाणी दुर्गंधी येत असल्याने नागरिकांना व शालेय विद्यार्थ्यांना नाक मुठीत धरून जावे लागत आहे.
ಹಿಂದೆ ಗಾಂಧಿ ಗ್ರಾಮ ಪ್ರಶಸ್ತಿ ಪಡೆದ ನಂದಗಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈಗ ಕಸದ ರಾಶಿಯಲ್ಲಿ ಸಿಲುಕಿದೆ; ನಾಗರಿಕರಲ್ಲಿ ಅಸಮಾಧಾನ.
ಖಾನಾಪುರ : ಕರ್ನಾಟಕ ಸರ್ಕಾರದಿಂದ ಮೂರು ಬಾರಿ ಗಾಂಧಿಗ್ರಾಮ ಪ್ರಶಸ್ತಿ ಪಡೆದ ನಂದಗಡ ಗ್ರಾಮಪಂಚಾಯತಿಯ ಪ್ರಸ್ತುತ ಸ್ಥಿತಿ ಅತ್ಯಂತ ಚಿಂತೆ ಹುಟ್ಟಿಸುವಂತಾಗಿದೆ. ಗ್ರಾಮಪಂಚಾಯತಿಯ ವಾರ್ಡ್ ನಂ. ೨ ರ ಶಾಲೆಯತ್ತ ಸಾಗುವ ರಸ್ತೆಯ ಪಕ್ಕದಲ್ಲಿ ದೊಡ್ಡ ಮಟ್ಟದಲ್ಲಿ ಕಸದ ರಾಶಿ ಸೇರುತ್ತಿದ್ದು, ಇದ ಕಡೆಗೆ ಗ್ರಾಮಪಂಚಾಯತಿ ಸಂಪೂರ್ಣ ನಿರ್ಲಕ್ಷ್ಯ ತೋರಿದ ಕಾರಣ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ದಾರಿಯಿಂದ ಪ್ರತಿದಿನ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಸಂಚರಿಸುತ್ತಿದ್ದು, ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಸದ ಕಾರಣದಿಂದ ಸಾಂಕ್ರಾಮಿಕ ರೋಗಗಳು ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುವುದರಿಂದ ಈ ಭಾಗದ ನಾಗರಿಕರು ಗ್ರಾಮಪಂಚಾಯತಿಯ ನಿರ್ಲಕ್ಷ್ಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತಾಲೂಕು ಹಾಗೂ ಜಿಲ್ಲಾ ಪಂಚಾಯತಿಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಸಂಬಂಧಿಸಿದ ಗ್ರಾಮಪಂಚಾಯತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ, ರಸ್ತೆ ಬದಿಯಲ್ಲಿ ಕಸ ಎಸೆಯುವ ನಾಗರಿಕರ ಮೇಲೂ ದಂಡಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವಿಶೇಷವೆಂದರೆ, ನಂದಗಡ ಗ್ರಾಮಪಂಚಾಯತಿಗೆ ದೊರೆತಿರುವ ಮೂರು ಗಾಂಧಿಗ್ರಾಮ ಪ್ರಶಸ್ತಿಗಳ ಜೊತೆಗೆ, ಪಂಚಾಯತಿ ಅಧ್ಯಕ್ಷರ ದೆಹಲಿಯಲ್ಲಿ ನಡೆದ ಸತ್ಕಾರವೂ ಇದೀಗ ಚರ್ಚೆಗೆ ಗ್ರಾಸವಾಗಿದೆ. “ಊರು ಸ್ವಚ್ಛ ಮಾಡಿದಕ್ಕಾಗಿ ಸತ್ಕಾರ ನಡೆಯಿತೇ, ಅಥವಾ ಕಸದ ಗುಡ್ಡ ಹಾಕಲು?” ಎಂದು ನಾಗರಿಕರು ಕಟುವಾಗಿ ಟೀಕಿಸಿದ್ದಾರೆ.
ವಾರ್ಡ್ ನಂ. ೨ರಲ್ಲಿ ಒಟ್ಟು ನಾಲ್ಕು ಸದಸ್ಯರಿದ್ದು, ಅವರಲ್ಲಿ ಒಬ್ಬರಾದ ಪ್ರದೀಪ ಪವಾರ್ ಅವರು ಈ ಸಮಸ್ಯೆಯನ್ನು ಗ್ರಾಮಪಂಚಾಯತಿ ಪಿಡಿಓ ಹಾಗೂ ಅಧ್ಯಕ್ಷರ ಗಮನಕ್ಕೆ ತಂದಿದ್ದರು. ಆದರೆ, ಅವರು ಸಹ ಈ ವಿಷಯವನ್ನು ನಿರ್ಲಕ್ಷ್ಯ ಮಾಡಿದರೆಂಬ ಆರೋಪ ಪವಾರ್ ಅವರು ಮಾಡಿದ್ದಾರೆ. ಈ ನಡುವೆ, ಕಸದ ರಾಶಿಯಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ನಾಗರಿಕರ ಆರೋಗ್ಯಕ್ಕೆ ಗಂಭೀರ ಅಪಾಯ ಎದುರಾಗುವ ಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮಪಂಚಾಯತಿಯ ಉದಾಸೀನ ಕಾರ್ಯವೈಖರಿಗೆ ಪ್ರಶ್ನಾರ್ಥಕ ಚಿಹ್ನೆ ಉದ್ಭವಿಸಿದೆ.



