ग्रामपंचायत आवारात रक्तरंजित संघर्ष; माजी सैनिकासह मुलीची निर्घृण हत्या.
बेळगाव : प्रतिनिधी
कुटुंबातील मालमत्तेच्या वाटणीवरून सुरू असलेल्या वादाने बुधवारी धक्कादायक वळण घेतले. कित्तूर तालुक्यातील आवरादी गावातील ग्रामपंचायत कार्यालयाच्या आवारातच माजी सैनिक आणि त्यांच्या मुलीची धारदार शस्त्रांनी हत्या करण्यात आली. रुद्राप्पा कुंदरगी (६७) आणि त्यांची मुलगी शशिकला कुंदरगी (२६) अशी मृतांची नावे आहेत. सार्वजनिक ठिकाणी घडलेल्या या दुहेरी हत्याकांडामुळे आवरादीसह संपूर्ण परिसर हादरला आहे.

प्राथमिक माहितीनुसार, कुंदरगी कुटुंबीयांमध्ये ३८ गुंठे जमिनीच्या वाटणीवरून काही दिवसांपासून वाद सुरू होता. याच जमिनीशी संबंधित कागदपत्रांच्या कामासाठी रुद्राप्पा कुंदरगी बुधवारी ग्रामपंचायत कार्यालयात आले होते. त्यांच्यासोबत त्यांची मुलगी शशिकला आणि कारचालकही होता.

रुद्राप्पा ग्रामपंचायतीत असल्याची माहिती मिळाल्यानंतर त्यांचे भाऊ बसाप्पा कुंदरगी आणि संगाप्पा कुंदरगी तसेच संगाप्पा यांचा मुलगा मडिवाळप्पा कुंदरगी घटनास्थळी पोहोचल्याचे सांगण्यात येते. त्यानंतर दोन्ही गटांमध्ये शाब्दिक वाद सुरू झाला. वादाचे रूपांतर अचानक हिंसक संघर्षात झाले.
यावेळी हल्लेखोरांनी रुद्राप्पा यांच्यावर कुऱ्हाड, कोयता आणि अन्य धारदार शस्त्रांनी हल्ला केल्याची प्राथमिक माहिती आहे. ग्रामपंचायत कार्यालयाच्या परिसरातच झालेल्या या हल्ल्यात रुद्राप्पा गंभीर जखमी झाले आणि त्यांचा मृत्यू झाला.
वडिलांना वाचवण्यासाठी धावली अन् जीव गमावला…
वडिलांवर हल्ला होत असल्याचे पाहून शशिकला त्यांना वाचवण्यासाठी धावून आली. मात्र हल्लेखोरांनी तिच्यावरही धारदार शस्त्राने हल्ला केल्याचे सांगण्यात येते. गंभीर जखमी झालेल्या शशिकलाचा घटनास्थळीच मृत्यू झाला. वडिलांना वाचवण्याच्या प्रयत्नात मुलीलाही आपला जीव गमवावा लागल्याने या घटनेने हळहळ व्यक्त होत आहे.
कारचालकावरही हल्ला….
या घटनेदरम्यान रुद्राप्पा यांच्यासोबत असलेला कारचालकही हल्ल्यात गंभीर जखमी झाला. त्याला तातडीने उपचारासाठी स्थानिक रुग्णालयात दाखल करण्यात आले आहे. त्याची प्रकृती आणि घटनेबाबत अधिक माहिती पोलिस तपासानंतर स्पष्ट होणार आहे.
पोलिसांचा तपास सुरू….
दुहेरी हत्येची माहिती मिळताच कित्तूर पोलिसांचे पथक तातडीने घटनास्थळी दाखल झाले. पोलिसांनी घटनास्थळाची पाहणी करून परिस्थितीचा आढावा घेतला. हत्येसाठी वापरण्यात आलेल्या शस्त्रांबाबत तसेच घटनेतील संशयितांच्या भूमिकेबाबत पोलिसांकडून तपास सुरू आहे.
मालमत्तेच्या वादातून हा हल्ला झाला असल्याची प्राथमिक माहिती समोर आली असली, तरी हत्येचे नेमके कारण, घटनेची संपूर्ण पार्श्वभूमी आणि हल्ल्यात सहभागी असलेल्या व्यक्तींची भूमिका तपासातून स्पष्ट होणार आहे. या प्रकरणाचा पुढील तपास कित्तूर पोलीस करीत आहेत.
ಗ್ರಾಮ ಪಂಚಾಯಿತಿ ಆವರಣದಲ್ಲಿ ರಕ್ತದ ಒಕುಳಿ; ಮಾಜಿ ಸೈನಿಕ ಸೇರಿದಂತೆ ಮಗಳ ಭೀಕರ ಹತ್ಯೆ.
ಬೆಳಗಾವಿ : ಪ್ರತಿನಿಧಿ
ಕುಟುಂಬದ ಆಸ್ತಿ ಹಂಚಿಕೆ ವಿಚಾರವಾಗಿ ಹಲವು ದಿನಗಳಿಂದ ನಡೆಯುತ್ತಿದ್ದ ವಿವಾದ ಬುಧವಾರ ಆಘಾತಕಾರಿ ತಿರುವು ಪಡೆದುಕೊಂಡಿದೆ. ಕಿತ್ತೂರು ತಾಲೂಕಿನ ಆವರಾದಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿಯೇ ಮಾಜಿ ಸೈನಿಕ ಹಾಗೂ ಅವರ ಮಗಳನ್ನು ಹರಿತವಾದ ಆಯುಧಗಳಿಂದ ಹತ್ಯೆ ಮಾಡಲಾಗಿದೆ. ರುದ್ರಪ್ಪ ಕುಂದರಗಿ (67) ಹಾಗೂ ಅವರ ಮಗಳು ಶಶಿಕಲಾ ಕುಂದರಗಿ (26) ಮೃತರು ಎಂದು ಗುರುತಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ಜೋಡಿ ಹತ್ಯೆ ಘಟನೆಯಿಂದ ಆವರಾದಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕುಂದರಗಿ ಕುಟುಂಬದ ಸದಸ್ಯರ ನಡುವೆ 38 ಗುಂಟೆ ಜಮೀನಿನ ಹಂಚಿಕೆ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ವಿವಾದ ನಡೆಯುತ್ತಿತ್ತು. ಇದೇ ಜಮೀನಿಗೆ ಸಂಬಂಧಿಸಿದ ದಾಖಲೆಗಳ ಕೆಲಸಕ್ಕಾಗಿ ರುದ್ರಪ್ಪ ಕುಂದರಗಿ ಬುಧವಾರ ಗ್ರಾಮ ಪಂಚಾಯಿತಿ ಕಚೇರಿಗೆ ಆಗಮಿಸಿದ್ದರು. ಅವರೊಂದಿಗೆ ಪುತ್ರಿ ಶಶಿಕಲಾ ಹಾಗೂ ಕಾರು ಚಾಲಕರೂ ಇದ್ದರು.
ರುದ್ರಪ್ಪ ಅವರು ಗ್ರಾಮ ಪಂಚಾಯಿತಿಯಲ್ಲಿರುವ ಮಾಹಿತಿ ತಿಳಿದು ಅವರ ಸಹೋದರರಾದ ಬಸಪ್ಪ ಕುಂದರಗಿ ಹಾಗೂ ಸಂಗಪ್ಪ ಕುಂದರಗಿ, ಸಂಗಪ್ಪ ಅವರ ಪುತ್ರ ಮಡಿವಾಳಪ್ಪ ಕುಂದರಗಿ ಅವರು ಸ್ಥಳಕ್ಕೆ ಬಂದಿದ್ದಾರೆ ಎನ್ನಲಾಗಿದೆ. ನಂತರ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಕೆಲವೇ ಕ್ಷಣಗಳಲ್ಲಿ ಮಾತಿನ ಚಕಮಕಿ ಹಿಂಸಾತ್ಮಕ ಸಂಘರ್ಷಕ್ಕೆ ತಿರುಗಿದೆ.
ಈ ವೇಳೆ ಆರೋಪಿಗಳು ರುದ್ರಪ್ಪ ಅವರ ಮೇಲೆ ಕೊಡಲಿ, ಕುಡುಗೋಲು ಹಾಗೂ ಇತರ ಹರಿತವಾದ ಆಯುಧಗಳಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿಯೇ ನಡೆದ ಈ ದಾಳಿಯಲ್ಲಿ ರುದ್ರಪ್ಪ ಅವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ತಂದೆಯನ್ನು ರಕ್ಷಿಸಲು ಧಾವಿಸಿದ ಮಗಳು; ಕೊನೆಗೆ ಆಕೆಯೂ ಬಲಿಯಾದಳು…
ತಂದೆಯ ಮೇಲೆ ದಾಳಿ ನಡೆಯುತ್ತಿರುವುದನ್ನು ಕಂಡ ಶಶಿಕಲಾ ಅವರನ್ನು ರಕ್ಷಿಸಲು ಧಾವಿಸಿದ್ದಾರೆ. ಆದರೆ ದಾಳಿಕೋರರು ಅವರ ಮೇಲೂ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಶಶಿಕಲಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತಂದೆಯನ್ನು ರಕ್ಷಿಸುವ ಪ್ರಯತ್ನದಲ್ಲಿ ಮಗಳೂ ಪ್ರಾಣ ಕಳೆದುಕೊಂಡಿರುವುದು ಘಟನೆಯ ದಾರುಣತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಕಾರು ಚಾಲಕನ ಮೇಲೂ ದಾಳಿ…
ಘಟನೆಯ ಸಂದರ್ಭದಲ್ಲಿ ರುದ್ರಪ್ಪ ಅವರೊಂದಿಗೆ ಇದ್ದ ಕಾರು ಚಾಲಕರ ಮೇಲೂ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಹಾಗೂ ಘಟನೆಯ ಕುರಿತ ಹೆಚ್ಚಿನ ವಿವರಗಳು ಪೊಲೀಸ್ ತನಿಖೆಯ ನಂತರ ಸ್ಪಷ್ಟವಾಗಲಿವೆ.
ಪೊಲೀಸರಿಂದ ತನಿಖೆ ಮುಂದುವರಿಕೆ…
ಜೋಡಿ ಹತ್ಯೆಯ ಮಾಹಿತಿ ದೊರೆಯುತ್ತಿದ್ದಂತೆ ಕಿತ್ತೂರು ಪೊಲೀಸರ ತಂಡ ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿತು. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪರಿಸ್ಥಿತಿಯ ಅವಲೋಕನ ಮಾಡಿದರು. ಹತ್ಯೆಗೆ ಬಳಸಲಾಗಿದೆ ಎನ್ನಲಾದ ಆಯುಧಗಳು ಹಾಗೂ ಘಟನೆಯಲ್ಲಿ ಭಾಗಿಯಾಗಿರುವ ಶಂಕಿತರ ಪಾತ್ರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದರೂ, ಹತ್ಯೆಯ ನಿಖರ ಕಾರಣ, ಘಟನೆಯ ಸಂಪೂರ್ಣ ಹಿನ್ನೆಲೆ ಹಾಗೂ ದಾಳಿಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಪಾತ್ರ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ. ಪ್ರಕರಣದ ಮುಂದಿನ ತನಿಖೆಯನ್ನು ಕಿತ್ತೂರು ಪೊಲೀಸರು ಕೈಗೊಂಡಿದ್ದಾರೆ.



