मुख्यमंत्री सिद्धरामय्या यांना आमदार विठ्ठल हलगेकर यांचे निवेदन — विविध विकासकामांची मागणी.
बेंगलोर : मुख्यमंत्री सिद्धरामय्या यांच्या अध्यक्षतेखाली बुधवारी बेंगळुरूमध्ये झालेल्या क्रांतीवीर संगोळी रायन्ना विकास प्राधिकरणाच्या बैठकीत खानापूरचे आमदार विठ्ठल हलगेकर यांनी विविध विकासकामांच्या मागण्या मांडत मुख्यमंत्री सिद्धरामय्या यांना निवेदन सादर केले. यावेळी नंदगड ग्रामपंचायत अध्यक्ष यल्लाप्पा गुरव उपस्थित होते.
या वेळी खानापूर विधानसभा मतदारसंघातील अनेक महत्त्वाच्या विकासकामांबाबत सविस्तर चर्चा झाली. रस्ते विकासासाठी तात्काळ उपाययोजना हाती घेण्याची आमदार हलगेकर यांनी मागणी केली.
तसेच डी. देवराज मेट्रिक नंतर बालक वसतिगृह, अनुसूचित जाती व जमाती विद्यार्थ्यांसाठी स्वतंत्र वसतिगृहे, “मराठी व कन्नड भवन’ उभारणी, मुरारजी देसाई निवासी शाळा, एपीएमसी परिसरातील अपूर्ण सामुदायिक भवन पूर्ण करण्यासाठी आवश्यक निधी मंजूर करण्याची विनंती करण्यात आली.
याशिवाय कसबा नंदगड ग्रामपंचायतीच्या अध्यक्षांना प्राधिकरणाचे सदस्य म्हणून नियुक्त करण्याची मागणीही करण्यात आली.
अलीकडील मुसळधार पावसामुळे नुकसान झालेल्या सरकारी इमारती, अंगणवाडी केंद्रे, शाळा इमारती आणि रस्ते यांच्या दुरुस्तीसाठी ₹10 कोटी रुपयांचे अनुदान तत्काळ मंजूर करण्याची मागणी केल्याचे आमदार विठ्ठल हलगेकर यांनी सांगितले.
ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದ ಶಾಸಕ ವಿಠಲ ಹಲಗೇಕರ.
ಖಾನಾಪುರ: ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಬುಧವಾರ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಖಾನಾಪುರ ಶಾಸಕ ವಿಠಲ ಹಲಗೇಕರ ಅವರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ನಂದಗಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಯಲ್ಲಪ್ಪ ಗುರವ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಖಾನಾಪುರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಹಲವು ಪ್ರಮುಖ ಅಭಿವೃದ್ಧಿ ಯೋಜನೆಗಳ ಕುರಿತು ಮನವಿ ಮಾಡಲಾಯಿತು.
ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ಡಿ. ದೇವರಾಜ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೆಟ್ರಿಕ್ ನಂತರ ಬಾಲಕ / ಬಾಲಕಿಯರ ವಸತಿ ನಿಲಯ, ಮರಾಠಿ ಮತ್ತು ಕನ್ನಡ ಭವನ ನಿರ್ಮಾಣ, ಮುರಾರ್ಜಿ ದೇಸಾಯಿ ವಸತಿ ಶಾಲೆ, ಎಪಿಎಂಸಿ ಪ್ರದೇಶದಲ್ಲಿನ ಅಪೂರ್ಣ ಸಮುದಾಯ ಭವನ ಪೂರ್ಣಗೊಳಿಸಲು ಅನುದಾನ, ಕಸಬಾ ನಂದಗಡ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಪ್ರಾಧಿಕಾರದ ಸದಸ್ಯರನ್ನಾಗಿ ಮಾಡುವ ಕುರಿತು ವಿನಂತಿಸಿದರು.
ವ್ಯಾಪಕ ಮಳೆಯಿಂದ ಹಾನಿಗೊಳಗಾದ ಸರಕಾರಿ ಕಟ್ಟಡಗಳು, ಅಂಗನವಾಡಿ, ಶಾಲಾ ಕಟ್ಟಡಗಳು ಹಾಗೂ ರಸ್ತೆ ಅಭಿವೃದ್ಧಿಗೆ ₹10 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ವಿನಂತಿ ಮಾಡಲಾಯಿತು ಎಂದು ಶಾಸಕ ವಿಠಲ ಹಲಗೇಕರ ಅವರು ತಿಳಿಸಿದ್ದಾರೆ.

