मलप्रभा कारखान्याच्या नवनिर्वाचित संचालक मंडळाचा आमदार हलगेकर यांच्या हस्ते सत्कार.

खानापूर : मलप्रभा सहकारी साखर कारखान्याच्या अलीकडील निवडणुकीत शेतकरी पुनर्वसन पॅनेलने मिळवलेल्या ऐतिहासिक विजयाचा गौरव करण्यासाठी खानापूर येथे सोमवारी (ता. 29 सप्टेंबर) सत्कार समारंभाचे आयोजन करण्यात आले. शांतिनिकेतन शाळेत पार पडलेल्या या कार्यक्रमाला परिसरातील शेतकरी, नागरिक, कामगार, सभासद यांची मोठ्या प्रमाणात उपस्थिती होती.
कार्यक्रमाचे अध्यक्षस्थान आमदार विठ्ठल हलगेकर यांनी भूषवले. त्यांच्या हस्ते नवनीर्वाचित 15 संचालकांचा सत्कार करण्यात आला. यामध्ये चन्नराज हट्टीहोळी, शिवनगौड पाटील, रामनगौड पाटील, शंकर किल्लेदार, रघु पाटील, शिवपुत्रप्पा मरडी, सुरेश हुलीकट्टी, श्रीशैल तुरमरी, श्रीकांत इटगी, शंकरेप्पा होळी, फक्कीरप्पा सक्रेण्णावर, ललिता पाटील, महांतेश लंगोटी, भरमाप्पा शिगीहळ्ळी, बाळप्पा पूजार यांचा समावेश होता..सुरुवातीला सर्वांचे स्वागत व प्रास्ताविक तसेच सूत्रसंचालन तालुका पंचायतीचे माजी सभापती व भारतीय जनता पार्टीचे जनरल सेक्रेटरी मल्लाप्पा मारिहाळ यांनी केले.
सत्काराला उत्तर देताना आमदार चन्नराज हट्टीहोळी म्हणाले, “शेतकरी, कामगार आणि नागरिकांनी आम्हाला एकमताने निवडून दिल्याबद्दल आम्ही सर्व ऋणी आहोत. ऊस उचलणीमध्ये कोणतीही गडबड होऊ देणार नाही. शेतकऱ्यांचा ऊस वेळेवर उचलण्याची जबाबदारी आम्ही घेऊ. तसेच उसाचे बिल व कामगारांचा पगार वेळेत देणे हेच आमचे प्राधान्य राहील.”
आमदार विठ्ठल हलगेकर म्हणाले, “शेतकरी पुनर्वसन पॅनेलमधील सर्व 15 जणांचा विजय हा शेतकऱ्यांची एकजूट व नागरिकांचा उत्साहाचे प्रतीक आहे. मलप्रभा कारखान्याला गतवैभव मिळवून देण्यासाठी नव्या संचालक मंडळाने आधुनिकीकरण आणि व्यवस्थापन सुधारणा यावर भर द्यावा. आम्ही सर्वतोपरी सहकार्य करू. चेअरमन पदासाठी येत्या 9 ऑक्टोबर रोजी आमदार चन्नराज हट्टीहोळी यांचे नाव सूचित करण्यात आले आहे.”
या कार्यक्रमाचे स्वागत व प्रस्ताविक माजी सभापती व भाजपा जनरल सेक्रेटरी मलाप्पा मारिहाळ यांनी केले. तर आभार प्रदर्शन सदानंद पाटील यांनी केले. या वेळी बसवराज सानिकोप, चांगप्पा निलजकर, अप्पया कोडोळी, भारमाणी पाटील, राजू सिद्धांनी, रफिक वारीमनी, मझर खानापुरी, महांतेश कोडोळी, विजय सानिकोप यांच्यासह मोठ्या संख्येने नागरिक उपस्थित होते.
ಮಲಪ್ರಭಾ ಸಕ್ಕರೆ ಕಾರ್ಖಾನೆಯ ನೂತನ ನಿರ್ದೇಶಕರಿಗೆ ಶಾಸಕ ಹಲಗೇಕರ ಅವರಿಂದ ಸತ್ಕಾರ.
ಖಾನಾಪುರ : ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಇತ್ತೀಚಿನ ಚುನಾವಣೆಯಲ್ಲಿ ರೈತರ ಪುನರ್ ಚೇತನ ಪ್ಯಾನೆಲ್ ದಾಖಲೆಯ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಸೋಮವಾರ (ಸೆ.29) ರಂದು ಖಾನಾಪುರದಲ್ಲಿ ಸತ್ಕಾರ ಸಮಾರಂಭವನ್ನು ಆಯೋಜಿಸಲಾಗಿತ್ತು. ಶಾಂತಿನಿಕೇತನ ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ರೈತರು, ನಾಗರಿಕರು, ಕಾರ್ಮಿಕರು, ಸದಸ್ಯರು ಸೇರಿದಂತೆ ಭಾರಿ ಸಂಖ್ಯೆಯಲ್ಲಿ ಜನರು ಹಾಜರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖಾನಾಪುರ ತಾಲೂಕಿನ ಜನ ಪ್ರಿಯ ಶಾಸಕ ವಿಠ್ಠಲ್ ಹಲಗೇಕರ ವಹಿಸಿದ್ದರು. ಅವರಿಂದ ನೂತನವಾಗಿ ಆಯ್ಕೆಯಾದ 15 ಮಂದಿ ನಿರ್ದೇಶಕರನ್ನು ಸತ್ಕರಿಸಲಾಯಿತು. ಇವರಲ್ಲಿ ಚನ್ನರಾಜ ಹಟ್ಟಿಹೊಳಿ, ಶಿವನಗೌಡ ಪಾಟೀಲ, ರಾಮನಗೌಡ ಪಾಟೀಲ, ಶಂಕರ ಕಿಲ್ಲೇದಾರ, ರಘು ಪಾಟೀಲ, ಶಿವಪುತ್ರಪ್ಪ ಮರಡಿ, ಸುರೇಶ ಹುಳಿಕಟ್ಟಿ, ಶ್ರೀಶೈಲ ತುರಮರಿ, ಶ್ರೀಕಾಂತ ಇಟಗಿ, ಶಂಕರಪ್ಪ ಹೊಳಿ, ಫಕ್ಕೀರಪ್ಪ ಸಕ್ರೇಣ್ಣವರ, ಲಲಿತಾ ಪಾಟೀಲ, ಮಹಾಂತೇಶ ಲಂಗೋಟಿ, ಭರಮಪ್ಪ ಶಿಗಿಹಳ್ಳೀ, ಬಾಲಪ್ಪ ಪೂಜಾರ ಇವರನ್ನು ಒಳಗೊಂಡಿತ್ತು. ಆರಂಭದಲ್ಲಿ, ತಾಲೂಕು ಪಂಚಾಯತ್ನ ಮಾಜಿ ಅಧ್ಯಕ್ಷರು ಮತ್ತು ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾರಿಹಾಳ್ ಅವರು ಎಲ್ಲರನ್ನೂ ಸ್ವಾಗತಿಸಿ, ಪರಿಚಯಿಸಿ, ನಿರ್ವಹಿಸಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಶಾಸಕ ಚನ್ನರಾಜ ಹಟ್ಟಿಹೊಳಿ:
“ರೈತರು, ಕಾರ್ಮಿಕರು ಹಾಗೂ ನಾಗರಿಕರು ನಮ್ಮನ್ನು ಏಕಮತದಿಂದ ಆಯ್ಕೆ ಮಾಡಿರುವುದು ದೊಡ್ಡ ಹೊಣೆಗಾರಿಕೆ. ಇನ್ನು ಮುಂದೆ ಕಬ್ಬು ಎತ್ತುವಿಕೆಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳುತ್ತೇವೆ. ರೈತರ ಕಬ್ಬು ಸಮಯಕ್ಕೆ ಎತ್ತುವ ಜೊತೆಗೆ ಬಿಲ್ ಹಾಗೂ ಕಾರ್ಮಿಕರ ವೇತನವನ್ನು ಸಮಯಕ್ಕೆ ನೀಡುವುದು ನಮ್ಮ ಪ್ರಮುಖ ಗುರಿ.” ಎಂದರು.
ಶಾಸಕ ವಿಠ್ಠಲ್ ಹಲಗೇಕರ ಮಾತನಾಡಿ, “ರೈತ ಪುನರ್ವಸತಿ ಪ್ಯಾನೆಲ್ನ ಎಲ್ಲಾ 15 ಮಂದಿಯ ಗೆಲುವು ರೈತರ ಏಕತೆ ಹಾಗೂ ನಾಗರಿಕರ ಉತ್ಸಾಹದ ಪ್ರತೀಕವಾಗಿದೆ. ಮಲಪ್ರಭಾ ಕಾರ್ಖಾನೆಗೆ ಹಳೆಯ ಕೀರ್ತಿ ತಂದುಕೊಡುವ ದೃಷ್ಟಿಯಿಂದ ನೂತನ ಮಂಡಳಿ ಆಧುನೀಕರಣ ಮತ್ತು ನಿರ್ವಹಣಾ ಸುಧಾರಣೆಗೆ ಒತ್ತು ನೀಡಬೇಕು. ನಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎಂದು ಮುಂದಿನ ಅಕ್ಟೋಬರ್ 9ರಂದು ಅಧ್ಯಕ್ಷ ಸ್ಥಾನಕ್ಕೆ ಶಾಸಕ ಚನ್ನರಾಜ ಹಟ್ಟಿಹೊಳಿ ಅವರ ಹೆಸರನ್ನು ಸೂಚಿಸಲಾಗಿದೆ,” ಎಂದರು.
ಕಾರ್ಯಕ್ರಮಕ್ಕೆ ಸ್ವಾಗತ ಹಾಗೂ ಪ್ರಸ್ತಾವಿಕ ಭಾಷಣವನ್ನು ಮಾಜಿ ಸಭಾಪತಿ ಹಾಗೂ ಬಿಜೆಪಿ ಜನರಲ್ ಸೆಕ್ರೆಟರಿ ಮಲಪ್ಪ ಮಾರಿಹಾಳ ಮಾಡಿದರು.
ಧನ್ಯವಾದಗಳನ್ನು ಸದಾನಂದ ಪಾಟೀಲ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಸಾನಿಕೋಪ, ಚಾಂಗಪ್ಪ ನಿಲಜಕರ, ಅಪ್ಪಯ್ಯ ಕೊಡೋಳಿ, ಭರಮಾಣಿ ಪಾಟೀಲ, ರಾಜು ಸಿದ್ದಾನಿ, ರಫಿಕ್ ವಾರಿಮಣಿ, ಮಝರ್ ಖಾನಾಪುರಿ, ಮಹಾಂತೇಶ ಕೊಡೋಳಿ, ವಿಜಯ ಸಾನಿಕೋಪ ಸೇರಿದಂತೆ ಹಲವಾರು ಗಣ್ಯರು ಹಾಗೂ ನಾಗರಿಕರು ಭಾರಿ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

