नगरपंचायतीने घेतली “आपलं खानापूर”ची दखल ; मलप्रभा नदी पूजाविधी आज.
खानापूर ; खानापूर शहरातून वाहणाऱ्या श्री मलप्रभा नदीच्या पारंपरिक पूजाविधी व ओटी अर्पण कार्यक्रमाला तीन वर्षांपासून खंड पडला होता. याविरोधात शहरातील महिला व नागरिकांनी संताप व्यक्त करून हा पूजाविधी पुन्हा सुरू करण्याची मागणी “आपलं खानापूर” न्यूज पोर्टलमार्फत केली होती.
या मागणीची दखल घेऊन खानापूर नगरपंचायतीतर्फे आज शुक्रवार, दिनांक 22 ऑगस्ट रोजी सकाळी 11.00 वाजता श्री मलप्रभा घाटावर पूजाविधीचे आयोजन करण्यात आले आहे. या ठिकाणी मंडप उभारण्यात आला असून नगराध्यक्ष, उपनगराध्यक्ष, नगरसेवक तसेच नगरपंचायतीचे अधिकारी व कर्मचारी यांची उपस्थिती राहणार आहे.

बातमी प्रकाशित होताच अर्बन बँक ते मलप्रभा घाटापर्यंतचा रस्ता स्वच्छ करण्यात आला असून रस्त्यालगत वाढलेली झुडपे व गटारीची स्वच्छता करण्यात आली आहे. तसेच पंचमुखी महादेव मंदिरासमोर पूजाविधीसाठी स्वतंत्र मंडप उभारला गेला आहे.

यावेळी होम-हवन करून श्री मलप्रभा नदीची पूजा व ओटी भरण्याचा पारंपरिक कार्यक्रम पार पाडण्यात येणार आहे. या निर्णयामुळे खानापूर शहरातील नागरिकांमध्ये समाधान व आनंद व्यक्त केला जात आहे.
ನಗರ ಪಂಚಾಯಿತಿ “ನಮ್ಮ ಖಾನಾಪುರ”ದಲ್ಲಿ ಪ್ರಕಟಿಸಿದ ಸುದ್ದಿಗೆ ಸ್ಪಂದನೆ – ಮಲಪ್ರಭಾ ನದಿ ಪೂಜಾ ವಿಧಿ ಇಂದು
ಖಾನಾಪುರ : ಖಾನಾಪುರ ನಗರ ಮಧ್ಯೆ ಹರಿಯುವ ಶ್ರೀ ಮಲಪ್ರಭಾ ನದಿಯ ಪಾರಂಪರಿಕ ಪೂಜಾ ವಿಧಿ ಹಾಗೂ ಉಡಿ ತುಂಬುವ ಕಾರ್ಯಕ್ರಮಕ್ಕೆ ಕಳೆದ ಮೂರು ವರ್ಷಗಳಿಂದ ವಿರಾಮ ಬಿದ್ದಿತ್ತು. ಇದಕ್ಕೆ ನಗರದ ಮಹಿಳೆಯರು ಹಾಗೂ ನಾಗರಿಕರು ಆಕ್ರೋಶ ವ್ಯಕ್ತಪಡಿಸಿ ಈ ಪೂಜಾ ವಿಧಿ ಮರು ಪ್ರಾರಂಭಿಸಬೇಕೆಂದು “ನಮ್ಮ ಖಾನಾಪುರ” ನ್ಯೂಸ್ ಪೋರ್ಟಲ್ ನಲ್ಲಿ ಸವಿಸ್ತಾರ ಸುದ್ದಿ ಪ್ರಕಟಿಸಿ ಪುನರ್ ಆರಂಭಿಸಲು ಆಗ್ರಹಿಸಿದ್ದರು.
ಈ ಮನವಿಗೆ ಸ್ಪಂದಿಸಿ ಖಾನಾಪುರ ನಗರ ಪಂಚಾಯಿತಿಯಿಂದ ಇಂದು ಶುಕ್ರವಾರ, ಆಗಸ್ಟ್ 22ರಂದು ಬೆಳಿಗ್ಗೆ 11.00 ಗಂಟೆಗೆ ಶ್ರೀ ಮಲಪ್ರಭಾ ಘಾಟದಲ್ಲಿ ಪೂಜಾ ವಿಧಿ ಆಯೋಜಿಸಲಾಗಿದೆ. ಈ ಸ್ಥಳದಲ್ಲಿ ಮಂಟಪ ನಿರ್ಮಿಸಲಾಗಿದೆ. ನಗರಾಧ್ಯಕ್ಷರು, ಉಪನಗರಾಧ್ಯಕ್ಷರು, ನಗರಸಭಾ ಸದಸ್ಯರು ಹಾಗೂ ನಗರ ಪಂಚಾಯಿತಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿರಲಿದ್ದಾರೆ.
ಸುದ್ದಿ ಪ್ರಕಟವಾದ ತಕ್ಷಣ ಅರ್ಬನ್ ಬ್ಯಾಂಕ್ನಿಂದ ಮಲಪ್ರಭಾ ಘಾಟದವರೆಗಿನ ರಸ್ತೆ ಸ್ವಚ್ಛಗೊಳಿಸಲಾಗಿದ್ದು, ರಸ್ತೆಯ ಪಕ್ಕದ ಪೊದೆಗಳು ಹಾಗೂ ಚರಂಡಿಗಳ ಸ್ವಚ್ಛತೆ ಕೈಗೊಳ್ಳಲಾಗಿದೆ. ಜೊತೆಗೆ ಪಂಚಮುಖಿ ಮಹಾದೇವ ದೇವಸ್ಥಾನದ ಮುಂದೆ ಪೂಜಾ ವಿಧಿಗಾಗಿ ಪ್ರತ್ಯೇಕ ಮಂಟಪವನ್ನು ನಿರ್ಮಿಸಲಾಗಿದೆ.
ಈ ಸಂದರ್ಭದಲ್ಲಿ ಹೋಮ–ಹವನದೊಂದಿಗೆ ಶ್ರೀ ಮಲಪ್ರಭಾ ನದಿಯ ಪೂಜೆ ಹಾಗೂ ಉಡಿ ತುಂಬುವ ಪಾರಂಪರಿಕ ಕಾರ್ಯಕ್ರಮ ನೆರವೇರಲಿದೆ. ಈ ನಿರ್ಧಾರದಿಂದ ಖಾನಾಪುರ ನಗರದ ನಾಗರಿಕರು ತೃಪ್ತಿ ಹಾಗೂ ಸಂತೋಷ ವ್ಯಕ್ತಪಡಿಸಿದ್ದಾರೆ.

