
फोंडा मार्केटमध्ये “चालता-फिरता गणेश” अवतरला; भाजीविक्रेते, ट्राफिक पोलीस व नागरिकांना दिल्या भेटवस्तू; व्हिडिओ व्हायरल
फोंडा (प्रतिनिधी-सुधीर राऊत) ; गणेश चतुर्थीच्या पार्श्वभूमीवर गोवा राज्यातील फोंडा सिटी मार्केटमध्ये एक आगळावेगळा प्रसंग घडला. मार्केटमध्ये नागरिकांच्या गर्दीत एक चालता-फिरता “गणेश” अवतरला आणि उपस्थितांचे लक्ष वेधून घेतले. या गणेशाने हातात पिशव्यांमध्ये काहीतरी भेटवस्तू घेऊन येत भाजीविक्रेत्या महिला, ट्राफिक पोलीस व बाजारात आलेल्या नागरिकांना त्या वाटल्या. या अनोख्या प्रसंगाचा व्हिडिओ सोशल मीडियावर मोठ्या प्रमाणात व्हायरल झाला असून, सर्वत्र त्याचीच चर्चा रंगली आहे.
मार्केटमध्ये देवाच्या वेशभूषेत फिरणारा गणेश पाहून नागरिक आश्चर्यचकित झाले. “गणराय आपल्याकडेच आला” असा भास अनेकांना झाला. भाजी विक्रेत्या महिला आणि वाहतूक पोलिसांना प्रत्यक्ष भेटवस्तू देतानाचे दृश्य कॅमेऱ्यात कैद झाले असून, सोशल मीडियावर हा व्हिडिओ मोठ्या वेगाने शेअर केला जात आहे.
गणेशोत्सवाच्या काळात भक्तांना आनंद, एकोपा आणि उत्साहाचे वातावरण निर्माण करणारा हा उपक्रम फोंडा परिसरात चर्चेचा विषय ठरला आहे. अनेकांनी या उपक्रमाचे कौतुक करताना “हा खरा गणरायाचा संदेश आहे – दान, आनंद व प्रसन्नता पसरवण्याचा” अशी भावना व्यक्त केली.
गणेश चतुर्थीच्या निमित्ताने आयोजित केलेला हा अनोखा प्रयोग लोकांच्या हृदयात घर करून गेला असून, “फोंड्यात गणेश प्रत्यक्ष अवतरला” अशी भावना नागरिकांमध्ये निर्माण झाली आहे.
ಫೊಂಡಾ ಮಾರುಕಟ್ಟೆಯಲ್ಲಿ “ಅವತಾರ ತಾಳಿದ ಗಣೇಶ ಸ್ವರೂಪ್” ; ತರಕಾರಿ ಮಾರಾಟಗಾರರು, ಟ್ರಾಫಿಕ್ ಪೋಲಿಸ್ ಹಾಗೂ ನಾಗರಿಕರಿಗೆ ಉಡುಗೊರೆ ವಿತರಣೆ; ವೀಡಿಯೋ ವೈರಲ್
ಫೊಂಡಾ (ವರದಿಗಾರ – ಸುಧೀರ್ ರಾವತ್) : ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಗೋವಾ ರಾಜ್ಯದ ಫೊಂಡಾ ಸಿಟಿ ಮಾರುಕಟ್ಟೆಯಲ್ಲಿ ವಿಭಿನ್ನ ರೀತಿಯ ಘಟನೆ ನಡೆಯಿತು. ಮಾರುಕಟ್ಟೆಯ ಜನಸಂದಣಿಯಲ್ಲಿ “ಅವತಾರ ತಾಳಿದ ಗಣೇಶ ” ಆಗಮಿಸಿ ಎಲ್ಲರ ಗಮನ ಸೆಳೆಯಿತು. ಕೈಯಲ್ಲಿ ಉಡುಗೊರೆ ಚೀಲ ಹಿಡಿದು ಬಂದ ಗಣೇಶನು ತರಕಾರಿ ಮಾರುವ ಮಹಿಳೆಯರು, ಟ್ರಾಫಿಕ್ ಪೋಲಿಸ್ ಹಾಗೂ ಮಾರುಕಟ್ಟೆಗೆ ಬಂದಿದ್ದ ನಾಗರಿಕರಿಗೆ ಉಡುಗೊರೆಗಳನ್ನು ಹಂಚಿ ಎಲ್ಲರನ್ನೂ ಅಚ್ಚರಿ ಪಡಿಸಿದರು.
ಈ ವಿಶಿಷ್ಟ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದ್ದು, ಎಲ್ಲೆಡೆ ಇದರ ಕುರಿತ ಚರ್ಚೆ ನಡೆಯುತ್ತಿದೆ. ದೇವರ ವೇಷದಲ್ಲಿ ಮಾರುಕಟ್ಟೆಯಲ್ಲಿ ತಿರುಗಾಡುತ್ತಿರುವ ಗಣೇಶನನ್ನು ಕಂಡು “ಗಣಪತಿ ನಮ್ಮ ಬಳಿಯೇ ಬಂದ” ಎಂಬ ಭಾವನೆ ಅನೇಕ ನಾಗರಿಕರಲ್ಲಿ ಮೂಡಿತು. ತರಕಾರಿ ಮಾರುವ ಮಹಿಳೆಯರಿಗೆ ಹಾಗೂ ಟ್ರಾಫಿಕ್ ಪೊಲೀಸರಿಗೆ ಉಡುಗೊರೆ ನೀಡುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆ ಹಿಡಿಯಲ್ಪಟ್ಟಿವೆ.
ಗಣೇಶೋತ್ಸವದ ಸಂದರ್ಭದಲ್ಲಿ ಭಕ್ತರಿಗೆ ಸಂತೋಷ, ಏಕತೆ ಮತ್ತು ಹರ್ಷದ ವಾತಾವರಣ ನಿರ್ಮಾಣ ಮಾಡಿದ ಈ ಉಪಕ್ರಮ ಫೊಂಡಾದಲ್ಲಿ ಚರ್ಚೆಯ ವಿಷಯವಾಗಿದ್ದು, ಅನೇಕರು ಇದರ ಶ್ಲಾಘನೆ ಮಾಡಿದರು. “ಇದೇ ಗಣರಾಯನ ನಿಜವಾದ ಸಂದೇಶ – ದಾನ, ಸಂತೋಷ ಮತ್ತು ಪ್ರಸನ್ನತೆ ಹಂಚುವುದು” ಎಂದು ಜನರು ಅಭಿಪ್ರಾಯ ಪಟ್ಟರು.
ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಆಯೋಜಿಸಿದ ಈ ವಿಶಿಷ್ಟ ಪ್ರಯೋಗ ಜನಮನ ಗೆದ್ದಿದ್ದು, “ಫೊಂಡಾದಲ್ಲಿ ಗಣೇಶ ಸ್ವತಃ ಅವತರಿಸಿದ್ದಾನೆ” ಎಂಬ ಭಾವನೆ ನಾಗರಿಕರಲ್ಲಿ ಮೂಡಿಸಿದೆ.
