खानापूर तालुका विधी सेवा समितीकडून विशेष जनता अदालत अभियानाचे आयोजन
खानापूर – खानापूर तालुका विधी सेवा समिती, खानापूरतर्फे विशेष जनता अदालत अभियानाचे आयोजन करण्यात आले असून, यासंदर्भात सोमवार, दि. 11 ऑगस्ट 2025 रोजी महत्त्वपूर्ण बैठक घेण्यात आली. या बैठकीस तालुका विधी सेवा समितीचे अध्यक्ष व खानापूर जेएमएफसी कोर्टाचे वरिष्ठ दिवाणी न्यायाधीश श्री. चंद्रशेखर तलवार, समितीचे सचिव व जेएमएफसी प्रिन्सिपल कोर्ट, खानापूरचे प्रधान दिवाणी न्यायाधीश श्री. वीरेश हिरेमठ, बार असोसिएशनचे अध्यक्ष श्री. आय.आर. घाडी, उपाध्यक्ष श्री. के.जी. कळेकर, सचिव श्री. एम.वाय. कदम यांच्यासह वकील वर्ग मोठ्या संख्येने उपस्थित होता.

या अभियानाचा उद्देश नागरिकांना जलद, सहज आणि परस्पर सहमतीने न्याय व माहिती उपलब्ध करून देणे हा आहे. तालुका विधी सेवा समितीने मध्यस्थीद्वारे न्यायालयात प्रलंबित असलेली प्रकरणे सोडवण्यासाठी “90 दिवसांची राष्ट्रीय विशेष मोहीम” राबवण्याचा निर्णय घेतला आहे. ही मोहीम 1 जुलै ते 7 ऑक्टोबर 2025 या कालावधीत चालणार आहे.
याशिवाय, बेळगाव येथील कायमस्वरूपी लोकन्यायालयाबाबत जनजागृती करण्यासाठी 30 दिवसांची विशेष मोहीम आयोजित करण्यात आली आहे. या मोहिमेत पर्यायी तंटा निवारण केंद्र, नव्या न्यायालयीन इमारती तसेच त्यांच्या कार्यप्रणालीविषयी नागरिकांना सविस्तर माहिती देण्यात येणार आहे.
तसेच, या उपक्रमाचा एक महत्त्वाचा भाग म्हणून तिसरी राष्ट्रीय लोकअदालत दिनांक 13 सप्टेंबर 2025 रोजी घेण्यात येणार आहे. नागरिकांनी या संधीचा लाभ घेऊन आपल्या प्रलंबित प्रकरणांचे निपटारा करून घ्यावा, असे आवाहन समितीतर्फे करण्यात आले आहे.
ಖಾನಾಪುರ ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ವಿಶೇಷ ಜನತಾ ಅದಾಲತ್ ಅಭಿಯಾನ
ಖಾನಾಪುರ – ಖಾನಾಪುರ ತಾಲ್ಲೂಕು ಕಾನೂನು ಸೇವಾ ಸಮಿತಿ, ಖಾನಾಪುರದ ವತಿಯಿಂದ ವಿಶೇಷ ಜನತಾ ಅದಾಲತ ಅಭಿಯಾನವನ್ನು ಆಯೋಜಿಸಲಾಗಿದ್ದು, ಈ ಸಂಬಂಧ ಸೋಮವಾರ ದಿನಾಂಕ 11 ಆಗಸ್ಟ್ 2025 ರಂದು ಮಹತ್ವದ ಸಭೆ ನಡೆಯಿತು. ಸಭೆಗೆ ತಾಲ್ಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಖಾನಾಪುರ ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ. ಚಂದ್ರಶೇಖರ ತಳವಾರ, ಸಮಿತಿಯ ಕಾರ್ಯದರ್ಶಿ ಹಾಗೂ ಜೆಎಂಎಫ್ಸಿ ಪ್ರಿನ್ಸಿಪಲ್ ನ್ಯಾಯಾಲಯ, ಖಾನಾಪುರದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀ. ವೀರೇಶ್ ಹಿರೇಮಠ್, ಬಾರ್ ಅಸೋಸಿಯೇಷನ್ ಅಧ್ಯಕ್ಷ. ಶ್ರೀ. ಐ.ಆರ್. ಘಾಡಿ, ಉಪಾಧ್ಯಕ್ಷ ಶ್ರೀ. ಕೆ.ಜಿ. ಕಳ್ಳೆಕರ, ಕಾರ್ಯದರ್ಶಿ ಶ್ರೀ. ಎಂ.ವೈ. ಕದಮ ಸೇರಿದಂತೆ ವಕೀಲರ ವರ್ಗವು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ಈ ಅಭಿಯಾನದ ಉದ್ದೇಶ ನಾಗರಿಕರಿಗೆ ಶೀಘ್ರ, ಸುಲಭ ಹಾಗೂ ಪರಸ್ಪರ ಒಪ್ಪಂದದ ಮೂಲಕ ನ್ಯಾಯ ಮತ್ತು ಮಾಹಿತಿ ಲಭ್ಯವಾಗುವಂತೆ ಮಾಡುವುದು. ತಾಲ್ಲೂಕಾ ಕಾನೂನು ಸೇವಾ ಸಮಿತಿಯು ಮಧ್ಯಸ್ಥಿಕೆಯ ಮೂಲಕ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಬಗೆಹರಿಸಲು “90 ದಿನಗಳ ರಾಷ್ಟ್ರೀಯ ವಿಶೇಷ ಅಭಿಯಾನ” ಕೈಗೊಳ್ಳುವ ನಿರ್ಧಾರ ಮಾಡಿದೆ. ಈ ಅಭಿಯಾನ ಜುಲೈ 1 ರಿಂದ ಅಕ್ಟೋಬರ್ 7, 2025 ರವರೆಗೆ ನಡೆಯಲಿದೆ.
ಇದಲ್ಲದೆ, ಬೆಳಗಾವಿ ಶಾಶ್ವತ ಲೋಕನ್ಯಾಯಾಲಯದ ಬಗ್ಗೆ ಜನಜಾಗೃತಿ ಮೂಡಿಸಲು 30 ದಿನಗಳ ವಿಶೇಷ ಅಭಿಯಾನ ಆಯೋಜಿಸಲಾಗಿದೆ. ಈ ಅಭಿಯಾನದಲ್ಲಿ ಪರ್ಯಾಯ ವಿವಾದ ಪರಿಹಾರ ಕೇಂದ್ರ, ಹೊಸ ನ್ಯಾಯಾಲಯದ ಕಟ್ಟಡಗಳು ಮತ್ತು ಅವುಗಳ ಕಾರ್ಯವಿಧಾನಗಳ ಕುರಿತು ನಾಗರಿಕರಿಗೆ ಸವಿಸ್ತಾರ ಮಾಹಿತಿ ನೀಡಲಾಗುವುದು.
ಅದೇ ರೀತಿ, ಈ ಕಾರ್ಯಕ್ರಮದ ಪ್ರಮುಖ ಭಾಗವಾಗಿ ಮೂರನೇ ರಾಷ್ಟ್ರೀಯ ಲೋಕ ಅದಾಲತ್ ದಿನಾಂಕ 13 ಸೆಪ್ಟೆಂಬರ್ 2025 ರಂದು ನಡೆಯಲಿದೆ. ನಾಗರಿಕರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಬಾಕಿ ಉಳಿದಿರುವ ಪ್ರಕರಣಗಳನ್ನು ಬಗೆಹರಿಸಿಕೊಳ್ಳುವಂತೆ ಸಮಿತಿಯು ಮನವಿ ಮಾಡಿದೆ.

