गौंडवाड सामाजिक कार्यकर्त्याच्या खून प्रकरणी पाच आरोपींना जन्मठेप
बेळगाव : बेळगाव तालुक्यातील गौंडवाड येथील सामाजिक कार्यकर्ते सतीश राजेंद्र पाटील (वय 40) यांच्या खून प्रकरणी दुसऱ्या अतिरिक्त जिल्हा सत्र न्यायालयाने पाच आरोपींना जन्मठेपेची शिक्षा सुनावली आहे. उर्वरित चार आरोपींना एका वर्षाची शिक्षा ठोठावण्यात आली. न्यायमूर्ती एन. के. गंगाधर यांनी शनिवारी सायंकाळी चार वाजता हा निकाल दिला.
📌 घटनेची पार्श्वभूमी
१८ जून २०२२ रोजी भैरवनाथ मंदिराच्या जागेवरून झालेल्या वादातून सतीश पाटील यांचा जांभियाने भोसकून खून करण्यात आला होता. या प्रकरणी एकूण १० जणांना दोषी ठरवण्यात आले होते.
📌 जन्मठेपेची शिक्षा झालेल्या आरोपींची नावे
- आनंद रामा कुद्रे (५५)
- अर्णव आनंद कुद्रे (३२)
- जायाप्पा भैरु निलजकर (५०)
- महांतेश जायाप्पा निलजकर (३५)
- शशिकला आनंद कुद्रे (५०)
या पाच जणांवर कलम ३०२ अंतर्गत गुन्हा सिद्ध झाला. त्यांना १३ लाख रुपयांचा दंडही ठोठावण्यात आला असून, त्यापैकी १० लाख रुपये मयताच्या पत्नीला व उर्वरित रक्कम आईला देण्याचा आदेश न्यायालयाने दिला आहे.
📌 महत्त्वाची साक्ष
या खटल्यात सतीश पाटील यांच्या पत्नीची साक्ष निर्णायक ठरली. त्यांनी माध्यमांशी बोलताना अश्रू अनावर होत प्रतिक्रिया देताना सांगितले – “देवस्थानाची जमीन परत मिळवण्यासाठी माझा नवरा झटत होता. त्याचा राग धरून त्याचा खून करण्यात आला. आज आरोपींना जन्मठेप झाली, त्यासाठी न्यायालय, वकील व गावकऱ्यांचे मी आभार मानते.”
📌 ग्रामस्थांचा आनंद
निकाल सुनावताच न्यायालयाबाहेर शेकडो महिला व ग्रामस्थ जमले होते. न्याय मिळाल्याचा आनंद महिलांनी हात वर करून व्यक्त केला.
📌 प्रकरणाचा आढावा
खुनानंतर गौंडवाड परिसरात महिनाभर तणावाचे वातावरण होते. काही घरांवर हल्ले, तर वाहनांची जाळपोळही झाली होती. या प्रकरणी काकती पोलीस ठाण्यात २५ जणांवर गुन्हा दाखल करण्यात आला होता. त्यापैकी १० जणांना शिक्षा झाली असून १५ जणांना निर्दोष मुक्तता मिळाली आहे.
👉 फिर्यादीच्या वतीने ॲड. शामसुंदर पत्तार, तर सरकारी पक्षाच्या वतीने ॲड. जी. के. माहूरकर यांनी काम पाहिले.
ಗೌಂಡವಾಡ ಊರಿನಲ್ಲಿ ಸಮಾಜಸೇವಕನ ಹತ್ಯೆ ಪ್ರಕರಣ : ಐದು ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಬೆಳಗಾವಿ : ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದ ಸಮಾಜಸೇವಕ ಸತೀಶ ರಾಜೇಂದ್ರ ಪಾಟೀಲ (ವಯಸ್ಸು 40) ಹತ್ಯೆ ಪ್ರಕರಣದಲ್ಲಿ ದ್ವಿತೀಯ ಹೆಚ್ಚುವರಿ ಜಿಲ್ಲಾ ಸೆಷನ್ ನ್ಯಾಯಾಲಯವು ಐದು ಜನರಿಗೆ ಜೀವಾವಧಿ ಶಿಕ್ಷೆ ಹಾಗೂ ನಾಲ್ವರಿಗೆ ಒಂದು ವರ್ಷದ ಶಿಕ್ಷೆಯನ್ನು ವಿಧಿಸಿದೆ. ನ್ಯಾಯಮೂರ್ತಿ ಎನ್. ಕೆ. ಗಂಗಾಧರ ಅವರು ಶನಿವಾರ ಸಂಜೆ 4 ಗಂಟೆಗೆ ತೀರ್ಪು ಪ್ರಕಟಿಸಿದರು.
📌 ಘಟನೆಯ ಹಿನ್ನೆಲೆ
2022ರ ಜೂನ್ 18ರಂದು ಭೈರವನಾಥ ದೇವಾಲಯದ ಜಮೀನಿನ ವಿಚಾರವಾಗಿ ನಡೆದ ಜಗಳದಲ್ಲಿ ಸತೀಶ ಪಾಟೀಲ ಅವರನ್ನು ಮಾರುಕಾಸ್ತ್ರಗಳಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು 10 ಜನರಿಗೆ ಶಿಕ್ಷೆ ವಿಧಿಸಲಾಗಿದೆ.
📌 ಜೀವಾವಧಿ ಶಿಕ್ಷೆಗೊಂಡ ಆರೋಪಿಗಳ ಹೆಸರುಗಳು
ಆನಂದ ರಾಮ ಕುಡ್ರೆ (55)
ಅರ್ಣವ ಆನಂದ ಕುಡ್ರೆ (32)
ಜಯಪ್ಪ ಭೈರು ನಿಲಜ್ಕರ್ (50)
ಮಹಾಂತೇಶ ಜಯಪ್ಪ ನಿಲಜ್ಕರ್ (35)
ಶಶಿಕಲಾ ಆನಂದ ಕುಡ್ರೆ (50)
ಈ ಐವರ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ಅಡಿ ಅಪರಾಧ ಸಾಬೀತಾಗಿದೆ. ಇವರಿಗೆ 13 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಅದರಲ್ಲಿ 10 ಲಕ್ಷ ರೂ. ಮೃತರ ಪತ್ನಿಗೆ ಹಾಗೂ ಉಳಿದ ಮೊತ್ತ ತಾಯಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
📌 ಪ್ರಮುಖ ಸಾಕ್ಷಿ
ಈ ಪ್ರಕರಣದಲ್ಲಿ ಸತೀಶ ಪಾಟೀಲ ಅವರ ಪತ್ನಿಯ ಸಾಕ್ಷ್ಯ ನಿರ್ಣಾಯಕವಾಗಿದೆ. ಪ್ರತಿಕ್ರಿಯೆ ನೀಡಿದ ಅವರು ಕಣ್ಣೀರು ತಡೆದುಕೊಳ್ಳಲಾಗದೆ – “ದೇವಸ್ಥಾನದ ಜಮೀನು ಮರಳಿ ಪಡೆಯಲು ನನ್ನ ಪತಿ ಹೋರಾಟ ನಡೆಸುತ್ತಿದ್ದರು. ಅದಕ್ಕೆ ಕೋಪದಿಂದ ಅವರನ್ನು ಕೊಂದಿದ್ದಾರೆ. ಇಂದು ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿರುವುದಕ್ಕೆ ನಾನು ನ್ಯಾಯಾಲಯ, ವಕೀಲರು ಹಾಗೂ ಗ್ರಾಮಸ್ಥರಿಗೆ ಧನ್ಯವಾದ ಹೇಳುತ್ತೇನೆ” ಎಂದು ಹೇಳಿದರು.
📌 ಗ್ರಾಮಸ್ಥರ ಸಂತೋಷ
ತೀರ್ಪು ಪ್ರಕಟವಾದ ಕೂಡಲೇ ನ್ಯಾಯಾಲಯದ ಹೊರಗೆ ನೂರಾರು ಮಹಿಳೆಯರು ಹಾಗೂ ಗ್ರಾಮಸ್ಥರು ಜಮಾಯಿಸಿ ಕೈಯೆತ್ತಿ ಸಂಭ್ರಮ ವ್ಯಕ್ತಪಡಿಸಿದರು.
📌 ಪ್ರಕರಣದ ಸಾರಾಂಶ
ಹತ್ಯೆಯ ನಂತರ ಗೌಂಡವಾಡ ಪ್ರದೇಶದಲ್ಲಿ ಒಂದು ತಿಂಗಳು ಗಲಭೆಮಯ ವಾತಾವರಣ ನಿರ್ಮಾಣವಾಗಿತ್ತು. ಕೆಲವು ಮನೆಗಳ ಮೇಲೆ ದಾಳಿ, ವಾಹನಗಳ ಸುಡಾಟವೂ ನಡೆಯಿತು. ಈ ಪ್ರಕರಣದಲ್ಲಿ ಕಾಕತಿ ಪೊಲೀಸ್ ಠಾಣೆಯಲ್ಲಿ 25 ಜನರ ವಿರುದ್ಧ ಕೇಸು ದಾಖಲಾಗಿತ್ತು. ಅದರಲ್ಲಿ 10 ಮಂದಿಗೆ ಶಿಕ್ಷೆ, ಉಳಿದ 15 ಮಂದಿಗೆ ನಿರ್ದೋಷಿ ಎಂದು ಬಿಡುಗಡೆ ದೊರಕಿದೆ.
👉 ಫಿರ್ಯಾದಿದಾರರ ಪರವಾಗಿ ಅಡ್ವೊ. ಶಾಮಸುಂದರ ಪತ್ತಾರ, ಸರ್ಕಾರದ ಪರವಾಗಿ ಅಡ್ವೊ. ಜಿ. ಕೆ. ಮಾಹೂರಕರ ವಾದಿಸಿದರು.

