डोंगरगाव येथील सभेत आमदार विठ्ठल हलगेकर यांची अरेरावीची भाषा; ‘मुंडक मारले असते’ वक्तव्याचा निषेध, कृष्णा गुरव यांची कायदेशीर कारवाई करण्याची घोषणा.
खानापूर : बुधवार दि. 31 मार्च 2026 रोजी डोंगरगाव येथे रवळनाथ देव वार्षिक उत्सवानिमित्त आयोजित सभेत खानापूर तालुक्याचे आमदार विठ्ठल हलगेकर यांनी अरेरावीची व गुंडगिरीची भाषा वापरल्याचा आरोप शिरोली ग्रामपंचायतीचे माजी अध्यक्ष, विद्यमान माजी सदस्य व पिकेपीएस सोसायटीचे चेअरमन कृष्णा गुरव यांनी केला आहे. दुसऱ्या ठिकाणी “तुझं मुंडक मारले असते” असे आमदारांनी सार्वजनिक व्यासपीठावर म्हटल्याचा आरोप करत आपण वकिलांशी चर्चा करून आमदारांविरुद्ध कायदेशीर कारवाई करणार असल्याची माहिती त्यांनी खानापूर येथील सार्वजनिक बांधकाम विभागाच्या विश्रामधामात आयोजित पत्रकार परिषदेत दिली.
या पत्रकार परिषदेला सामाजिक कार्यकर्ते सिताराम सुतार व बाळाप्पा नांद्रणकर उपस्थित होते.
सभेतील घटनाक्रम..
कृष्णा गुरव यांनी दिलेल्या माहितीनुसार, डोंगरगाव येथे गुरुवारी 31 तारखेला रवळनाथ वार्षिक उत्सवानिमित्त नाटकाचे आयोजन करण्यात आले होते. त्यापूर्वी रात्री सुमारे 11.00 वाजता सभेचे आयोजन करण्यात आले होते. या सभेला व्यासपीठावर आमदार विठ्ठल हलगेकर, भरमाणी पाटील, अप्पू गावकर, किशोर हेब्बाळकर व कृष्णा गुरव उपस्थित होते.
सभेदरम्यान ग्रामपंचायत सदस्य सदानंद यांनी गाव व परिसरातील विकासाबाबत भाष्य केले. तसेच तालुका पंचायतीचे माजी सदस्य अशोक देसाई (नेरसा) यांनी गावांच्या प्रस्तावित स्थलांतराबाबत व त्यातून निर्माण होणाऱ्या समस्यांबाबत आपले विचार मांडले.
कृष्णा गुरव यांनी या दोन्ही वक्त्यांच्या भाषणाला अनुमोदन देत पुढे स्वतःचे मत मांडले.
25% टक्के कमिशन प्रकरणामुळे वाद?
गुरव यांच्या म्हणण्यानुसार, सुमारे सहा महिन्यांपूर्वी आमदारांच्या पीएने शिरोली ग्रामपंचायतीला फिफ्टीन फायनान्समधून मिळालेल्या 25 लाख रुपयांच्या विकासनिधीतून 25% टक्के कमिशनची मागणी केली होती. त्या वेळी आपण आवाजाची रेकॉर्डिंग करून ती पत्रकारांच्या माध्यमातून जनतेसमोर आणली होती.
“या प्रकरणामुळे आमदारांचा माझ्यावर राग होता. त्याचाच परिणाम सभेत दिसून आला,” असा आरोप गुरव यांनी केला.
स्थलांतराबाबत मत मांडताना वाद…
कृष्णा गुरव यांनी आपल्या भाषणात स्थलांतरित होणाऱ्या ग्रामस्थांना प्रत्येकी कुटुंबाला 15 लाख रुपये देऊन वेगवेगळ्या ठिकाणी स्थलांतर करण्याऐवजी एकाच ठिकाणी पुनर्वसन करावे, जेणेकरून गाव एकत्र राहील, अशी मागणी केली. तसेच ग्रामस्थांच्या जमिनी विक्रीचा प्रकार थांबवून शासन दरबारी पाठपुरावा करून गावाचा विकास केल्यास स्थलांतर करण्याची गरज भासणार नाही असेही त्यांनी सुचविले.
यावेळी आमदारांनी मध्येच हस्तक्षेप करत, “कृष्णा गुरव यांचे कोणीही ऐकू नका, नाहीतर तुमच्या भागाचा विकास होणार नाही,” असे म्हटल्याचा आरोप गुरव यांनी केला.
“मी आमदारांना ही भाषा शोभत नाही, असा जाब विचारला असता त्यांनी एकेरी भाषेत दुसऱ्या आमदाराला असं म्हटला असतास तर ठिकाणी ‘तुझं मुंडक मारलं असते, मुंडक तोडले असते’ अशी गुंडगिरीची भाषा वापरली,” असा गंभीर आरोप त्यांनी केला.
व्हिडिओ व्हायरल; तालुक्यात चर्चा…
या घटनेचा कथित व्हिडिओ खानापूर तालुक्यात मोठ्या प्रमाणावर व्हायरल झाला असून सर्वत्र चर्चेचा विषय ठरला आहे. काहींनी या वक्तव्याचा निषेधही केल्याचे गुरव यांनी सांगितले.
“आमदारांच्या गुंडगिरीचा निषेध” – कृष्णा गुरव..
“मी ग्रामपंचायतीचा माजी अध्यक्ष आणि विद्यमान माजी सदस्य म्हणून आमदारांच्या या वर्तनाचा निषेध करतो. भाजप तसेच हिंदुत्ववादी संघटनांनी हिंदू म्हणून निवडून दिलेल्या आमदारांना जाब विचारावा. ही भाषा त्यांना शोभते का, याचा विचार करावा आणि मला न्याय द्यावा,” अशी मागणी त्यांनी केली.
ग्रामीण भागात धार्मिक उत्सवांच्या निमित्ताने आयोजित सभांमध्ये गावाच्या विकासाबाबत प्रश्न विचारले जातात. त्यावर समर्पक उत्तरे देणे अपेक्षित असताना अशा प्रकारची भाषा वापरणारे लोकप्रतिनिधी काय विकास करणार, असा सवालही त्यांनी उपस्थित केला.
शाळा-होस्टेल बंद; विकासाबाबत प्रश्नचिन्ह…
या भागातील होस्टेल व काही शाळा बंद पडल्याचा मुद्दा उपस्थित करत, अजूनही काही शाळा बंद होण्याच्या मार्गावर असल्याचे गुरव यांनी सांगितले.
तसेच ज्या 25% टक्के कमिशनचा आरोप करण्यात आला होता, त्या अनुदानाचा उपयोग करण्याबाबत आमदारांनी शिरोली ग्रामपंचायतला एकदाही भेट दिली नाही. परंतु ग्रामपंचायत सदस्यांचा कार्यकाळ संपल्यानंतर दोन दिवसांपूर्वी आमदारांनी शिरोली ग्रामपंचायतला भेट दिली आहे. त्याचा फोटो सुद्धा माझ्याकडे आहे. ग्रामविकास अधिकारी (पिडिओ) यांच्याकडे पत्रकारांनी माहिती घ्यावी, व सदर निधीबाबत माहिती जाणून घ्यावीत अशी विनंतीही त्यांनी केली.
कायदेशीर कारवाईचा इशारा…
“मी वकिलांशी चर्चा करून कायदेशीर मार्गाने आमदारांविरोधात कायदेशीर कारवाई करणार आहे,” असा इशारा कृष्णा गुरव यांनी दिला असून या प्रकरणामुळे तालुक्यातील राजकीय वातावरण तापण्याची शक्यता व्यक्त केली जात आहे.
ಡೋಂಗರಗಾವ ಸಭೆಯಲ್ಲಿ ಶಾಸಕ ವಿಠ್ಠಲ್ ಹಲಗೇಕರ್ ಅವರಿಂದ ದಬ್ಬಾಳಿಕೆಯ ಭಾಷೆ; ತೆಲೆಯೇ ಹೊಡೆದಉರುಳ್ಳುತ್ತಿತ್ತು ’ ಎಂಬ ಹೇಳಿಕೆಗೆ ಖಂಡನೆ, ಕೃಷ್ಣ ಗುರವ ರಿಂದ ಕಾನೂನು ಕ್ರಮದ ಘೋಷಣೆ.
ಖಾನಾಪುರ : ಬುಧವಾರ ದಿನಾಂಕ 31 ಮಾರ್ಚ್ 2026 ರಂದು ಡೋಂಗರಗಾವನಲ್ಲಿ ರವಳನಾಥ ದೇವರ ವಾರ್ಷಿಕೋತ್ಸವದ ನಿಮಿತ್ತ ಆಯೋಜಿಸಲಾದ ಸಭೆಯಲ್ಲಿ ಖಾನಾಪುರ ತಾಲ್ಲೂಕಿನ ಶಾಸಕ ವಿಠ್ಠಲ್ ಹಲಗೇಕರ್ ಅವರು ದಬ್ಬಾಳಿಕೆಯ ಭಾಷೆ ಬಳಸಿದ್ದಾರೆ ಎಂದು ಶಿರೋಲಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು, ಪ್ರಸ್ತುತ ಸದಸ್ಯರು ಹಾಗೂ ಪಿಕೆಪಿಎಸ್ ಸೊಸೈಟಿಯ ಅಧ್ಯಕ್ಷರಾದ ಕೃಷ್ಣ ಗುರುವ ಆರೋಪಿಸಿದ್ದಾರೆ.
“ನಿನ್ನ ತೆಲೆಯೇ ಹೊಡೆದಉರುಳ್ಳುತ್ತಿತ್ತು ” ಎಂದು ಶಾಸಕವರು ಸಾರ್ವಜನಿಕ ವೇದಿಕೆಯಲ್ಲಿ ಹೇಳಿರುವುದಾಗಿ ಆರೋಪಿಸಿ, ವಕೀಲರೊಂದಿಗೆ ಚರ್ಚೆ ನಡೆಸಿ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಖಾನಾಪುರದ ಸಾರ್ವಜನಿಕ ಕಾಮಗಾರಿಗಳ ಇಲಾಖೆಯ ವಿಶ್ರಾಂತಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಪತ್ರಿಕಾಗೋಷ್ಠಿಯಲ್ಲಿ ಸಮಾಜಸೇವಕರಾದ ಸೀತಾರಾಮ ಸುತಾರ ಹಾಗೂ ಬಾಳಪ್ಪ ನಾಂದ್ರಣಕರ ಉಪಸ್ಥಿತರಿದ್ದರು.
ಸಭೆಯ ಘಟನಾಕ್ರಮ..
ಕೃಷ್ಣ ಗುರುವ ನೀಡಿದ ಮಾಹಿತಿಯಂತೆ, ಡೋಂಗರಗಾವನಲ್ಲಿ ಗುರುವಾರ 31ರಂದು ರವಳನಾಥ ದೇವರ ವಾರ್ಷಿಕೋತ್ಸವದ ನಿಮಿತ್ತ ನಾಟಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರ ಮೊದಲು ರಾತ್ರಿ ಸುಮಾರು 11.00 ಗಂಟೆಗೆ ಸಭೆ ಆಯೋಜಿಸಲಾಗಿತ್ತು.
ಈ ಸಭೆಯ ವೇದಿಕೆಯಲ್ಲಿ ಶಾಸಕ ವಿಠ್ಠಲ್ ಹಲಗೇಕರ್, ಭರಮಾಣಿ ಪಾಟೀಲ, ಅಪ್ಪು ಗಾವ್ಕರ್, ಕಿಶೋರ್ ಹೆಬ್ಬಾಳ್ಕರ್ ಹಾಗೂ ಕೃಷ್ಣ ಗುರುವ ಉಪಸ್ಥಿತರಿದ್ದರು.
ಸಭೆಯ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸದಾನಂದ ಅವರು ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿ ಕುರಿತು ಮಾತನಾಡಿದರು. ಹಾಗೆಯೇ ತಾಲ್ಲೂಕು ಪಂಚಾಯಿತಿಯ ಮಾಜಿ ಸದಸ್ಯ ಅಶೋಕ್ ದೇಸಾಯಿ (ನೆರಸಾ) ಅವರು ಗ್ರಾಮಗಳ ಪ್ರಸ್ತಾವಿತ ಸ್ಥಳಾಂತರ ಹಾಗೂ ಅದರ ಪರಿಣಾಮವಾಗಿ ಉಂಟಾಗುವ ಸಮಸ್ಯೆಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕೃಷ್ಣ ಗುರುವ ಅವರು ಇಬ್ಬರ ಭಾಷಣಗಳಿಗೆ ಅನುಮೋದನೆ ನೀಡುತ್ತ ತಮ್ಮ ಅಭಿಪ್ರಾಯವನ್ನು ಮುಂದಿಟ್ಟರು.
25% ಕಮಿಷನ್ ಪ್ರಕರಣದಿಂದ ವಾದ?
ಗುರುವ ಅವರ ಹೇಳಿಕೆಯಂತೆ, ಸುಮಾರು ಆರು ತಿಂಗಳ ಹಿಂದೆ ಶಾಸಕರ ಪಿಎ ಅವರು ಶಿರೋಲಿ ಗ್ರಾಮ ಪಂಚಾಯಿತಿಗೆ ಫಿಫ್ಟೀನ್ ಫೈನಾನ್ಸ್ ಮೂಲಕ ದೊರೆತ 25 ಲಕ್ಷ ರೂಪಾಯಿ ಅಭಿವೃದ್ಧಿ ನಿಧಿಯಿಂದ 25% ಕಮಿಷನ್ ಕೇಳಿದ್ದರು. ಆ ಸಂದರ್ಭದಲ್ಲಿ ತಾವು ಧ್ವನಿಮುದ್ರಣ ಮಾಡಿ ಪತ್ರಕರ್ತರ ಮೂಲಕ ಜನತೆಗೆ ಬಹಿರಂಗಪಡಿಸಿದ್ದಾಗಿ ಹೇಳಿದರು.
“ಈ ಪ್ರಕರಣದಿಂದ ಶಾಸಕರಿಗೆ ನನ್ನ ಮೇಲೆ ಕೋಪ ಇದ್ದು ಸಭೆಯಲ್ಲಿ ವ್ಯಕ್ತವಾಯಿತು,” ಎಂದು ಗುರುವ ಆರೋಪಿಸಿದರು.
ಸ್ಥಳಾಂತರ ವಿಚಾರದಲ್ಲಿ ಮಾತಿನ ಚಕಮಕಿ…
ಕೃಷ್ಣ ಗುರುವ ಅವರು ತಮ್ಮ ಭಾಷಣದಲ್ಲಿ ಸ್ಥಳಾಂತರಗೊಳ್ಳುವ ಪ್ರತೀ ಕುಟುಂಬಕ್ಕೆ 15 ಲಕ್ಷ ರೂಪಾಯಿ ನೀಡಿ ಬೇರೆ ಬೇರೆ ಕಡೆ ಸ್ಥಳಾಂತರ ಮಾಡುವ ಬದಲು, ಒಂದೇ ಸ್ಥಳದಲ್ಲಿ ಪುನರ್ವಸತಿ ಮಾಡಬೇಕು, ಆಗ ಗ್ರಾಮ ಒಂದಾಗಿ ಉಳಿಯುತ್ತದೆ ಎಂದು ಬೇಡಿಕೆ ಮಂಡಿಸಿದರು.
ಹಾಗೂ ಗ್ರಾಮಸ್ಥರ ಜಮೀನು ಮಾರಾಟವನ್ನು ನಿಲ್ಲಿಸಿ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿ ಗ್ರಾಮಾಭಿವೃದ್ಧಿ ಮಾಡಿದರೆ ಸ್ಥಳಾಂತರದ ಅಗತ್ಯವೇ ಇರುವುದಿಲ್ಲ ಎಂದು ಸಲಹೆ ನೀಡಿದರು.
ಈ ವೇಳೆ ಶಾಸಕವರು ಮಧ್ಯಪ್ರವೇಶ ಮಾಡಿ, “ಕೃಷ್ಣ ಗುರುವರ ಮಾತನ್ನು ಯಾರೂ ಕೇಳಬೇಡಿ, ಇಲ್ಲದಿದ್ದರೆ ನಿಮ್ಮ ಭಾಗದ ಅಭಿವೃದ್ಧಿ ಆಗುವುದಿಲ್ಲ,” ಎಂದು ಹೇಳಿದ್ದಾರೆ ಎಂಬ ಆರೋಪವನ್ನು ಗುರುವ ಮಾಡಿದ್ದಾರೆ.
“ತಾವು ಬಳಸಿದ ಈ ಭಾಷೆ ಯೋಗ್ಯವಲ್ಲ ಎಂದು ಪ್ರಶ್ನಿಸಿದಾಗ, ‘ಇನ್ನೊಬ್ಬ ಶಾಸಕರಿಗೆ ಹೀಗೆ ಹೇಳಿದ್ದರೆ ಅಲ್ಲೇ ನಿನ್ನ ತಲೆ ಹೊಡೆದಿರುತ್ತಿದ್ದೆ,’ ಎಂಬ ಗೂಂಡಾಗಿರಿ ಭಾಷೆ ಬಳಕೆ ಮಾಡಿದರು,” ಎಂದು ಗಂಭೀರ ಆರೋಪ ಮಾಡಿದ್ದಾರೆ.
ವೀಡಿಯೋ ವೈರಲ್; ತಾಲ್ಲೂಕಿನಲ್ಲಿ ಚರ್ಚೆ…
ಈ ಘಟನೆಯ ವೀಡಿಯೋ ಖಾನಾಪುರ ತಾಲ್ಲೂಕಿನಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ಕೆಲವರು ಈ ಹೇಳಿಕೆಯನ್ನು ಖಂಡಿಸಿರುವುದಾಗಿ ಗುರುವ ತಿಳಿಸಿದ್ದಾರೆ.
“ಶಾಸಕರ ಗೂಂಡಾಗಿರಿ ಖಂಡನೆ” – ಕೃಷ್ಣ ಗುರುವ
“ನಾನು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಮಾಜಿ ಪ್ರಸ್ತುತ ಸದಸ್ಯನಾಗಿ ಶಾಸಕರ ಈ ವರ್ತನೆಯನ್ನು ಖಂಡಿಸುತ್ತೇನೆ. ಬಿಜೆಪಿ ಹಾಗೂ ಹಿಂದುತ್ವ ಸಂಘಟನೆಗಳು ಹಿಂದೂ ಎಂದು ಆರಿಸಿ ಕಳುಹಿಸಿದ ಶಾಸಕರಿಗೆ ಜವಾಬ್ದಾರಿ ಕೇಳಬೇಕು. ಈ ಭಾಷೆ ಅವರಿಗೆ ತಕ್ಕುದೇ ಎಂಬುದನ್ನು ಪರಿಶೀಲಿಸಿ ನನಗೆ ನ್ಯಾಯ ಒದಗಿಸಬೇಕು,” ಎಂದು ಅವರು ಆಗ್ರಹಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಧಾರ್ಮಿಕ ಉತ್ಸವಗಳ ಸಂದರ್ಭದಲ್ಲಿ ನಡೆಯುವ ಸಭೆಗಳಲ್ಲಿ ಗ್ರಾಮಾಭಿವೃದ್ಧಿ ಕುರಿತ ಪ್ರಶ್ನೆಗಳು ಕೇಳಲಾಗುತ್ತದೆ. ಅದಕ್ಕೆ ಸಮರ್ಪಕ ಉತ್ತರ ನೀಡುವುದು ನಿರೀಕ್ಷಿತವಾಗಿರುವಾಗ ಇಂತಹ ಭಾಷೆ ಬಳಸುವ ಜನಪ್ರತಿನಿಧಿಗಳು ಯಾವ ಅಭಿವೃದ್ಧಿ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಶಾಲೆ-ಹಾಸ್ಟೆಲ್ ಬಂದ್; ಅಭಿವೃದ್ಧಿಗೆ ಪ್ರಶ್ನೆ…
ಈ ಭಾಗದಲ್ಲಿನ ಕೆಲವು ಹಾಸ್ಟೆಲ್ ಹಾಗೂ ಶಾಲೆಗಳು ಮುಚ್ಚಲ್ಪಟ್ಟಿರುವ ವಿಷಯವನ್ನು ಉಲ್ಲೇಖಿಸಿ, ಇನ್ನೂ ಕೆಲವು ಶಾಲೆಗಳು ಮುಚ್ಚುವ ಹಂತದಲ್ಲಿವೆ ಎಂದು ಗುರುವ ಹೇಳಿದರು.
25% ಕಮಿಷನ್ ಆರೋಪದ ಅನುದಾನ ಬಳಕೆಯ ವಿಷಯದಲ್ಲಿ ಶಾಸಕರು ಶಿರೋಳಿ ಗ್ರಾಮ ಪಂಚಾಯಿತಿಗೆ ಒಂದು ಸಲವೂ ಭೇಟಿ ನೀಡಲಿಲ್ಲ. ಆದರೆ ಗ್ರಾಮ ಪಂಚಾಯಿತಿ ಸದಸ್ಯರ ಅವಧಿ ಮುಗಿದ ಎರಡು ದಿನಗಳ ಹಿಂದೆ ಶಾಸಕರು ಭೇಟಿ ನೀಡಿದ್ದಾರೆ. ಅದರ ಫೋಟೋ ನನ್ನ ಬಳಿ ಇದೆ ಎಂದು ಹೇಳಿದರು.
ಗ್ರಾಮ ಅಭಿವೃದ್ಧಿ ಅಧಿಕಾರಿ (ಪಿಡಿಓ) ಅವರಿಂದ ಪತ್ರಕರ್ತರು ಮಾಹಿತಿ ಪಡೆಯಬೇಕು ಮತ್ತು ಸಂಬಂಧಿತ ನಿಧಿಯ ವಿವರ ತಿಳಿದುಕೊಳ್ಳಬೇಕು ಎಂದು ಅವರು ವಿನಂತಿಸಿದರು.
ಕಾನೂನು ಕ್ರಮದ ಎಚ್ಚರಿಕೆ…
“ನಾನು ವಕೀಲರೊಂದಿಗೆ ಚರ್ಚಿಸಿ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ,” ಎಂದು ಕೃಷ್ಣ ಗುರುವ ಎಚ್ಚರಿಕೆ ನೀಡಿದ್ದು, ಈ ಪ್ರಕರಣದಿಂದ ತಾಲ್ಲೂಕಿನ ರಾಜಕೀಯ ವಾತಾವರಣ ತೀವ್ರಗೊಳ್ಳುವ ಸಾಧ್ಯತೆ ವ್ಯಕ್ತವಾಗಿದೆ.



