क्रांतिवीर रायान्ना यांचे जन्मगाव संगोळी व नंदगडचा पर्यटनस्थळ म्हणून विकास करणार : मुख्यमंत्री सिद्धरामय्या.
बेळगाव, दि. 19 जानेवारी (आपलं खानापूर) ;
ब्रिटिशांविरोधात रणशिंग फुंकणारे स्वातंत्र्यसैनिक व पराक्रमी योद्धा क्रांतीवीर संगोळी रायण्णा यांच्यासह एकूण सात जणांना नंदगड येथे फाशी देण्यात आली होती. रायण्णांच्या समाधीस्थळाच्या धर्तीवर उर्वरित सहा हुतात्म्यांच्या समाधीस्थळांचाही विकास करण्यात येईल, असे मुख्यमंत्री सिद्धरामय्या यांनी सांगितले.
नंदगड येथील रूरल एज्युकेशन सोसायटीच्या मैदानात, सोमवार दि. 19 जानेवारी रोजी, क्रांतीवीर संगोळी रायण्णा वस्तुसंग्रहालयाचे उद्घाटन, तसेच समाधीशेजारील तलावात क्रांतीवीर रायण्णांच्या पुतळ्याचे लोकार्पण तसेच विविध विकासकामांचे भूमिपूजन करून ते बोलत होते. रायण्णांचे नाव घेताच अंगावर शहारे येतात. 2024 मध्ये संगोळीत शौर्यभूमी आणि सैनिक शाळेचे उद्घाटन करण्यात आले आहे. रायण्णांचे जन्मगाव संगोळी तसेच त्यांना फाशी देण्यात आलेले नंदगड ही दोन्ही गांव विकसित केले जात आहेत. संगोळी रायण्णा हे थोर देशभक्त होते आणि त्यांचे स्मरण ठेवणे हे आपले कर्तव्य आहे, असे ते म्हणाले. संगोळी आणि नंदगड या ठिकाणांचा पर्यटनस्थळ म्हणून विकास करण्याच्या उद्देशाने ही कामे राबवली जात आहेत. वीरभूमीत संगोळी रायण्णांच्या जीवनातील व लढ्याच्या विविध टप्प्यांचे शिल्पकलेद्वारे सजीव दर्शन घडवण्यात आले आहे, असेही त्यांनी सांगितले.
सरकार आगामी काळात संगोळी व नंदगडचा विकास करून पर्यटनकेंद्र म्हणून विकसित करणार आहे. प्रत्येकाने देशभक्ती जोपासली पाहिजे व संविधानाचे रक्षण केले पाहिजे. शिक्षणामुळे समान संधी उपलब्ध झाली आहे. त्यामुळे शिक्षण, स्वाभिमान आणि ज्ञान हे सर्वांच्या प्रगतीस उपयुक्त आहेत. गुलामगिरीची मानसिकता नष्ट केली पाहिजे.
संगोळी येथील सैनिक शाळेत सध्या 388 विद्यार्थी शिक्षण घेत आहेत. देशाचे लोकशाही मूल्य व संविधान जपले गेले पाहिजे. शिक्षण व स्वाभिमानासोबत देशभक्तीही वृद्धिंगत केली पाहिजे. असे मुख्यमंत्री सिद्धरामय्या म्हणाले.
बेळगावी जिल्ह्याचे पालकमंत्री सतीश जारकीहोळी यांनी सांगितले की, संगोळी रायण्णांच्या संघर्षमय जीवनाचा व इतिहासाचा प्रसार करण्याच्या उद्देशाने 2013 मध्ये वीरभूमीच्या उभारणीसाठी भूमिपूजन करण्यात आले होते. आज ते स्वप्न प्रत्यक्षात उतरले आहे. नंदगड हे येत्या काळात राष्ट्रीय पातळीवरील पर्यटनस्थळ ठरेल आणि रायण्णांचा इतिहास देशभर पोहोचवण्याचे कार्य वीरभूमीतून होईल.
वीरभूमीमुळे आजपासून नंदगडला भारताच्या नकाशावर विशेष स्थान प्राप्त झाले आहे, असेही ते म्हणाले.
लोकनिर्माण विभागामार्फत अनेक विकासकामे हाती घेण्यात आली असून, यंदा खानापूर तालुक्यात तीन पुलांची बांधकामे सुरू करण्यात आली आहेत.
महिला व बालविकास, दिव्यांग व ज्येष्ठ नागरिक सक्षमीकरण मंत्री लक्ष्मी हेब्बाळकर म्हणाल्या की, क्रांतीवीर संगोळी रायण्णांचे जीवनचरित्र नंदगड येथे उभारून पुढील पिढीला त्यांचा इतिहास सांगण्याचे महत्त्वपूर्ण कार्य राज्य सरकारने केले आहे. हे सर्वांसाठी अभिमानास्पद आहे.
रायण्णा म्हणजे देशभक्ती, धैर्य व स्वाभिमानाचे प्रतीक आहे. आज लोकार्पण झालेली वीरभूमी राष्ट्रीय स्मारक व्हावी, अशी अपेक्षा त्यांनी व्यक्त केली.
मागासवर्ग कल्याण तसेच कन्नड व संस्कृती मंत्री शिवराज तंगडगी म्हणाले, “नंदगडसाठी आज ऐतिहासिक दिवस आहे. संगोळी रायण्णा हे स्वातंत्र्यलढ्यासाठी रणशिंग फुंकणारे महान योद्धे होते. त्यांचा इतिहास जतन करण्यासाठी संगोळी व नंदगड येथे वस्तुसंग्रहालये उभारण्यात आली आहेत. येत्या काळात कित्तूर चन्नम्मा व संगोळी रायण्णांचा इतिहास राज्यासह राष्ट्रीय स्तरावर प्रभाव टाकेल.”
नगरविकास मंत्री भैरती एस. सुरेश म्हणाले की, नंदगडमध्ये वीरभूमी उभारल्यामुळे क्रांतीवीर संगोळी रायण्णांचे स्मरण कायमचे झाले आहे. निवडणुकीपूर्वी जाहीर केलेल्या पाच हमी योजना राज्य सरकारने यशस्वीपणे अंमलात आणल्या आहेत. पुढील काळात संगोळी रायण्णा क्षेत्र विकास प्राधिकरणाला आवश्यक निधी व सहकार्य दिले जाईल.
राज्य हमी योजना अंमलबजावणी प्राधिकरणाचे अध्यक्ष एच.एम. रेवण्णा म्हणाले की, ब्रिटिशांविरुद्ध लढा देणाऱ्या क्रांतीवीर संगोळी रायण्णांच्या यशोगाथेचे दर्शन घडवणारे नंदगड येथील वीरभूमी वस्तुसंग्रहालय हे देशातील सर्वोत्तम वस्तुसंग्रहालयांपैकी एक ठरेल व राष्ट्रीय स्मारक बनेल.
बेळगावहून नंदगडसाठी प्रत्येक शनिवार व रविवार विशेष बससेवा सुरू करण्याची त्यांनी मागणी केली.
कार्यक्रमाच्या अध्यक्षस्थानी असलेले आमदार विठ्ठल हलगेकर म्हणाले की, नंदगड ही खानापूर तालुक्यातील पवित्र भूमी आहे. संगोळी रायण्णांचा पुतळा व वीरभूमीचे लोकार्पण होणे ही अभिमानाची बाब आहे. ब्रिटिशांविरोधातील लढ्यात संगोळी रायण्णांचे नाव अजरामर आहे.
खानापूर–कित्तूर रस्ता रुंदीकरण, हंडीभडंगनाथ मंदिर विकास, पी.आर.डी. रस्त्यांची कामे तसेच खानापूर मतदारसंघासाठी अधिक निधी देण्याची मागणी त्यांनी मुख्यमंत्र्यांकडे केली.
कार्यक्रमास श्री क्षेत्र कागिनेली कनक गुरु पीठाचे रेवणसिद्धेश्वर सिंहासनाधीश्वर परमपूज्य जगद्गुरू डॉ. निरंजनानंदपुरी महास्वामी यांचे दिव्य सान्निध्य लाभले. त्यांनी उपस्थित जनसमुदायाला आशीर्वचन केले.
कार्यक्रमास काँग्रेसच्या नेत्या व खानापूरच्या माजी आमदार डॉ. अंजलीताई निंबाळकर, सरकारी मुख्य सचेतक अशोक पाटील, राज्य वित्त महामंडळाचे अध्यक्ष महांतेश कौजलगी, आमदार विश्वास वैद्य, गणेश हुक्केरी, आसीफ (राजू) सेठ, बाबासाहेब पाटील, विधानपरिषद सदस्य चन्नराज हट्टीहोळी, ग्रामपंचायत अध्यक्ष यल्लाप्पा गुरव, नेत्रा लोहार (ग्रामपंचायत सदस्य), बेळगाव शहरी विकास प्राधिकरणाचे अध्यक्ष लक्ष्मण चिंगळे, उप्पार विकास महामंडळाचे अध्यक्ष भरमण्णा उप्पार, हमी योजना प्राधिकरणाचे जिल्हाध्यक्ष विनय नवलगट्टी, बेळगाव विभागीय आयुक्त जानकी के.एम., जिल्हाधिकारी मोहम्मद रोशन, पोलीस अधीक्षक के. रामराजन, जिल्हा पंचायत मुख्य कार्यकारी अधिकारी राहुल शिंदे, मागासवर्ग कल्याण विभागाचे आयुक्त दयानंद के.ए. तसेच मान्यवर मंडळी व नागरिक मोठ्या संख्येने उपस्थित होते.
कार्यक्रमाचे सूत्रसंचालन बसवराज कुप्पसगौडर यांनी केले.
क्रांतीवीर संगोळी रायण्णा क्षेत्र विकास अधिकारी आर. शालिनी यांनी आभार मानले.
ಕ್ರಾಂತಿವೀರ ಸಂಗೋಳಿ ರಾಯಣ್ಣ ಅವರ ಜನ್ಮಗ್ರಾಮ ಸಂಗೋಳಿ ಮತ್ತು ನಂದಗಡನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಘೋಷಣೆ.
ಬೆಳಗಾವಿ, ಜ. 19 (ಆಪಲ ಖಾನಾಪುರ; ದಿನಕರ್ ಮರಗಾಳೆ) :
ಬ್ರಿಟಿಷರ ವಿರುದ್ಧ ಶಂಖ ಊದಿದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಪರಾಕ್ರಮಿ ಯೋಧ ಕ್ರಾಂತಿವೀರ ಸಂಗೋಳಿ ರಾಯಣ್ಣ ಸೇರಿದಂತೆ ಒಟ್ಟು ಏಳು ಜನರನ್ನು ನಂದಗಡದಲ್ಲಿ ಗಲ್ಲಿಗೇರಿಸಲಾಗಿತ್ತು. ವೀರ ರಾಯಣ್ಣರ ಸಮಾಧಿ ಸ್ಥಳದ ಮಾದರಿಯಲ್ಲಿ ಉಳಿದ ಆರು ಹುತಾತ್ಮರ ಸಮಾಧಿ ಸ್ಥಳಗಳನ್ನೂ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಂದಗಡದ ರೂರಲ್ ಎಜುಕೇಶನ್ ಸೊಸೈಟಿಯ ಮೈದಾನದಲ್ಲಿ, ಸೋಮವಾರ ಜ. 19 ರಂದು, ಕ್ರಾಂತಿವೀರ ಸಂಗೋಳಿ ರಾಯಣ್ಣ ವಸ್ತುಸಂಗ್ರಹಾಲಯದ ಉದ್ಘಾಟನೆ, ಸಮಾಧಿಯ ಪಕ್ಕದ ಕೆರೆಯಲ್ಲಿ ಕ್ರಾಂತಿವೀರ ರಾಯಣ್ಣರ ಪ್ರತಿಮೆಯ ಲೋಕಾರ್ಪಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ರಾಯಣ್ಣರ ಮಾಡಿದ ಕ್ರಾಂತಿ ಕೇಳಿದರೆ ದೇಹದಲ್ಲಿ ನಡುಕ ಉಂಟಾಗುತ್ತದೆ ಎಂದು ಹೇಳಿದರು.
2024ರಲ್ಲಿ ಸಂಗೋಳಿಯಲ್ಲಿ ಶೌರ್ಯಭೂಮಿ ಹಾಗೂ ಸೈನಿಕ ಶಾಲೆ ಉದ್ಘಾಟನೆಗೊಂಡಿದೆ. ರಾಯಣ್ಣರ ಜನ್ಮಗ್ರಾಮ ಸಂಗೋಳಿ ಹಾಗೂ ಅವರನ್ನು ಗಲ್ಲಿಗೇರಿಸಲಾದ ನಂದಗಡ – ಈ ಎರಡೂ ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸಂಗೋಳಿ ರಾಯಣ್ಣ ಮಹಾನ್ ದೇಶಭಕ್ತರಾಗಿದ್ದು, ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಅವರು ಹೇಳಿದರು. ಸಂಗೋಳಿ ಮತ್ತು ನಂದಗಡವನ್ನು ಪ್ರವಾಸಿ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಕಾರ್ಯಗಳು ನಡೆಯುತ್ತಿವೆ. ವೀರಭೂಮಿಯಲ್ಲಿ ಸಂಗೋಳಿ ರಾಯಣ್ಣರ ಜೀವನ ಹಾಗೂ ಹೋರಾಟದ ವಿವಿಧ ಹಂತಗಳನ್ನು ಶಿಲ್ಪಕಲೆಯ ಮೂಲಕ ಜೀವಂತವಾಗಿ ಪ್ರದರ್ಶಿಸಲಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಸರ್ಕಾರ ಸಂಗೋಳಿ ಹಾಗೂ ನಂದಗಡ ಊರುಗಳನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ಕೇಂದ್ರಗಳಾಗಿ ರೂಪಿಸಲಿದೆ. ಪ್ರತಿಯೊಬ್ಬರೂ ದೇಶಭಕ್ತಿಯನ್ನು ಬೆಳೆಸಬೇಕು ಹಾಗೂ ಸಂವಿಧಾನವನ್ನು ರಕ್ಷಿಸಬೇಕು. ಶಿಕ್ಷಣದಿಂದ ಸಮಾನ ಅವಕಾಶಗಳು ದೊರೆತಿವೆ. ಆದ್ದರಿಂದ ಶಿಕ್ಷಣ, ಸ್ವಾಭಿಮಾನ ಮತ್ತು ಜ್ಞಾನವು ಎಲ್ಲರ ಪ್ರಗತಿಗೆ ಉಪಯುಕ್ತ. ಗುಲಾಮಗಿರಿಯ ಮನಸ್ಥಿತಿಯನ್ನು ನಾಶ ಮಾಡಬೇಕು. ಸಂಗೋಳಿಯ ಸೈನಿಕ ಶಾಲೆಯಲ್ಲಿ ಪ್ರಸ್ತುತ 388 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಂವಿಧಾನವನ್ನು ಕಾಪಾಡಬೇಕು. ಶಿಕ್ಷಣ ಮತ್ತು ಸ್ವಾಭಿಮಾನದ ಜೊತೆಗೆ ದೇಶಭಕ್ತಿಯೂ ವೃದ್ಧಿಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಸಂಗೋಳಿ ರಾಯಣ್ಣರ ಹೋರಾಟಮಯ ಜೀವನ ಮತ್ತು ಇತಿಹಾಸವನ್ನು ಜನತೆಗೆ ತಲುಪಿಸುವ ಉದ್ದೇಶದಿಂದ 2013ರಲ್ಲಿ ವೀರಭೂಮಿಯ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗಿತ್ತು. ಇಂದು ಆ ಕನಸು ಸಾಕಾರವಾಗಿದೆ. ನಂದಗಡ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗಲಿದೆ ಮತ್ತು ರಾಯಣ್ಣರ ಇತಿಹಾಸ ದೇಶದಾದ್ಯಂತ ಹರಡುವ ಕೆಲಸ ವೀರಭೂಮಿಯಿಂದ ನಡೆಯಲಿದೆ. ವೀರಭೂಮಿಯಿಂದಾಗಿ ನಂದಗಡ ಇಂದು ಭಾರತ ನಕ್ಷೆಯಲ್ಲಿ ವಿಶೇಷ ಸ್ಥಾನ ಪಡೆದಿದೆ ಎಂದು ಹೇಳಿದರು. ಲೋಕೋಪಯೋಗಿ ಇಲಾಖೆ ಮೂಲಕ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಈ ವರ್ಷ ಖಾನಾಪುರ ತಾಲ್ಲೂಕಿನಲ್ಲಿ ಮೂರು ಸೇತುವೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ದಿವ್ಯಾಂಗ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಕ್ರಾಂತಿವೀರ ಸಂಗೋಳಿ ರಾಯಣ್ಣರ ಜೀವನಚರಿತ್ರೆಯನ್ನು ನಂದಗಡದಲ್ಲಿ ನಿರ್ಮಿಸಿ ಮುಂದಿನ ಪೀಳಿಗೆಗೆ ಅವರ ಇತಿಹಾಸವನ್ನು ತಿಳಿಸುವ ಮಹತ್ವದ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಿದೆ. ಇದು ಎಲ್ಲರಿಗೂ ಹೆಮ್ಮೆಯ ವಿಷಯ. ರಾಯಣ್ಣ ಎಂದರೆ ದೇಶಭಕ್ತಿ, ಧೈರ್ಯ ಮತ್ತು ಸ್ವಾಭಿಮಾನದ ಸಂಕೇತ. ಇಂದು ಲೋಕಾರ್ಪಣೆಗೊಂಡ ವೀರಭೂಮಿ ರಾಷ್ಟ್ರೀಯ ಸ್ಮಾರಕವಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, “ನಂದಗಡಕ್ಕೆ ಇಂದು ಐತಿಹಾಸಿಕ ದಿನ. ಸಂಗೋಳಿ ರಾಯಣ್ಣರು ಸ್ವಾತಂತ್ರ್ಯ ಹೋರಾಟಕ್ಕಾಗಿ ಶಂಖವನ್ನು ಊದಿದ ಮಹಾನ್ ಯೋಧರು. ಅವರ ಇತಿಹಾಸವನ್ನು ಸಂರಕ್ಷಿಸಲು ಸಂಗೋಳಿ ಮತ್ತು ನಂದಗಡದಲ್ಲಿ ವಸ್ತುಸಂಗ್ರಹಾಲಯಗಳನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಕಿತ್ತೂರು ಚನ್ನಮ್ಮ ಮತ್ತು ಸಂಗೋಳಿ ರಾಯಣ್ಣರ ಇತಿಹಾಸವು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಭಾವ ಬೀರುತ್ತದೆ” ಎಂದು ಹೇಳಿದರು.
ನಗರಾಭಿವೃದ್ಧಿ ಸಚಿವ ಭೈರತಿ ಎಸ್. ಸುರೇಶ್ ಮಾತನಾಡಿ, ನಂದಗಡದಲ್ಲಿ ವೀರಭೂಮಿ ನಿರ್ಮಾಣದಿಂದ ಕ್ರಾಂತಿವೀರ ಸಂಗೋಳಿ ರಾಯಣ್ಣರ ಸ್ಮರಣೆ ಶಾಶ್ವತವಾಗಿದೆ. ಚುನಾವಣೆಗೆ ಮುನ್ನ ಘೋಷಿಸಲಾದ ಐದು ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಸರ್ಕಾರ ಯಶಸ್ವಿಯಾಗಿ ಜಾರಿಗೊಳಿಸಿದೆ. ಮುಂದಿನ ದಿನಗಳಲ್ಲಿ ಸಂಗೋಳಿ ರಾಯಣ್ಣ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಗತ್ಯ ಅನುದಾನ ಮತ್ತು ಸಹಕಾರ ನೀಡಲಾಗುವುದು ಎಂದು ಹೇಳಿದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಡಿದ ಕ್ರಾಂತಿವೀರ ಸಂಗೋಳಿ ರಾಯಣ್ಣರ ಯಶೋಗಾಥೆಯನ್ನು ಪ್ರತಿಬಿಂಬಿಸುವ ನಂದಗಡದ ವೀರಭೂಮಿ ವಸ್ತುಸಂಗ್ರಹಾಲಯವು ದೇಶದ ಅತ್ಯುತ್ತಮ ವಸ್ತುಸಂಗ್ರಹಾಲಯಗಳಲ್ಲಿ ಒಂದಾಗಲಿದೆ ಹಾಗೂ ರಾಷ್ಟ್ರೀಯ ಸ್ಮಾರಕವಾಗಲಿದೆ. ಬೆಳಗಾವಿಯಿಂದ ನಂದಗಡಕ್ಕೆ ಪ್ರತಿ ಶನಿವಾರ ಹಾಗೂ ಭಾನುವಾರ ವಿಶೇಷ ಬಸ್ ಸೇವೆ ಆರಂಭಿಸುವಂತೆ ಅವರು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ವಿಠ್ಠಲ್ ಹಲಗೇಕರ್ ಮಾತನಾಡಿ, ನಂದಗಡವು ಖಾನಾಪುರ ತಾಲ್ಲೂಕಿನ ಪವಿತ್ರ ಭೂಮಿ. ಸಂಗೋಳಿ ರಾಯಣ್ಣರ ಪ್ರತಿಮೆ ಹಾಗೂ ವೀರಭೂಮಿಯ ಲೋಕಾರ್ಪಣೆ ಹೆಮ್ಮೆಯ ವಿಷಯ. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಸಂಗೋಳಿ ರಾಯಣ್ಣರ ಹೆಸರು ಅಜರಾಮರ. ಖಾನಾಪುರ–ಕಿತ್ತೂರು ರಸ್ತೆ ಅಗಲೀಕರಣ, ಹಂಡಿಭಡಂಗನಾಥ ದೇವಸ್ಥಾನ ಅಭಿವೃದ್ಧಿ, ಪಿ.ಆರ್.ಡಿ. ರಸ್ತೆ ಕಾಮಗಾರಿಗಳು ಹಾಗೂ ಖಾನಾಪುರ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಕಾಗಿನೆಲೆ ಕನಕಗುರು ಪೀಠದ ರೇವಣಸಿದ್ಧೇಶ್ವರ ಸಿಂಹಾಸನಾಧೀಶ್ವರ ಪರಮಪೂಜ್ಯ ಜಗದ್ಗುರು ಡಾ. ನಿರಂಜನಾನಂದಪುರಿ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ಲಭಿಸಿತು. ಅವರು ಸಭಿಕರನ್ನು ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿ ಹಾಗೂ ಖಾನಾಪುರದ ಮಾಜಿ ಶಾಸಕಿ ಡಾ. ಅಂಜಲಿತಾಯಿ ನಿಂಬಾಳ್ಕರ್, ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಾಟೀಲ, ರಾಜ್ಯ ಹಣಕಾಸು ನಿಗಮದ ಅಧ್ಯಕ್ಷ ಮಹಾಂತೇಶ್ ಕೌಜಲಗಿ, ಶಾಸಕರಾದ ವಿಶ್ವಾಸ್ ವೈದ್ಯ, ಗಣೇಶ್ ಹುಕ್ಕೇರಿ, ಆಸಿಫ್ (ರಾಜು) ಸೇಠ್, ಬಾಬಾಸಾಹೇಬ್ ಪಾಟೀಲ, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಗ್ರಾಮ ಪಂಚಾಯತ್ ಅಧ್ಯಕ್ಷ ಯಲ್ಲಪ್ಪ ಗುರವ್, ನೇತ್ರಾ ಲೋಹಾರ್ (ಗ್ರಾಮ ಪಂಚಾಯತ್ ಸದಸ್ಯೆ), ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣ ಚಿಂಗಳೆ, ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ವಿನಯ ನವಲಗಟ್ಟಿ, ಬೆಳಗಾವಿ ವಿಭಾಗೀಯ ಆಯುಕ್ತ ಜಾನಕಿ ಕೆ.ಎಂ., ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂದೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ದಯಾನಂದ ಕೆ.ಎ. ಸೇರಿದಂತೆ ಅನೇಕ ಗಣ್ಯರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಬಸವರಾಜ ಕುಪ್ಪಸಗೌಡರ್ ನೆರವೇರಿಸಿದರು. ಕ್ರಾಂತಿವೀರ ಸಂಗೋಳಿ ರಾಯಣ್ಣ ಪ್ರದೇಶ ಅಭಿವೃದ್ಧಿ ಅಧಿಕಾರಿ ಆರ್. ಶಾಲಿನಿ ಅವರು ವಂದಿಸಿದರು.


