राज्योत्सव मिरवणुकीदरम्यान चाकू हल्ला; सहा जण जखमी — बेळगावात खळबळ.
बेळगाव : कर्नाटक राज्योत्सवाच्या मिरवणुकीदरम्यान बेळगाव शहरातील सदाशिवनगर परिसरात चाकू हल्ल्याची धक्कादायक घटना घडली असून, सहा जण गंभीर जखमी झाले आहेत. या घटनेमुळे परिसरात एकच खळबळ उडाली आहे.
मिळालेल्या माहितीनुसार, सदाशिवनगर येथील लक्ष्मी कॉम्प्लेक्सजवळ राज्योत्सवाच्या निमित्ताने काढण्यात आलेली चित्ररथ मिरवणूक सुरू असताना अचानक काही हल्लेखोरांनी चाकू आणि जांबिया घेऊन गर्दीत घुसून हल्ला चढवला. हल्ल्यानंतर आरोपी घटनास्थळावरून पसार झाले.
जखमींमध्ये गुरुनाथ वक्कुंद, सचिन कांबळे, लोकेश बेटगेरी, महेश, विनायक आणि नझीर पठाण यांचा समावेश आहे. यापैकी तिघांना बीम्स रुग्णालयात, तर दोघांना खासगी रुग्णालयात उपचारासाठी दाखल करण्यात आले आहे. दोन जणांची प्रकृती चिंताजनक असल्याची माहिती मिळाली आहे.
ही घटना एपीएमसी पोलीस ठाण्याच्या हद्दीत घडली असून, पोलिसांनी गुन्हा नोंदवून पुढील तपास सुरू केला आहे. दरम्यान, या हल्ल्यामुळे राज्योत्सवाच्या कार्यक्रमावर तात्पुरता गोंधळ उडाला असून, पोलिसांनी शहरात कडक बंदोबस्त तैनात केला आहे.
ರಾಜೋತ್ಸವ ಮೆರವಣಿಗೆಯ ವೇಳೆ ಚಾಕು ದಾಳಿ; ಆರು ಮಂದಿ ಗಾಯ — ಬೆಳಗಾವಿಯಲ್ಲಿ ಸಂಚಲನ.
ಬೆಳಗಾವಿ : ಕರ್ನಾಟಕ ರಾಜ್ಯೋತ್ಸವ ಮೆರವಣಿಗೆಯ ವೇಳೆ ಬೆಳಗಾವಿ ನಗರದ ಸದಾಶಿವನಗರ ಪ್ರದೇಶದಲ್ಲಿ ಚಾಕು ದಾಳಿಯ ಆಘಾತಕಾರಿ ಘಟನೆ ನಡೆದಿದೆ. ಈ ದಾಳಿಯಲ್ಲಿ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಿಂದ ಪ್ರದೇಶದಲ್ಲಿ ಗೊಂದಲ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮಾಹಿತಿಯ ಪ್ರಕಾರ, ಸದಾಶಿವನಗರದ ಲಕ್ಷ್ಮೀ ಕಾಂಪ್ಲೆಕ್ಸ್ ಹತ್ತಿರ ರಾಜ್ಯೋತ್ಸವದ ಅಂಗವಾಗಿ ಚಿತ್ರರಥ ಮೆರವಣಿಗೆ ನಡೆಯುತ್ತಿದ್ದಾಗ, ಅಕಸ್ಮಾತ್ತಾಗಿ ಕೆಲವು ಹಲ್ಲೆಗಾರರು ಚಾಕು ಮತ್ತು ಜಾಂಬಿಯೊಂದಿಗೆ ಗುಂಪಿನೊಳಗೆ ನುಗ್ಗಿ ಹಲ್ಲೆ ನಡೆಸಿದರು. ದಾಳಿ ಮಾಡಿದ ನಂತರ ಆರೋಪಿಗಳು ಘಟನಾ ಸ್ಥಳದಿಂದ ಪರಾರಿಯಾದರು.
ಗಾಯಗೊಂಡವರ ಹೆಸರುಗಳು ಗುರುನಾಥ ವಕ್ಕುಂದ, ಸಚಿನ್ ಕಾಂಬಳೆ, ಲೋಕೇಶ್ ಬೆಟ್ಗೇರಿ, ಮಹೇಶ್, ವಿನಾಯಕ ಮತ್ತು ನಜೀರ್ ಪಠಾಣ್ ಎಂದು ತಿಳಿದುಬಂದಿದೆ. ಇವರಲ್ಲಿ ಮೂವರನ್ನು ಬೀಮ್ಸ್ ಆಸ್ಪತ್ರೆಯಲ್ಲಿ, ಇನ್ನಿಬ್ಬರನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಘಟನೆ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆ. ಈ ದಾಳಿಯ ಪರಿಣಾಮವಾಗಿ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ತಾತ್ಕಾಲಿಕ ಗೊಂದಲ ಉಂಟಾಗಿದ್ದು, ನಗರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತು ಮಾಡಲಾಗಿದೆ.



