खानापूर शहराला जोडणारा रस्ता बंद! नागरिकांचा संताप; एका बाजूने रस्ता सुरू करण्याची मागणी तीव्र.
खानापूर : दसऱ्याच्या आधीपासूनच मच्छी मार्केटजवळील रस्ता खोदून बंद ठेवण्यात आला असून, त्यामुळे नागरिकांना नवरात्री उत्सव, तसेच मांडीगुंजी आणि कक्केरी गावांच्या यात्रांना जाण्यासाठी मोठ्या अडचणींना सामोरे जावे लागले. आता ऐन दिवाळीच्या काळात खानापूर शहरात मोठ्या प्रमाणात गर्दी असते. या रस्त्यांवरील खोदकामामुळे नागरिक, व्यापारी आणि ग्राहकांना प्रचंड गैरसोयीचा सामना करावा लागत आहे.

या त्रासाला वैतागलेल्या नागरिक व व्यापाऱ्यांनी अखेर सार्वजनिक बांधकाम खात्याचे सहाय्यक कार्यकारी अभियंता संजय गस्ती यांची भेट घेऊन लवकरात लवकर उपाययोजना करण्याची मागणी केली. यावेळी भाजपाचे जिल्हा उपाध्यक्ष प्रमोद कोचेरी, संजय कुबल, राजेंद्र रायका, मुरलीधर पाटील, प्रकाश चव्हाण, पंडित ओगले, अॅड. ईश्वर घाडी, शेखर दामले, शामराव पाटील, ज्ञानेश पिसे, गुलाब जैन, शंकर सुळकर, राज गावडे, दिलीप पोळ, अंबालाल कोठारी, नंदगडी, मुल्ला, नारायण काटगाळकर व इतर नागरिक आणि व्यापारी वर्ग उपस्थित होता.
नागरिकांचे म्हणणे आहे की, कॉन्ट्रॅक्टरच्या हेखेखोरीमुळे आणि निष्काळजीपणामुळे सर्व सामान्य जनता अक्षरशः हैराण झाली आहे. सध्या मच्छी मार्केट ते पोलीस वसाहतपर्यंत दोन्ही बाजूंचे रस्ते खोदून ठेवले असून, वाहतुकीसाठी कोणताही पर्यायी मार्ग सोडण्यात आलेला नाही.
गोवा हेमाडगा मार्गे व करंबळ मार्गे येणारी वाहतूक मलप्रभा नदीवरील जुन्या पुलावरून वळवण्यात आली आहे. हा सर्व्हिस रस्ता म्हणून कंत्राटदाराने दुरुस्त ठेवणे अपेक्षित होते, परंतु सध्या या मार्गावरून खड्ड्यातूनच वाहतूक सुरू आहे.
खानापूरमध्ये तहसीलदार कार्यालय, शाळा, कॉलेज, सरकारी हॉस्पिटल आणि विविध दुकाने असल्याने दररोज मोठ्या प्रमाणात नागरिकांची वर्दळ असते. मात्र रस्त्यांची बिकट अवस्था पाहता वाहनचालक, पादचारी आणि व्यापारी वर्ग सर्वजण त्रस्त झाले आहेत. त्यामुळे खोदलेल्या रस्त्याचा तातडीने एका बाजूने वाहतुकीसाठी मार्ग मोकळा करून द्यावा, अशी मागणी नागरिक व प्रवासी वर्गातून जोर धरत आहे.
दिवाळीसारख्या सणासुदीच्या काळात हॉटेल व्यवसाय, बेकरी, किराणा दुकानदार, स्वीट मार्ट, फळ विक्रेते, फुले विक्रेते, कपडे विक्रेते आणि मासे विक्रेते यांच्या व्यवसायावरही या कामाचा थेट परिणाम झाला आहे. बाहेरून येणाऱ्या नागरिकांसाठी दिशादर्शक फलक (सूचना फलक) लावण्यात आले नसल्याने अनेक वाहनचालक गोंधळून जात आहेत, ज्यामुळे अपघातासदृश परिस्थिती निर्माण झाली आहे.
स्थानिक नागरिकांचे म्हणणे आहे की, “कंत्राटदाराने किमान एका बाजूचा रस्ता सुरू करून दिल्यास नागरिक व व्यापाऱ्यांना मोठा दिलासा मिळेल.”
दरम्यान, या गंभीर समस्येकडे खासदार विश्वेश्वर हेगडे-कागेरी आणि आमदार विठ्ठल हालगेकर यांनी तातडीने लक्ष घालून संबंधित कंत्राटदारास योग्य सूचना द्याव्यात आणि किमान एक साईड रोड तातडीने सुरू करून द्यावा, अशी मागणी नागरिकांकडून तीव्र होत आहे.
ಖಾನಾಪುರ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್! ನಾಗರಿಕರ ಆಕ್ರೋಶ; ಕನಿಷ್ಠ ಒಂದು ಬದಿ ರಸ್ತೆ ತೆರೆಯುವಂತೆ ಆಗ್ರಹ.
ಖಾನಾಪುರ : ದಸರಾ ಹಬ್ಬದ ಮುನ್ನವೇ ಮೀನು ಮಾರ್ಕೆಟ್ ಹತ್ತಿರದ ರಸ್ತೆ ಅಗೆದು ಬಂದ್ ಮಾಡಲಾಗಿದ್ದು, ಇದರ ಪರಿಣಾಮವಾಗಿ ನವರಾತ್ರಿ ಉತ್ಸವದ ವೇಳೆ ಹಾಗೂ ಮಂಡಿಗುಂಜಿ ಮತ್ತು ಕಕ್ಕೇರಿ ಗ್ರಾಮದ ಜಾತ್ರೆಗೆ ತೆರಳುವ ನಾಗರಿಕರಿಗೆ ದೊಡ್ಡ ಪ್ರಮಾಣದಲ್ಲಿ ತೊಂದರೆ ಉಂಟಾಯಿತು. ಈಗ ದೀಪಾವಳಿಯ ಸಮಯದಲ್ಲಿ ಖಾನಾಪುರ ನಗರದಲ್ಲಿ ಜನಸಂಚಾರ ಹೆಚ್ಚಾಗಿದ್ದು, ಈ ಅಗೆದ ರಸ್ತೆಗಳ ಕಾರಣದಿಂದ ನಾಗರಿಕರು, ವ್ಯಾಪಾರಿಗಳು ಹಾಗೂ ಗ್ರಾಹಕರು ಭಾರಿ ಅನಾನುಕೂಲ ಅನುಭವಿಸುತ್ತಿದ್ದಾರೆ.
ಈ ಸಮಸ್ಯೆಯಿಂದ ಬೇಸತ್ತ ನಾಗರಿಕರು ಮತ್ತು ವ್ಯಾಪಾರಿಗಳು ಕೊನೆಗೂ ಸಾರ್ವಜನಿಕ ನಿರ್ಮಾಣ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಂಜಯ ಗಸ್ತಿ ಅವರನ್ನು ಭೇಟಿಯಾಗಿ ತ್ವರಿತ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು. ಈ ವೇಳೆ ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಪ್ರಮೊದ್ ಕೋಚೇರಿ, ಸಂಜಯ ಕುಬಲ, ರಾಜೇಂದ್ರ ರೈಕಾ, ಮುರಳಿಧರ ಪಾಟೀಲ, ಪ್ರಕಾಶ ಚವಾಣ್, ಪಂಡಿತ ಓಗಲೆ, ಅಡ್ವ. ಈಶ್ವರ ಘಾಡಿ, ಶೇಖರ ದಾಮಲೆ, ಶಾಮರಾವ್ ಪಾಟೀಲ, ಜ್ಞಾನೇಶ ಪಿಸೆ, ಗುಲಾಬ್ ಜೈನ್, ಶಂಕರ ಸುಳ್ಕರ್, ರಾಜ್ ಗೌವಡೆ, ದಿಲೀಪ್ ಪೊಳ್, ಅಂಬಾಲಾಲ್ ಕೊಠಾರಿ, ನಂದಗಡಿ, ಮುಲ್ಲಾ, ನಾರಾಯಣ ಕಾಟ್ಟಗಾಳಕರ್ ಹಾಗೂ ಅನೇಕ ನಾಗರಿಕರು ಮತ್ತು ವ್ಯಾಪಾರಿಗಳು ಹಾಜರಿದ್ದರು.
ನಾಗರಿಕರ ಪ್ರಕಾರ, ಗುತ್ತಿಗೆದಾರನ ಉದ್ದಡತನ ಮತ್ತು ನಿರ್ಲಕ್ಷ್ಯದಿಂದ ಸಾಮಾನ್ಯ ಜನತೆ ಸಂಪೂರ್ಣವಾಗಿ ನರಳುತ್ತಿದ್ದಾರೆ. ಸದ್ಯ ಮೀನು ಮಾರ್ಕೆಟ್ನಿಂದ ಪೋಲೀಸ್ ವಸತಿಗೃಹದವರೆಗೆ ಎರಡೂ ಬದಿಯ ರಸ್ತೆಗಳು ಅಗೆಯಲ್ಪಟ್ಟಿದ್ದು, ಪರ್ಯಾಯ ಮಾರ್ಗವನ್ನೂ ನೀಡಿಲ್ಲ. ಗೋವಾ–ಹೇಮಾಡಗಾ ಮತ್ತು ಕರಂಬಳ ಮಾರ್ಗದಿಂದ ಬರುವ ವಾಹನಗಳನ್ನು ಮಲಪ್ರಭಾ ನದಿಯ ಹಳೆಯ ಸೇತುವೆಯ ಮೂಲಕ ಸಾಗುತ್ತಿವೆ.
ಈ ಮಾರ್ಗವನ್ನು ಸರ್ವಿಸ್ ರೋಡ್ ಆಗಿ ಸರಿಪಡಿಸಬೇಕಿತ್ತು, ಆದರೆ ಈಗ ವಾಹನಗಳು ಆಳವಾದ ಗುಂಡಿಗಳ ನಡುವೆ ಸಂಚರಿಸುತ್ತಿವೆ. ಖಾನಾಪುರದಲ್ಲಿ ತಾಲೂಕು ಕಚೇರಿ, ಶಾಲೆಗಳು, ಕಾಲೇಜುಗಳು, ಸರ್ಕಾರಿ ಆಸ್ಪತ್ರೆ ಮತ್ತು ಹಲವು ಅಂಗಡಿಗಳು ಇರುವುದರಿಂದ ಪ್ರತಿದಿನ ಸಾವಿರಾರು ಜನ ಸಂಚಾರ ಮಾಡುತ್ತಾರೆ. ಆದರೆ ರಸ್ತೆಗಳ ದಯನೀಯ ಸ್ಥಿತಿಯಿಂದ ವಾಹನ ಚಾಲಕರು, ಪಾದಚಾರಿಗಳು ಹಾಗೂ ವ್ಯಾಪಾರಿಗಳೆಲ್ಲರೂ ತೊಂದರೆ ಅನುಭವಿಸುತ್ತಿದ್ದಾರೆ.
ಹೀಗಾಗಿ ನಾಗರಿಕರು ಕನಿಷ್ಠ ಒಂದು ಬದಿ ರಸ್ತೆ ತಕ್ಷಣ ಸಂಚಾರಕ್ಕೆ ತೆರೆಯುವಂತೆ ಆಗ್ರಹ ವ್ಯಕ್ತಪಡಿಸಿದ್ದಾರೆ. ದೀಪಾವಳಿಯ ಹಬ್ಬದ ಕಾಲದಲ್ಲಿ ಹೋಟೆಲ್ ವ್ಯಾಪಾರ, ಬೇಕರಿ, ಕಿರಾಣಿ ಅಂಗಡಿ, ಸಿಹಿತಿಂಡಿ ಮಳಿಗೆ, ಹಣ್ಣು, ಹೂ, ಬಟ್ಟೆ ಹಾಗೂ ಮೀನು ವ್ಯಾಪಾರ ಸೇರಿದಂತೆ ಹಲವು ವ್ಯವಹಾರಗಳ ಮೇಲೆ ಈ ಕಾಮಗಾರಿಯ ನೇರ ಪರಿಣಾಮ ಬೀಳುತ್ತಿದೆ.
ಹೊರ ರಾಜ್ಯದಿಂದ ಬರುವ ವಾಹನ ಚಾಲಕರಿಗೆ ದಿಕ್ಕು ಸೂಚನಾ ಫಲಕಗಳು ಅಳವಡಿಸದಿರುವುದರಿಂದ ಅನೇಕರಿಗೆ ಗೊಂದಲ ಉಂಟಾಗಿ ಅಪಘಾತದಂತಹ ಪರಿಸ್ಥಿತಿ ಉಂಟಾಗಿದೆ.
ಸ್ಥಳೀಯರ ಪ್ರಕಾರ, “ಗುತ್ತಿಗೆದಾರನು ಕನಿಷ್ಠ ಒಂದು ಬದಿ ರಸ್ತೆ ತೆರೆದರೆ ನಾಗರಿಕರು ಹಾಗೂ ವ್ಯಾಪಾರಿಗಳಿಗೆ ಸಂಚಾರಕ್ಕೆಅಲ್ಪ ಪ್ರಮಾಣದ ನೆರವು ಸಿಕಂತಾಗುತ್ತದೆ. ” ಇದೇ ವೇಳೆ ಈ ಗಂಭೀರ ಸಮಸ್ಯೆ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಶಾಸಕ ವಿಠ್ಠಲ ಹಲಗೇಕರ್ ತಕ್ಷಣ ಗಮನ ಹರಿಸಿ, ಸಂಬಂಧಿತ ಗುತ್ತಿಗೆದಾರನಿಗೆ ಸೂಕ್ತ ನಿರ್ದೇಶನ ನೀಡಿ ದೀಪಾವಳಿ ಹಬ್ಬದ ಮುನ್ನ ಕನಿಷ್ಠ ಒಂದು ಬದಿ ರಸ್ತೆ ತ್ವರಿತವಾಗಿ ಆರಂಭಿಸಬೇಕು ಎಂಬ ಬೇಡಿಕೆ ನಾಗರಿಕರಿಂದ ತೀವ್ರವಾಗಿ ವ್ಯಕ್ತವಾಗುತ್ತಿದೆ.

