खानापूर रेल्वे स्थानकावरील कार्यक्रमाला मोठ्या संख्येने उपस्थित राहा ; रेल्वे स्थानक सुधारणा कमिटीचे आवाहन.
खानापूर : केंद्रीय रेल्वे राज्यमंत्री व्ही. सोमान्ना व खासदार विश्वेश्वर हेगडे-कागेरी हे आज सोमवार, दिनांक 15 सप्टेंबर 2025 रोजी सायंकाळी 4 वाजता खानापूर रेल्वे स्थानकावर विविध विकासात्मक योजनांचे भूमिपूजन करणार आहेत. यावेळी हुबळी-दादर रेल्वे गाडीचा खानापूर स्थानकावर नियमित थांबा सुरू करण्यास हिरवा झेंडा दाखवून उद्घाटनही होणार आहे.
या महत्त्वपूर्ण कार्यक्रमाला समस्त खानापूर तालुक्यातील नागरीक व प्रवासी वर्गाने मोठ्या संख्येने उपस्थित राहण्याचे आवाहन खानापूर रेल्वे स्थानक सुधारणा कमिटीचे सदस्य राजेंद्र रायका, प्रकाश निलजकर, गुंडू तोपिनकट्टी, सुनील नायक, सुनील मासेकर यांनी केले आहे.
केंद्रीय राज्यमंत्री सोमान्ना यांच्या हस्ते खानापूर-असोगा या रेल्वे भुयारी मार्गाचे भूमिपूजन तसेच तब्बल तीन कोटी रुपयांच्या खर्चातून उभारण्यात येणाऱ्या प्रवासी शेडचे भूमिपूजन होणार आहे. याशिवाय समस्त खानापूर तालुक्यातील प्रवासी, सैनिक व सामान्य नागरिकांच्या सोयीसाठी हुबळी-दादर रेल्वे गाडीला खानापूर स्थानकावर दररोज थांबा देण्याची योजना अधिकृतपणे सुरू केली जाणार आहे.
या ऐतिहासिक उपक्रमाचे उद्घाटन केंद्रीय रेल्वे राज्यमंत्री व्ही. सोमान्ना व खासदार विश्वेश्वर हेगडे-कागेरी यांच्या हस्ते होणार असून, ही योजना मंजूर करून घेण्यासाठी खासदार कागेरी यांनी विशेष प्रयत्न केले होते. त्यामुळे खानापूर तालुक्यातील नागरिक त्यांच्या या प्रयत्नाबद्दल कृतज्ञता व्यक्त करीत आहेत.
ಖಾನಾಪುರ ರೈಲು ನಿಲ್ದಾಣ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿರಿ ; ರೈಲು ನಿಲ್ದಾಣ ಸುಧಾರಣಾ ಸಮಿತಿಯ ಮನವಿ
ಖಾನಾಪುರ : ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಇವರು ಇಂದು ಸೋಮವಾರ, ದಿನಾಂಕ 15 ಸೆಪ್ಟೆಂಬರ್ 2025ರಂದು ಸಂಜೆ 4 ಗಂಟೆಗೆ ಖಾನಾಪುರ ರೈಲು ನಿಲ್ದಾಣದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಹುಬ್ಬಳ್ಳಿ-ದಾದರ್ ರೈಲುಗಾಡಿಯ ಖಾನಾಪುರ ನಿಲ್ದಾಣದಲ್ಲಿ ನಿಯಮಿತ ನಿಲುಗಡೆಗೆ ಹಸಿರು ನಿಶಾನೆ ತೋರಿಸಿ ಉದ್ಘಾಟನೆಯೂ ನಡೆಯಲಿದೆ.
ಈ ಮಹತ್ವದ ಕಾರ್ಯಕ್ರಮಕ್ಕೆ ಸಮಸ್ತ ಖಾನಾಪುರ ತಾಲ್ಲೂಕಿನ ನಾಗರಿಕರು ಮತ್ತು ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುವಂತೆ ಖಾನಾಪುರ ರೈಲು ನಿಲ್ದಾಣ ಸುಧಾರಣಾ ಸಮಿತಿ ಸದಸ್ಯರಾದ ರಾಜೇಂದ್ರ ರೈಕಾ, ಪ್ರಕಾಶ ನಿಲಜ್ಕರ್, ಗುಂಡು ಟೋಪಿನಕಟ್ಟಿ, ಸುನಿಲ್ ನಾಯಕ್ ಹಾಗೂ ಸುನಿಲ್ ಮಾಸೇಕರ್ ಮನವಿ ಮಾಡಿದ್ದಾರೆ.
ಕೇಂದ್ರ ರಾಜ್ಯ ಸಚಿವ ಸೋಮಣ್ಣ ಅವರಿಂದ ಖಾನಾಪುರ-ಅಸೋಗಾ ರೈಲು ಅಂಡರ್ ಪಾಸ್ ಯೋಜನೆಯ ಭೂಮಿ ಪೂಜೆ ಹಾಗು ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಿರುವ ಪ್ರಯಾಣಿಕರ ಶೆಡ್ ಉದ್ಘಾಟನೆ ನಡೆಯಲಿದೆ. ಇದಲ್ಲದೆ, ಸಮಸ್ತ ಖಾನಾಪುರ ತಾಲ್ಲೂಕಿನ ಪ್ರಯಾಣಿಕರು, ಸೈನಿಕರು ಹಾಗೂ ಸಾಮಾನ್ಯ ನಾಗರಿಕರ ಸೌಲಭ್ಯಕ್ಕಾಗಿ ಹುಬ್ಬಳ್ಳಿ-ದಾದರ್ ರೈಲುಗಾಡಿಗೆ ಖಾನಾಪುರ ನಿಲ್ದಾಣದಲ್ಲಿ ಪ್ರತಿದಿನ ನಿಲುಗಡೆ ನೀಡುವ ಯೋಜನೆ ಅಧಿಕೃತವಾಗಿ ಪ್ರಾರಂಭಗೊಳ್ಳಲಿದೆ.
ಈ ಐತಿಹಾಸಿಕ ಕಾರ್ಯಕ್ರಮವನ್ನು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಉದ್ಘಾಟಿಸಲಾಗಲಿದ್ದು, ಈ ಯೋಜನೆಯನ್ನು ಅನುಮೋದನೆ ಪಡೆಯಲು ಸಂಸದ ಕಾಗೇರಿ ವಿಶೇಷ ಪ್ರಯತ್ನ ಹೂಡಿರುವುದರಿಂದ ಖಾನಾಪುರ ತಾಲ್ಲೂಕಿನ ನಾಗರಿಕರು ಅವರ ಪ್ರಯತ್ನಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

