
रूमेवाडी क्रॉस कचऱ्याच्या व अनेक समस्यांच्या विळख्यात करंबळ ग्रामपंचायतीचे दुर्लक्ष ; नागरिकांचा तीव्र संताप.
खानापूर : खानापूर शहराला लागून असलेल्या आणि शहराचा अविभाज्य भाग मानल्या जाणाऱ्या करंबळ ग्रामपंचायतीच्या हद्दीतील रूमेवाडी क्रॉस परिसर अनेक समस्यांनी ग्रस्त असून ग्रामपंचायतीकडून सातत्याने दुर्लक्ष होत असल्याचा आरोप नागरिकांनी केला आहे.
मलप्रभा नदी पुलालगत रस्त्याच्या कडेला हॉटेल व्यवसायिक व काही दुकानदारांनी टाकलेला प्लॅस्टिक कचरा, ग्लास, व अन्य वस्तूंचा ढीग साचला असून परिसरात उकिरडा व दुर्गंधी पसरली आहे. येथील काही हॉटेल व्यवसायिक किंवा दुकानदारांकडून हा कचरा टाकला जात असल्याचा नागरिकांचा संशय आहे. त्यामुळे हा कचरा तात्काळ हटवून संबंधितांवर कायदेशीर कारवाई करण्याची मागणी परिसरातील रहिवासी व नदीला येणारे भाविक यांनी केली आहे.
याशिवाय कार्लेकर प्लॉट भागातील रस्त्यांची दुरवस्था झाली असून, शारदा अशोक पाटील यांच्या घरासमोरून जाणारा रस्ता चिखलाने भरून गेला आहे. तेरा वर्षांपूर्वी या रस्त्याचे खडीकरण झाले होते, त्यानंतर ग्रामपंचायतीने दखल घेतली नाही, अशी तक्रार करण्यात आली आहे. तसेच रस्त्यावरील पथदीप सुद्धा अनेक वर्षापासून बंद असल्याची तक्रार नंदगड मार्केटिंग सोसायटीचे निवृत्त चालक अशोक हनमंत पाटील यांनी केली आहे. तसेच या परिसरातील मोकळ्या जागेत झुडपे व झाडांचा जंगलसदृश विस्तार झाला असून, साप व विषारी कीटकांचा वावर वाढल्याने नागरिकांच्या जीविताला धोका निर्माण झाला आहे. या भागाची तात्काळ सफाई करण्यात यावी, अशी मागणी येथील रहिवाशाकडून होत आहे.
सार्वजनिक गणेश मंडपाजवळ रस्त्यात मोठा खड्डा पडून त्यात पाणी साचत असल्याने प्रवाशांना त्रास सहन करावा लागत आहे. त्यामुळे हा खड्डा तात्काळ बुजविण्याची मागणी व्यापारी व नागरिकांनी केली आहे.
तसेच रूमेवाडी क्रॉस परिसरातील काही चिकन दुकानदारांकडून कोंबडींचा टाकाऊ कचरा हेमाडगा रस्त्यालगत टाकण्यात येत असून, त्यामुळे दुर्गंधी पसरून भटक्या कुत्र्यांचा वावर वाढला आहे. या कुत्र्यांमुळे अपघाताचे प्रमाण वाढले असून, सकाळी फिरायला जाणाऱ्या नागरिकांना व प्रवासी वर्गाला याचा त्रास सहन करावा लागत आहे. याबाबत संबंधित दुकानदारांची चौकशी करून कडक कारवाई करण्यात यावी, अशी मागणी नागरिकांकडून होत आहे.
एकंदरित, रूमेवाडी क्रॉस व परिसरातील कचरा, रस्त्यांची दुरवस्था, पथदीपांचा अभाव व अस्वच्छतेच्या समस्यांकडे करंबळ ग्रामपंचायतीने तात्काळ लक्ष देऊन उपाययोजना कराव्यात, अशी जोरदार मागणी नागरिकांतून होत आहे.
ರೂಮೇವಾಡಿ ಕ್ರಾಸ ಬಳಿ ಕಸದ ರಾಶಿ ಮತ್ತು ಹಲವು ಸಮಸ್ಯೆಗಳಿಂದ ಬೆಸೆತ ನಾಗರಿಕರು. ಕರಂಬಳ ಗ್ರಾಮಪಂಚಾಯತಿಯ ನಿರ್ಲಕ್ಷ್ಯ ; ನಾಗರಿಕರ ತೀವ್ರ ಆಕ್ರೋಶ
ಖಾನಾಪುರ : ಖಾನಾಪುರ ನಗರದ ಹತ್ತಿರ, ಹಾಗೂ ನಗರದ ಅವಿಭಾಜ್ಯ ಭಾಗವೆಂದು ಪರಿಗಣಿಸಲ್ಪಡುವ ಕರಂಬಳ ಗ್ರಾಮಪಂಚಾಯತ್ ವ್ಯಾಪ್ತಿಯ ರೂಮೇವಾಡಿ ಕ್ರಾಸ ಬಳಿ ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದು, ಗ್ರಾಮ ಪಂಚಾಯತಿಯಿಂದ ಇತ್ತ ನಿರಂತರ ನಿರ್ಲಕ್ಷ್ಯವಾಗುತ್ತಿರುವುದಾಗಿ ನಾಗರಿಕರು ಆರೋಪಿಸಿದ್ದಾರೆ.
ಮಲಪ್ರಭಾ ನದಿ ಸೇತುವೆಯ ಬಳಿಯ ರಸ್ತೆ ಪಕ್ಕದ ಹೋಟೆಲ್ ಮಾಲೀಕರು ಹಾಗೂ ಕೆಲವು ವ್ಯಾಪಾರಸ್ಥರು ಪ್ಲಾಸ್ಟಿಕ್ ಕಸ, ಗ್ಲಾಸ್ ಹಾಗೂ ಇತರೆ ತ್ಯಾಜ್ಯಗಳ ವಸ್ತುಗಳನ್ನು ರಸ್ತೆ ಮೇಲೆ ಹಾಕಿರುವ ಕಾರಣ ದುರ್ಗಂಧ ಹರಡುತ್ತಿದೆ. ಈ ಕಸ ಹೋಟೆಲ್ ವ್ಯಾವಹಾರಿಗಳು ಅಥವಾ ಇತರೇ ವ್ಯಾಪಾರಸ್ಥರೆ ಹಾಕಿರುವ ಶಂಕೆ ನಾಗರಿಕರಲ್ಲಿ ವ್ಯಕ್ತವಾಗಿದೆ. ಆದ್ದರಿಂದ ಈ ಕಸವನ್ನು ತಕ್ಷಣ ತೆರವು ಮಾಡಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಹಾಗೂ ನದಿಗೆ ಬರುವ ಭಕ್ತರು ಆಗ್ರಹಿಸಿದ್ದಾರೆ.
ಇದೇ ರೀತಿ ಕಾರಲೇಕರ್ ಪ್ಲಾಟ್ ಭಾಗದ ರಸ್ತೆಗಳು ದುರಸ್ತಿಗೆ ಬಾರದಂತಾಗಿದ್ದು, ಶಾರದಾ ಅಶೋಕ್ ಪಾಟೀಲ ಅವರ ಮನೆಯಿಂದ ಹೋಗುವ ರಸ್ತೆ ಮಣ್ಣುಗದ್ದೆಯಾಗಿ ಮಾರ್ಪಟ್ಟಿದೆ. ಹದಿಮೂರು ವರ್ಷಗಳ ಹಿಂದೆ ಈ ರಸ್ತೆಗೆ ಕೊನೆಯ ಬಾರಿ ಡಾಂಬರಿಕರಣ (ಖಡಿಕರಣ) ಮಾಡಲಾಗಿದ್ದು, ಆ ಬಳಿಕ ಗ್ರಾಮಪಂಚಾಯತಿ ಗಮನ ಹರಿಸಿಲ್ಲವೆಂಬ ದೂರು ನೀಡಲಾಗಿದೆ. ಅಲ್ಲದೆ, ರಸ್ತೆಯ ಪಥದೀಪಗಳು ಹಲವಾರು ವರ್ಷಗಳಿಂದ ಬಂದ ಆಗಿರುವ ಬಗ್ಗೆ ನಂದಗಡ ಮಾರ್ಕೆಟಿಂಗ್ ಸೊಸೈಟಿಯ ನಿವೃತ್ತ ಚಾಲಕ ಅಶೋಕ್ ಹನಮಂತ ಪಾಟೀಲ ದೂರು ನೀಡಿದ್ದಾರೆ.
ಖಾಲಿ ಜಾಗಗಳಲ್ಲಿ ಪೊದೆಗಳು ಹಾಗೂ ಮರಗಳು ಕಾಡಿನಂತಾಗಿದ್ದು, ಹಾವು-ವಿಷಕಾರಿ ಕೀಟಗಳ ವಾಸಸ್ಥಾನವಾಗಿ, ಜನರ ಜೀವಕ್ಕೆ ಅಪಾಯ ತಂದೊಡ್ಡಿದೆ. ಈ ಭಾಗವನ್ನು ತಕ್ಷಣ ಸುಚಿಗೊಳಿಸಬೇಕೆಂಬ ಬೇಡಿಕೆ ಸ್ಥಳೀಯರಿಂದ ಕೇಳಿಬಂದಿದೆ.
ಸಾರ್ವಜನಿಕ ಗಣೇಶ ಮಂಟಪದ ಬಳಿಯ ರಸ್ತೆಯಲ್ಲಿ ದೊಡ್ಡ ಗುಂಡಿ ಬಿದ್ದು, ಅದರಲ್ಲಿ ನೀರು ನಿಂತಿರುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ಗುಂಡಿಯನ್ನು ತಕ್ಷಣ ಮುಚ್ಚಬೇಕೆಂದು ವ್ಯಾಪಾರಿಗಳು ಹಾಗೂ ನಾಗರಿಕರು ಆಗ್ರಹಿಸಿದ್ದಾರೆ.
ಇದೇ ರೀತಿ ರೂಮೇವಾಡಿ ಕ್ರಾಸ್ ಭಾಗದ ಕೆಲವು ಕೋಳಿ ವ್ಯಾಪಾರಸ್ಥರು ಕೋಳಿಗಳ ತ್ಯಾಜ್ಯವನ್ನು ಹೇಮಾಡಗಾ ರಸ್ತೆಯ ಅಂಚಿನಲ್ಲಿ ಎಸೆದು ಬಿಡುತ್ತಿರುವುದರಿಂದ ದುರ್ಗಂಧ ಹರಡುತ್ತಿದ್ದು, ಬೀದಿ ನಾಯಿಗಳ ತಿರುಗಾಟ ಹೆಚ್ಚಾಗಿದೆ. ಇದರಿಂದ ಅಪಘಾತಗಳು ನಡೆಯುತ್ತಿದ್ದು, ಬೆಳಿಗ್ಗೆ ವಾಕಿಂಗ್ಗೆ ಹೋಗುವವರು ಹಾಗೂ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಕಾರಣದಿಂದ ಸಂಬಂಧಪಟ್ಟ ಅಂಗಡಿಕಾರರನ್ನು ವಿಚಾರಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ನಾಗರಿಕರಿಂದ ವ್ಯಕ್ತವಾಗಿದೆ.
ಒಟ್ಟಿನಲ್ಲಿ, ರೂಮೇವಾಡಿ ಕ್ರಾಸ್ ಹಾಗೂ ಸುತ್ತಮುತ್ತಲಿನ ಕಸದ ಸಮಸ್ಯೆ, ರಸ್ತೆ ದುರಸ್ಥಿ, ಪಥದೀಪಗಳ ಅಭಾವ ಹಾಗೂ ಅಸ್ವಚ್ಛತೆಯ ವಿಷಯದಲ್ಲಿ ಕರಂಬಳ ಗ್ರಾಮಪಂಚಾಯತಿ ತಕ್ಷಣ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂಬ ತೀವ್ರ ಬೇಡಿಕೆ ನಾಗರಿಕರಲ್ಲಿ ಎದ್ದಿದೆ.
