साळींदरच्या (porcupine) हल्ल्यात शेकडो नारळाची रोपे नष्ट; शेतकऱ्याला नुकसान भरपाई देण्याची मागणी.
काक्केरी: खानापूर तालुक्यातील लिंगनमठ ग्रामपंचायत अंतर्गत येणाऱ्या गुंडोळी गावातील शेतकरी पावलू कामिल फर्नांडिस यांना जंगली साळींदरच्या हल्ल्यामुळे मोठे नुकसान सोसावे लागले आहे. गावातील सर्व्हे क्रमांक 56 मधील दोन एकर जमिनीवर लावलेली नारळाची शेकडो रोपे साळींदरानी उपटून फस्त केली आहेत.
शेतकरी पावलू कामिल फर्नांडिस यांनी खते, औषधे आणि सिंचन यांसारख्या आवश्यक गोष्टींवर मोठा खर्च करून व योग्य निगा राखून गेल्या चार वर्षांपासून ही नारळाची बाग जोपासली होती. या वर्षी चांगल्या उत्पादनाची अपेक्षा असतानाच, जंगली प्राण्यांच्या या हल्ल्यामुळे त्यांना मोठा आर्थिक फटका बसला आहे.
या संदर्भात, ‘अखिल कर्नाटक रयत संघा’चे राज्य उपाध्यक्ष किशोर मीठारी यांनी मागणी केली आहे की, नुकसान झालेल्या शेतकऱ्यांना सरकारने त्वरित योग्य नुकसानभरपाई द्यावी. त्यांनी सांगितले की, मुख्यमंत्री डी. के. शिवकुमार, प्रादेशिक आयुक्त, उपायुक्त, खानापूरचे तहसीलदार आणि जिल्हा वन अधिकारी यांना याविषयी टपालाद्वारे विनंती अर्ज सादर करण्यात आला आहे.
गोधोळी क्षेत्राचे उप-वन अधिकारी कुमार हिरेमठ आणि गस्त घालणारे वनरक्षक लक्ष्मण मांगुली व राजू हुब्बली यांनी घटनास्थळी भेट देऊन पाहणी केली. त्यांनी शेतकऱ्यांना आश्वासन दिले की, नुकसान झालेल्या नारळाच्या रोपांचा पंचनामा करून आणि वरिष्ठ अधिकाऱ्यांना अहवाल सादर करून सरकारकडून नुकसानभरपाई मिळवून देण्यासाठी कार्यवाही केली जाईल.
ಮುಳ್ಳುಹಂದಿಗಳ ಹಾವಳಿಗೆ ನೂರಾರು ತೆಂಗಿನ ಸಸಿಗಳು ನಾಶ; ರೈತನಿಗೆ ಪರಿಹಾರ ನೀಡುವಂತೆ ಆಗ್ರಹ.
ಕಕ್ಕೇರಿ : ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡೊಳ್ಳಿ ಗ್ರಾಮದ ರೈತ ಪಾವಲು ಕಾಮಿಲ್ ಫರ್ನಾಂಡಿಸ್ ಅವರಿಗೆ ಕಾಡುಪ್ರಾಣಿಗಳಾದ ಮುಳ್ಳುಹಂದಿಗಳ ಹಾವಳಿಯಿಂದ ಭಾರೀ ನಷ್ಟ ಉಂಟಾಗಿದೆ. ಗ್ರಾಮದ ಬೀಡಿ ಹೋಬಳಿ ವ್ಯಾಪ್ತಿಯ ಸರ್ವೇ ನಂ. 56ರಲ್ಲಿ ಇರುವ ಎರಡು ಎಕರೆ ಜಮೀನಿನಲ್ಲಿ ನೆಟ್ಟಿದ್ದ ನೂರಾರು ತೆಂಗಿನ ಸಸಿಗಳನ್ನು ಮುಳ್ಳುಹಂದಿಗಳು ಬೇರು ಸಮೇತ ಕಿತ್ತು ತಿಂದು ಹಾಳು ಮಾಡಿವೆ.
ರೈತ ಪಾವಲು ಕಾಮಿಲ್ ಫರ್ನಾಂಡಿಸ್ ಅವರು ನಾಲ್ಕು ವರ್ಷಗಳಿಂದ ಸಾಕಷ್ಟು ವೆಚ್ಚ ಮಾಡಿ ಗೊಬ್ಬರ, ಔಷಧಿ, ನೀರಾವರಿ ಸೇರಿದಂತೆ ಅಗತ್ಯ ನಿರ್ವಹಣೆ ಮಾಡಿ ತೆಂಗಿನ ತೋಟವನ್ನು ಬೆಳೆಸಿದ್ದರು. ಈ ವರ್ಷದಿಂದ ಉತ್ತಮ ಫಸಲು ದೊರೆಯುವ ನಿರೀಕ್ಷೆಯಲ್ಲಿದ್ದ ರೈತನಿಗೆ ಕಾಡುಪ್ರಾಣಿಗಳ ದಾಳಿಯಿಂದ ಅಪಾರ ನಷ್ಟ ಉಂಟಾಗಿದೆ.
ಈ ಕುರಿತು ಅಖಿಲ ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕಿಶೋರ ಮಿಠಾರಿ ಅವರು, ನಷ್ಟಕ್ಕೊಳಗಾದ ರೈತನಿಗೆ ಸರ್ಕಾರ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ, ಖಾನಾಪುರ ತಹಶೀಲ್ದಾರ್ ಹಾಗೂ ಜಿಲ್ಲಾ ಅರಣ್ಯ ಅಧಿಕಾರಿಗಳಿಗೆ ಅಂಚೆ ಮೂಲಕ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಗೋಧೋಳಿ ವಲಯದ ಉಪ ಅರಣ್ಯ ಅಧಿಕಾರಿ ಕುಮಾರ್ ಹಿರೇಮಠ, ಗಸ್ತು ಅರಣ್ಯ ಪಾಲಕರಾದ ಲಕ್ಷ್ಮಣ್ ಮನಗೂಳಿ ಹಾಗೂ ರಾಜು ಹುಬ್ಬಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಗೊಳಗಾದ ತೆಂಗಿನ ಸಸಿಗಳ ಪಂಚನಾಮೆ ಮಾಡಿ, ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿ ಸರ್ಕಾರದಿಂದ ಪರಿಹಾರ ಧನ ಮಂಜೂರು ಮಾಡಲು ಕ್ರಮ ಕೈಗೊಳ್ಳುವುದಾಗಿ ರೈತರಿಗೆ ಭರವಸೆ ನೀಡಿದರು.

