जांबोटी माध्यमिक विद्यालयात 10 माजी विद्यार्थी अग्निवीरांचा सन्मान.
जांबोटी (ता. खानापूर) : जांबोटी येथील विश्व भारत सेवा समिती संचलित माध्यमिक विद्यालयात भारतीय सेनादलात अग्निवीर म्हणून निवड झालेल्या माजी विद्यार्थ्यांचा सत्कार समारंभ उत्साहात पार पडला. या विद्यालयातील दहा माजी विद्यार्थ्यांची अग्निवीर म्हणून निवड झाल्याने परिसरात गौरवाची भावना निर्माण झाली आहे. या सत्कार समारंभाच्या अध्यक्षस्थानी विश्व भारत सेवा समितीचे अध्यक्ष श्री. विजयराव परशुरामभाऊ नंदीहळळी हे होते.
कार्यक्रमाची सुरुवात विद्यार्थिनीच्या ईशस्तवनाने झाली. त्यानंतर उद्योजक श्री. सुनीत जोशी व सौ. साक्षी सुनीत जोशी (पुणे) यांच्या हस्ते दीपप्रज्वलन करण्यात आले.
नेरसा शाळेचे मुख्याध्यापक श्री. विनोद देसाई व सौ. अनुराधा देसाई यांच्या हस्ते प्रतिमांचे पूजन झाले.
विद्यालयाचे मुख्याध्यापक श्री. महेश सडेकर यांनी कार्यक्रमाचे प्रास्ताविक व स्वागत केले. यावेळी भारतीय सेनादलात अग्निवीर म्हणून निवड झालेल्या ओंकार सुनील चिगुळकर, पवन शांताराम गुरव, सुरज अनिल जांभळेकर, दत्तप्रसाद अर्जुन देसाई, मोनेश्री भरणकर, ओंकार चांगाप्पा देसाई, हनुमंत हनबर या माजी विद्यार्थ्यांचा शाल व श्रीफळ देऊन सत्कार करण्यात आला तसेच त्यांच्या पुढील वाटचालीस शुभेच्छा देण्यात आल्या.
याप्रसंगी श्री. सुनीत जोशी, सौ. अनुराधा देसाई व अध्यक्ष श्री. विजयराव नंदीहळळी यांनी समायोचित भाषणे करत अग्निवीरांच्या कर्तृत्वाचे कौतुक केले व देशसेवेसाठी शुभेच्छा व्यक्त केल्या.
कार्यक्रमास स्वरा जोशी, महेश साबळे, सुनील ठाणब, श्रीमती संपदा तीरवीर, अर्जुन गावडे यांच्यासह शिक्षकवर्ग व नागरिक मोठ्या संख्येने उपस्थित होते.
कार्यक्रमाचे सूत्रसंचालन सहशिक्षक श्री. तुकाराम सडेकर यांनी केले तर सौ. सुजाता चलवेटकर यांनी आभार प्रदर्शन केले.
हा सत्कार समारंभ विद्यार्थ्यांसाठी प्रेरणादायी ठरला असून विद्यालयाच्या शैक्षणिक व संस्कारक्षम परंपरेचा अभिमान वाढवणारा ठरला.
ಜಾಂಬೋಟಿ ಪ್ರೌಢಶಾಲೆಯಲ್ಲಿ 10 ಮಾಜಿ ವಿದ್ಯಾರ್ಥಿಗಳು ಸೈನ್ಯ ಬರ್ತಿಯಲ್ಲಿ ಅಗ್ನಿವೀರರಾಗಿ ಆಯ್ಕೆ ಆದವರಿಗೆ ಸನ್ಮಾನ.
ಜಾಂಬೋಟಿ (ತಾ. ಖಾನಾಪುರ) : ಜಾಂಬೋಟಿಯಲ್ಲಿರುವ ವಿಶ್ವ ಭಾರತ ಸೇವಾ ಸಮಿತಿ ಸಂಚಾಲಿತ ಪ್ರೌಢಶಾಲೆಯಲ್ಲಿ ಭಾರತೀಯ ಸೇನಾದಲ್ಲಿ ಅಗ್ನಿವೀರರಾಗಿ ಆಯ್ಕೆಯಾದ ಮಾಜಿ ವಿದ್ಯಾರ್ಥಿಗಳ ಸನ್ಮಾನ ಸಮಾರಂಭವನ್ನು ಅತ್ಯಂತ ಉತ್ಸಾಹದಿಂದ ಆಯೋಜಿಸಲಾಯಿತು. ಈ ಶಾಲೆಯ ಹತ್ತು ಮಂದಿ ಮಾಜಿ ವಿದ್ಯಾರ್ಥಿಗಳು ಸೇನೆಯಲ್ಲಿ ಅಗ್ನಿವೀರರಾಗಿ ಆಯ್ಕೆಯಾಗಿರುವುದು ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಗೌರವ ಮತ್ತು ಹೆಮ್ಮೆಯ ಭಾವನೆ ಮೂಡಿಸಿದೆ. ಈ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವ ಭಾರತ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ವಿಜಯರಾವ್ ಪರಶುರಾಮಭಾವು ನಂದಿಹಳ್ಳಿ ಅವರು ವಹಿಸಿದ್ದರು.
ಕಾರ್ಯಕ್ರಮದ ಆರಂಭವನ್ನು ವಿದ್ಯಾರ್ಥಿನಿಯವರ ಈಶಸ್ತವನೆಯಿಂದ ಪ್ರಾರಂಭ ಮಾಡಲಾಯಿತು. ನಂತರ ಉದ್ಯಮಿ ಶ್ರೀ ಸುನೀತ್ ಜೋಷಿ ಹಾಗೂ. ಸೌ. ಸಾಕ್ಷಿ ಸುನೀತ್ ಜೋಷಿ (ಪುಣೆ) ಇವರಿಂದ ದೀಪ ಪ್ರಜ್ವಲನೆ ನಡೆಯಿತು. ನೇರಸಾ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ವಿನೋದ್ ದೇಸಾಯಿ ಮತ್ತು ಸೌ. ಅನುರಾಧಾ ದೇಸಾಯಿ ಇವರಿಂದ ಪ್ರತಿಮೆಗಳ ಪೂಜೆ ನೆರವೇರಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಮಹೇಶ್ ಸಡೆಕರ್ ಅವರು ಕಾರ್ಯಕ್ರಮದ ಪ್ರಸ್ತಾವನೆ ಹಾಗೂ ಸ್ವಾಗತ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಅಗ್ನಿವೀರರಾಗಿ ಆಯ್ಕೆಯಾದ ಓಂಕಾರ್ ಸುನಿಲ್ ಚಿಗುಳ್ಕರ್, ಪವನ ಶಾಂತಾರಾಮ್ ಗುರವ, ಸೂರಜ್ ಅನಿಲ್ ಜಾಂಭಳೆಕರ, ದತ್ತಪ್ರಸಾದ್ ಅರ್ಜುನ ದೇಸಾಯಿ, ಮೋನೇಶ್ರೀ ಭರಣಕರ, ಓಂಕಾರ್ ಚಾಂಗಪ್ಪ ದೇಸಾಯಿ, ಹನುಮಂತ ಹನಬರ್ ಸೇರಿದಂತೆ ಮಾಜಿ ವಿದ್ಯಾರ್ಥಿಗಳನ್ನು ಶಾಲು ಮತ್ತು ಶ್ರೀಫಲ ನೀಡಿ ಸನ್ಮಾನಿಸಿ, ಅವರ ಮುಂದಿನ ಜೀವನಯಾತ್ರೆಗೆ ಶುಭಾಶಯಗಳನ್ನು ಕೋರಲಾಯಿತು.
ಈ ಸಮಾರಂಭದಲ್ಲಿ ಶ್ರೀ ಸುನೀತ್ ಜೋಷಿ, ಸೌ. ಅನುರಾಧಾ ದೇಸಾಯಿ ಹಾಗೂ ಅಧ್ಯಕ್ಷ ಶ್ರೀ ವಿಜಯರಾವ್ ನಂದಿಹಳ್ಳಿ ಅವರು ಸಮಯೋಚಿತ ಭಾಷಣಗಳನ್ನು ಮಾಡಿ ಅಗ್ನಿವೀರರ ಶೌರ್ಯ ಮತ್ತು ಕೃತಿತ್ವವನ್ನು ಶ್ಲಾಘಿಸಿ, ದೇಶಸೇವೆಗೆ ಹಾರೈಕೆ ಸಲ್ಲಿಸಿದರು.
ಕಾರ್ಯಕ್ರಮಕ್ಕೆ ಸ್ವರಾ ಜೋಷಿ, ಮಹೇಶ್ ಸಾಬಳೆ, ಸುನಿಲ್ ಠಾಣಬ್, ಶ್ರೀಮತಿ ಸಂಪದಾ ತೀರವೀರ್, ಅರ್ಜುನ ಗಾವಡೆ ಸೇರಿದಂತೆ ಶಿಕ್ಷಕ ವೃಂದ ಮತ್ತು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸೂತ್ರಸಂಚಲನವನ್ನು ಸಹಶಿಕ್ಷಕರಾದ ಶ್ರೀ ತುಕಾರಾಮ್ ಸಡೆಕರ್ ಅವರು ನಿರ್ವಹಿಸಿದ್ದು, ಸೌ. ಸುಜಾತಾ ಚಲ್ವೇಟ್ಕರ್ ಅವರು ಆಭಾರ ಪ್ರದರ್ಶನ ಸಲ್ಲಿಸಿದರು.
ಈ ಸನ್ಮಾನ ಸಮಾರಂಭವು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕವಾಗಿದ್ದು, ಶಾಲೆಯ ಶೈಕ್ಷಣಿಕ ಹಾಗೂ ಸಂಸ್ಕಾರಪೂರ್ಣ ಪರಂಪರೆಯ ಗರ್ವವನ್ನು ಹೆಚ್ಚಿಸುವಂತಾಯಿತು.



