नव्या हुलिगेम्मा देवीच्या शिलामूर्तीची भव्य मिरवणूक; हजारो भाविकांचा उत्स्फूर्त सहभाग.
खानापूर : खानापूर तालुक्यातील लिंगनमठ ग्रामपंचायत हद्दीत येणाऱ्या होस लिंगनमठ गावात रविवारी श्री हुलिगेम्मा देवीच्या नव्या शिलामूर्तीच्या प्रतिष्ठापनेनिमित्त भव्य मिरवणूक काढण्यात आली.
देवीची मूर्ती ट्रॅक्टरमध्ये ठेवून मरीम्मा देवी मंदिरापासून मिरवणुकीला प्रारंभ करण्यात आला. ही मिरवणूक लिंगनमठ, वाल्मिकी नगर, होस लिंगनमठ गावातील प्रमुख रस्ते तसेच प्रत्येक वाडीतून फिरली. वाद्यांच्या गजरात, ढोल-ताशे आणि हलगीच्या तालावर, महिलांनी डोकीवर कलश घेऊन मिरवणुकीत सहभाग घेतला. हजारो युवक-युवती, महिला, पुरुष, लहान मुले, ज्येष्ठ नागरिक तसेच विविध संघटनांचे पदाधिकारी आणि ग्रामस्थ या भव्य मिरवणुकीत सहभागी झाले होते.
मिरवणुकीदरम्यान सुमारे दोन टन इतका भंडारा एकमेकांवर उधळण्यात आला. भंडाऱ्याच्या उधळणीत संपूर्ण गावातील प्रत्येक वाडी पिवळ्या भंडाऱ्याने न्हाऊन निघाली. युवक-युवती, महिला-पुरुष आणि लहान मुलांनी मोठ्या उत्साहात नाचत-गात आनंद व्यक्त केला.
सकाळी 10 वाजता सुरू झालेली ही मिरवणूक दुपारी सुमारे 4.00 वाजता हुलिगेम्मा मंदिरात पोहोचली. माता रत्नव्वा आनंद हुलगन्नवर यांच्या सान्निध्यात हा धार्मिक सोहळा पार पडला.
यावेळी माता रत्नव्वा हुलगन्नवर, लिंगनमठ ग्रामपंचायतीचे माजी अध्यक्ष काशीम हट्टीहोळी, यात्रा समिती सदस्य पांडुरंग मीटगार, आनंद हुलगन्नवर, बसवराज नायक, राजेंद्र माटोळी, नागराज अंबडगट्टी, ईरन्ना माटोळी, राघवेंद्र कुरुबर, बस्सु माटोळी, बसवराज पाटील, संजू पालकर, रमेश माटोळी, शिवानंद खोत, बसवराज तळवार, सतीश कराळे, मंजी बुदप्पनवर, शोभा बेळगावी, पार्वती माटोळी, अन्नपूर्णा बागेवाडी, गिरीजा पाटील, प्रेमा बागेवाडी आदी उपस्थित होते.
लिंगनमठ ग्रामपंचायतीचे माजी अध्यक्ष तसेच विद्यमान पत्रकार संघाचे अध्यक्ष काशीम हट्टीहोळी यांच्या घरासमोर देवीचे आगमन झाल्यावर देवीला मोठ्या आकाराची माळ अर्पण करून आरती ओवाळून पूजा करण्यात आली.
ಹೊಸ ಲಿಂಗನಮಠ; ಹೊಸ ಹುಲಿಗೆಮ್ಮ ದೇವಿಯ ಕಲ್ಲಿನ ವಿಗ್ರಹದ ಭವ್ಯ ಮೆರವಣಿಗೆ; ಸಾವಿರಾರು ಭಕ್ತರ ಸ್ವಯಂಪ್ರೇರಿತ ಭಾಗವಹಿಸುವಿಕೆ.
ಖಾನಾಪುರ ; ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹೊಸಲಿಂಗನಮಠ ಗ್ರಾಮದಲ್ಲಿ ರವಿವಾರದಂದು ಶ್ರೀ ಹುಲಿಗೆಮ್ಮ ದೇವಿಯ ನೂತನ ಶಿಲಾ ವಿಗ್ರಹದ ಪ್ರತಿಷ್ಠಾಪನೆಗೆ ಮೂರ್ತಿಯನ್ನು ಟ್ರ್ಯಾಕ್ಟರ್ ನಲ್ಲಿ ಇಟ್ಟು. ಮರಿಮ್ಮಾದೇವಿ ದೇವಸ್ಥಾನದಿಂದ. ಪ್ರಾರಂಭಗೊಂಡ ಮೆರವಣಿಗೆಯು ಲಿಂಗನಮಠ , ವಾಲ್ಮೀಕಿನಗರ, ಹೊಸಲಿಂಗನಮಠ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಾಗೂ ಪ್ರತಿಯೊಂದು ಓಣಿಯಲ್ಲಿ ಸಂಚರಿಸಿ. ವಾದ್ಯದೊಂದಿಗೆ, ಡೊಳ್ಳು ಕುಣಿತ, ಮಹಿಳೆಯರು ಕುಂಭಮೇಳದೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಯುವಕರು, ಯುವತಿಯರು, ಮಹಿಳೆಯರು, ಪುರುಷರು, ಚಿಕ್ಕ ಮಕ್ಕಳು, ಹಿರಿಯರು, ನಾನು ಸಂಘಟನೆಯ ಪದಾಧಿಕಾರಿಗಳು, ಗ್ರಾಮಸ್ಥರು, ಗ್ರಾಮದ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಮೆರವಣಿಗೆ ಉದ್ದಕ್ಕೂ ಸುಮಾರು ಎರಡು ಟನ್ ಅಷ್ಟು ಭಂಡಾರವನ್ನು ಪರಸ್ಪರ ಭಂಡಾರ ಎರಚಿಕೊಂಡು, ಭಂಡಾರ ತುರಾಡಿ, ಎಲ್ಲರೂ ಹಳದಿ ಭಂಡಾರಮೆಗೊಂಡು, ಗ್ರಾಮದ ಪ್ರತಿಯೊಂದು ಓಣಿಯು ಹಳದಿ ಬಂಡಾರಮಯವಾಯಿತು.
ಯುವಕರು, ಯುವತಿಯರು, ಮಹಿಳೆಯರು, ಪುರುಷರು,ಚಿಕ್ಕ ಮಕ್ಕಳು, ಕುಣಿದು ಕುಪ್ಪಳಿಸಿದರು .
ಬೆಳಿಗ್ಗೆ 10. ಗಂಟೆಯಿಂದ ಪ್ರಾರಂಭಗೊಂಡ ಮೆರವಣಿಗೆ ಮಧ್ಯಾಹ್ನ 4. ಗಂಟೆಗೆ ಹುಲಿಗೆಮ್ಮ ದೇವಸ್ಥಾನಕ್ಕೆ ತಲುಪಿತು.
ಮಾತೆ ಶ್ರೀಮತಿ ರತ್ನವ್ವಾ ಆನಂದ ಹುಲಗನ್ನವರ ಸಮ್ಮುಖದಲ್ಲಿ ನೆರವೇರಿತು.
ಮಾತೆ ಶ್ರೀಮತಿ ರತ್ನವ್ವ ಹುಲಗನ್ನವರ, ಲಿಂಗನಮಠ ಗ್ರಾಪಂ ಮಾಜಿ ಅಧ್ಯಕ್ಷ ಕಾಶೀಮ ಹಟ್ಟಿಹೋಳಿ, ಜಾತ್ರಾ ಕಮೀಟಿ ಸದಸ್ಯರಾದ ಪಾಂಡುರಂಗ ಮೀಟಗಾರ, ಆನಂದ ಹುಲಗನ್ನವರ, ಬಸವರಾಜ ನಾಯಕ, ರಾಜೇಂದ್ರ ಮಾಟೊಳ್ಳಿ, ನಾಗರಾಜ ಅಂಬಡಗಟ್ಟಿ, ಈರನ್ನಾ ಮಾಟೊಳ್ಳಿ, ರಾಘವೇಂದ್ರ ಕುರುಬರ, ಬಸ್ಸು ಮಾಟೊಳ್ಳಿ, ಬಸವರಾಜ ಪಾಟೀಲ, ಸಂಜು ಪಾಲಕಾರ, ರಮೇಶ ಮಾಟೊಳ್ಳಿ, ಶಿವಾನಂದ ಖೋತ, ಬಸವರಾಜ ತಳವಾರ, ಸತೀಶ ಕರಾಳೆ, ಮಂಜು ಬುದಪ್ಪನವರ, ಶೋಭಾ ಬೆಳಗಾವಿ, ಪಾರ್ವತಿ ಮಾಟೊಳ್ಳಿ, ಅನ್ನಪೂರ್ಣ ಬಾಗೇವಾಡಿ, ಗಿರಿಜಾ ಪಾಟೀಲ, ಪ್ರೇಮಾ ಬಾಗೇವಾಡಿ ಇತರರು ಇದ್ದರು.
ಲಿಂಗನಮಠ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕಾಶೀಮ ಹಟ್ಟಿಹೋಳಿ ಇವರ ಮನೆಯ ಬಾಗಿಲಿಗೆ ದೇವಿಯ ಆಗಮನ ಆದಾಗ ಬೃಹದಾರಕಾರದ ಮಾಲೆ ಹಾಕಿ ಆರತಿ ಬೆಳಗಿ ಪೂಜೆ ಸಲ್ಲಿಸಿದರು.



