गोव्याचा कचरा कर्नाटकात; महामार्गावर कचऱ्याच्या पिशव्या पडल्याने अपघातांत वाढ ; खानापूर पोलिसांचे दुर्लक्ष.
खानापूर : गेल्या काही दिवसांपासून गोवा राज्यातील कचरा ट्रकद्वारे कर्नाटक मध्ये आणला जात असल्याची बाब समोर येत आहे. मात्र हा कचरा वाहतूक करताना ट्रकमधून महामार्गावर कचऱ्याच्या पिशव्या व पोती पडत असल्याने अपघातांच्या घटनांमध्ये लक्षणीय वाढ होत असल्याची तक्रार नागरिकांकडून करण्यात येत आहे.

बेळगाव ते लोंढा या मार्गादरम्यान अनेक ठिकाणी कचऱ्याच्या पिशव्या रस्त्यावर विखुरलेल्या अवस्थेत दिसून येत आहेत. परिणामी महामार्गावर जागोजागी कचरा साचून दुर्गंधी पसरली असून वाहनचालकांना मोठा त्रास सहन करावा लागत आहे. विशेषतः दुचाकीस्वारांसाठी ही परिस्थिती धोकादायक ठरत आहे. घसरडा कचरा, उडणाऱ्या प्लास्टिक पिशव्या आणि अचानक अडथळे यामुळे अपघातांची शक्यता वाढली आहे.
आज शनिवार दिनांक 14 फेब्रुवारी रोजी सकाळी 7.00 वाजेच्या सुमारास, माडीगुंजी परिसरात, गोवा राज्यातून बेळगावकडे जाणाऱ्या कचरा वाहतूक करणाऱ्या ट्रकमधून कचऱ्याच्या अनेक पिशव्या थेट रस्त्यावर पडल्याची घटना घडली. काही काळासाठी संपूर्ण रस्ता कचऱ्याने झाकल्यासारखा दिसत होता. स्थानिकांनी अनेक वेळा पोलीस प्रशासनाचे लक्ष वेधले आहे. मात्र याकडे दुर्लक्ष करण्यात येत आहे. तसेच अशा घटना वारंवार घडत असल्याने नागरिकांमध्ये संताप व्यक्त होत आहे.
या पार्श्वभूमीवर संबंधित कचरा वाहतूक कायदेशीर परवानगीने केली जात आहे की बेकायदेशीररीत्या, याची चौकशी करण्याची मागणी होत आहे. तसेच हा कचरा नेमका बेळगावमध्ये कुठे आणि कोणत्या उद्देशाने टाकला जातो, याचीही सखोल तपासणी व्हावी, अशी मागणी नागरिकांनी केली आहे.
महामार्गावरील सुरक्षेच्या दृष्टीने पोलिसांनी व संबंधित प्रशासनाने तातडीने कारवाई करून अशा निष्काळजी वाहतुकीला आळा घालावा व ट्रक मालकांवर दंडात्मक कारवाई करावी आणि भविष्यात अशा घटना टाळण्यासाठी कठोर उपाययोजना कराव्यात, अशी जोरदार मागणी परिसरातील नागरिकांकडून करण्यात येत आहे.
ಗೋವಾ ರಾಜ್ಯದ ಕಸ ಕರ್ನಾಟಕಕ್ಕೆ; ರಾಷ್ಟ್ರೀಯ ಹೆದ್ದಾರಿಯಲ್ಲಿ ಕಸದ ಚೀಲಗಳು ಬಿದ್ದ ಕಾರಣ ಅಪಘಾತಗಳಲ್ಲಿ ಹೆಚ್ಚಳ; ಖಾನಾಪುರ ಪೊಲೀಸರ ನಿರ್ಲಕ್ಷ್ಯವೇ?
ಖಾನಾಪುರ : ಕಳೆದ ಕೆಲವು ದಿನಗಳಿಂದ ಗೋವಾ ರಾಜ್ಯದ ಕಸವನ್ನು ಟ್ರಕ್ಗಳ ಮೂಲಕ ಕರ್ನಾಟಕಕ್ಕೆ ಸಾಗಿಸಲಾಗುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಆದರೆ ಈ ಕಸದ ಸಾಗಣೆ ಮಾಡುವ ವೇಳೆ ಟ್ರಕ್ಗಳಿಂದ ರಾಷ್ಟ್ರೀಯ ಹೆದ್ದಾರಿಯ ಮೇಲೆ ಕಸದ ಚೀಲಗಳು ಹಾಗೂ ಪೊಟ್ಟಣಗಳು ಬಿದ್ದು ಅಪಘಾತಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚುತ್ತಿವೆ ಎಂದು ನಾಗರಿಕರು ದೂರು ನೀಡಿದ್ದಾರೆ.
ಬೆಳಗಾವಿಯಿಂದ ಲೋಂಡಾ ಮಾರ್ಗದ ಮಧ್ಯೆ ಅನೇಕ ಸ್ಥಳಗಳಲ್ಲಿ ಕಸದ ಚೀಲಗಳು ರಸ್ತೆಯ ಮೇಲೆ ಚದರಿಕೊಂಡಿರುವುದು ಕಂಡುಬರುತ್ತಿದೆ. ಪರಿಣಾಮವಾಗಿ ಹೆದ್ದಾರಿಯಲ್ಲಿ ಎಲ್ಲೆಲ್ಲೂ ಕಸ ದುರ್ಗಂಧ ಹರಡಿದೆ ಮತ್ತು ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರಿಗೆ ಈ ಪರಿಸ್ಥಿತಿ ಅಪಾಯಕಾರಿಯಾಗಿ ಪರಿಣಮಿಸಿದೆ. ಜಾರಿ ಹೋಗುವ ಕಸ, ಹಾರುವ ಪ್ಲಾಸ್ಟಿಕ್ ಚೀಲಗಳು ಹಾಗೂ ಏಕಾಏಕಿ ಎದುರಾಗುವ ಅಡಚಣೆಗಳಿಂದ ಅಪಘಾತಗಳ ಸಂಭವ ಹೆಚ್ಚಾಗಿದೆ.
ಇಂದು ಶನಿವಾರ, ಫೆಬ್ರವರಿ 14 ರಂದು ಬೆಳಿಗ್ಗೆ ಸುಮಾರು 7.00 ಗಂಟೆಗೆ ಮಾಡಿಗುಂಜಿ ಪ್ರದೇಶದಲ್ಲಿ, ಗೋವಾ ರಾಜ್ಯದಿಂದ ಬೆಳಗಾವಿಯ ಕಡೆಗೆ ಸಾಗುತ್ತಿದ್ದ ಕಸ ಸಾಗಣೆ ಟ್ರಕ್ನಿಂದ ಅನೇಕ ಕಸದ ಚೀಲಗಳು ನೇರವಾಗಿ ರಸ್ತೆಯ ಮೇಲೆ ಬಿದ್ದ ಘಟನೆ ನಡೆದಿದೆ. ಕೆಲವು ಸಮಯದವರೆಗೆ ಸಂಪೂರ್ಣ ರಸ್ತೆ ಕಸದಿಂದ ಮುಚ್ಚಿದಂತಾಗಿತ್ತು.
ಸ್ಥಳೀಯರು ಹಲವು ಬಾರಿ ಪೊಲೀಸ್ ಆಡಳಿತದ ಗಮನಕ್ಕೆ ಈ ವಿಷಯವನ್ನು ತಂದಿದ್ದಾರೆ. ಆದರೆ ಇದನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಇಂತಹ ಘಟನೆಗಳು ಮೇಲಿಂದ ಮೇಲೆ ಸಂಭವಿಸುತ್ತಿರುವುದರಿಂದ ನಾಗರಿಕರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಹಿನ್ನೆಲೆಯಲ್ಲಿಯೇ, ಸಂಬಂಧಿತ ಕಸ ಸಾಗಣೆ ಕಾನೂನುಬದ್ಧ ಅನುಮತಿಯೊಂದಿಗೆ ನಡೆಯುತ್ತಿದೆಯೇ ಅಥವಾ ಅಕ್ರಮವಾಗಿ ಸಾಗಿಸಲಾಗುತ್ತಿದೆಯೇ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ. ಹಾಗೆಯೇ ಈ ಕಸವನ್ನು ಬೆಳಗಾವಿಯಲ್ಲಿ ನಿಖರವಾಗಿ ಎಲ್ಲಿ ಮತ್ತು ಯಾವ ಉದ್ದೇಶಕ್ಕಾಗಿ ಹಾಕಲಾಗುತ್ತಿದೆ ಎಂಬುದರ ಕುರಿತೂ ಸವಿಸ್ತಾರ ಪರಿಶೀಲನೆ ನಡೆಯಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಸುರಕ್ಷತೆ ದೃಷ್ಟಿಯಿಂದ ಪೊಲೀಸರು ಹಾಗೂ ಸಂಬಂಧಿತ ಆಡಳಿತ ತಕ್ಷಣ ಕ್ರಮ ಕೈಗೊಂಡು ಇಂತಹ ನಿರ್ಲಕ್ಷ್ಯ ಸಾಗಣೆಗೆ ತಡೆಹಿಡಿಯಬೇಕು, ಟ್ರಕ್ ಮಾಲೀಕರ ವಿರುದ್ಧ ದಂಡಾತ್ಮಕ ಕ್ರಮ ಜರುಗಿಸಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

